/newsfirstlive-kannada/media/post_attachments/wp-content/uploads/2024/11/ANEKAL.jpg)
ನಿನ್ನೆ ರಾತ್ರಿ ನಿದ್ದೆ ಮಂಪರಿನಲ್ಲಿದ್ದ ಸಿಲಿಕಾನ್ ಸಿಟಿ ಮಂದಿಯನ್ನ ಇದೊಂದು ಗ್ಯಾಂಗ್ ವಾರ್ ಸುದ್ದಿ ಬೆಚ್ಚಿ ಬೀಳಿಸಿದೆ.. ಸಿನಿಮಾ ಸ್ಟೈಲ್ನಲ್ಲಿ ನಡೆದ ಈ ವಾರ್ ಕಂಡು ಆ ಏರಿಯಾಗೇ ಏರಿಯಾನೇ ನಡುಗಿ ಹೋಗಿದೆ.
ಕಗ್ಗತ್ತಲ ರಾತ್ರಿಯಲ್ಲಿ ಗ್ಯಾಂಗ್ವಾರ್
ನಿನ್ನೆ ರಾತ್ರಿ ಸುಮಾರು 10:30ರ ಸಮಯ. ಆಗ ತಾನೇ ಆನೇಕಲ್ ಏರಿಯಾ ಜನ ನಿದ್ದೆಯಲ್ಲಿ ಕನಸು ಕಾಣೋಕೆ ಶುರುವಿಟ್ಟಿದ್ರು.. ಆ ಹೊತ್ತಲ್ಲೇ ನಡೆದ ಈ ಸಿನಿಮಾ ಸ್ಟೈಲ್ನ ಗ್ಯಾಂಗ್ ವಾರ್ ಇಡೀ ಏರಿಯಾವನ್ನೇ ಶೇಕ್ ಶೇಕ್ ಮಾಡಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಎರಡು ರೌಡಿಶೀಟರ್ ಗ್ಯಾಂಗ್ ನಡುವೆ ನಡೆದಿರುವ ವಾರ್ ಎಂದು ಹೇಳಲಾಗ್ತಿದೆ. ಈ ಏರಿಯಾದ ರೌಡಿಶೀಟರ್ ಮನು ಗ್ಯಾಂಗ್ ಮೇಲೆ ದಾಳಿಯಾಗಿದೆ. ಸುಮಾರು 20ಕ್ಕೂ ಅಧಿಕ ಹುಡುಗರು ದಾಳಿ ಮಾಡಿದ್ದಾರೆ.
ಗ್ಯಾಂಗ್ ವಾರ್..!
ಮಧ್ಯಾಹ್ನ ರೌಡಿ ಶೀಟರ್ ಮನು ಅಲಿಯಾಸ್ ಜಾಕಿ.. ಸ್ನೇಹಿತರ ಜೊತೆ ಬೆಂಗಳೂರಿನಲ್ಲಿ ತಂಗಿ ಮದುವೆ ಕಾರ್ಡ್ ಹಂಚಿ ವಾಪಸ್ ಆಗ್ತಿದ್ದ. ಇದನ್ನೇ ಹೊಂಚು ಹಾಕಿ ಕೂತಿದ್ದ ಕಿರಾತಕರು ಮನು ಅಂಡ್ ಗ್ಯಾಂಗ್ ಮೇಲೆ ಅಟ್ಯಾಕ್ ಮಾಡಿದೆ. ಸ್ಕಾರ್ಪಿಯೋ ಕಾರು ಹಾಗೂ ಟಾಟಾ ಸಫಾರಿ ಕಾರಲ್ಲಿ ಲಾಂಗ್ ಮಚ್ಚುಗಳನ್ನು ಹಿಡಿದು ಬಂದಿದ್ದ ಕಿರಾಕತರು, ಅಟ್ಯಾಕ್ ಮಾಡಿದೆ. ಸ್ವಲ್ಪದ್ರಲ್ಲೇ ಮನು ಅಂಡ್ ಗ್ಯಾಂಗ್ ಎಸ್ಕೇಪ್ ಆಗಿದೆ. ಈ ಮನು ಕನಕಪುರ ರಸ್ತೆ ಕದಂಬ ಹೋಟೆಲ್ ಬಳಿ ನಡೆದಿದ್ದ ಸುನೀಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಹಳೇ ವೈಷಮ್ಯಕ್ಕೆ ಈ ಗ್ಯಾಂಗ್ ವಾರ್ ನಡೆದಿದೆ ಅನ್ನೋ ಶಂಕೆ ಇದೆ.
ಟಾರ್ಗೆಟ್ ಮಿಸ್ ಆಗ್ತಿದ್ದಂತೆ ಸಿನಿಮಾ ಸ್ಟೈಲ್ನಲ್ಲಿ ಸ್ಕ್ಯಾರ್ಪಿಯೋ ಕಾರು ಬಿಟ್ಟು ಕಿರಾತಕರು ಮತ್ತೊಂದು ಕಾರಲ್ಲಿ ಸುಮಾರು ಅರ್ಧ ಕಿ.ಮೀ ರಿವರ್ಸ್ನಲ್ಲೇ ಕಾಲ್ಕಿತ್ತಿದ್ದಾರೆ. ಅತ್ತ, ಪೊಲೀಸರು ಬರ್ತಿದ್ದಂತೆ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿದ್ದವರು ನಾಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿಗಣಿ ಪೊಲೀಸರ ಸಹಯೋಗದಿಂದ ಕ್ರೇನ್ ಮೂಲಕ ಎರಡು ಕಾರುಗಳನ್ನ ತೆರವು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ