newsfirstkannada.com

RCB ವಿರುದ್ಧ ಸೋಲಿನ ಬಳಿಕ ಹೊಸ ತೀರ್ಮಾನಕ್ಕೆ ಬಂದ M.S ಧೋನಿ; ಫ್ಯಾನ್ಸ್‌ ಓದಲೇಬೇಕಾದ ಸ್ಟೋರಿ!

Share :

Published May 22, 2024 at 1:01pm

    ಮುಂದೇನು ಮಾಡ್ತಾರೆ ನಿಮ್ಮ ಹೀರೋ ಅನ್ನೋ ಪ್ರಶ್ನೆಗೆ ಧೋನಿ ಉತ್ತರ!

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ವಿರುದ್ಧ ಸೋಲಿನ ಬಳಿಕ ಹೊಸ ನಿರ್ಧಾರ

    ಎಂ.ಎಸ್‌ ಧೋನಿ ಅವರ ಮಹತ್ವದ ತೀರ್ಮಾನಕ್ಕೆ ಅಭಿಮಾನಿಗಳ ಶುಭಾಶಯ

ಐಪಿಎಲ್‌ ಹಣಾಹಣಿಯಲ್ಲಿ RCB ವಿರುದ್ಧ CSK ನಿರ್ಣಾಯಕ ಪಂದ್ಯದಲ್ಲಿ ಸೋತಿದೆ. ರೋಚಕ ಗೆಲುವು ಸಾಧಿಸಿದ RCB ಪ್ಲೇ ಆಫ್ ತಲುಪಿತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ವಿರುದ್ಧ ಸೋಲಿನ ಬಳಿಕ ಮಹೇಂದ್ರ ಸಿಂಗ್ ಧೋನಿ ಸಾಕಷ್ಟು ಸುದ್ದಿಯಾಗಿದ್ದಾರೆ. ಸೋಲಿನಿಂದ ನಿರಾಸೆ ಅನುಭವಿಸಿದ ಧೋನಿ ಈಗ ಮತ್ತೊಂದು ಅಪ್ಡೇಟ್ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.

ಟೀಂ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್‌ ಮಹೇಂದ್ರ ಸಿಂಗ್ ಧೋನಿ ಮುಂದೇನು ಮಾಡ್ತಾರೆ ಅನ್ನೋ ಪ್ರಶ್ನೆಗೆ ಕೂಲ್ ಆದ ಉತ್ತರ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ.

ಎಂ.ಎಸ್ ಧೋನಿ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಇದು ಮತ್ತೊಮ್ಮೆ ಪುಟಿದೇಳುವ ಸಮಯ ಆಗಿದೆ. ಬಹಳ ಮುಖ್ಯವಾದ ಕಾರ್ಯಕ್ಕೆ ಮುಂದಾಗುವ ಸಮಯವು ಇದಾಗಿದೆ. ನಾನು ನನ್ನ ಸ್ವಂತ ಟೀಮ್‌ ಕಟ್ಟುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಧೋನಿಯನ್ನು ಹುಡ್ಕೊಂಡು ಹೋಗಿದ್ದ ಕೊಹ್ಲಿಗೆ ಸಿಕ್ಕಿದೆ ಸ್ಪೆಷಲ್ ಮೆಸೇಜ್.. ಇದು RCB ಫ್ಯಾನ್ಸ್​ಗೆ ಖುಷಿ ಸುದ್ದಿ..! 

ಮಹೇಂದ್ರ ಸಿಂಗ್ ಧೋನಿ ಅವರು ಹೊಸ ಟೀಮ್ ಕಟ್ಟುತ್ತೇನೆ ಎಂದು ಅನೌನ್ಸ್ ಮಾಡಿರೋದು ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಧೋನಿ ಅವರ ಈ ಪೋಸ್ಟ್‌ಗೆ ಕಮೆಂಟ್‌ಗಳ ಸುರಿಮಳೆ ಹರಿದು ಬಂದಿದ್ದು, ಲೆಜೆಂಡ್ ಈಸ್ ಲೆಜೆಂಡ್ ಎಂದು ಶುಭ ಹಾರೈಸಿದ್ದಾರೆ. ಮಹೀ ಫ್ಯಾನ್ಸ್‌ ಅಂತೂ ಹೊಸ ತಂಡ ಕಟ್ಟಿ ಐಪಿಎಲ್‌ಗೆ ಧೋನಿ ಎಂಟ್ರಿ ಕೊಡಲಿ ಎಂದು ಶುಭ ಕೋರಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ಕನ್ನಡಿಗರನ್ನು ನಿಮ್ಮ ತಂಡದಲ್ಲಿ ಸೇರಿಸಿಕೊಳ್ಳಿ ಅನ್ನೋ ಸಲಹೆಗಳನ್ನು ನೀಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ವಿರುದ್ಧ ಸೋಲಿನ ಬಳಿಕ ಹೊಸ ತೀರ್ಮಾನಕ್ಕೆ ಬಂದ M.S ಧೋನಿ; ಫ್ಯಾನ್ಸ್‌ ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/05/DHONI_KOHLI.jpg

    ಮುಂದೇನು ಮಾಡ್ತಾರೆ ನಿಮ್ಮ ಹೀರೋ ಅನ್ನೋ ಪ್ರಶ್ನೆಗೆ ಧೋನಿ ಉತ್ತರ!

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ವಿರುದ್ಧ ಸೋಲಿನ ಬಳಿಕ ಹೊಸ ನಿರ್ಧಾರ

    ಎಂ.ಎಸ್‌ ಧೋನಿ ಅವರ ಮಹತ್ವದ ತೀರ್ಮಾನಕ್ಕೆ ಅಭಿಮಾನಿಗಳ ಶುಭಾಶಯ

ಐಪಿಎಲ್‌ ಹಣಾಹಣಿಯಲ್ಲಿ RCB ವಿರುದ್ಧ CSK ನಿರ್ಣಾಯಕ ಪಂದ್ಯದಲ್ಲಿ ಸೋತಿದೆ. ರೋಚಕ ಗೆಲುವು ಸಾಧಿಸಿದ RCB ಪ್ಲೇ ಆಫ್ ತಲುಪಿತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ವಿರುದ್ಧ ಸೋಲಿನ ಬಳಿಕ ಮಹೇಂದ್ರ ಸಿಂಗ್ ಧೋನಿ ಸಾಕಷ್ಟು ಸುದ್ದಿಯಾಗಿದ್ದಾರೆ. ಸೋಲಿನಿಂದ ನಿರಾಸೆ ಅನುಭವಿಸಿದ ಧೋನಿ ಈಗ ಮತ್ತೊಂದು ಅಪ್ಡೇಟ್ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.

ಟೀಂ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್‌ ಮಹೇಂದ್ರ ಸಿಂಗ್ ಧೋನಿ ಮುಂದೇನು ಮಾಡ್ತಾರೆ ಅನ್ನೋ ಪ್ರಶ್ನೆಗೆ ಕೂಲ್ ಆದ ಉತ್ತರ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ.

ಎಂ.ಎಸ್ ಧೋನಿ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಇದು ಮತ್ತೊಮ್ಮೆ ಪುಟಿದೇಳುವ ಸಮಯ ಆಗಿದೆ. ಬಹಳ ಮುಖ್ಯವಾದ ಕಾರ್ಯಕ್ಕೆ ಮುಂದಾಗುವ ಸಮಯವು ಇದಾಗಿದೆ. ನಾನು ನನ್ನ ಸ್ವಂತ ಟೀಮ್‌ ಕಟ್ಟುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಧೋನಿಯನ್ನು ಹುಡ್ಕೊಂಡು ಹೋಗಿದ್ದ ಕೊಹ್ಲಿಗೆ ಸಿಕ್ಕಿದೆ ಸ್ಪೆಷಲ್ ಮೆಸೇಜ್.. ಇದು RCB ಫ್ಯಾನ್ಸ್​ಗೆ ಖುಷಿ ಸುದ್ದಿ..! 

ಮಹೇಂದ್ರ ಸಿಂಗ್ ಧೋನಿ ಅವರು ಹೊಸ ಟೀಮ್ ಕಟ್ಟುತ್ತೇನೆ ಎಂದು ಅನೌನ್ಸ್ ಮಾಡಿರೋದು ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಧೋನಿ ಅವರ ಈ ಪೋಸ್ಟ್‌ಗೆ ಕಮೆಂಟ್‌ಗಳ ಸುರಿಮಳೆ ಹರಿದು ಬಂದಿದ್ದು, ಲೆಜೆಂಡ್ ಈಸ್ ಲೆಜೆಂಡ್ ಎಂದು ಶುಭ ಹಾರೈಸಿದ್ದಾರೆ. ಮಹೀ ಫ್ಯಾನ್ಸ್‌ ಅಂತೂ ಹೊಸ ತಂಡ ಕಟ್ಟಿ ಐಪಿಎಲ್‌ಗೆ ಧೋನಿ ಎಂಟ್ರಿ ಕೊಡಲಿ ಎಂದು ಶುಭ ಕೋರಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ಕನ್ನಡಿಗರನ್ನು ನಿಮ್ಮ ತಂಡದಲ್ಲಿ ಸೇರಿಸಿಕೊಳ್ಳಿ ಅನ್ನೋ ಸಲಹೆಗಳನ್ನು ನೀಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More