ಧನುಷ್-ಐಶ್ವರ್ಯಾ ವಿಚ್ಛೇದನ ಬಗ್ಗೆ ಗಾಯಕಿ ಅಚ್ಚರಿಯ ಹೇಳಿಕೆ
ಪ್ರೀತಿಸಿ ವಿವಾಹವಾಗಿದ್ದ ಈ ಜೋಡಿ ದೂರವಾಗಿದ್ದೇಕೆ? ಕಾರಣ?
ಗಾಯಕಿ ಸುಚಿತ್ರಾ ಯಾರು? ಆಕೆಯ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ
ಪ್ರೀತಿ ಯಾವತ್ತೂ ಸೋಲಲ್ಲ. ಪ್ರೀತಿಸಿದವರು ಸೋತರೆ ಪ್ರೀತಿ ಸೋಲುವುದರಲ್ಲಿ ಅನುಮಾನವೇ ಇಲ್ಲ. ಅದರಂತೆಯೇ ತಮಿಳು ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ನಡುವಿನ ದಾಂಪತ್ಯ ಜೀವನ ಸೋತಿದೆ. ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದ ಈ ಜೋಡಿ ಬೇರೆ ಬೇರೆಯಾಗಿದ್ದಾರೆ. ಆದರೀಗ ಇವರಿಬ್ಬರ ವಿಚ್ಛೇದನದ ವಿಚಾರವಾಗಿ ಗಾಯಕಿ ಸುಚಿತ್ರಾ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕಾರಣ ‘ದಾಂಪತ್ಯ ದ್ರೋಹ’ ಎಂದು ಎಂದಿದ್ದಾರೆ.
ರಜನಿಕಾಂತ್ ತಮ್ಮ ಪುತ್ರಿ ಐಶ್ವರ್ಯಾ ಅವರನ್ನು ನಟ ಧನುಷ್ಗೆ ಮದುವೆ ಮಾಡಿ ಕೊಟ್ಟಿದ್ದರು. ಇದಕ್ಕೆ ಕಾರಣ ಇವರಿಬ್ಬರ ನಡುವಿನ ಪ್ರೀತಿ. ಆದರೆ ಇಬ್ಬರು ಪ್ರೀತಿಸಿ ಮದುವೆಯಾಗಿ 20 ವರ್ಷ ಕಳೆದ ಬಳಿಕ ಡಿವೋರ್ಸ್ ನೀಡಿದ್ದಾರೆ. 2022ರಲ್ಲಿ ಪ್ರತ್ಯೇಕವಾಗಿ ಬದುಕಲು ಮುಂದಾಗುತ್ತಾರೆ.
ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನ ಮಾತ್ರ ಅಭಿಮಾನಿಗಳನ್ನು ಘಾಸಿಗೊಳಿಸಿತ್ತು. ಆದರೆ ಈ ಸ್ಟಾರ್ ವಂಶದವರು ಇಬ್ಬರ ನಡುವಿನ ಪ್ರತ್ಯೇಕತೆಗೆ ಬಗ್ಗೆ ಎಲ್ಲೂ ಕಾರಣ ನೀಡಿರಲಿಲ್ಲ. ಆದರೀಗ ಇಬ್ಬರಿಬ್ಬರ ನುಡುವಿನ ವಿಚ್ಛೇದನದ ವಿಚಾರವಾಗಿ ಗಾಯಕಿ ಸುಚಿತ್ರಾ ಮಾತನಾಡಿದ್ದಾರೆ. ಮಾತ್ರವಲ್ಲದೆ ಅಚ್ಚರಿಯ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಪರಸ್ಪರ ಮೋಸ ಮಾಡಿದ ಜೋಡಿ
ಸುಚಿತ್ರಾ ‘ಕುಮುದಂ’ ಎಂಬ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ನಟ ಧನುಷ್ ಮತ್ತು ಐಶ್ವರ್ಯಾ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ಇಬ್ಬರು ಗಂಡು ಮಕ್ಕಳಿರುವ ಈ ಜೋಡಿ ವೈವಾಹಿಕ ಜೀವನದ ಸಮಯದಲ್ಲಿ ಪರಸ್ಪರ ಮೋಸ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಐಶ್ವರ್ಯಾ ಅವರು ಧನುಷ್ ತನಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಆಕೆ ಮದುವೆಯ ಉದ್ದಕ್ಕೂ ಅದನ್ನೇ ಮಾಡಿದ್ದಾಳೆ. ಆಕೆಗೊಂದು, ಆತನಿಗೊಂದು ನ್ಯಾಯವೇ?. ಇಬ್ಬರು ಪರಸ್ಪರ ಮೋಸ ಮಾಡಿಕೊಂಡಿರುವ ದಂಪತಿಗಳು ಎಂದು ಗಾಯಕಿ ಸುಚಿತ್ರ ಸಂದರ್ಶನದಲ್ಲಿ ಹೇಳಿದ್ದಾರೆ.
ಡೇಟಿಂಗ್ ವಿಚಾರ ಬಿಚ್ಚಿಟ್ಟ ಗಾಯಕಿ
ಧನುಷ್ ಮತ್ತು ಐಶ್ವರ್ಯಾ ಆಗಾಗ ಬೇರೆಯವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು. ವಿವಾಹವಾದ ಮೇಲೆ ಇತರರ ಜೊತೆಗೆ ಡೇಟಿಂಗ್ ಹೋಗುವುದು ಸಾಮಾನ್ಯ ವಿಷಯವೇ ಎಂದು ಸುಚಿತ್ರಾ ಹೇಳಿದ್ದಾರೆ.
ಇದನ್ನೂ ಓದಿ: ಆಯತಪ್ಪಿ 133 ಅಡಿ ಮೇಲಿಂದ ಕೆಳಗೆ ಬಿದ್ದು ಕಾರ್ಮಿಕ ಸಾವು.. ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹ
ಗಾಯಕಿ ಸುಚಿತ್ರಾ ಯಾರು?
ಸುಚಿತ್ರಾ ಒಬ್ಬ ಭಾರತೀಯ ಹಿನ್ನೆಲೆ ಗಾಯಕಿ. ತಮಿಳು ಸಿನಿಮಾದ ಅನೇಕ ಸಿನಿಮಾಗಳಿಗೆ ಧ್ವನಿ ನೀಡಿದ್ದಾರೆ. ಮಾತ್ರವಲ್ಲದೆ ಕೆಲವು ಸಿನಿಮಾಗಳ ಹಿಟ್ಗೆ ಇವರ ಧ್ವನಿಯೇ ಕಾರಣವಾಗಿದೆ. ಅದರಂತೆಯೇ ಸುಚಿತ್ರಾ ‘ಎಕ್ಸ್ಕ್ಯೂಸ್ ಮಿ’, ‘ಎನ್ ಇಧಯಂ’ ಮುಂತಾದ ಹಿಟ್ ಹಾಡುಗಳನ್ನು ಹಾಡುವ ಮೂಲಕ ಜನಪ್ರಿಯರಾದ ಗಾಯಕಿ.
ಸುಚಿತ್ರಾ ತನ್ನ ಹಾಡುಗಳ ಮೂಲಕ ಪ್ರಸಿದ್ಧಿ ಪಡೆದರೆ, ಇತ್ತ ‘ಸುಚಿ ಲೀಕ್ಸ್’ ಎಂಬ ಎಪಿಸೋಡ್ ಮೂಲಕ ಕುಖ್ಯಾತಿ ಪಡೆದಿದ್ದಾರೆ. ಸುಚಿತ್ರಾ ತಮ್ಮ ಸುಚಿ ಲೀಕ್ಸ್ ಮೂಲಕ ಕಾಲಿವುಡ್ನ ಪ್ರಮುಖ ಸೆಲೆಬ್ರಿಟಿಗಳ ಹಲವಾರು ಮಾಹಿತಿಗಳನ್ನ ಸೋರಿಕೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ವಿಪರೀತ ಶೋಕಿ.. ಸಾಲ ತೀರಿಸಲು ಮನೆ ಮಾಲಕಿಯನ್ನು ಕೊಂದಾಕೆ ಕೊನೆಗೂ ಅರೆಸ್ಟ್
ಅದರಲ್ಲಿ ಧನುಷ್ ಮತ್ತು ತ್ರಿಶಾ ಕೃಷ್ಣನ್ ರೂಂನಲ್ಲಿರುವ ಫೋಟೋ, ಗಾಯಕ ಅನಿರುದ್ಧ್ ರವಿಚಂದರ್ ಮತ್ತು ಆಂಡ್ರಿಯಾ ಅವರ ಲವ್ ಸ್ಟೋರಿಯ ಬಗ್ಗೆಯೂ ಮಾತನಾಡಿದ್ದಾರೆ. ಇದೀಗ ಐಶ್ವರ್ಯಾ ರಜನಿಕಾಂತ್ ಮತ್ತು ಧನುಷ್ ನಡುವಿನ ಸಂಬಂಧದ ಬಗ್ಗೆಯೂ ಸ್ಟೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಧನುಷ್-ಐಶ್ವರ್ಯಾ ವಿಚ್ಛೇದನ ಬಗ್ಗೆ ಗಾಯಕಿ ಅಚ್ಚರಿಯ ಹೇಳಿಕೆ
ಪ್ರೀತಿಸಿ ವಿವಾಹವಾಗಿದ್ದ ಈ ಜೋಡಿ ದೂರವಾಗಿದ್ದೇಕೆ? ಕಾರಣ?
ಗಾಯಕಿ ಸುಚಿತ್ರಾ ಯಾರು? ಆಕೆಯ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ
ಪ್ರೀತಿ ಯಾವತ್ತೂ ಸೋಲಲ್ಲ. ಪ್ರೀತಿಸಿದವರು ಸೋತರೆ ಪ್ರೀತಿ ಸೋಲುವುದರಲ್ಲಿ ಅನುಮಾನವೇ ಇಲ್ಲ. ಅದರಂತೆಯೇ ತಮಿಳು ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ನಡುವಿನ ದಾಂಪತ್ಯ ಜೀವನ ಸೋತಿದೆ. ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದ ಈ ಜೋಡಿ ಬೇರೆ ಬೇರೆಯಾಗಿದ್ದಾರೆ. ಆದರೀಗ ಇವರಿಬ್ಬರ ವಿಚ್ಛೇದನದ ವಿಚಾರವಾಗಿ ಗಾಯಕಿ ಸುಚಿತ್ರಾ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕಾರಣ ‘ದಾಂಪತ್ಯ ದ್ರೋಹ’ ಎಂದು ಎಂದಿದ್ದಾರೆ.
ರಜನಿಕಾಂತ್ ತಮ್ಮ ಪುತ್ರಿ ಐಶ್ವರ್ಯಾ ಅವರನ್ನು ನಟ ಧನುಷ್ಗೆ ಮದುವೆ ಮಾಡಿ ಕೊಟ್ಟಿದ್ದರು. ಇದಕ್ಕೆ ಕಾರಣ ಇವರಿಬ್ಬರ ನಡುವಿನ ಪ್ರೀತಿ. ಆದರೆ ಇಬ್ಬರು ಪ್ರೀತಿಸಿ ಮದುವೆಯಾಗಿ 20 ವರ್ಷ ಕಳೆದ ಬಳಿಕ ಡಿವೋರ್ಸ್ ನೀಡಿದ್ದಾರೆ. 2022ರಲ್ಲಿ ಪ್ರತ್ಯೇಕವಾಗಿ ಬದುಕಲು ಮುಂದಾಗುತ್ತಾರೆ.
ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನ ಮಾತ್ರ ಅಭಿಮಾನಿಗಳನ್ನು ಘಾಸಿಗೊಳಿಸಿತ್ತು. ಆದರೆ ಈ ಸ್ಟಾರ್ ವಂಶದವರು ಇಬ್ಬರ ನಡುವಿನ ಪ್ರತ್ಯೇಕತೆಗೆ ಬಗ್ಗೆ ಎಲ್ಲೂ ಕಾರಣ ನೀಡಿರಲಿಲ್ಲ. ಆದರೀಗ ಇಬ್ಬರಿಬ್ಬರ ನುಡುವಿನ ವಿಚ್ಛೇದನದ ವಿಚಾರವಾಗಿ ಗಾಯಕಿ ಸುಚಿತ್ರಾ ಮಾತನಾಡಿದ್ದಾರೆ. ಮಾತ್ರವಲ್ಲದೆ ಅಚ್ಚರಿಯ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಪರಸ್ಪರ ಮೋಸ ಮಾಡಿದ ಜೋಡಿ
ಸುಚಿತ್ರಾ ‘ಕುಮುದಂ’ ಎಂಬ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ನಟ ಧನುಷ್ ಮತ್ತು ಐಶ್ವರ್ಯಾ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ಇಬ್ಬರು ಗಂಡು ಮಕ್ಕಳಿರುವ ಈ ಜೋಡಿ ವೈವಾಹಿಕ ಜೀವನದ ಸಮಯದಲ್ಲಿ ಪರಸ್ಪರ ಮೋಸ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಐಶ್ವರ್ಯಾ ಅವರು ಧನುಷ್ ತನಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಆಕೆ ಮದುವೆಯ ಉದ್ದಕ್ಕೂ ಅದನ್ನೇ ಮಾಡಿದ್ದಾಳೆ. ಆಕೆಗೊಂದು, ಆತನಿಗೊಂದು ನ್ಯಾಯವೇ?. ಇಬ್ಬರು ಪರಸ್ಪರ ಮೋಸ ಮಾಡಿಕೊಂಡಿರುವ ದಂಪತಿಗಳು ಎಂದು ಗಾಯಕಿ ಸುಚಿತ್ರ ಸಂದರ್ಶನದಲ್ಲಿ ಹೇಳಿದ್ದಾರೆ.
ಡೇಟಿಂಗ್ ವಿಚಾರ ಬಿಚ್ಚಿಟ್ಟ ಗಾಯಕಿ
ಧನುಷ್ ಮತ್ತು ಐಶ್ವರ್ಯಾ ಆಗಾಗ ಬೇರೆಯವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು. ವಿವಾಹವಾದ ಮೇಲೆ ಇತರರ ಜೊತೆಗೆ ಡೇಟಿಂಗ್ ಹೋಗುವುದು ಸಾಮಾನ್ಯ ವಿಷಯವೇ ಎಂದು ಸುಚಿತ್ರಾ ಹೇಳಿದ್ದಾರೆ.
ಇದನ್ನೂ ಓದಿ: ಆಯತಪ್ಪಿ 133 ಅಡಿ ಮೇಲಿಂದ ಕೆಳಗೆ ಬಿದ್ದು ಕಾರ್ಮಿಕ ಸಾವು.. ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹ
ಗಾಯಕಿ ಸುಚಿತ್ರಾ ಯಾರು?
ಸುಚಿತ್ರಾ ಒಬ್ಬ ಭಾರತೀಯ ಹಿನ್ನೆಲೆ ಗಾಯಕಿ. ತಮಿಳು ಸಿನಿಮಾದ ಅನೇಕ ಸಿನಿಮಾಗಳಿಗೆ ಧ್ವನಿ ನೀಡಿದ್ದಾರೆ. ಮಾತ್ರವಲ್ಲದೆ ಕೆಲವು ಸಿನಿಮಾಗಳ ಹಿಟ್ಗೆ ಇವರ ಧ್ವನಿಯೇ ಕಾರಣವಾಗಿದೆ. ಅದರಂತೆಯೇ ಸುಚಿತ್ರಾ ‘ಎಕ್ಸ್ಕ್ಯೂಸ್ ಮಿ’, ‘ಎನ್ ಇಧಯಂ’ ಮುಂತಾದ ಹಿಟ್ ಹಾಡುಗಳನ್ನು ಹಾಡುವ ಮೂಲಕ ಜನಪ್ರಿಯರಾದ ಗಾಯಕಿ.
ಸುಚಿತ್ರಾ ತನ್ನ ಹಾಡುಗಳ ಮೂಲಕ ಪ್ರಸಿದ್ಧಿ ಪಡೆದರೆ, ಇತ್ತ ‘ಸುಚಿ ಲೀಕ್ಸ್’ ಎಂಬ ಎಪಿಸೋಡ್ ಮೂಲಕ ಕುಖ್ಯಾತಿ ಪಡೆದಿದ್ದಾರೆ. ಸುಚಿತ್ರಾ ತಮ್ಮ ಸುಚಿ ಲೀಕ್ಸ್ ಮೂಲಕ ಕಾಲಿವುಡ್ನ ಪ್ರಮುಖ ಸೆಲೆಬ್ರಿಟಿಗಳ ಹಲವಾರು ಮಾಹಿತಿಗಳನ್ನ ಸೋರಿಕೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ವಿಪರೀತ ಶೋಕಿ.. ಸಾಲ ತೀರಿಸಲು ಮನೆ ಮಾಲಕಿಯನ್ನು ಕೊಂದಾಕೆ ಕೊನೆಗೂ ಅರೆಸ್ಟ್
ಅದರಲ್ಲಿ ಧನುಷ್ ಮತ್ತು ತ್ರಿಶಾ ಕೃಷ್ಣನ್ ರೂಂನಲ್ಲಿರುವ ಫೋಟೋ, ಗಾಯಕ ಅನಿರುದ್ಧ್ ರವಿಚಂದರ್ ಮತ್ತು ಆಂಡ್ರಿಯಾ ಅವರ ಲವ್ ಸ್ಟೋರಿಯ ಬಗ್ಗೆಯೂ ಮಾತನಾಡಿದ್ದಾರೆ. ಇದೀಗ ಐಶ್ವರ್ಯಾ ರಜನಿಕಾಂತ್ ಮತ್ತು ಧನುಷ್ ನಡುವಿನ ಸಂಬಂಧದ ಬಗ್ಗೆಯೂ ಸ್ಟೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ