Ahmadabad Plane Crash; ತಂಗಿಗೆ ಲಂಡನ್​ ತೋರಿಸಲು ಕರೆದುಕೊಂಡು ಹೋಗ್ತಿದ್ದ ಅಣ್ಣ.. ಇಬ್ಬರು ನಿಧನ

author-image
Bheemappa
Updated On
Ahmadabad Plane Crash; ತಂಗಿಗೆ ಲಂಡನ್​ ತೋರಿಸಲು ಕರೆದುಕೊಂಡು ಹೋಗ್ತಿದ್ದ ಅಣ್ಣ.. ಇಬ್ಬರು ನಿಧನ
Advertisment
  • ಈ ಅಣ್ಣ- ತಂಗಿ ಕುರಿತು ಅವರ ಸಂಬಂಧಿ ಹೇಳಿರುವುದು ಏನು..?
  • ಲಂಡನ್ ಪ್ರವಾಸ ಅಣ್ಣ-ತಂಗಿಯ ಜೀವನವನ್ನೇ ಕಸಿದುಕೊಂಡಿತು
  • ಏರ್​ ಇಂಡಿಯಾ ವಿಮಾನದಲ್ಲಿ ಒಟ್ಟು 242 ಜನರು ಕೊನೆಯುಸಿರು

ಗಾಂಧಿನಗರ: ಅಹಮದಾಬಾದ್​ ಬಳಿ ಏರ್​ ಇಂಡಿಯಾ ವಿಮಾನ ಪತನಗೊಂಡು 242 ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದಾರೆ. ಇದರಲ್ಲಿ ರಾಜಸ್ಥಾನ ಮೂಲದ ಸಹೋದರಿ, ಸಹೋದರ ಕೂಡ ಕಣ್ಮುಚ್ಚಿರುವುದು ಗೊತ್ತಾಗಿದೆ.

ರಾಜಸ್ಥಾನದ ಉದಯಪುರ ಮೂಲದ ಶಗುನಾ ಮೋದಿ ಮತ್ತು ಶುಭ್​ ಮೋದಿ ವಿಮಾನ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಮಾರ್ಬಲ್​ ವ್ಯಾಪಾರಿ ಆಗಿದ್ದ ಸಂಜೀವ್​ ಮೋದಿ ಅವರ ಮಕ್ಕಳಾದ ಈ ಇಬ್ಬರು ಪ್ರವಾಸಕ್ಕೆಂದು ಪ್ರಯಾಣ ಬೆಳೆಸಿದ್ದರು. ಶುಭ್ ಲಂಡನ್​​ನಲ್ಲಿ ಓದಿದ್ದರಿಂದ​ ತನ್ನ ಸಹೋದರಿಗೆ ಲಂಡನ್​ ತೋರಿಸಬೇಕು ಎಂದು ಮಹಾದಾಸೆ ಹೊಂದಿದ್ದನು. ಅಲ್ಲಿನ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲು ಅಹಮದಾಬಾದ್​ ಏರ್​ಪೋರ್ಟ್​ನಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು.

ಇದನ್ನೂ ಓದಿ: ಹುಟ್ಟೂರಲ್ಲಿ ಚಿತಾಭಸ್ಮ ಬಿಡು ಎಂದಿದ್ದ ಪತ್ನಿ.. ಕೊನೆ ಆಸೆ ಈಡೇರಿಸಲು ಲಂಡನ್​​ನಿಂದ ಬಂದ ಗಂಡ ದುರಂತ ಅಂತ್ಯ

publive-image

ಈ ಬಗ್ಗೆ ಮಾತನಾಡಿರುವ ಅವರ ಸಂಬಂಧಿ ಸತೀಶ್​ ಭಂಡಾರಿ ಅವರು, ಇದೊಂದು ಯಾರು ಊಹೆ ಮಾಡದಂತ ಹೃದಯ ವಿದ್ರಾವಕ ಘಟನೆ. ತಮ್ಮ ರಜೆ ಕಳೆಯಲೆಂದು ಅಣ್ಣ-ತಂಗಿ ಇಬ್ಬರು ಲಂಡನ್​ಗೆ ತೆರಳುತ್ತಿದ್ದರು. ಯುಕೆಯಲ್ಲೇ ಶುಭ್ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮಾಡಿದ್ದರು ಮತ್ತು ಅವರ ಸಹೋದರಿ ಗಾಂಧಿನಗರದ ಪಿಡಿಇಯುನಿಂದ ಬಿಎ-ಬಿಬಿಎ ಅನ್ನು ಪೂರ್ಣಗೊಳಿಸಿದ್ದರು. ಇದೇ ಅವರ ಕೊನೆ ಪ್ರಯಾಣ ಎಂದು ಯಾರಿಗೆ ಗೊತ್ತಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಮೊದಲು ಏನು ಗೊತ್ತಿರಲಿಲ್ಲ ಶಗುನಾ ಮೋದಿ ಮತ್ತು ಶುಭ್​ ಮೋದಿ ಅವರ ಅಜ್ಜಿ ಫೋನ್ ಕಾಲ್ ಮಾಡಿ ನಮಗೆ ಟಿವಿ ನೋಡುವಂತೆ ಹೇಳಿದರು. ಟಿವಿ ನೋಡಿದ ಮೇಲೆಯೇ ಅದರಲ್ಲಿ ಈ ಇಬ್ಬರು ಜೀವಂತವಾಗಿಲ್ಲ ಎಂಬುದು ಖಚಿತ ಪಡಿಸಿಕೊಂಡೆವು. ಈ ಘಟನೆಯಿಂದ ಫುಲ್ ಶಾಕ್ ಆಗಿದೆ ಎಂದು ಸಂಬಂಧಿ ಸತೀಶ್ ಅವರು ಹೇಳಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment