/newsfirstlive-kannada/media/post_attachments/wp-content/uploads/2025/06/Flight-Crashes8.jpg)
ಗುಜುರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ರಂಜಿತಾ ಗೋಪಕುಮಾರನ್ ನಾಯರ್ ಅವರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:265 ಮಂದಿಯ ಜೀವ ತೆಗೆದ ಏರ್ ಇಂಡಿಯಾ ವಿಮಾನ.. ದುರಂತಕ್ಕೆ ಕಾರಣವಾಯ್ತಾ ಈ 8 ಸಂಗತಿಗಳು..?
ರಂಜಿತಾ ಗೋಪಕುಮಾರನ್ ನಾಯರ್ ಅವರು ಕೇರಳದ ಪತನಂತಿಟ್ಟ ಜಿಲ್ಲೆಯ ಪುಲ್ಲತ್ ಮೂಲದವರಾಗಿದ್ದಾರೆ. ಇವರು ಕಳೆದ ನಾಲ್ಕು ವರ್ಷಗಳಿಂದ ಲಂಡನ್ನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಗಲ್ಫ ದೇಶಗಳಲ್ಲಿ ಕೆಲಸ ಮಾಡಿದ್ದ ರಂಜಿತಾ ನಂತರ ಲಂಡನ್ಗೆ ನರ್ಸ್ ಆಗಿ ಮರಳಿದ್ದರು.
ರಜೆಯ ನಿಮಿತ್ತ ನಾಲ್ಕು ದಿನಗಳ ಹಿಂದೆ ಊರಿಗೆ ಬಂದಿದ್ದರು ರಂಜಿತಾ. ರಂಜಿತಾ ಅವರ ಇಬ್ಬರು ಮಕ್ಕಳು ಮತ್ತು ತಾಯಿ ಪುಲ್ಲತ್ನಲ್ಲಿ ವಾಸವಾಗಿದ್ದಾರೆ. ನಿನ್ನೆ ಇಬ್ಬರು ಮಕ್ಕಳನ್ನ ಸ್ಕೂಲ್ಗೆ ಕಳುಹಿಸಿ ಲಂಡನ್ಗೆ ಹೊರಟ್ಟಿದ್ದರು. ಹೀಗಾಗಿ ಬುಧವಾರ ಪತನಂತಿಟ್ಟದಿಂದ ಅಹಮದಾಬಾದ್ಗೆ ತೆರಳಿದ್ದರು. ಆದ್ರೆ ಅಹಮದಬಾದ್ ಏರ್ ಪೋರ್ಟ್ ಬಳಿ ವಿಮಾನ ದುರಂತದಲ್ಲಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.
ಇನ್ನೂ, ಮೃತ ರಂಜಿತಾ ಅವರು ಹೊಸ ಮನೆಗೆ ಕಾಲಿಡುವ ತವಕದಲ್ಲಿದ್ದರು. ಈಗಾಗಲೇ ಹೊಸ ಮನೆಯ ಬಹುತೇಕ ಕೆಲಸ ಕಂಪ್ಲೀಟ್ ಆಗಿತ್ತು. ಮುಂದಿನ ತಿಂಗಳು ಅಂದ್ರೆ ಜುಲೈನಲ್ಲಿ ಹೊಸ ಮನೆಯಲ್ಲಿ ಬದುಕು ಕಟ್ಟಲು ಕನಸು ಕಂಡಿದ್ದರು. ಆದ್ರೆ ವಿಮಾನ ಪತನದ ಘೋರ ದುರಂತದಲ್ಲಿ ರಂಜಿತಾ ಅವರು ಮೃತಪಟ್ಟಿದ್ದಾರೆ. ಮನೆಗೆ ಆಸರೆಯಾಗಿದ್ದ ರಂಜಿತಾ ಅವರನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಇಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ