ಹೆಗಡೆ ಬೆಂಬಲಿಗರ ಹಲ್ಲೆಯಿಂದ ಹಲ್ಲು ಮುರಿತ ಆರೋಪ -ನಡು ರಸ್ತೆಯಲ್ಲಿ ಆಗಿದ್ದೇನು..?

author-image
Ganesh
Updated On
ಹೆಗಡೆ ಬೆಂಬಲಿಗರ ಹಲ್ಲೆಯಿಂದ ಹಲ್ಲು ಮುರಿತ ಆರೋಪ -ನಡು ರಸ್ತೆಯಲ್ಲಿ ಆಗಿದ್ದೇನು..?
Advertisment
  • ಓವರ್​ಟೇಕ್​​ ವಿಚಾರ.. ಹೈವೇನಲ್ಲಿ ನಡೀತು ಫೈಟ್​!
  • ಮಾಜಿ ಸಂಸದ ಹೆಗಡೆ ಮೇಲೆ ಎಫ್​ಐಆರ್​​ ದಾಖಲು
  • ಹಲ್ಲೆ ಮಾಡಿರೋದಲ್ಲದೇ ಅವಾಚ್ಯವಾಗಿ ನಿಂದನೆಯ ಆರೋಪ

ರಾಷ್ಟ್ರೀಯ ಹೆದ್ದಾರಿ 48.. ಕಾರುಗಳ ಓವರ್​ಟೇಕ್​.. ಇದೇ ವಿಚಾರಕ್ಕೆ ದೊಡ್ಡ ಗಲಾಟೆಯೊಂದು ನಡೆದು ಹೋಗಿದೆ. ಕಾರ್​​​​ನಲ್ಲಿದ್ದಿದ್ದು ಮಾಜಿ ಸಂಸದ ಅನಂತ್‌ಕುಮಾರ್‌ ಹೆಗಡೆ.. ಕಾರು ಓವರ್​​ಟೇಕ್​​​ ಸಂಬಂಧ ಹೆಗಡೆ ಚಾಲಕ ಮತ್ತು ಗನ್​​ಮ್ಯಾನ್​​​ ಹಲ್ಲೆ ನಡೆಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಕೋಮು ಬಣ್ಣ ಬಳಿದುಬಿಟ್ಟಿದೆ.

ಓವರ್​ಟೇಕ್​​ ವಿಚಾರ.. ಹೈವೇನಲ್ಲಿ ನಡೀತು ಫೈಟ್​!

ದಾಬಸ್‌ಪೇಟೆ ಸಮೀಪದ ಹಳೇ ನಿಜಗಲ್ಲು ಬಳಿ ಘಟನೆ ನಡೆದಿದೆ. ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಆಗಮಿಸ್ತಿದ್ದ ಅನಂತ್‌ಕುಮಾರ್‌ ಹೆಗಡೆ ಕಾರನ್ನು ಮುಸ್ಲಿಂ ಸಮುದಾಯದ ಕಾರು ಓವರ್​ಟೇಕ್‌ ಮಾಡಿದೆ. ಇದ್ರಿಂದ ದಾಬಸ್‌ಪೇಟೆ ಬಳಿ ನಿಲ್ಲಿಸಿ ಕಾರಿನ ಚಾಲಕ ಹಾಗೂ ಕಾರಿನಲ್ಲಿದ್ದವರಿಗೆ ಹೆಗಡೆ ಗನ್‌ಮ್ಯಾನ್‌ ಶ್ರೀಧರ್‌, ಚಾಲಕ ಮಹೇಶ್‌ ಹಲ್ಲೆ ಮಾಡಿದ್ದಾರೆ ಅಂತ ಹೇಳಲಾಗಿದೆ.

ಇದನ್ನೂ ಓದಿ: ಮೊಟ್ಟ ಮೊದಲ ಎಲೆಕ್ಟ್ರಿಕ್ ವಿಮಾನ.. ಜಸ್ಟ್​ 700 ರೂಪಾಯಿ ಇದ್ರೆ ಪ್ರಯಾಣಿಸಬಹುದು! -Video

publive-image

ಹೆಗಡೆ ಬೆಂಬಲಿಗರ ಹಲ್ಲೆಯಿಂದ ಹಲ್ಲು ಮುರಿತ

ಹಲ್ಲೆಯಿಂದಾಗಿ ಕೆಲವರಿಗೆ ಹಲ್ಲು ಮುರಿತವಾಗಿ ರಕ್ತಸ್ರಾವವಾಗಿದೆ. ಡಾಬಸ್‌ಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡ್ಲಾಗಿದೆ. ಹಲ್ಲೆಗೊಳಗಾದ ಮುಸ್ಲಿಂ ಸಮುದಾಯ, ಡಾಬಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದೆ.. ಘಟನೆ ಸಂಬಂಧ ಎಫ್​​ಐಅರ್​​​ ದಾಖಲಿಸಲಾಗಿದೆ.

ಇದನ್ನೂ ಓದಿ: ವಿವಾದಕ್ಕೆ ಸಿಲುಕಿದ ಕೇಂದ್ರ ಸಚಿವ ನಟನೆಯ ‘ಜಾನಕಿ ವರ್ಸಸ್​ ಸ್ಟೇಟ್​ ಆಫ್​ ಕೇರಳ’ ಚಿತ್ರ..

publive-image

ಹೆಗಡೆ ಮೇಲೆ ಎಫ್​​ಐಆರ್​​!

ದಾಬಸ್​ಪೇಟೆಯ ಪೊಲೀಸ್​​​ ಠಾಣೆಯಲ್ಲಿ ಠಾಣೆಯಲ್ಲಿ FIR ದಾಖಲಾಗಿದೆ. ಪ್ರಕರಣದಲ್ಲಿ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಎ-1 ಆಗಿದ್ದು, ಹೆಗಡೆ ಅವರ ಗನ್​ಮ್ಯಾನ್​ ಶ್ರೀಧರ್‌ ಎ-2 ಅಂತ ಉಲ್ಲೇಖ ಆಗಿದೆ. ಹೆಗಡೆ ಕಾರಿನ ಡ್ರೈವರ್ ಮಹೇಶ್‌ ಸಹ FIR​​ನಲ್ಲಿ ಎ-3 ಆಗಿದ್ದಾರೆ.. ಖುದ್ದು ಹೆಗಡೆ ಹಲ್ಲೆ ಮಾಡಿದ್ದಾರೆ ಎಂದು FIRನಲ್ಲಿ ಉಲ್ಲೇಖಿಸಿದ್ದಾರೆ.. ಹಲ್ಲೆ ಮಾಡಿದ್ದಲ್ಲದೆ ಅವಾಚ್ಯವಾಗಿ ನಿಂದನೆಯ ಮಾಡಲಾಗಿದೆ. ಗನ್​ಮ್ಯಾನ್​ ಶ್ರೀಧರ್​​​ ಶೂಟ್ ಮಾಡ್ತೀನಿ ಅಂತ ಗನ್​​ ತಗೆದು ಬೆದರಿಸಿದ್ದಾರೆ ಅಂತ ಆರೋಪಿಸಿದ್ದಾರೆ.

ಗಲಾಟೆ ಆಗ್ತಿದ್ದಂತೆ ಕಾರಿನಲ್ಲಿದ್ದ ಕಾರಿನಲ್ಲಿದ್ದ ಮುಸ್ಲಿಂ ಸಮುದಾಯವು ಡಾಬಸ್‌ಪೇಟೆ ಪೊಲೀಸ್‌ ಠಾಣೆಗೆ ಆಗಮಿಸಿದ್ರೆ, ಸುದ್ದಿ ತಿಳಿದು ಠಾಣೆ ಬಳಿ ನೂರಾರು ಮುಸ್ಲಿಮರು ಜಮಾಯಿಸಿದ್ರು. ಅತ್ತ ಹೆಗಡೆ ಪರವಾಗಿ ಬಿಜೆಪಿ ಮುಖಂಡರು ಸಹ ಠಾಣೆ ಬಳಿ ಆಗಮಿಸಿದ್ರು. ಈ ವೇಳೆ ಹೆಗಡೆ ಮತ್ತು ಬೆಂಬಲಿಗರನ್ನ ನೆಲಮಂಗಲ ಬಳಿಯ ಡಿವೈಎಸ್‌ಪಿ ಕಚೇರಿಗೆ ಕರೆತಂದ್ರು. ಬಳಿಕ ಬೆಂಗಳೂರಿನತ್ತ ಹೆಗಡೆ ಪ್ರಯಾಣ ಬೆಳೆಸಿದ್ರು. ಒಟ್ಟಾರೆ, ರೋಡ್​ರೇಜ್​ ಪ್ರಕರಣವೊಂದು ಹೆಗಡೆಯನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಇವತ್ತು ಮತ್ತೆ ಮಾಜಿ ಸಂಸದರನ್ನ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಮೆರಿಕ ಮೇಲೂ ಪ್ರತೀಕಾರ ಆಗಿದೆ.. ಟ್ರಂಪ್ ಕದನ ವಿರಾಮ ‘ಬರೀ ಸುಳ್ಳು’ ಎಂದ ಇರಾನ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment