ಟೀಮ್ ಇಂಡಿಯಾದ ಬ್ಯಾಟರ್ ಹನುಮ ವಿಹಾರಿಗೆ ಅವಮಾನ
ಆಂಧ್ರ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಭಾರೀ ರಾಜಕೀಯ..!
ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇಕೆ ಹನುಮ ವಿಹಾರಿ?
ಇತ್ತೀಚೆಗೆ ಇಂದೋರ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ನಲ್ಲಿ ಮಧ್ಯಪ್ರದೇಶದ ವಿರುದ್ಧ ಕ್ಯಾಪ್ಟನ್ ಹನುಮ ವಿಹಾರಿ ನೇತೃತ್ವದ ಆಂಧ್ರ ಕ್ರಿಕೆಟ್ ತಂಡವು ಹೀನಾಯ ಸೋಲು ಕಂಡಿತ್ತು. ಇದಾದ ಬೆನ್ನಲ್ಲೇ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಹನುಮ ವಿಹಾರಿ ವಿರುದ್ಧ ವಾಗ್ದಾಳಿ ನಡೆಸಿತ್ತು.
ಇನ್ನು, ಈ ಬೆಳವಣಿಗೆ ಬೆನ್ನಲ್ಲೇ ಬಂಗಾಳದ ವಿರುದ್ಧ ಸರಣಿ ಮಧ್ಯೆಯೇ ತನ್ನ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಅಷ್ಟೇ ಅಲ್ಲ ಕೇವಲ ಬ್ಯಾಟರ್ ಆಗಿ ತಂಡದಲ್ಲಿ ಮುಂದುವರಿದರು. ಇದಾದ ಬಳಿಕ ಟ್ವೀಟ್ ಮಾಡಿರುವ ಹನುಮ ವಿಹಾರಿ, ಉದ್ದೇಶಪೂರ್ವಕವಾಗಿ ನನ್ನನ್ನು ನಾಯಕತ್ವ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಜತೆಗೆ ಇನ್ಮುಂದೆ ಆಂಧ್ರ ತಂಡದ ಪರ ಆಡುವುದಿಲ್ಲ ಎಂದು ತಮ್ಮ ನಿರ್ಧಾರವನ್ನು ಬರೆದುಕೊಂಡಿದ್ದಾರೆ. ಈ ಟ್ವೀಟ್ ಭಾರತದ ಕ್ರೀಡಾ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದೆ.
Ranji Trophy 2023/24 pic.twitter.com/PXHNG487BQ
— Hanuma vihari (@Hanumavihari) February 26, 2024
ಹನುಮ ವಿಹಾರಿ ಮಾಡಿದ ಟ್ವೀಟ್ನಲ್ಲೇನಿದೆ..?
ನಾನು ಬಂಗಾಳದ ವಿರುದ್ಧ ನಡೆದ ಪಂದ್ಯದಲ್ಲಿ ಕ್ಯಾಪ್ಟನ್ ಆಗಿದ್ದೆ. ಮೈದಾನದಲ್ಲಿ ತಂಡದ ಸಹ ಆಟಗಾರನ ಮೇಲೆ ಕೂಗಾಡಿದೆ. ಇಷ್ಟಕ್ಕೆ ಸಹ ಆಟಗಾರ ತನ್ನ ತಂದೆಗೆ ದೂರು ನೀಡಿದ್ದಾನೆ. ಈ ಬೆನ್ನಲ್ಲೇ ತನ್ನ ತಂದೆ ರಾಜಕಾರಣಿ ಆದ ಕಾರಣ ಒತ್ತಡ ತಂದು ನನ್ನನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಕಳೆದ 7 ರಣಜಿ ಸೀಸನ್ಗಳಲ್ಲಿ 5 ಬಾರಿ ನಾಕೌಟ್ ಹಂತಕ್ಕೆ ತೆಗೆದುಕೊಂಡು ಹೋಗಿದ್ದೇನೆ. ಭಾರತ ತಂಡದ ಪರ 16 ಟೆಸ್ಟ್ ಆಡಿದ್ದೇನೆ. ತಂಡಕ್ಕಾಗಿ ಈ ಸೀರೀಸ್ನಲ್ಲಿ ಆಡಿದೆ, ಅವಮಾನ ಮಾಡಿದ್ರೂ ಕ್ರಿಕೆಟ್ಗಾಗಿ ಗೌರವಿಸಿದೆ. ನಾನು ಇನ್ನು ಮುಂದೆ ಆಂಧ್ರದ ಪರ ಆಡುವುದಿಲ್ಲ ಎಂದು ನೋವಿನಲ್ಲೇ ಟ್ವೀಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಟೀಮ್ ಇಂಡಿಯಾದ ಬ್ಯಾಟರ್ ಹನುಮ ವಿಹಾರಿಗೆ ಅವಮಾನ
ಆಂಧ್ರ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಭಾರೀ ರಾಜಕೀಯ..!
ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇಕೆ ಹನುಮ ವಿಹಾರಿ?
ಇತ್ತೀಚೆಗೆ ಇಂದೋರ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ನಲ್ಲಿ ಮಧ್ಯಪ್ರದೇಶದ ವಿರುದ್ಧ ಕ್ಯಾಪ್ಟನ್ ಹನುಮ ವಿಹಾರಿ ನೇತೃತ್ವದ ಆಂಧ್ರ ಕ್ರಿಕೆಟ್ ತಂಡವು ಹೀನಾಯ ಸೋಲು ಕಂಡಿತ್ತು. ಇದಾದ ಬೆನ್ನಲ್ಲೇ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಹನುಮ ವಿಹಾರಿ ವಿರುದ್ಧ ವಾಗ್ದಾಳಿ ನಡೆಸಿತ್ತು.
ಇನ್ನು, ಈ ಬೆಳವಣಿಗೆ ಬೆನ್ನಲ್ಲೇ ಬಂಗಾಳದ ವಿರುದ್ಧ ಸರಣಿ ಮಧ್ಯೆಯೇ ತನ್ನ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಅಷ್ಟೇ ಅಲ್ಲ ಕೇವಲ ಬ್ಯಾಟರ್ ಆಗಿ ತಂಡದಲ್ಲಿ ಮುಂದುವರಿದರು. ಇದಾದ ಬಳಿಕ ಟ್ವೀಟ್ ಮಾಡಿರುವ ಹನುಮ ವಿಹಾರಿ, ಉದ್ದೇಶಪೂರ್ವಕವಾಗಿ ನನ್ನನ್ನು ನಾಯಕತ್ವ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಜತೆಗೆ ಇನ್ಮುಂದೆ ಆಂಧ್ರ ತಂಡದ ಪರ ಆಡುವುದಿಲ್ಲ ಎಂದು ತಮ್ಮ ನಿರ್ಧಾರವನ್ನು ಬರೆದುಕೊಂಡಿದ್ದಾರೆ. ಈ ಟ್ವೀಟ್ ಭಾರತದ ಕ್ರೀಡಾ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದೆ.
Ranji Trophy 2023/24 pic.twitter.com/PXHNG487BQ
— Hanuma vihari (@Hanumavihari) February 26, 2024
ಹನುಮ ವಿಹಾರಿ ಮಾಡಿದ ಟ್ವೀಟ್ನಲ್ಲೇನಿದೆ..?
ನಾನು ಬಂಗಾಳದ ವಿರುದ್ಧ ನಡೆದ ಪಂದ್ಯದಲ್ಲಿ ಕ್ಯಾಪ್ಟನ್ ಆಗಿದ್ದೆ. ಮೈದಾನದಲ್ಲಿ ತಂಡದ ಸಹ ಆಟಗಾರನ ಮೇಲೆ ಕೂಗಾಡಿದೆ. ಇಷ್ಟಕ್ಕೆ ಸಹ ಆಟಗಾರ ತನ್ನ ತಂದೆಗೆ ದೂರು ನೀಡಿದ್ದಾನೆ. ಈ ಬೆನ್ನಲ್ಲೇ ತನ್ನ ತಂದೆ ರಾಜಕಾರಣಿ ಆದ ಕಾರಣ ಒತ್ತಡ ತಂದು ನನ್ನನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಕಳೆದ 7 ರಣಜಿ ಸೀಸನ್ಗಳಲ್ಲಿ 5 ಬಾರಿ ನಾಕೌಟ್ ಹಂತಕ್ಕೆ ತೆಗೆದುಕೊಂಡು ಹೋಗಿದ್ದೇನೆ. ಭಾರತ ತಂಡದ ಪರ 16 ಟೆಸ್ಟ್ ಆಡಿದ್ದೇನೆ. ತಂಡಕ್ಕಾಗಿ ಈ ಸೀರೀಸ್ನಲ್ಲಿ ಆಡಿದೆ, ಅವಮಾನ ಮಾಡಿದ್ರೂ ಕ್ರಿಕೆಟ್ಗಾಗಿ ಗೌರವಿಸಿದೆ. ನಾನು ಇನ್ನು ಮುಂದೆ ಆಂಧ್ರದ ಪರ ಆಡುವುದಿಲ್ಲ ಎಂದು ನೋವಿನಲ್ಲೇ ಟ್ವೀಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ