Advertisment

ಅಹ್ಮದಾಬಾದ್ ವಿಮಾನ ದುರಂತ; 25 ಲಕ್ಷ ರೂ. ಹೆಚ್ಚುವರಿ ಪರಿಹಾರ ಘೋಷಿಸಿದ ಏರ್ ಇಂಡಿಯಾ

author-image
admin
Updated On
ಅಹ್ಮದಾಬಾದ್ ವಿಮಾನ ದುರಂತದ 15 ಪುಟಗಳ ತನಿಖಾ ವರದಿ ಬಹಿರಂಗ.. ಪತನಕ್ಕೆ ಕಾರಣವಾದ ಅಸಲಿ ಸತ್ಯ ಏನು?
Advertisment
  • ಜೂನ್ 12ರಂದು ಅಹ್ಮದಾಬಾದ್ ಏರ್‌ಪೋರ್ಟ್ ಬಳಿ ದುರಂತ
  • ಮೊದಲ ದಿನವೇ ಏರ್ ಇಂಡಿಯಾ 1 ಕೋಟಿ ರೂಪಾಯಿ ಪರಿಹಾರ ಘೋಷಣೆ
  • ಸಂತ್ರಸ್ತ ಕುಟುಂಬಕ್ಕೆ ತಕ್ಷಣವೇ ₹25 ಲಕ್ಷ ಮಧ್ಯಂತರ ಪರಿಹಾರ ಬಿಡುಗಡೆ

ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಸಂತ್ರಸ್ತ ಕುಟುಂಬಕ್ಕೆ ಏರ್ ಇಂಡಿಯಾ ಹೆಚ್ಚುವರಿ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಸಂತ್ರಸ್ತ ಕುಟುಂಬಕ್ಕೆ ತಕ್ಷಣವೇ ಮಧ್ಯಂತರ ಪರಿಹಾರವಾಗಿ 25 ಲಕ್ಷ ರೂಪಾಯಿ ನೀಡುವ ವ್ಯವಸ್ಥೆ ಮಾಡಲಾಗಿದೆ.

Advertisment

ಜೂನ್ 12ರಂದು ಅಹ್ಮದಾಬಾದ್ ಏರ್‌ಪೋರ್ಟ್ ಬಳಿ ದುರಂತವಾಗುತ್ತಿದ್ದಂತೆ ಮೊದಲ ದಿನವೇ ಏರ್ ಇಂಡಿಯಾ 1 ಕೋಟಿ ರೂಪಾಯಿ ಪರಿಹಾರ ಘೋಷಣೆ ಮಾಡಿತ್ತು. ಘಟನೆ ನಡೆದ 3ನೇ ದಿನಕ್ಕೆ 1 ಕೋಟಿ ರೂಪಾಯಿ ಪರಿಹಾರಕ್ಕೆ ಹೆಚ್ಚುವರಿಯಾಗಿ 25 ಲಕ್ಷ ರೂಪಾಯಿ ನೀಡಲಾಗುತ್ತಿದೆ.

publive-image

ಅಂದು ಏರ್‌ ಇಂಡಿಯಾ ವಿಮಾನದಲ್ಲಿ 261 ಮಂದಿ ಪ್ರಯಾಣಿಸಿದ್ದರು. ಪವಾಡ ಸದೃಶ್ಯ ರೀತಿಯಲ್ಲಿ ಒಬ್ಬರು ಬಿಟ್ಟರೆ 260 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಪ್ರಯಾಣಿಕರ ಸಾವಿನ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂತ್ರಸ್ತ ಕುಟುಂಬಸ್ಥರಿಗೆ ತಕ್ಷಣವೇ 25 ಲಕ್ಷ ರೂಪಾಯಿ ಪರಿಹಾರ ನೀಡಲು ಮುಂದಾಗಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ ಕೂಡ ದೃಢಪಡಿಸಿದೆ.

ಇದನ್ನೂ ಓದಿ: ಕರುಳ ಬಳ್ಳಿಗೆ ಕುಡಿಯ ಸಂಕಟ ಅದ್ಹೇಗೆ ಗೊತ್ತಾಯ್ತೋ.. ಸುಟ್ಟ ಕರಕಲಾಗ್ತಿದ್ದ ಮಗನ ಬಳಿ ಬಿದ್ದಿದ್ದ ಮೊಬೈಲ್​ ರಿಂಗಣಿಸಿತ್ತು.. 

Advertisment

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಏರ್ ಇಂಡಿಯಾ ವಿಮಾನ ಪತನದ ಕುರಿತು ಹರಿದಾಡುತ್ತಿರುವ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಯಾವುದೇ ಊಹಾಪೋಹಗಳನ್ನು ನಂಬುವ ಅವಶ್ಯಕತೆ ಇಲ್ಲ. ವಿಮಾನ ದುರಂತದ ಬಗ್ಗೆ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸುತ್ತಿದೆ. ಉನ್ನತ ಮಟ್ಟದ ಸಮಿತಿ ನೀಡುವ ತನಿಖಾ ವರದಿಯಿಂದ ಸತ್ಯಾಂಶ ತಿಳಿಯಲಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment