Advertisment

ನಟ ದರ್ಶನ್​ ಮತ್ತು ಗ್ಯಾಂಗ್​ಗೆ ಎಷ್ಟು ದಿನ ಕಸ್ಟಡಿ? ಪೊಲೀಸ್ರಿಗೆ ಕೋರ್ಟ್​ ಕೊಟ್ಟ ಸೂಚನೆಯೇನು?

author-image
Ganesh Nachikethu
Updated On
ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ದರ್ಶನ್, ಪವಿತ್ರ ಗೌಡ ಸೇರಿ ಮತ್ತೆ ಮೂವರ ಅರೆಸ್ಟ್; ಮುಂದೇನು?
Advertisment
  • ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​
  • 24ನೇ ಎಸಿಎಂಎಂ ಕೋರ್ಟ್​​ನಲ್ಲಿ ಜಡ್ಜ್​ ಕೇಳಿದ ಪ್ರಶ್ನೆಗಳಿಗೆ ದರ್ಶನ್​ ಉತ್ತರ
  • ಕೊನೆಗೂ ದರ್ಶನ್​ ಅವರನ್ನು ಪೊಲೀಸ್​ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ!

ಬೆಂಗಳೂರು: ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​​ ದರ್ಶನ ಅವರಿಗೆ 24ನೇ ಆರ್ಥಿಕ ಅಪರಾಧಗಳ ಕೋರ್ಟ್​ ಬಿಗ್​ ಶಾಕ್​ ನೀಡಿದೆ. ದರ್ಶನ್​ ಮತ್ತು ಗ್ಯಾಂಗ್​​ಗೆ ಬರೋಬ್ಬರಿ 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲ 2 ದಿನಕ್ಕೊಮ್ಮೆ ಕೋರ್ಟ್​ಗೆ ವರದಿ ಒಪ್ಪಿಸಿ ಎಂದು ಪೊಲೀಸರಿಗೆ ಕೋರ್ಟ್​​ ಸೂಚನೆ ನೀಡಿದೆ.

Advertisment

ರೇಣುಕಾ ಸ್ವಾಮಿ ಎಂಬ ಯುವಕನ ಕೊಲೆ ಕೇಸಲ್ಲಿ ನಟ ದರ್ಶನ ಅರೆಸ್ಟ್​ ಮಾಡಲಾಗಿದೆ. ಸತತ 4 ಗಂಟೆಗಳ ವಿಚಾರಣೆ ಬಳಿಕ ಮೆಡಿಕಲ್​​ ಚೆಕಪ್​ ಮಾಡಿಸಿ ದರ್ಶನ್​ ಅವರನ್ನು ಕೋರ್ಟ್​​ನಲ್ಲಿ ಹಾಜರು ಪಡಿಸಲಾಗಿದೆ. ಇನ್ನು, ಕೋರ್ಟ್​​ನಲ್ಲಿ ಜಡ್ಜ್​ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ದರ್ಶನ್​ ಉತ್ತರ ನೀಡಿದ್ದಾರೆ.

ದರ್ಶನ್​​​ ಪರ ವಕೀಲರಾದ ಅನಿಲ್​​​ ಅವರು, ಕೊಲೆಗೂ ದರ್ಶನ್​ ಅವರಿಗೂ ಯಾವುದೇ ಸಂಬಂಧ ಇಲ್ಲ. ಇದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ವಾದ ಮಂಡಿಸಿದ್ರು. ದರ್ಶನ್​ ಮತ್ತು ಸರ್ಕಾರಿ ಪರ ವಲೀಕರ ವಾದ ಕೇಳಿ ನ್ಯಾಯಧೀಶ ವಿಶ್ವನಾಥ್​​​ ಸಿ. ಗೌಡರ್​​ ಆದೇಶ ಕೊಟ್ಟಿದ್ದಾರೆ.

ಇದನ್ನೂ ಓದಿ:BREAKING: ಕೊಲೆ ಕೇಸಲ್ಲಿ ದರ್ಶನ್​ ಮತ್ತು ಗ್ಯಾಂಗ್​ಗೆ ಬಿಗ್​​ ಶಾಕ್​​.. ಕೋರ್ಟ್​​ ಮಹತ್ವದ ಆದೇಶ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment