ವಿಮಾನ ದುರಂತ; 2 ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಇನ್ನಿಲ್ಲ.. ಭಾರತಕ್ಕೆ ಬಂದಿದ್ದು ಯಾಕೆ ಗೊತ್ತಾ?

author-image
Bheemappa
Updated On
ವಿಮಾನ ದುರಂತ; 2 ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಇನ್ನಿಲ್ಲ.. ಭಾರತಕ್ಕೆ ಬಂದಿದ್ದು ಯಾಕೆ ಗೊತ್ತಾ?
Advertisment
  • ಭಾರತಕ್ಕೆ ಬರುವಾಗ ತಮ್ಮ ಇಬ್ಬರು ಮಕ್ಕಳನ್ನ ಕರೆದುಕೊಂಡು ಬಂದಿದ್ದರು
  • ಗಂಡ ಹೋಟೆಲ್​ನಲ್ಲಿ ಕೆಲಸ ಮಾಡ್ತಿದ್ರೆ, ಹೆಂಡತಿ ಹ್ಯಾರೋಡ್ಸ್​​ನಲ್ಲಿ ಜಾಬ್​
  • ಅಂತ್ಯ ಕಂಡಿರುವ ಸುಂದರ ಕುಟುಂಬ ಭಾರತಕ್ಕೆ ಏಕೆ ಬಂದಿದ್ದರು ಗೊತ್ತಾ?

ಅಹಮದಾಬಾದ್​​ನಿಂದ ಲಂಡನ್​ಗೆ ತೆರಳುತ್ತಿದ್ದ ಏರ್​ ಇಂಡಿಯಾ ಬೋಯಿಂಗ್- 787 ಡ್ರೀಮ್‌ಲೈನರ್ ವಿಮಾನ ಪರನಗೊಂಡಿದೆ. ಇದರಲ್ಲಿ ಒಟ್ಟು 242 ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಎರಡು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಕೊನೆಯುಸಿರೆಳೆದಿದ್ದಾರೆ.

ಇಂಗ್ಲೆಂಡ್​ ಮೂಲದವರಾದ ಜಾವೇದ್ ಅಲಿ ಸೈಯದ್ (37) ಇವರ ಹೆಂಡತಿ ಮರಿಯಮ್ ಸೈಯದ್ ಹಾಗೂ ಇವರ ಎರಡು ಮಕ್ಕಳು 8 ವರ್ಷದ ಮಗ ಝೈನ್ ಅಲಿ ಹಾಗೂ 4 ವರ್ಷದ ಅಮಾನಿ ಪ್ರಾಣ ಬಿಟ್ಟಿದ್ದಾರೆ. ಇವರು 5 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದರು. ಪ್ರವಾಸ ಮುಗಿದ ಕಾರಣ ಇಂಗ್ಲೆಂಡ್​ಗೆ ವಾಪಸ್ ಆಗಲೆಂದು ಅಹಮದಾಬಾದ್ ಏರ್​ಪೋರ್ಟ್​ನಲ್ಲಿ​ ವಿಮಾನ ಏರಿದ್ದರು. ಆದರೆ ವಿಮಾನ ಟೇಕ್ ಆಫ್​ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.

ಇದನ್ನೂ ಓದಿ: Ahmadabad Plane Crash; ತಂಗಿಗೆ ಲಂಡನ್​ ತೋರಿಸಲು ಕರೆದುಕೊಂಡು ಹೋಗ್ತಿದ್ದ ಅಣ್ಣ.. ಇಬ್ಬರು ನಿಧನ

publive-image

ಈ ವಿಮಾನ ದುರಂತದಲ್ಲಿ ಜಾವೇದ್ ಅಲಿ ಸೈಯದ್ ಕುಟುಂಬ ಕಣ್ಮುಚ್ಚಿದೆ. ಜಾವೇದ್ ಅಲಿ ಸೈಯದ್ ಮತ್ತು ಹೆಂಡತಿ ಮರಿಯಮ್ ಇಬ್ಬರು ಇಂಗ್ಲೆಂಡ್​ಗೆ ಸೇರಿದವರು ಆಗಿದ್ದರು. ಬೆಸ್ಟ್ ವೆಸ್ಟರ್ನ್ ಕೆನ್ಸಿಂಗ್ಟನ್ ಒಲಿಂಪಿಯಾ ಬಳಿ ಇದ್ದ ಅವಾರ್ಡ್​ ವಿನ್ನಿಂಗ್​ ಹೋಟೆಲ್‌ನಲ್ಲಿ ಜಾವೇದ್ ಅಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಇವರ ಹೆಂಡತಿ ಮರಿಯಮ್ ಹ್ಯಾರೋಡ್ಸ (Harrods) ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗ್ತಿದೆ.

ಅಹಮದಾಬಾದ್​ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್​ನ ಗ್ಯಾಟ್ವಿಕ್​ ವಿಮಾನ ನಿಲ್ದಾಣಕ್ಕೆ ಪ್ಲೇನ್ ಹೊರಟ್ಟಿತ್ತು. ಮಧ್ಯಾಹ್ನ 1 ಗಂಟೆ 10 ನಿಮಿಷಕ್ಕೆ ಟೇಕ್​ಆಫ್​ ಆಗಿದ್ದ ಏರ್​ ಇಂಡಿಯಾ ಬೋಯಿಂಗ್- 787 ಡ್ರೀಮ್‌ಲೈನರ್ ವಿಮಾನ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment