/newsfirstlive-kannada/media/post_attachments/wp-content/uploads/2025/06/RR_Air_India_crash.jpg)
ಗಾಂಧಿನಗರ: ಅಹಮದಾಬಾದ್ ಬಳಿ ಏರ್ ಇಂಡಿಯಾ ವಿಮಾನ ಪತನಗೊಂಡು 242 ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದಾರೆ. ಇದರಲ್ಲಿ ರಾಜಸ್ಥಾನ ಮೂಲದ ಸಹೋದರಿ, ಸಹೋದರ ಕೂಡ ಕಣ್ಮುಚ್ಚಿರುವುದು ಗೊತ್ತಾಗಿದೆ.
ರಾಜಸ್ಥಾನದ ಉದಯಪುರ ಮೂಲದ ಶಗುನಾ ಮೋದಿ ಮತ್ತು ಶುಭ್ ಮೋದಿ ವಿಮಾನ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಮಾರ್ಬಲ್ ವ್ಯಾಪಾರಿ ಆಗಿದ್ದ ಸಂಜೀವ್ ಮೋದಿ ಅವರ ಮಕ್ಕಳಾದ ಈ ಇಬ್ಬರು ಪ್ರವಾಸಕ್ಕೆಂದು ಪ್ರಯಾಣ ಬೆಳೆಸಿದ್ದರು. ಶುಭ್ ಲಂಡನ್ನಲ್ಲಿ ಓದಿದ್ದರಿಂದ ತನ್ನ ಸಹೋದರಿಗೆ ಲಂಡನ್ ತೋರಿಸಬೇಕು ಎಂದು ಮಹಾದಾಸೆ ಹೊಂದಿದ್ದನು. ಅಲ್ಲಿನ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲು ಅಹಮದಾಬಾದ್ ಏರ್ಪೋರ್ಟ್ನಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು.
ಇದನ್ನೂ ಓದಿ: ಹುಟ್ಟೂರಲ್ಲಿ ಚಿತಾಭಸ್ಮ ಬಿಡು ಎಂದಿದ್ದ ಪತ್ನಿ.. ಕೊನೆ ಆಸೆ ಈಡೇರಿಸಲು ಲಂಡನ್ನಿಂದ ಬಂದ ಗಂಡ ದುರಂತ ಅಂತ್ಯ
ಈ ಬಗ್ಗೆ ಮಾತನಾಡಿರುವ ಅವರ ಸಂಬಂಧಿ ಸತೀಶ್ ಭಂಡಾರಿ ಅವರು, ಇದೊಂದು ಯಾರು ಊಹೆ ಮಾಡದಂತ ಹೃದಯ ವಿದ್ರಾವಕ ಘಟನೆ. ತಮ್ಮ ರಜೆ ಕಳೆಯಲೆಂದು ಅಣ್ಣ-ತಂಗಿ ಇಬ್ಬರು ಲಂಡನ್ಗೆ ತೆರಳುತ್ತಿದ್ದರು. ಯುಕೆಯಲ್ಲೇ ಶುಭ್ ಕೆಮಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದ್ದರು ಮತ್ತು ಅವರ ಸಹೋದರಿ ಗಾಂಧಿನಗರದ ಪಿಡಿಇಯುನಿಂದ ಬಿಎ-ಬಿಬಿಎ ಅನ್ನು ಪೂರ್ಣಗೊಳಿಸಿದ್ದರು. ಇದೇ ಅವರ ಕೊನೆ ಪ್ರಯಾಣ ಎಂದು ಯಾರಿಗೆ ಗೊತ್ತಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಮೊದಲು ಏನು ಗೊತ್ತಿರಲಿಲ್ಲ ಶಗುನಾ ಮೋದಿ ಮತ್ತು ಶುಭ್ ಮೋದಿ ಅವರ ಅಜ್ಜಿ ಫೋನ್ ಕಾಲ್ ಮಾಡಿ ನಮಗೆ ಟಿವಿ ನೋಡುವಂತೆ ಹೇಳಿದರು. ಟಿವಿ ನೋಡಿದ ಮೇಲೆಯೇ ಅದರಲ್ಲಿ ಈ ಇಬ್ಬರು ಜೀವಂತವಾಗಿಲ್ಲ ಎಂಬುದು ಖಚಿತ ಪಡಿಸಿಕೊಂಡೆವು. ಈ ಘಟನೆಯಿಂದ ಫುಲ್ ಶಾಕ್ ಆಗಿದೆ ಎಂದು ಸಂಬಂಧಿ ಸತೀಶ್ ಅವರು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ