ವಿಶ್ವಾಸ್​ ಕುಮಾರ್ ಕೂತಿದ್ದ ಸೀಟ್​​ಗೆ ಭಾರೀ ಬೇಡಿಕೆ.. ಯಾವುದು ಆ ಸೀಟ್? ಡಿಮ್ಯಾಂಡ್ ಏಕೆ..?​

author-image
Veena Gangani
Updated On
ವಿಶ್ವಾಸ್​ ಕುಮಾರ್ ಕೂತಿದ್ದ ಸೀಟ್​​ಗೆ ಭಾರೀ ಬೇಡಿಕೆ.. ಯಾವುದು ಆ ಸೀಟ್? ಡಿಮ್ಯಾಂಡ್ ಏಕೆ..?​
Advertisment
  • ನಾವೂ ಈ ಸೀಟ್ ಬುಕ್ ಮಾಡ್ತೀವಿ ಅಂತಿರೋ ಪ್ರಯಾಣಿಕರು
  • ದಿಢೀರ್ ಇದೇ ಸೀಟ್​ಗೆ ಡಿಮ್ಯಾಂಡ್ ಹೆಚ್ಚಾಗಿರೋದು ಯಾಕೆ?
  • ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಜನರಿಂದ ಪೋಸ್ಟ್​ಗಳು

265 ಮಂದಿಗೆ ಅಂದು ಕರಾಳ ಗುರುವಾರ ಆಗಿತ್ತು. ಯಾರೂ ಕೂಡ ಊಹಿಸಿರಲಿಲ್ಲ ಇಷ್ಟೊಂದು ಘೋರ ದುರಂತ ಸಂಭವಿಸುತ್ತದೆ  ಅಂತ. ಆದ್ರೆ, ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ 265 ಜನರ ಪ್ರಾಣ ಹಾರಿ ಹೋಗಿದೆ.

ಇದನ್ನೂ ಓದಿ:ವಿಮಾನ ದುರಂತದ ದಿನ ಈ ನ್ಯೂಸ್​ ಪೇಪರ್​ನಲ್ಲಿ ಸೇಮ್​ ಟು ಸೇಮ್​ ಜಾಹೀರಾತು!

publive-image

ಹೌದು, ಗುಜುರಾತ್​ನ ಅಹಮದಾಬಾದ್​ನಲ್ಲಿ ಏರ್​ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್​ಗೆ ಹೊರಟಿದ್ದ ಬೋಯಿಂಗ್​ ಡ್ರೀಮ್​ಲೈನರ್​ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಟೇಕ್ಆಫ್​ ಆಗಿ ಕೆಲವೇ ಕೆಲವು ನಿಮಿಷಗಳಲ್ಲಿ ಬಿ.ಜೆ. ಮೆಡಿಕಲ್​ ಕಾಲೇಜಿನ ಹಾಸ್ಟೆಲ್​ಗೆ ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕಟ್ಟಡ ಧ್ವಂಸವಾಗಿದೆ. ಇದ್ರಿಂದಾಗಿ ಹಾಸ್ಟೆಲ್​ನ ಡೈನಿಂಗ್​ ಹಾಲ್​ನಲ್ಲಿ ಕುಳಿತು ಊಟ ಮಾಡ್ತಿದ್ದ ವಿದ್ಯಾರ್ಥಿಗಳ ಪೈಕಿ 24 ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಪವಾಡ ಸದೃಶ ಎಂಬಂತೆ ಬದುಕುಳಿದಿದ್ದಾರೆ.

publive-image

ಈ ದುರಂತದ ಬೆನ್ನಲ್ಲೇ ವಿಮಾನದ ಆ ಸೀಟ್​ಗೆ ಬೇಡಿಕೆ ಹೆಚ್ಚಾಗುತ್ತದೆ. ನಾವು ಸೀಟ್ ಬುಕ್ ಮಾಡ್ತೀವಿ ಅಂತ ಪ್ರಯಾಣಿಕರು ಹೇಳುತ್ತಿದ್ದಾರೆ. ದಿಢೀರ್ ಇದೇ ಸೀಟ್​ಗೆ ಡಿಮ್ಯಾಂಡ್ ಹೆಚ್ಚಾಗಿರೋದು ಯಾಕೆ ಗೊತ್ತಾ? ಇಲ್ಲಿ ಕಾರಣವಿದೆ. ಅದು ಏನೆಂದರೆ, ವಿಮಾನ ದುರಂತದಲ್ಲಿ ಅಚ್ಚರಿ ಎಂಬಂತೆ ವಿಶ್ವಾಸ್ ಕುಮಾರ್ ರಮೇಶ್ ಬದುಕಿ ಬಂದಿರೋದು. ಇದೀಗ ಈ ರಮೇಶ್ ಅವರು ವಿಮಾನದಲ್ಲಿ ಕಳಿತುಕೊಂಡು ಪ್ರಯಾಣ ಮಾಡಿದ್ದ 11A ಸೀಟ್​ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಈ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡುವ ಮೂಲಕ ಹೆಚ್ಚಿನ ಹಣ ಕೊಡ್ತೀವಿ, ನಮಗೆ ಅದೇ ಸೀಟ್ ಬೇಕು ಅಂತ ಬೇಡಿಕೆ ಇಡುತ್ತಿದ್ದಾರೆ. ಎಮರ್ಜೆನ್ಸಿ ಎಕ್ಸಿಟ್ ಬಳಿಯೇ ಇರೋದ್ರಿಂದ ಡಿಮ್ಯಾಂಡ್ ಹೆಚ್ಚಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment