ಅಭಿಮಾನಿಗಳಿಗೆ ದಿನದಿಂದ ದಿನಕ್ಕೆ ಇಷ್ಟವಾಗುತ್ತಿದೆ ಗೌತಮ್ ಭೂಮಿಕಾ ಲವ್ ಸ್ಟೋರಿ
ಗೌತಮ್ ಭೂಮಿಕಾ ಇಬ್ಬರ ರೋಮ್ಯಾಂಟಿಕ್ ಸೀನ್ಸ್ಗಳಿಗೆ ಫ್ಯಾನ್ಸ್ಗಳಿಂದ ಸಿಕ್ಕಾಪಟ್ಟೆ ಬೇಡಿಕೆ
ಈ ಇಬ್ಬರ ಲವ್ವಿ ಡವ್ವಿ ಸೀನ್ಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಪ್ರೇಕ್ಷಕ ಪ್ರಭುಗಳು
ಗೌತಮ್ ಹಾಗೂ ಭೂಮಿಕಾ ವಿಭಿನ್ನ ಲವ್ ಸ್ಟೋರಿ ವೀಕ್ಷಕರನ್ನು ಪುಳಕಗೊಳಿಸುತ್ತಿದೆ. ಇಬ್ಬರ ರೋಮ್ಯಾಂಟಿಕ್ ಸೀನ್ಸ್ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ಅಮೃತಧಾರೆಯ ಅಮೃತ ಕ್ಷಣಗಳು ಅಂತೆಲ್ಲಾ ಫ್ಯಾನ್ಸ್ ವರ್ಣನೆ ಮಾಡುತ್ತಿದ್ದಾರೆ. ರಾಜೇಶ್ ನಟರಂಗ್-ಛಾಯಾ ಸಿಂಗ್ ಅವರ ಕೆಮೇಸ್ಟ್ರೀಗೆ ಫಿದಾ ಆಗಿದ್ದಾರೆ ಫ್ಯಾನ್ಸ್.
ಇದನ್ನೂ ಓದಿ: VIDEO: ಕನ್ನಡದ ಆಲಿಯಾ ಭಟ್ ಜತೆ ಬಿಗ್ಬಾಸ್ ಕಿಶನ್ ಚುಂಬನದ ಡ್ಯಾನ್ಸ್
ಭೂಮಿಕಾ ಪ್ರೀತಿಯಿಂದ ಗೌತಮ್ ಅವರೇ, ಡುಮ್ಮ ಸರ್ ಅಂತಲೇ ಕರೆಯೋದನ್ನು ಕೇಳೋಕೆ ಚಂದ. ಇಬ್ಬರ ಲವ್ವಿ ಡವ್ವಿ ಸೀನ್ಗಳ ಬಗ್ಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಮೊನ್ನೆಯಂತೂ ಗೌತಮ್ ಕಿಸ್ ಕೊಡೋಕೆ ಒದ್ದಾಡಿದ್ದು, ನೋಡೋಗರ ಎದೆಯಲ್ಲಿ ಢವ ಢವ ನಾದ ಸೃಷ್ಟಿಸಿತ್ತು. ಭೂಮಿಯ ಕ್ಯೂಟ್ ಮಾತುಕಥೆ ಪ್ರೇಮರಾಗ ಮೇಳೈಸುವಂತೆ ಮಾಡಿತ್ತು. ಇಷ್ಟೇಲ್ಲಾ ಪ್ರೇಮಾಂಕುರದ ಸ್ಟೋರಿ ನೋಡುತ್ತಿರಬೇಕಾದರೆ ಫ್ಯಾನ್ಸ್ ಯಾಕೋ ಗರಂ ಆಗಿದ್ದಾರೆ. ನೀವೂ ಹೀಗೆ ಮಾಡಿದ್ರೇ ನಾವು ಸೀರಿಯಲ್ ನೋಡೋಲ್ಲ ಅಂತಾ ನಿರ್ದೇಶಕರ ಮೇಲೆ ಮುನಿಸಿಕೊಂಡಿದ್ದಾರೆ.
ಹೌದು, ಸೀರಿಯಲ್ ಅಂದ್ಮೇಲೆ ಸ್ಟೋರಿಯಲ್ಲಿ ಹೊಸ ಹೊಸ ಟ್ವಿಸ್ಟ್ಗಳನ್ನು ತರಬೇಕು. ಅದು ಇದ್ರೇನೆ ಸೀರಿಯಲ್ ನೋಡುವುದಕ್ಕೆ ಒಂದು ಮಜಾ ಇರುತ್ತೆ. ಈಗ ಅಂತಹದ್ದೇ ಒಂದು ತಿರುವು ಭೂಮಿ-ಗೌತಮ್ ಬದುಕಿನಲ್ಲಿ ಬಂದಿದೆ. ಶಕುಂತಲಾ ದೇವಿ ಕುತಂತ್ರದಿಂದ ಈ ಇಬ್ಬರ ಜಾತಕದಲ್ಲಿ ದೋಷ ಸೇರಿಕೊಂಡಿದೆ. ಗೌತಮ್ಗೆ ಗುರೂಜಿಗಳು ಎಚ್ಚರಿಕೆ ನೀಡಿದ್ದಾರೆ. ಭೂಮಿನ ಮದುವೆ ಆಗಬಾರದಿತ್ತು. ಆದ್ರೇ ನೀವಿಬ್ಬರೂ ಒಂದಾಗಬಾರದು ಎಂದಿದ್ದಾರೆ. ಇತ್ತ ಭೂಮಿ ತವರು ಮನೆಯಲ್ಲೂ ಭೂಮಿಗೆ ಕಂಟಕ ಎದುರಾಗಲಿದೆ ಎಂಬ ಸುದ್ದಿ ಮನೆಯವರ ಮನಸ್ಸನ ಕದಡಿಸಿದೆ. ಇದು ಅಭಿಮಾನಿಗಳ ಕೋಪಕ್ಕೆ ಗುರಿಯಾಗುವಂತೆ ಮಾಡಿದೆ.
ಭೂಮಿಕಾ-ಗೌತಮ್ ಲವ್ ಸೀನ್ಸ್ ಬೇಕೇ ಬೇಕು ಅಂತಾ ಹಠ ಮಾಡ್ತಿದ್ದಾರೆ ಅಭಿಮಾನಿಗಳು. ಸೀರಿಯಲ್ ಕಥೆಯನ್ನ ಹಳ್ಳ ಹಿಡಿಸಬೇಡಿ ಅಂತಾ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುವ ಮೂಲಕ ಗದರುತ್ತಿದ್ದಾರೆ. ಅಂದ್ಹಾಗೆ ಈ ಸ್ಟೋರಿಯಲ್ಲಿ ಮುಂದೆ ಮತ್ತಷ್ಟು ಇಂಟ್ರಸ್ಟಿಂಗ್ ಸೀನ್ಗಳು ಬರಲಿವೆ. ಅದೇನೇ ಇರಲಿ ಪ್ರೇಕ್ಷಕರಿಗಾಗಿನೇ ಈ ನೂತನ ಕಥೆ ಹಾಗೂ ಮನರಂಜನೆ. ಅವರ ಬೇಡಿಕೆ ಈಡೇರಿಸದೇ ಇರುತ್ತಾ ಸೀರಿಯಲ್ ತಂಡ? ಖಂಡಿತ ಡುಮ್ಮ ಸರ್-ಭೂಮಿ ಲವ್ ಕಹಾನಿಯಲ್ಲಿ ಮಸಾಲಾ ಸೇರಿಸಿ ರಸವತ್ತಾದ ಮನರಂಜನೆ ನೀಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಭಿಮಾನಿಗಳಿಗೆ ದಿನದಿಂದ ದಿನಕ್ಕೆ ಇಷ್ಟವಾಗುತ್ತಿದೆ ಗೌತಮ್ ಭೂಮಿಕಾ ಲವ್ ಸ್ಟೋರಿ
ಗೌತಮ್ ಭೂಮಿಕಾ ಇಬ್ಬರ ರೋಮ್ಯಾಂಟಿಕ್ ಸೀನ್ಸ್ಗಳಿಗೆ ಫ್ಯಾನ್ಸ್ಗಳಿಂದ ಸಿಕ್ಕಾಪಟ್ಟೆ ಬೇಡಿಕೆ
ಈ ಇಬ್ಬರ ಲವ್ವಿ ಡವ್ವಿ ಸೀನ್ಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಪ್ರೇಕ್ಷಕ ಪ್ರಭುಗಳು
ಗೌತಮ್ ಹಾಗೂ ಭೂಮಿಕಾ ವಿಭಿನ್ನ ಲವ್ ಸ್ಟೋರಿ ವೀಕ್ಷಕರನ್ನು ಪುಳಕಗೊಳಿಸುತ್ತಿದೆ. ಇಬ್ಬರ ರೋಮ್ಯಾಂಟಿಕ್ ಸೀನ್ಸ್ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ಅಮೃತಧಾರೆಯ ಅಮೃತ ಕ್ಷಣಗಳು ಅಂತೆಲ್ಲಾ ಫ್ಯಾನ್ಸ್ ವರ್ಣನೆ ಮಾಡುತ್ತಿದ್ದಾರೆ. ರಾಜೇಶ್ ನಟರಂಗ್-ಛಾಯಾ ಸಿಂಗ್ ಅವರ ಕೆಮೇಸ್ಟ್ರೀಗೆ ಫಿದಾ ಆಗಿದ್ದಾರೆ ಫ್ಯಾನ್ಸ್.
ಇದನ್ನೂ ಓದಿ: VIDEO: ಕನ್ನಡದ ಆಲಿಯಾ ಭಟ್ ಜತೆ ಬಿಗ್ಬಾಸ್ ಕಿಶನ್ ಚುಂಬನದ ಡ್ಯಾನ್ಸ್
ಭೂಮಿಕಾ ಪ್ರೀತಿಯಿಂದ ಗೌತಮ್ ಅವರೇ, ಡುಮ್ಮ ಸರ್ ಅಂತಲೇ ಕರೆಯೋದನ್ನು ಕೇಳೋಕೆ ಚಂದ. ಇಬ್ಬರ ಲವ್ವಿ ಡವ್ವಿ ಸೀನ್ಗಳ ಬಗ್ಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಮೊನ್ನೆಯಂತೂ ಗೌತಮ್ ಕಿಸ್ ಕೊಡೋಕೆ ಒದ್ದಾಡಿದ್ದು, ನೋಡೋಗರ ಎದೆಯಲ್ಲಿ ಢವ ಢವ ನಾದ ಸೃಷ್ಟಿಸಿತ್ತು. ಭೂಮಿಯ ಕ್ಯೂಟ್ ಮಾತುಕಥೆ ಪ್ರೇಮರಾಗ ಮೇಳೈಸುವಂತೆ ಮಾಡಿತ್ತು. ಇಷ್ಟೇಲ್ಲಾ ಪ್ರೇಮಾಂಕುರದ ಸ್ಟೋರಿ ನೋಡುತ್ತಿರಬೇಕಾದರೆ ಫ್ಯಾನ್ಸ್ ಯಾಕೋ ಗರಂ ಆಗಿದ್ದಾರೆ. ನೀವೂ ಹೀಗೆ ಮಾಡಿದ್ರೇ ನಾವು ಸೀರಿಯಲ್ ನೋಡೋಲ್ಲ ಅಂತಾ ನಿರ್ದೇಶಕರ ಮೇಲೆ ಮುನಿಸಿಕೊಂಡಿದ್ದಾರೆ.
ಹೌದು, ಸೀರಿಯಲ್ ಅಂದ್ಮೇಲೆ ಸ್ಟೋರಿಯಲ್ಲಿ ಹೊಸ ಹೊಸ ಟ್ವಿಸ್ಟ್ಗಳನ್ನು ತರಬೇಕು. ಅದು ಇದ್ರೇನೆ ಸೀರಿಯಲ್ ನೋಡುವುದಕ್ಕೆ ಒಂದು ಮಜಾ ಇರುತ್ತೆ. ಈಗ ಅಂತಹದ್ದೇ ಒಂದು ತಿರುವು ಭೂಮಿ-ಗೌತಮ್ ಬದುಕಿನಲ್ಲಿ ಬಂದಿದೆ. ಶಕುಂತಲಾ ದೇವಿ ಕುತಂತ್ರದಿಂದ ಈ ಇಬ್ಬರ ಜಾತಕದಲ್ಲಿ ದೋಷ ಸೇರಿಕೊಂಡಿದೆ. ಗೌತಮ್ಗೆ ಗುರೂಜಿಗಳು ಎಚ್ಚರಿಕೆ ನೀಡಿದ್ದಾರೆ. ಭೂಮಿನ ಮದುವೆ ಆಗಬಾರದಿತ್ತು. ಆದ್ರೇ ನೀವಿಬ್ಬರೂ ಒಂದಾಗಬಾರದು ಎಂದಿದ್ದಾರೆ. ಇತ್ತ ಭೂಮಿ ತವರು ಮನೆಯಲ್ಲೂ ಭೂಮಿಗೆ ಕಂಟಕ ಎದುರಾಗಲಿದೆ ಎಂಬ ಸುದ್ದಿ ಮನೆಯವರ ಮನಸ್ಸನ ಕದಡಿಸಿದೆ. ಇದು ಅಭಿಮಾನಿಗಳ ಕೋಪಕ್ಕೆ ಗುರಿಯಾಗುವಂತೆ ಮಾಡಿದೆ.
ಭೂಮಿಕಾ-ಗೌತಮ್ ಲವ್ ಸೀನ್ಸ್ ಬೇಕೇ ಬೇಕು ಅಂತಾ ಹಠ ಮಾಡ್ತಿದ್ದಾರೆ ಅಭಿಮಾನಿಗಳು. ಸೀರಿಯಲ್ ಕಥೆಯನ್ನ ಹಳ್ಳ ಹಿಡಿಸಬೇಡಿ ಅಂತಾ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುವ ಮೂಲಕ ಗದರುತ್ತಿದ್ದಾರೆ. ಅಂದ್ಹಾಗೆ ಈ ಸ್ಟೋರಿಯಲ್ಲಿ ಮುಂದೆ ಮತ್ತಷ್ಟು ಇಂಟ್ರಸ್ಟಿಂಗ್ ಸೀನ್ಗಳು ಬರಲಿವೆ. ಅದೇನೇ ಇರಲಿ ಪ್ರೇಕ್ಷಕರಿಗಾಗಿನೇ ಈ ನೂತನ ಕಥೆ ಹಾಗೂ ಮನರಂಜನೆ. ಅವರ ಬೇಡಿಕೆ ಈಡೇರಿಸದೇ ಇರುತ್ತಾ ಸೀರಿಯಲ್ ತಂಡ? ಖಂಡಿತ ಡುಮ್ಮ ಸರ್-ಭೂಮಿ ಲವ್ ಕಹಾನಿಯಲ್ಲಿ ಮಸಾಲಾ ಸೇರಿಸಿ ರಸವತ್ತಾದ ಮನರಂಜನೆ ನೀಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ