Advertisment

ಚಿಕ್ಕಪ್ಪನಿಂದ ಮಗನ ಕೊಲೆ.. ಮಚ್ಚಿನಿಂದ ಕೊಚ್ಚಿ ರಸ್ತೆ ಬದಿಗೆ ತಂದು ಬಿಸಾಕಿದ ದುಷ್ಕರ್ಮಿಗಳು

author-image
AS Harshith
Updated On
ಚಿಕ್ಕಪ್ಪನಿಂದ ಮಗನ ಕೊಲೆ.. ಮಚ್ಚಿನಿಂದ ಕೊಚ್ಚಿ ರಸ್ತೆ ಬದಿಗೆ ತಂದು ಬಿಸಾಕಿದ ದುಷ್ಕರ್ಮಿಗಳು 
Advertisment
  • ಚಿಕ್ಕಪ್ಪನ ಮಚ್ಚೇಟಿಗೆ ಕೊಲೆಯಾದ ಅಣ್ಣನ ಮಗ
  • ಮಚ್ಚಿನಿಂದ ತಲೆಗೆ ಹೊಡೆದು ಕೊಲೆ.. ರಸ್ತೆ ಬದಿಗೆ ತಂದು ಬಿಸಾಕಿದ ದುರುಳರು
  • ಕೊಲೆ ಮಾಡುವಷ್ಟು ಆತ ಏನು ಮಾಡಿದ್ದನು? ಆತ ಮಾಡಿದ ತಪ್ಪೇನು? ಇಲ್ಲಿದೆ ಮಾಹಿತಿ

ರಾಮನಗರ: ಚಿಕ್ಕಪ್ಪನೋರ್ವ ಅಣ್ಣನ ಮಗನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಚನ್ನಪಟ್ಟಣ ತಾಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ರಸ್ತೆ ಬದಿಗೆ ತಂದು ದುಷ್ಕರ್ಮಿಗಳು ಬಿಸಾಡಿದ್ದಾರೆ.

Advertisment

ರಂಜಿತ್ ಕುಮಾರ್ (29) ಕೊಲೆಯಾದ ಯುವಕ. ಜಮೀನಿನಲ್ಲಿ ಹುಲ್ಲು ಕೊಯ್ಯುವ ವಿಚಾರವಾಗಿ ತನ್ನ ಚಿಕ್ಕಪ್ಪ ನಾಗರಾಜು ಕುಟುಂಬದ ಜೊತೆ ಗಲಾಟೆ ಮಾಡಿಕೊಂಡಿದ್ದನು. ನಾಗರಾಜು ಪತ್ನಿ ಮಂಗಳಮ್ಮ, ಮಗ ಸುನೀಲ್ ಕುಮಾರ್ ಜೊತೆಗೆ ಗಲಾಟೆ ಮಾಡಿದ್ದನು.

ಇದನ್ನೂ ಓದಿ: ಅಂಗನವಾಡಿ ಬಾಲಕನ ಮೇಲೆ ಹರಿದ ಖಾಸಗಿ ಶಾಲಾ ವಾಹನ.. 5 ವರ್ಷದ ಪುಟಾಣಿ ಸಾವು

ರಂಜಿತ್ ಕುಮಾರ್​ಗೆ ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ತಡ ರಾತ್ರಿ ಆರೋಪಿಗಳು ಪೊಲೀಸರ ಬಳಿ ಕೊಲೆ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

Advertisment

ಇದನ್ನೂ ಓದಿ: ಮೇಲಾಧಿಕಾರಿಗಳ ಕಿರುಕುಳ, 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ.. ಬ್ಯಾಂಕ್ ಅಧಿಕಾರಿ ನೇಣಿಗೆ ಶರಣು

ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment