/newsfirstlive-kannada/media/post_attachments/wp-content/uploads/2025/05/Operation-Sindoor2.jpg)
ನವದೆಹಲಿ: ಇಂದು ಸಂಜೆ ಗುಜರಾತ್, ರಾಜಸ್ತಾನ್, ಜಮ್ಮುಕಾಶ್ಮೀರ್, ಹರಿಯಾಣದಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಿಕೆ ಆಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕ ನಿಗದಿ ಆಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪಹಲ್ಗಾಮ್​ ದಾಳಿಗೆ ಪ್ರತೀಕಾರವಾಗಿ ಭಾರತ, ಆಪರೇಷನ್​ ಸಿಂಧೂರ್​ ​ಮೂಲಕ ಭಯೋತ್ಪಾದಕರ ಅಡುಗುತಾಣಗಳನ್ನ ಧ್ವಂಸ ಮಾಡಿ, ಪಾಕ್​ಗೆ ನಡುಕ ಹುಟ್ಟಿಸಿತ್ತು. ಇತ್ತೀಚೆಗಷ್ಟೇ ಭಾರತ, ಪಾಕಿಸ್ತಾನದ ನಡುವಿನ ಉದ್ವಿಗ್ನತೆಗೆ ಸಣ್ಣ ಬ್ರೇಕ್​ ಕೂಡ ಬಿದ್ದಿತ್ತು. ಕದನ ವಿರಾಮ ಆಪರೇಷನ್ ಸಿಂಧೂರಕ್ಕೂ ಅಲ್ಪ ವಿರಾಮ ನೀಡಿತ್ತು.
/newsfirstlive-kannada/media/post_attachments/wp-content/uploads/2025/05/India-mock-drill-1.jpg)
ಪಾಕ್ ಜೊತೆ ಗಡಿ ಹಂಚಿಕೊಂಡಿರೋ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಮಾಕ್​ ಡ್ರಿಲ್​ಗೆ ಸಿದ್ಧತೆಯಾಗಿದೆ. ಭಯೋತ್ಪಾದಕರ ಬೆದರಿಕೆಗಳ ವಿರುದ್ಧ ಸಾಮಾನ್ಯರು ಹೇಗೆ ಹೋರಾಡಬೇಕು. ದಾಳಿ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳೇನು. ಪ್ರತಿಕ್ರಿಯಿಸಿಬೇಕಾದ ತಂತ್ರಗಳೇನು ಅನ್ನೋದಕ್ಕಾಗಿ ಮಾಕ್ ​ಡ್ರಿಲ್​ ನಡೆಯಲಿದೆ.
/newsfirstlive-kannada/media/post_attachments/wp-content/uploads/2025/05/Operation-Sindoor9.jpg)
ಈ ಮೂಲಕ ಆಪರೇಷನ್​ ಸಿಂಧೂರ್​ ಇನ್ನೂ ನಿಂತಿಲ್ಲ ಅನ್ನೋ ಸಂದೇಶ ಪಾಕ್​ಗೆ ರವಾನೆಯಾಗಲಿದೆ. ಎಷ್ಟು ಬಾರಿ ಇದು ಲಾಸ್ಟ್​ ಚಾನ್ಸ್​ ಎಂದು ಭಾರತ, ಪಾಕ್​ ಅವಕಾಶ ಕೊಟ್ಟರೂ ತನ್ನ ನರಿಬುದ್ಧಿ ತೋರಿಸುತ್ತಲೇ ಇದೆ.
ಇದನ್ನೂ ಓದಿ: ರೈತರಿಗೆ ಕೇಂದ್ರ ಸರ್ಕಾರದಿಂದ ಬಂಪರ್.. ರಾಗಿ, ಜೋಳ, ತೊಗರಿ ಬೆಳೆಯ ಕನಿಷ್ಠ ಬೆಂಬಲ ಬೆಲೆ ಏರಿಕೆ
ಭಾರತ ಆಪರೇಷನ್​ ಸಿಂಧೂರ್​​ನಲ್ಲಿ ಸಾರ್ವಜನಿಕರನ್ನ ಗುರಿಯಾಗಿಟ್ಟುಕೊಳ್ಳದೇ ಭಯೋತ್ಪಾದಕ ಅಡಗುತಾಣಗಳು, ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿ, ಪಾಕಿಸ್ತಾನಕ್ಕೆ ಮತ್ತು ಭಯೋತ್ಪಾದಕರಿಗೆ ಮುಟ್ಟಿ ನೋಡುಕೊಳ್ಳುವಂಥ ಹೊಡೆತ ಕೊಟ್ಟಿತ್ತು. ಆದರೆ ಪಾಕ್​ ಬುದ್ಧಿ ಹಾಗಲ್ಲ. ಭಾರತೀಯ ಅಮಾಯಕ ಜನರ ಮೇಲೂ ದಾಳಿ ನಡೆಸುತ್ತೆ. ಹಾಗಾಗಿ ಈ 4 ಗಡಿ ಭಾಗಗಳಲ್ಲಿ ಭಯೋತ್ಪಾದಕ ಬೆದರಿಕೆಗಳ ವಿರುದ್ಧ ಹೋರಾಡಲು ಅಣಕು ಪ್ರದರ್ಶನ ಅನಿವಾರ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us