ಕೋರ್ಟ್​​ನಲ್ಲಿ ಹೀಗಾದರೆ ಜೈಲೇ ಗತಿ.. ಅಲ್ಲು ಅರ್ಜುನ್​​​​​ ಯಾವ ಜೈಲು ಸೇರ್ತಾರೆ..?

author-image
Ganesh
Updated On
ಜೈಲಿಂದ ಮನೆಗೆ ಬರ್ತಿದ್ದಂತೆ ಅಲ್ಲು ಅರ್ಜುನ್ ಭಾವುಕ; ಓಡಿ ಬಂದು ತಬ್ಬಿಕೊಂಡ ಪತ್ನಿ.. ಘಟನೆ ಬಗ್ಗೆ ಬೇಸರ..!
Advertisment
  • ಅಲ್ಲು ಅರ್ಜುನ್ ಬಂಧನ, ಮುಂದೆ ಏನಾಗುತ್ತೆ..?
  • ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅರೆಸ್ಟ್
  • ಡಿಸೆಂಬರ್ 4 ರಂದು ಹೈದ್ರಾಬಾದ್​ನಲ್ಲಿ ನಡೆದ ಕೇಸ್

ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಬಂಧನ ಈಗ ತೆಲುಗು ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಪುಷ್ಪ-2 ಪ್ರೀಮಿಯರ್ ಶೋ ವೇಳೆ ನಡೆದ ದುರಂತ ಪ್ರಕರಣದಲ್ಲಿ ತೆಲುಗು ಬಿಗ್​ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್​ ನಿವಾಸದಲ್ಲಿ ಬಂಧಿಸಿರುವ ಚಿಕ್ಕಡಪಲ್ಲಿ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಬಂಧನ ಪ್ರಕ್ರಿಯೆಯನ್ನು ಮುಗಿಸಿ ಕೋರ್ಟ್​ಗೆ ಹಾಜರುಪಡಿಸಲು ಸಿದ್ಧತೆ ನಡೆಸ್ತಿದ್ದಾರೆ. ಅಂತೆಯೇ ಗಾಂಧಿ ಉಸ್ಮಾನಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ. ನಂತರ ನಾಂಪಳ್ಳಿ ಕೋರ್ಟ್ (Nampally court)​ ಮುಂದೆ ಅಲ್ಲು ಅರ್ಜುನ್ ಅವರನ್ನು ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಅರೆಸ್ಟ್; ನಿನ್ನೆಯೂ ಪುಷ್ಪ -2 ಕಮಾಲ್.. 8 ದಿನದ ಕಲೆಕ್ಷನ್ ಎಷ್ಟು ಕೋಟಿ..?

ನಂತರ ಪೊಲೀಸರು ವಿಚಾರಣೆಗಾಗಿ ನ್ಯಾಯಾಧೀಶರ ಮುಂದೆ ಅಲ್ಲು ಅರ್ಜುನ್​ನನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಒಂದು ವೇಳೆ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದರೆ ಜೈಲೇ ಗತಿ ಆಗಲಿದೆ. ಹೈದರಾಬಾದ್​ನ ಚಂಚಲಗೂಡ (Chanchalguda jail) ಜೈಲಿಗೆ ಪೊಲೀಸರು ಕಳುಹಿಸುತ್ತಾರೆ.

ಇದನ್ನೂ ಓದಿ:ವರ್ಲ್ಡ್ ಚೆಸ್​ ಚಾಂಪಿಯನ್​ಶಿಪ್ ಗೆದ್ದ ಗುಕೇಶ್​ ಎಲ್ಲಿಯವರು? ಇವನಮ್ಮವ, ಇವನಮ್ಮವ ಎನ್ನುತಿವೆ ಎರಡು ರಾಜ್ಯಗಳು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment