ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್​ಸಿಬಿ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಹೇಳಿಕೆ..!

author-image
Veena Gangani
Updated On
ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್​ಸಿಬಿ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಹೇಳಿಕೆ..!
Advertisment
  • ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರೋ 18ನೇ ಆವೃತ್ತಿಯ 34ನೇ ಪಂದ್ಯ
  • ಈ ಬಾರಿ RCB ಕಪ್ ಗೆಲ್ಲುವ ನಿರೀಕ್ಷೆ ಇದೆ ಎಂದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ
  • ದಿಢೀರ್​ ಸದಾಶಿವನಗರದಲ್ಲಿರೋ ನಿವಾಸಕ್ಕೆ ಭೇಟಿ ಕೊಟ್ಟಿದ್ಯಾಕೆ ಅನಿಲ್ ಕುಂಬ್ಳೆ

ಬೆಂಗಳೂರು: ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 18ನೇ ಆವೃತ್ತಿಯ 34ನೇ ಪಂದ್ಯ ನಡೆಯಲಿದೆ. ಇಂದು ಸಂಜೆ 7.30ಕ್ಕೆ  ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (RCB vs PBKS) ಮಧ್ಯೆ ಹಣಾಹಣಿ ಶುರುವಾಗಲಿದೆ.

ಇದನ್ನೂ ಓದಿ: ಆರ್​ಸಿಬಿಗೆ ಯಾರೇ ಬರಲಿ, ಯಾರೇ ಹೋಗಲಿ.. ಕೊಹ್ಲಿಯ ಈ ದೊಡ್ಡ ಗುಣದ ಬಗ್ಗೆ ಗೊತ್ತಿರಲಿ..

ಇಲ್ಲಿಯವರೆಗೆ 6 ಪಂದ್ಯಗಳನ್ನು ಆಡಿರುವ ಆರ್​ಸಿಬಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಆರ್​ಸಿಬಿಯ ಅದ್ಭುತ ಆರಂಭಕ್ಕೆ ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಖುಷಿ ವ್ಯಕ್ತಪಡಿಸಿದ್ದಾರೆ. ಮಹತ್ವದ ಬೆಳವಣಿಗೆ ಒಂದರಲ್ಲಿ ಇಂದು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದರು. ಡಿಕೆಶಿ ಭೇಟಿ ಬಳಿಕ, ಮಾಧ್ಯಮಗಳ ಜೊತೆ ಮಾತನಾಡಿದರು.

publive-image

ಇದೇ ವೇಳೆ ಆರ್​ಸಿಬಿ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರ್​ಸಿಬಿ ಮುಂದೆಯೂ ಹೀಗೇ ಆಡಲಿ. 18ನೇ ಆವೃತ್ತಿಯ ಅರ್ಧ ಟೂರ್ನಿ ಕೂಡ ಇನ್ನೂ ಮುಗಿದಿಲ್ಲ. ನಮ್ಮ ಆರ್​ಸಿಬಿ ಇನ್ನೂ ಬೆಂಗಳೂರಿನಲ್ಲಿ ಗೆದ್ದಿಲ್ಲ. ಈ ಬಾರಿ ಆರ್​ಸಿಬಿ ಕಪ್ ಗೆಲ್ಲುವ ನಿರೀಕ್ಷೆ ಇದ್ದೇ ಇದೆ. 18 ವರ್ಷ ಆಗಿದೆ. ಇವತ್ತಿನ ಮ್ಯಾಚ್​ಗೆ ಆಲ್ ದ ಬೆಸ್ಟ್ ಹೇಳುವೆ. ನಾನು ಪಂಜಾಬ್ ಹಾಗೂ ಬೆಂಗಳೂರು ಎರಡೂ ತಂಡದಲ್ಲಿದ್ದೆ. ಅದೇ ಸಮಸ್ಯೆ ನನಗೆ ಎಂದಿದ್ದಾರೆ.

ಆರ್​ಸಿಬಿ ಪರ 42 ಪಂದ್ಯಗಳನ್ನು ಆಡಿರುವ ಅನಿಲ್ ಕುಂಬ್ಳೆ 45 ವಿಕೆಟ್ ಪಡೆದುಕೊಂಡಿದ್ದಾರೆ. ಬೌಲಿಂಗ್ ಎಕನಾಮಿ ರೇಟ್ 6.58 ಇದೆ. ಇವರ ನಾಯಕತ್ವದ ಅಡಿಯಲ್ಲಿ 2010ರಲ್ಲಿ ಆರ್​ಸಿಬಿ ಸೆಮಿ ಫೈನಲ್ ಪ್ರವೇಶ ಮಾಡಿತ್ತು. 2009ರಲ್ಲಿ ಆರ್​ಸಿಬಿ ಫೈನಲ್ ಪ್ರವೇಶ ಮಾಡಿತ್ತು, ಆರ್​ಸಿಬಿ ಫೈನಲ್ ಪ್ರವೇಶದ ಹಿಂದೆ ಕುಂಬ್ಳೆ ಪಾತ್ರ ಕೂಡ ಇದೆ. 2011ರಲ್ಲಿ ಕುಂಬ್ಳೆ ಮೆಂಟರ್ ಆಗಿದ್ದರು .

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment