newsfirstkannada.com

ಭಾರತ VS ಪಾಕ್​​.. ಕೊಹ್ಲಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಅಂಬಾಟಿ ರಾಯುಡು!

Share :

Published June 9, 2024 at 5:55pm

    ಇಂದು 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯ

    ಮೆಗಾ ಹೈವೋಲ್ಟೇಜ್​ ಪಂದ್ಯದಲ್ಲಿ ಪಾಕಿಸ್ತಾನ​​, ಟೀಮ್​ ಇಂಡಿಯಾ ಜಿದ್ದಾಜಿದ್ದಿ!

    ವಿರಾಟ್​ ಕೊಹ್ಲಿ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಅಂಬಾಟಿ ರಾಯುಡು ಹೇಳಿದ್ದೇನು?

ಟೀಮ್​ ಇಂಡಿಯಾ, ಪಾಕಿಸ್ತಾನದ ನಡುವಿನ ಟಿ20 ವಿಶ್ವಕಪ್​ ಮೆಗಾ ಹೈವೋಲ್ಟೇಜ್ ಪಂದ್ಯಕ್ಕಾಗಿ ಇಡೀ ಜಗತ್ತೇ ಕಾಯುತ್ತಿದೆ. ​​ನಸೌ ಕೌಂಟಿ ಇಂಟರ್‌ ನ್ಯಾಷನಲ್‌ ಕ್ರೀಡಂಗಣದಲ್ಲಿ ನಡೆಯಲಿರೋ ಈ ರೋಚಕ ಪಂದ್ಯ ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅದರಲ್ಲೂ ಎಲ್ಲರ ಕಣ್ಣು ಕ್ರಿಕೆಟ್​ ದಿಗ್ಗಜ ಕೊಹ್ಲಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇದರ ಮಧ್ಯೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಾಜಿ ಕ್ರಿಕೆಟರ್​​​ ಅಂಬಾಟಿ ರಾಯುಡು ಕೊಹ್ಲಿ ಬಗ್ಗೆ ಮಾತಾಡಿದ್ದಾರೆ.

ಎಲ್ಲರ ಹಾಗೇ ನಾನು ಪಾಕ್​​, ಭಾರತದ ನಡುವಿನ ಪಂದ್ಯ ನೋಡಲು ಕಾಯುತ್ತಿದ್ದೇನೆ. ಐರ್ಲೆಂಡ್​ ವಿರುದ್ಧ ಗೆದ್ದಿರೋ ಭಾರತ ಪಾಕ್​​ ತಂಡದ ವಿರುದ್ಧ ಕೂಡ ಗೆಲ್ಲಲಿದೆ. ಇಂದಿನ ಪಂದ್ಯದಲ್ಲಿ ನನ್ನ ನೆಚ್ಚಿನ ಆಟಗಾರ ಕೊಹ್ಲಿ. ಇಡೀ ಟಿ20 ವಿಶ್ವಕಪ್​ ಇತಿಹಾಸದಲ್ಲೇ ಪಾಕ್​​ ವಿರುದ್ಧ ಕೊಹ್ಲಿ ಅಜೇಯರಾಗಿ 82 ರನ್‌ ಗಳಿಸಿದ್ದು ಬೆಸ್ಟ್​​ ಇನ್ನಿಂಗ್ಸ್​ ಎಂದರು.

ಈ ಹಿಂದೆ ಹೈದರಾಬಾದ್​​ ವಿರುದ್ಧ ಕೆಕೆಆರ್​​ ಫೈನಲ್​ ಪಂದ್ಯದಲ್ಲಿ ಗೆದ್ದ ಕೂಡಲೇ ಮಾತಾಡಿದ್ದ ಅಂಬಾಟಿ ರಾಯುಡು, ಶ್ರೇಯಸ್​ ಅಯ್ಯರ್​ಗೆ ಅಭಿನಂದನೆಗಳು. ಆರೆಂಜ್ ಕ್ಯಾಪ್‌ ಗೆಲ್ಲೋದು ವೈಯಕ್ತಿಕ. ಯಾವಾಗಲೂ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರೆ ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಐಪಿಎಲ್​ ಟ್ರೋಫಿ ತಂಡದ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಹೀಯಾಳಿಸಿದ್ದರು. ಈ ಬಗ್ಗೆ ಮಾತಾಡಿರೋ ಅಂಬಾಟಿ ರಾಯುಡು ವಿರುದ್ಧ ಕಿಡಿಕಾರಿದ್ದರು.

ಇದನ್ನೂ ಓದಿ: ಭಾರತ, ಪಾಕ್​ ಪಂದ್ಯ.. ಸಂಜು ಸ್ಯಾಮ್ಸನ್​ಗೆ ದೊಡ್ಡ ಆಘಾತ; ಆಗಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಭಾರತ VS ಪಾಕ್​​.. ಕೊಹ್ಲಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಅಂಬಾಟಿ ರಾಯುಡು!

https://newsfirstlive.com/wp-content/uploads/2024/05/Kohli_Ambati-Rayudu.jpg

    ಇಂದು 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯ

    ಮೆಗಾ ಹೈವೋಲ್ಟೇಜ್​ ಪಂದ್ಯದಲ್ಲಿ ಪಾಕಿಸ್ತಾನ​​, ಟೀಮ್​ ಇಂಡಿಯಾ ಜಿದ್ದಾಜಿದ್ದಿ!

    ವಿರಾಟ್​ ಕೊಹ್ಲಿ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಅಂಬಾಟಿ ರಾಯುಡು ಹೇಳಿದ್ದೇನು?

ಟೀಮ್​ ಇಂಡಿಯಾ, ಪಾಕಿಸ್ತಾನದ ನಡುವಿನ ಟಿ20 ವಿಶ್ವಕಪ್​ ಮೆಗಾ ಹೈವೋಲ್ಟೇಜ್ ಪಂದ್ಯಕ್ಕಾಗಿ ಇಡೀ ಜಗತ್ತೇ ಕಾಯುತ್ತಿದೆ. ​​ನಸೌ ಕೌಂಟಿ ಇಂಟರ್‌ ನ್ಯಾಷನಲ್‌ ಕ್ರೀಡಂಗಣದಲ್ಲಿ ನಡೆಯಲಿರೋ ಈ ರೋಚಕ ಪಂದ್ಯ ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅದರಲ್ಲೂ ಎಲ್ಲರ ಕಣ್ಣು ಕ್ರಿಕೆಟ್​ ದಿಗ್ಗಜ ಕೊಹ್ಲಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇದರ ಮಧ್ಯೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಾಜಿ ಕ್ರಿಕೆಟರ್​​​ ಅಂಬಾಟಿ ರಾಯುಡು ಕೊಹ್ಲಿ ಬಗ್ಗೆ ಮಾತಾಡಿದ್ದಾರೆ.

ಎಲ್ಲರ ಹಾಗೇ ನಾನು ಪಾಕ್​​, ಭಾರತದ ನಡುವಿನ ಪಂದ್ಯ ನೋಡಲು ಕಾಯುತ್ತಿದ್ದೇನೆ. ಐರ್ಲೆಂಡ್​ ವಿರುದ್ಧ ಗೆದ್ದಿರೋ ಭಾರತ ಪಾಕ್​​ ತಂಡದ ವಿರುದ್ಧ ಕೂಡ ಗೆಲ್ಲಲಿದೆ. ಇಂದಿನ ಪಂದ್ಯದಲ್ಲಿ ನನ್ನ ನೆಚ್ಚಿನ ಆಟಗಾರ ಕೊಹ್ಲಿ. ಇಡೀ ಟಿ20 ವಿಶ್ವಕಪ್​ ಇತಿಹಾಸದಲ್ಲೇ ಪಾಕ್​​ ವಿರುದ್ಧ ಕೊಹ್ಲಿ ಅಜೇಯರಾಗಿ 82 ರನ್‌ ಗಳಿಸಿದ್ದು ಬೆಸ್ಟ್​​ ಇನ್ನಿಂಗ್ಸ್​ ಎಂದರು.

ಈ ಹಿಂದೆ ಹೈದರಾಬಾದ್​​ ವಿರುದ್ಧ ಕೆಕೆಆರ್​​ ಫೈನಲ್​ ಪಂದ್ಯದಲ್ಲಿ ಗೆದ್ದ ಕೂಡಲೇ ಮಾತಾಡಿದ್ದ ಅಂಬಾಟಿ ರಾಯುಡು, ಶ್ರೇಯಸ್​ ಅಯ್ಯರ್​ಗೆ ಅಭಿನಂದನೆಗಳು. ಆರೆಂಜ್ ಕ್ಯಾಪ್‌ ಗೆಲ್ಲೋದು ವೈಯಕ್ತಿಕ. ಯಾವಾಗಲೂ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರೆ ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಐಪಿಎಲ್​ ಟ್ರೋಫಿ ತಂಡದ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಹೀಯಾಳಿಸಿದ್ದರು. ಈ ಬಗ್ಗೆ ಮಾತಾಡಿರೋ ಅಂಬಾಟಿ ರಾಯುಡು ವಿರುದ್ಧ ಕಿಡಿಕಾರಿದ್ದರು.

ಇದನ್ನೂ ಓದಿ: ಭಾರತ, ಪಾಕ್​ ಪಂದ್ಯ.. ಸಂಜು ಸ್ಯಾಮ್ಸನ್​ಗೆ ದೊಡ್ಡ ಆಘಾತ; ಆಗಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More