/newsfirstlive-kannada/media/post_attachments/wp-content/uploads/2024/10/Srirasthu-Shubhamasthu.jpg)
ವಿಭಿನ್ನವಾದ ಲವ್​ ಸ್ಟೋರಿ ಹೇಳುತ್ತಿರುವ ಕಥೆ ಎಂದರೆ ಅದು ಶ್ರೀರಸ್ತು ಶುಭಮಸ್ತು. ಅಪ್ಪ-ಮಗನ ನಡುವೆ ಮುನಿಸು ಸರಿದು ತಂದೆಯನ್ನು ಒಪ್ಪಿಕೊಂಡಿದ್ದಾನೆ ಮಗ ಅವಿನಾಶ್​. ಮಾಧವ ಹಾಗೂ ತುಳಸಿ ಸ್ನೇಹ-ಪ್ರೀತಿ ತುಂಬಿದ ಪ್ರೋಮೋಗೆ ವೀಕ್ಷಕರಿಗೆ ಭರ್ಜರಿ ರೆಸ್ಪಾನ್ಸ್​ ಸಿಗುತ್ತಿದೆ. ಆದರೆ ಇದರ ಮಧ್ಯೆ ಶ್ರೀರಸ್ತು ಶುಭಮಸ್ತು ಸೀರಿಯಲ್​ ಮತ್ತೊಂದು ಶಾಕಿಂಗ್ ಟ್ವಿಸ್ಟ್ ಪಡೆದುಕೊಂಡಿದೆ.
ಇದನ್ನೂ ಓದಿ: KicchaSudeep: ಕೃಷ್ಣನಿಲ್ಲದ ಮಹಾಭಾರತ, ಸುದೀಪ್ ಇಲ್ಲದ ಬಿಗ್ ಬಾಸ್.. ಪ್ರಶಾಂತ್ ಸಂಬರ್ಗಿ ಹೇಳಿದ್ದೇನು?
/newsfirstlive-kannada/media/post_attachments/wp-content/uploads/2024/09/Srirasthu-Shubhamasthu.jpg)
ಹೌದು, ಈ ಹಿಂದಿನ ಸಂಚಿಕೆಯಲ್ಲಿ ತುಳಸಿ ತಾಯಿಯಾಗುತ್ತಿರೋ ಸುದ್ದಿ ಸಖತ್​ ಹಲ್​ಚಲ್​ ಸೃಷ್ಟಿಸಿತ್ತು. ತುಳಸಿ ತಾಯಿಯಾಗುತ್ತಿರೋ ಸತ್ಯ ಮನೆಯವರಿಗೆ ಗೊತ್ತಾಗಿದೆ. ತುಳಸಿ ಗಟ್ಟಿ ನಿರ್ಧಾರಕ್ಕೆ ಮನೆಯವರಿಂದ ಒಪ್ಪಿಗೆ ಸಿಗುತ್ತಾ ಅಂತ ಕಾದು ನೋಡಬೇಕಿದೆ. ಆದರೆ ರಿಲೀಸ್​ ಆದ ಮತ್ತೊಂದು ಪ್ರೋಮೋದಲ್ಲಿ ಸಮರ್ಥ್ ತನ್ನ ಪತ್ನಿ ಸಿರಿಗೆ ​ಅಮ್ಮನಿಗೆ ಬ್ರೈನ್ ಟ್ಯೂಮರ್ ಇದೆ ಅಂತ ಹೇಳಿದ್ದಾರೆ. ಇದೇ ವಿಚಾರ ಕೇಳಿದ ಸಿರಿ ಬೆಚ್ಚಿಬಿದ್ದಿದ್ದಾಳೆ. ಕೂಡಲೇ ಅಮ್ಮನನ್ನು ನೋಡಬೇಕು ಅಂತ ಹಂಬಲಿಸುತ್ತಿದ್ದ ಸಿರಿಯನ್ನು ಸಮರ್ಥ್​ ತಡೆದಿದ್ದಾನೆ.
View this post on Instagram
ಆದರೆ ಇಲ್ಲೊಂದು ಗಮನಿಸಬೇಕಾದ ವಿಚಾರ ಇದೆ. ತುಳಸಿ ಗರ್ಭಿಣಿ ಅನ್ನೋ ವಿಚಾರ ಮಗ ಸಮರ್ಥ್​ ತಪ್ಪಾಗಿ ತಿಳಿದುಕೊಂಡಿದ್ದಾನೆ. ಅದರ ಬದಲಾಗಿ ನರ್ಸ್​ಗಳು ಹೇಳಿದ ಮಾತನ್ನು ಕೇಳಿಸಿಕೊಂಡ ಸಮರ್ಥ್​ ಅಮ್ಮನಿಗೆ ಬ್ರೈನ್ ಟ್ಯೂಮರ್ ಅಂತ ನಂಬಿದ್ದಾನೆ. ಇನ್ನೂ ಕೆಲವೇ ತಿಂಗಳಿನಲ್ಲಿ ಅಮ್ಮ ನಮ್ಮನ್ನು ಬಿಟ್ಟು ದೂರ ಹೋಗುತ್ತಾಳೆ ಅಂತ ಸಮರ್ಥ್​ ಹಾಗೂ ಸಿರಿ ಕಣ್ಣೀರು ಹಾಕುತ್ತಿದ್ದರೆ, ಅತ್ತ ತುಳಸಿ ಗರ್ಭಿಣಿಯಾಗಿರೋ ಸತ್ಯ ಗೊತ್ತಾಗಿದೆ. ಸದ್ಯ ಮುಂದಿನ ದಿನಗಳಲ್ಲಿ ಈ ಸೀರಿಯಲ್​ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us