/newsfirstlive-kannada/media/post_attachments/wp-content/uploads/2025/06/aishwarya_mahadevan.jpg)
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಸಾಮಾಜಿಕ ಜಾಲತಾಣ ವಿಭಾಗಕ್ಕೆ ಹೊಸ ಅಧ್ಯಕ್ಷರಾಗಿ ಐಶ್ವರ್ಯ ಮಹಾದೇವ್ ಅವರನ್ನು ನೇಮಕ ಮಾಡಲಾಗಿದೆ. ಐಶ್ವರ್ಯ ಅವರು ಒಂದು ಕಾಲದಲ್ಲಿ ಸಿಎಂ ಹಾಗೂ ಡಿಸಿಎಂ ಅವರ ಆಪ್ತ ಮುಖಂಡ, ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಅವರ ಮಗಳಾಗಿದ್ದಾರೆ.
ಐಶ್ವರ್ಯ ಮಹಾದೇವ್ ಅವರನ್ನು ನೇಮಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಆದೇಶ ಹೊರಡಿಸಿದೆ. ಕಾರ್ಯದರ್ಶಿಯಾದ ಕೆ.ಸಿ ವೇಣುಗೋಪಾಲ್ ಅವರು, ಐಶ್ವರ್ಯ ಅವರ ಹುದ್ದೆ ತಕ್ಷಣದಿಂದ ಜಾರಿ ಬರುವಂತೆ ನೇಮಕ ಮಾಡಿದ್ದಾರೆ.
ಇದನ್ನೂ ಓದಿ: CM, ಡಿಸಿಎಂ, ಗೃಹಸಚಿವರ ರಹಸ್ಯ ಸಭೆ.. 11 ದಿನಗಳ ದಸರಾ ಮಹೋತ್ಸವದ ಬಗ್ಗೆ ಸಿದ್ದರಾಮಯ್ಯ ಏನಂದ್ರು?
ಯಾರಿದು ಐಶ್ವರ್ಯ ಮಹಾದೇವ?
ಎಐಸಿಸಿ ವಕ್ತಾರೆಯಾಗಿದ್ದ ಐಶ್ವರ್ಯ ಮಹದೇವ್ ಅವರು ಮಾಜಿ ಶಾಸಕ ಮಂಚನಹಳ್ಳಿ ಮಹಾದೇವ್ ಅವರ ಪುತ್ರಿ. 14 ವರ್ಷಗಳ ಹಿಂದೆ ಅವರು ಮೃತಪಟ್ಟಿದ್ದು, ಆ ಬಳಿಕ ಪುತ್ರಿ ಐಶ್ವರ್ಯ ಅವರು ಕ್ಷೇತ್ರ ಹಾಗೂ ಪಕ್ಷದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್ ನಗರದ ನಿವಾಸಿಯಾಗಿರುವ ಐಶ್ವರ್ಯ ಮಹದೇವ್, ಅತಿ ಕಿರಿಯ ವಯಸ್ಸಿನಲ್ಲೇ ಮಹಿಳಾ ಘಟಕದ ಕಾರ್ಯದರ್ಶಿ ಪಟ್ಟಕ್ಕೇರಿದ್ದರು. ಜತೆಗೆ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆಯಾಗಿದ್ದರು. ವಿದ್ಯಾರ್ಹತೆಯಲ್ಲಿ ವಕೀಲ ಪದವಿ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ