newsfirstkannada.com

VIDEO: ಅಯ್ಯಪ್ಪ ಮಾಲಾಧಾರಿಗಳ ಬಸ್‌ಗೆ ಅಡ್ಡ ಹಾಕಿದ ಕಾಡಾನೆ; ಆಮೇಲೆ ಭಕ್ತರಿಗೆ ಪರಮಾಶ್ಚರ್ಯ; ಏನಾಯ್ತು?

Share :

Published January 12, 2024 at 12:29pm

    ತಿತಿಮತಿ ದೇವಸ್ಥಾನ ಬಳಿ ಬಸ್‌ಗೆ ಎದುರಾದ ಒಂಟಿ ಸಲಗ

    ಬಸ್ ಮುಂಭಾಗದ ಹೂ ಕಿತ್ತು ತಲೆ ಮೇಲೆ ಹಾಕಿಕೊಂಡ ಆನೆ

    ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆದ ವಿಡಿಯೋ

ಕೊಡಗು: ಒಂಟಿ ಸಲಗವೊಂದು ಮಧ್ಯರಾತ್ರಿ ಶಬರಿಮಲೆಗೆ ತೆರಳುತ್ತಿದ್ದವರನ್ನ ತಡೆದಿರುವ ಘಟನೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ದೇವಸ್ಥಾನದ ಬಳಿ ನಡೆದಿದೆ. ಇನ್ನೂ ಆಶ್ಚರ್ಯ ಏನಂದ್ರೆ ದಾಳಿ ಮಾಡಲು ಬಂದ ಕಾಡಾನೆ ಮಿನಿ ಬಸ್​ಗೆ ಹಾಕಲಾಗಿದ್ದ ಹೂವಿನ ಹಾರಗಳನ್ನ ಕಿತ್ತುಕೊಂಡು ತಲೆ ಮೇಲೆ ಹಾಕಿಕೊಂಡು ಹೋಗಿದೆ.

ಸೋಮವಾರಪೇಟೆಯಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಅಯ್ಯಪ್ಪ ಮಾಲಾಧಾರಿಗಳ ಮಿನಿ ಬಸ್​ನಲ್ಲಿ ತೆರಳುತ್ತಿದ್ದರು. ಬಸ್ ತಿತಿಮತಿ ದೇವಸ್ಥಾನ ಬಳಿ ರಾತ್ರಿ ಬರುತ್ತಿದ್ದಂತೆ ಏಕಾಏಕಿ ಎದುರಾದ ಕಾಡಾನೆ ಬಸ್​ ಬಳಿಗೆ ಬಂದಿದೆ. ಬಸ್‌ನಲ್ಲಿದ್ದ ಅಯ್ಯಪ್ಪನ ಭಕ್ತರು ಕಾಡಾನೆ ಹತ್ತಿರ ಬರುತ್ತಿದ್ದಂತೆ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನೋ ಮಂತ್ರ ಜಪಿಸಿದ್ದಾರೆ. ಬಳಿಕ ಕಾಡಾನೆಗೆ ಅದು ಏನಾಯ್ತೋ ಗೊತ್ತಿಲ್ಲ. ಬಸ್​ ಮುಂಭಾಗ ಹಾಕಲಾಗಿದ್ದ ಹೂವಿನ ಹಾರಗಳನ್ನು ತನ್ನ ಸೊಂಡಿಲಿನಿಂದ ಕಿತ್ತು ತಲೆ ಮೇಲೆ ಹಾಕಿಕೊಂಡಿದೆ. ಹೂವಿನ ಹಾರಗಳನ್ನು ತಲೆ ಮೇಲೆ ಹಾಕಿಕೊಂಡ ಆನೆ ಅಯ್ಯಪ್ಪನ ಭಕ್ತರಿಗೆ ಆಶೀರ್ವಾದ ಮಾಡಿ ಸುಮ್ಮನೆ ಹೊರಟಿದೆ.

ಆನೆ ಬರುತ್ತಿದ್ದಂತೆ ಬಸ್​ನಲ್ಲಿದ್ದ 25 ರಿಂದ 30 ಮಾಲಾಧಾರಿಗಳು‌ ಭಯಭೀತರಾಗಿದ್ದರು. ಸದ್ಯ ಕಾಡಾನೆ ಅಯ್ಯಪ್ಪ ಮಾಲಾಧಾರಿಗಳಿಗೆ ಎದುರಾದ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ನೋಡಿದ ಅಯ್ಯಪ್ಪನ ಭಕ್ತರು, ಇದೆಲ್ಲಾ ಸ್ವಾಮಿ ಅಯ್ಯಪ್ಪನ ಮಹಿಮೆ ಎಂದು ಕೊಂಡಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಯ್ಯಪ್ಪ ಮಾಲಾಧಾರಿಗಳ ಬಸ್‌ಗೆ ಅಡ್ಡ ಹಾಕಿದ ಕಾಡಾನೆ; ಆಮೇಲೆ ಭಕ್ತರಿಗೆ ಪರಮಾಶ್ಚರ್ಯ; ಏನಾಯ್ತು?

https://newsfirstlive.com/wp-content/uploads/2024/01/MDK_ELEPHANT.jpg

    ತಿತಿಮತಿ ದೇವಸ್ಥಾನ ಬಳಿ ಬಸ್‌ಗೆ ಎದುರಾದ ಒಂಟಿ ಸಲಗ

    ಬಸ್ ಮುಂಭಾಗದ ಹೂ ಕಿತ್ತು ತಲೆ ಮೇಲೆ ಹಾಕಿಕೊಂಡ ಆನೆ

    ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆದ ವಿಡಿಯೋ

ಕೊಡಗು: ಒಂಟಿ ಸಲಗವೊಂದು ಮಧ್ಯರಾತ್ರಿ ಶಬರಿಮಲೆಗೆ ತೆರಳುತ್ತಿದ್ದವರನ್ನ ತಡೆದಿರುವ ಘಟನೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ದೇವಸ್ಥಾನದ ಬಳಿ ನಡೆದಿದೆ. ಇನ್ನೂ ಆಶ್ಚರ್ಯ ಏನಂದ್ರೆ ದಾಳಿ ಮಾಡಲು ಬಂದ ಕಾಡಾನೆ ಮಿನಿ ಬಸ್​ಗೆ ಹಾಕಲಾಗಿದ್ದ ಹೂವಿನ ಹಾರಗಳನ್ನ ಕಿತ್ತುಕೊಂಡು ತಲೆ ಮೇಲೆ ಹಾಕಿಕೊಂಡು ಹೋಗಿದೆ.

ಸೋಮವಾರಪೇಟೆಯಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಅಯ್ಯಪ್ಪ ಮಾಲಾಧಾರಿಗಳ ಮಿನಿ ಬಸ್​ನಲ್ಲಿ ತೆರಳುತ್ತಿದ್ದರು. ಬಸ್ ತಿತಿಮತಿ ದೇವಸ್ಥಾನ ಬಳಿ ರಾತ್ರಿ ಬರುತ್ತಿದ್ದಂತೆ ಏಕಾಏಕಿ ಎದುರಾದ ಕಾಡಾನೆ ಬಸ್​ ಬಳಿಗೆ ಬಂದಿದೆ. ಬಸ್‌ನಲ್ಲಿದ್ದ ಅಯ್ಯಪ್ಪನ ಭಕ್ತರು ಕಾಡಾನೆ ಹತ್ತಿರ ಬರುತ್ತಿದ್ದಂತೆ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನೋ ಮಂತ್ರ ಜಪಿಸಿದ್ದಾರೆ. ಬಳಿಕ ಕಾಡಾನೆಗೆ ಅದು ಏನಾಯ್ತೋ ಗೊತ್ತಿಲ್ಲ. ಬಸ್​ ಮುಂಭಾಗ ಹಾಕಲಾಗಿದ್ದ ಹೂವಿನ ಹಾರಗಳನ್ನು ತನ್ನ ಸೊಂಡಿಲಿನಿಂದ ಕಿತ್ತು ತಲೆ ಮೇಲೆ ಹಾಕಿಕೊಂಡಿದೆ. ಹೂವಿನ ಹಾರಗಳನ್ನು ತಲೆ ಮೇಲೆ ಹಾಕಿಕೊಂಡ ಆನೆ ಅಯ್ಯಪ್ಪನ ಭಕ್ತರಿಗೆ ಆಶೀರ್ವಾದ ಮಾಡಿ ಸುಮ್ಮನೆ ಹೊರಟಿದೆ.

ಆನೆ ಬರುತ್ತಿದ್ದಂತೆ ಬಸ್​ನಲ್ಲಿದ್ದ 25 ರಿಂದ 30 ಮಾಲಾಧಾರಿಗಳು‌ ಭಯಭೀತರಾಗಿದ್ದರು. ಸದ್ಯ ಕಾಡಾನೆ ಅಯ್ಯಪ್ಪ ಮಾಲಾಧಾರಿಗಳಿಗೆ ಎದುರಾದ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ನೋಡಿದ ಅಯ್ಯಪ್ಪನ ಭಕ್ತರು, ಇದೆಲ್ಲಾ ಸ್ವಾಮಿ ಅಯ್ಯಪ್ಪನ ಮಹಿಮೆ ಎಂದು ಕೊಂಡಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More