/newsfirstlive-kannada/media/post_attachments/wp-content/uploads/2025/07/amruthadare.jpg)
ದಿನದಿಂದ ದಿನಕ್ಕೆ ಅಮೃತಾಧಾರೆ ಸೀರಿಯಲ್ನಲ್ಲಿ ಗೌತಮ್ ಭೂಮಿ ನವೀರಾದ ದಾಂಪತ್ಯ ಜೀವನ ಕಟ್ಟಿಕೊಡ್ತಿದೆ. ಗರ್ಭಿಣಿಯಾಗಿರುವ ಭೂಮಿಕಾ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಗರ್ಭಿಣಿಯಾಗಿದ್ದ ಪತ್ನಿ ಕನಸನ್ನ ಒಂದೊಂದಾಗಿಯೇ ಈಡೇರಿಸುತ್ತಿದ್ದರು ಡುಮ್ಮು ಸರ್.
ಇದನ್ನೂ ಓದಿ: ಟ್ರೋಫಿ ಅಲ್ಲ, ಕಲೆ ಮುಖ್ಯ.. ಸರಿಗಮಪ ಲಹರಿಗೆ ಒಲಿದು ಬಂತು ಬಂಪರ್ ಆಫರ್..
ಆದ್ರೆ ಇದೀಗ ಅಮೃತಾಧಾರೆ ಸೀರಿಯಲ್ ವೀಕ್ಷಕರು ಮತ್ತಷ್ಟೂ ಖುಷಿ ಪಡೋ ವಿಚಾರ ಇದಾಗಿದೆ. ಹೌದು, ಗೌತಮ್ ಹಾಗೂ ಭೂಮಿಕಾಗೆ ಅವಳಿ ಮಕ್ಕಳು ಜನನವಾಗಿದೆ. ನಿನ್ನೆಯ ಸಂಚಿಕೆಯಲ್ಲಿ ಭೂಮಿಕಾಗೆ ಡಾಕ್ಟರ್ ಕರ್ಣ ಹಾಗೂ ಪಾರು ಹೆರಿಗೆ ಮಾಡಿಸಿದ್ದರು. ಆಗ ಭೂಮಿಕಾಗೆ ಹೆಣ್ಣು ಮಗು ಆಗಿತ್ತು.
ಈಗ ಜೀ ಕನ್ನಡ ರಿಲೀಸ್ ಮಾಡಿದ ಪ್ರೋಮೋದಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಭೂಮಿಕಾಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಗ ಡಾಕ್ಟರ್ ಕರ್ಣ ಟ್ವಿನ್ಸ್ ಅಂತ ಶುಭ ಸುದ್ದಿ ಕೊಟ್ಟಿದ್ದಾರೆ. ಈಗ ಡುಮ್ಮು ಸರ್ ಅವಳಿ ಮಕ್ಕಳ ತಂದೆಯಾಗಿದ್ದಾರೆ. ಈ ಮೂಲಕ ಅಮೃತಾಧಾರೆ ಸೂಪರ್ ಟ್ವಿಸ್ಟ್ ಪಡೆದುಕೊಂಡಿದೆ.
View this post on Instagram
ಇನ್ನೂ, ಎರಡನೇ ಮಗುವಿಗೆ ಭೂಮಿ ಜನ್ಮ ನೀಡುತ್ತಿದ್ದಾಗಲೇ ಶಕುಂತಲಾ ದೇವಿ ಆಸ್ಪತ್ರೆಯಲ್ಲಿ ಪವರ್ ಕಟ್ ಮಾಡಿದ್ದಾಳೆ. ಆದ್ರೂ ಕೂಡ ಶಿವು ತಲೆ ಓಡಿಸಿ ಪವರ್ ಬಾಕ್ಸ್ ತಂದು ಲೈಟ್ ಹಾಕಿಸಿದ್ದಾರೆ. ಆದ್ರೆ ಎರಡನೇ ಮಗು ಗಂಡಾ? ಅಥವಾ ಹೆಣ್ಣಾ ಅಂತ ರಿವೀಲ್ ಮಾಡಿಲ್ಲ. ಅಮೃತಾಧಾರೆ ಸೀರಿಯಲ್ನ ಗೌತಮ್ ಹಾಗೂ ಭೂಮಿಕಾ ಪಾತ್ರದಲ್ಲಿ ಅಭಿನಯಿಸುತ್ತಿರೋ ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ್ ಅವರ ಅಭಿನಯಕ್ಕೆ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ