newsfirstkannada.com

ಸಿದ್ದರಾಮಯ್ಯರ ಅದೃಷ್ಟದ ಸರ್ಕಾರಿ ನಿವಾಸ ಪಡೆಯವಲ್ಲಿ ಕೊನೆಗೂ D.K.ಶಿವಕುಮಾರ್ ಯಶಸ್ವಿ..!

Share :

23-05-2023

    ಉಪಮುಖ್ಯಮಂತ್ರಿಗೆ ಒಲಿದ ಅದೃಷ್ಟದ ಮನೆ

    ಐವರು ಸಚಿವರಿಗೆ ನಿವಾಸಗಳನ್ನು ಹಂಚಿಕೆ

    ಸರ್ಕಾರಿ ನಿವಾಸಕ್ಕೆ ಶಿಫ್ಟ್ ಆಗಲಿರುವ D.K ಶಿವಕುಮಾರ್

ಬೆಂಗಳೂರು: ನೂತನ ಸಚಿವರಿಗೆ ಸರ್ಕಾರದಿಂದ ನಿವಾಸ ಹಂಚಿಕೆ ಮಾಡಲಾಗಿದೆ. ಸದ್ಯ ಐವರು ಸಚಿವರಿಗೆ ನಿವಾಸಗಳನ್ನು ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಉಪಮುಖ್ಯಮಂತ್ರಿಗೆ ಅದೃಷ್ಟದ ಮನೆ ಸಿಕ್ಕಿದೆ. ಸದ್ಯ ಸಿದ್ದರಾಮಯ್ಯ ವಾಸ್ತವ್ಯ ಹೂಡಿರುವ ಕುಮಾರಕೃಪಾದಲ್ಲಿರುವ ಲಕ್ಕಿ ನಿವಾಸವನ್ನು ಪಡೆದುಕೊಳ್ಳುವಲ್ಲಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿವಾಸವನ್ನು ಖಾಲಿ ಮಾಡಿದ ಬಳಿಕ ಡಿಕೆ ಶಿವಕುಮಾರ್, ತಮ್ಮ ಸರ್ಕಾರಿ ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ.

 

ಜ್ಯೋತಿಷಿಗಳ ಸಲಹೆ ಮೇರೆಗೆ ಕುಮಾರಕೃಪಾದಲ್ಲಿರುವ ಸರ್ಕಾರಿ ನಿವಾಸವನ್ನು ಡಿ.ಕೆ.ಶಿವಕುಮಾರ್ ಪಡೆದುಕೊಂಡಿದ್ದಾರೆ. ಸದ್ಯ ಸಿದ್ದರಾಮಯ್ಯ ವಾಸವಾಗಿರುವ ನಿವಾಸವನ್ನು ಅದೃಷ್ಟದ ಮನೆ ಎಂದು ಕರೆಯಲಾಗುತ್ತದೆ. ಈ ಹಿಂದೆ ಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯ ಇದೇ ನಿವಾಸದಲ್ಲಿದ್ದರು. 5 ವರ್ಷ ಆಡಳಿತ ಯಶಸ್ವಿಯಾಗಿ ನಡೆಸಿದ್ದರು. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿದ್ದ ಮನೆಯನ್ನು ಎಂ.ಬಿ ಪಾಟೀಲ್‌ಗೆ ನಿಗದಿ ಮಾಡಲಾಗಿದೆ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯಿದ್ದ ವಸತಿ ಗೃಹವನ್ನು ಪ್ರಿಯಾಂಕ್ ಖರ್ಗೆಗೆ ಹಂಚಿಕೆ ಮಾಡಲಾಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್​ನಲ್ಲಿಯೇ ಕೆ.ಜೆ ಜಾರ್ಜ್​​ಗೆ ನೀಡಲಾಗಿದೆ. ಸದಾಶಿವನಗರದ ಸರ್ಕಾರಿ ನಿವಾಸವನ್ನು ಡಾ.ಜಿ ಪರಮೇಶ್ವರ್​ಗೆ ಹಂಚಿಕೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದರಾಮಯ್ಯರ ಅದೃಷ್ಟದ ಸರ್ಕಾರಿ ನಿವಾಸ ಪಡೆಯವಲ್ಲಿ ಕೊನೆಗೂ D.K.ಶಿವಕುಮಾರ್ ಯಶಸ್ವಿ..!

https://newsfirstlive.com/wp-content/uploads/2023/05/siddu-dks.jpg

    ಉಪಮುಖ್ಯಮಂತ್ರಿಗೆ ಒಲಿದ ಅದೃಷ್ಟದ ಮನೆ

    ಐವರು ಸಚಿವರಿಗೆ ನಿವಾಸಗಳನ್ನು ಹಂಚಿಕೆ

    ಸರ್ಕಾರಿ ನಿವಾಸಕ್ಕೆ ಶಿಫ್ಟ್ ಆಗಲಿರುವ D.K ಶಿವಕುಮಾರ್

ಬೆಂಗಳೂರು: ನೂತನ ಸಚಿವರಿಗೆ ಸರ್ಕಾರದಿಂದ ನಿವಾಸ ಹಂಚಿಕೆ ಮಾಡಲಾಗಿದೆ. ಸದ್ಯ ಐವರು ಸಚಿವರಿಗೆ ನಿವಾಸಗಳನ್ನು ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಉಪಮುಖ್ಯಮಂತ್ರಿಗೆ ಅದೃಷ್ಟದ ಮನೆ ಸಿಕ್ಕಿದೆ. ಸದ್ಯ ಸಿದ್ದರಾಮಯ್ಯ ವಾಸ್ತವ್ಯ ಹೂಡಿರುವ ಕುಮಾರಕೃಪಾದಲ್ಲಿರುವ ಲಕ್ಕಿ ನಿವಾಸವನ್ನು ಪಡೆದುಕೊಳ್ಳುವಲ್ಲಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿವಾಸವನ್ನು ಖಾಲಿ ಮಾಡಿದ ಬಳಿಕ ಡಿಕೆ ಶಿವಕುಮಾರ್, ತಮ್ಮ ಸರ್ಕಾರಿ ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ.

 

ಜ್ಯೋತಿಷಿಗಳ ಸಲಹೆ ಮೇರೆಗೆ ಕುಮಾರಕೃಪಾದಲ್ಲಿರುವ ಸರ್ಕಾರಿ ನಿವಾಸವನ್ನು ಡಿ.ಕೆ.ಶಿವಕುಮಾರ್ ಪಡೆದುಕೊಂಡಿದ್ದಾರೆ. ಸದ್ಯ ಸಿದ್ದರಾಮಯ್ಯ ವಾಸವಾಗಿರುವ ನಿವಾಸವನ್ನು ಅದೃಷ್ಟದ ಮನೆ ಎಂದು ಕರೆಯಲಾಗುತ್ತದೆ. ಈ ಹಿಂದೆ ಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯ ಇದೇ ನಿವಾಸದಲ್ಲಿದ್ದರು. 5 ವರ್ಷ ಆಡಳಿತ ಯಶಸ್ವಿಯಾಗಿ ನಡೆಸಿದ್ದರು. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿದ್ದ ಮನೆಯನ್ನು ಎಂ.ಬಿ ಪಾಟೀಲ್‌ಗೆ ನಿಗದಿ ಮಾಡಲಾಗಿದೆ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯಿದ್ದ ವಸತಿ ಗೃಹವನ್ನು ಪ್ರಿಯಾಂಕ್ ಖರ್ಗೆಗೆ ಹಂಚಿಕೆ ಮಾಡಲಾಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್​ನಲ್ಲಿಯೇ ಕೆ.ಜೆ ಜಾರ್ಜ್​​ಗೆ ನೀಡಲಾಗಿದೆ. ಸದಾಶಿವನಗರದ ಸರ್ಕಾರಿ ನಿವಾಸವನ್ನು ಡಾ.ಜಿ ಪರಮೇಶ್ವರ್​ಗೆ ಹಂಚಿಕೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More