/newsfirstlive-kannada/media/post_attachments/wp-content/uploads/2025/07/akshya.jpg)
ಬೆಂಗಳೂರು: ಮರದ ಕೊಂಬೆ ಬಿದ್ದು ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಷಯ್ ಜೂನ್ 19ರಂದು ನಿಧನರಾಗಿದ್ದರು. ಆದ್ರೆ, ಇದೀಗ ಅಕ್ಷಯ್ ನಿಧನದ ಬೆನ್ನಲ್ಲೇ ತಂದೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ:ಅಕ್ಷಯ್ ನಿಧನದ ಸುದ್ದಿ ವೀಲ್ ಚೇರ್ನಲ್ಲಿರೋ ತಂದೆಗೆ ಇನ್ನೂ ಗೊತ್ತೇ ಇಲ್ಲ..!
ಜೂನ್ 15 ಭಾನುವಾರ ಅಕ್ಷಯ್ ಅಪ್ಪನಿಗೆ ಮಟನ್ ಇಷ್ಟ ಅನ್ನೋ ಕಾರಣಕ್ಕೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮಟನ್ ತರಲು ಹೋಗಿ ವಾಪಸ್ ಬರುತ್ತಿದ್ದಾಗ ಬ್ರಹ್ಮ ಮಂದಿರದ ಬಳಿ ಮರದ ಕೊಂಬೆ ಮುರಿದು ಅಕ್ಷಯ್ ತಲೆ ಮೇಲೆ ಬಿದ್ದಿತ್ತು. ಪರಿಣಾಮ ಪ್ರಜ್ಜೆ ತಪ್ಪಿ ರಸ್ತೆಯಲ್ಲಿ ಬಿದ್ದ ಅಕ್ಷಯ್ನನ್ನ ಸ್ಥಳೀಯ ಪ್ರಶಾಂತ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ, ತಲೆಗೆ ಬಲವಾಗಿ ಗಾಯವಾದ ಕಾರಣ, ರಕ್ತ ಹರಿಯುತ್ತಿರೋದು ನಿಲ್ಲದ ಕಾರಣ ತ್ಯಾಗರಾಜನಗರದ ಪ್ರಶಾಂತ್ ಆಸ್ಪತ್ರೆಯಿಂದ ಜಯನಗರದ 3ನೇ ಬ್ಲಾಕ್ನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅಕ್ಷಯ್ ಜೂನ್ 19ರಂದು ಮಧ್ಯಾಹ್ನ 1 ಗಂಟೆಗೆ ಉಸಿರು ನಿಲ್ಲಿಸಿದ್ದರು.
ಈ ಘಟನೆ ನಡೆದು ಒಂದು ತಿಂಗಳ ಬಳಿಕ ಅಕ್ಷಯ್ ತಂದೆ ನಿಧನರಾಗಿದ್ದಾರೆ. ಮೂರು ದಿನಗಳ ಹಿಂದೆ ಅಕ್ಷಯ್ ತಂದೆ ಶಿವರಾಮ್ ಅವರು ಉಸಿರು ನಿಲ್ಲಿಸಿದ್ದಾರೆ. ಅಕ್ಷಯ್ ತಂದೆ ಶಿವರಾಮ್ ಡಯಾಲಿಸಿಸ್ ಪೇಷೆಂಟ್ ಆಗಿದ್ದರು. ಅಕ್ಷಯ್ ದುಡಿಮೆಯಲ್ಲಿಯೇ ತಂದೆ ಶಿವರಾಮ್ಗೆ ಚಿಕಿತ್ಸೆ ನಡೀತಿತ್ತು. ಪುತ್ರನ ಅಗಲುವಿಕೆಯ ನೋವಿನಲ್ಲಿದ್ದ ತಂದೆ ಶಿವರಾಮ್ ಮೂರು ದಿನಗಳ ಹಿಂದೆ ನಿಧನರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ