ಧರ್ಮಸ್ಥಳದ ಯುವತಿ ಕೇಸ್​; ಪ್ರೊಫೆಸರ್ ಜತೆ ಪ್ರೇಮ ವೈಫಲ್ಯ.. ಕಟ್ಟಡದಿಂದ ಹಾರಿದ್ದ ಆಕಾಂಕ್ಷ

author-image
Bheemappa
Updated On
ಧರ್ಮಸ್ಥಳದ ಯುವತಿ ಕೇಸ್​; ಪ್ರೊಫೆಸರ್ ಜತೆ ಪ್ರೇಮ ವೈಫಲ್ಯ.. ಕಟ್ಟಡದಿಂದ ಹಾರಿದ್ದ ಆಕಾಂಕ್ಷ
Advertisment
  • ಮದುವೆ ಆಗಿದ್ದರು ಯುವತಿ ಜೊತೆ ಪ್ರೀತಿಯಲ್ಲಿ ಇದ್ನಾ?
  • 3ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿದ್ದ ಯುವತಿ
  • ಕಾಲೇಜಿನ ಪ್ರೊಫೆಸರ್ ಯಾವ ರಾಜ್ಯದವನು ಆಗಿದ್ದನು?

ಮಂಗಳೂರು: ಧರ್ಮಸ್ಥಳ ಮೂಲದ ಯುವತಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್​​ನಲ್ಲಿ ನಿಗೂಢವಾಗಿ ಜೀವ ಕಳೆದುಕೊಂಡಿದ್ದರು. ಈ ಕೇಸ್​ಗೆ ಸಂಬಂಧಿಸಿದಂತೆ ಯುವತಿ ಪ್ರೇಮ ವೈಫಲ್ಯದಿಂದ ಕಟ್ಟಡದ 3ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಆಕಾಂಕ್ಷ ಎಸ್ ನಾಯರ್ (22) ಏರೋಸ್ಪೇಸ್ ಉದ್ಯೋಗಿಯಾಗಿದ್ದರು. ಧರ್ಮಸ್ಥಳ ಬಳಿಯ ಬೊಳಿಯಾರ್ ಗ್ರಾಮದ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಮಗಳು. ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ 6 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಆದರೆ ಎಲ್​ಪಿಯು ಪಗ್ವಾಡ ಕಾಲೇಜಿನಲ್ಲಿ ಸರ್ಟಿಫಿಕೇಟ್ ಪಡೆಯಲೆಂದು ಆಕಾಂಕ್ಷ ಪಂಜಾಬ್​ಗೆ ಹೋಗಿದ್ದರು. ಆದರೆ ಅಲ್ಲಿ ಉಳಿದುಕೊಂಡಿದ್ದ ಕೊಠಡಿಯ 3ನೇ ಮಹಡಿಯಿಂದ ಬಿದ್ದು ಜೀವ ಬಿಟ್ಟಿದ್ದಾರೆ. ಇದಕ್ಕೆ ಪ್ರೇಮ ವೈಫಲ್ಯ ಕಾರಣವಾಗಿದೆ.

ಇದನ್ನೂ ಓದಿ:ಇಡೀ ರಾತ್ರಿ ಸುರಿದ ಮಳೆಗೆ ಬೆಂಗಳೂರಲ್ಲಿ ಸಮಸ್ಯೆಗಳ ಸರಮಾಲೆ.. ಜನ ಪರದಾಟ

publive-image

ಎಲ್​ಪಿಯು ಪಗ್ವಾಡ ಕಾಲೇಜಿನ ಪ್ರೊಫೆಸರ್ ಆಗಿರುವ ಕೇರಳದ ಕೊಟ್ಟಾಯಂ ನಿವಾಸಿ, 2 ಮಕ್ಕಳ ತಂದೆ ಬಿಜಿಲ್ ಮ್ಯಾಥ್ಯೂ ಜೊತೆ ಯುವತಿಗೆ ಪ್ರೇಮ ವೈಫಲ್ಯವಾಗಿದೆ. ಇದಾದ ಮೇಲೆ ಪ್ರೊಫೆಸರ್ ಮನೆಗೆ ಹೋಗಿ ಮದುವೆ ಆಗುವಂತೆ ಒತ್ತಾಯಿಸಿ, ಜಗಳ ಮಾಡಿದ್ದರು. ಇದಕ್ಕೆ ಪ್ರೊಫೆಸರ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಆಕಾಂಕ್ಷ ಬಳಿಕ ಕಾಲೇಜಿನಲ್ಲೂ‌ ಜಗಳ ಮಾಡಿ‌ದ್ದರು. ಇದಾದ ಮೇಲೆಯೇ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಕೆಳಗೆ ಜಿಗಿದು ಜೀವ ಕಳೆದುಕೊಂಡಿದ್ದರು. ಇನ್ನು ಆತ್ಮಹತ್ಯೆಗೆ ಪ್ರೇರಣೆ ಹಿನ್ನೆಲೆಯಲ್ಲಿ ಪ್ರೊಫೆಸರ್ ಮ್ಯಾಥ್ಯೂ ವಿರುದ್ಧ ಪಂಜಾಬ್​ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮೃತದೇಹದ ವೈದ್ಯಕೀಯ ಪರೀಕ್ಷೆ ಬಳಿಕ ಹೆತ್ತವರಿಗೆ ಹಸ್ತಾಂತರ ಮಾಡಲಾಗುತ್ತದೆ. ಧರ್ಮಸ್ಥಳದ ಬೊಳಿಯೂರು ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತದೆ

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment