ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಮುಂದಾದ ಭಾಗ್ಯಲಕ್ಷ್ಮೀ ತಂಡ
ಹೊಸ ಟ್ವಿಸ್ಟ್ ಆ್ಯಂಡ್ ಟರ್ನ್ ಮೂಲಕ ಬರಲು ಫುಲ್ ತಯಾರಿ
ಭಾಗ್ಯಲಕ್ಷ್ಮೀ ಹಾಗೂ ತಾಂಡವ್ ಮನೆಗೆ ಹೊಸ ಅತಿಥಿ ಆಗಮನ
ಕಿರುತೆರೆ ಲೋಕ ಈಗ ಕಾಂಪಿಟೇಷನ್ ಲೋಕವಾಗಿ ಬದಲಾಗುತ್ತಿದೆ. ಸೀರಿಯಲ್ ಕತೆಗಳು ಟಿಆರ್ಪಿ ಹಿಂದೆ ಮುಗಿ ಬಿದ್ದಿವೆ. ಒಂದು ವಾರ ನಾ ಮುಂದೆ ಅಂದ್ರೆ, ಮತ್ತೊಂದು ವಾರ ತಾ ಮುಂದು ಅನ್ನೋ ಹಾಗೇ ಎಲ್ಲರು ವೀಕ್ಷಕರ ಮುಂದೆ ಹೈ ಕ್ಲಾಸ್ ಕ್ವಾಲಿಟಿ ಕಥೆಗಳನ್ನ ಕೊಡಲು ಮಸ್ತ್ ಟ್ವಿಸ್ಟ್ ಆ್ಯಂಡ್ ಟರ್ನ್ಗಳ ಜೊತೆ ಮುಂದೆ ಬರುತ್ತಿದ್ದಾರೆ.
ಸದ್ಯ ತನ್ನ ಲಾಚಿಂಗ್ ಟೈಮ್ನಿಂದಲೂ 7 ಗಂಟೆಯ ಸ್ಲಾಟ್ ಅನ್ನ ಯಾರ ಜೊತೆನೂ ಹಂಚಿಕೊಳ್ಳದೆ ಟಾಪ್ನಲ್ಲೇ ಉಳಿದುಕೊಂಡು ಬಂದಿರುವ ಧಾರಾವಾಹಿ ಅಂದರೆ ಅದು ಭಾಗ್ಯಲಕ್ಷ್ಮೀ. ಆದರೆ ಈಗ ಭಾಗ್ಯಲಕ್ಷ್ಮೀಯನ್ನು ಹಿಂದಿಕ್ಕಿದೆ ಅಮೃತಧಾರೆ ಧಾರಾವಾಹಿ. ಕಾಲ ಕ್ರಮೇಣ ಈಗ ಭಾಗ್ಯಲಕ್ಷ್ಮೀಗೆ ಆತಂಕ ಹೆಚ್ಚಾಗಿರೋದಂತು ಸುಳ್ಳಲ್ಲ. ಇದೇ ಕಾರಣವೇ ಭಾಗ್ಯಲಕ್ಷ್ಮೀ ತಂಡ ಹೊಸ ಟ್ವಿಸ್ಟ್ ಆ್ಯಂಡ್ ಟರ್ನ್ ತರಲು ಫುಲ್ ಸಜ್ಜಾಗಿ ನಿಂತಿದೆ.
ಸದ್ಯ, ತಾಂಡವ್ನ ಮೋಸದ ಒಳ್ಳೆ ಮುಖವಾಡಕ್ಕೆ ಭಾಗ್ಯ ಗುಂಡಿಗೆ ಬಿದ್ದಿದ್ದಾಳೆ. ಇನ್ನೂ ಭಾಗ್ಯಳ ವರ್ತನೆಗೆ ಅತ್ತೆ ಕುಸುಮ ಸಿಡಿಮಿಡಿ ಅಂತಿದ್ದಾಳೆ. ಒಟ್ಟಿನಲ್ಲಿ ತಾಂಡವ್ನ ಹುಚ್ಚಾಟಕ್ಕೆ ಮನೆಯ ನೆಮ್ಮದಿ ಹಾಳಾಗಿದೆ. ಇತ್ತ ಶ್ರೇಷ್ಠ ತಾಂಡವ್ನ ಹುಚ್ಚಾಟಕ್ಕೆ ಬೆನ್ನುಲುಬಾಗಿ ನಿಂತಿದ್ದಾಳೆ. ಈ ಎಲ್ಲ ಹುಚ್ಚಾಟಕ್ಕೆ ಪುಲ್ ಸ್ಟಾಪ್ ಇಡಲು ಹಾಗೂ ಭಾಗ್ಯಳ ಕಣ್ತೆರಸಲು ಯುವರಾಣಿಯ ಆಗಮನವಾಗಿದೆ.
ಹೌದು ನಮ್ಮನೆ ಯುವರಾಣಿ ಧಾರಾವಾಹಿಯಿಂದ ಪ್ರಖ್ಯಾತಿ ಪಡೆದುಕೊಂಡ ಅಂಕಿತಾ ಅಮರ್ ಧಾರಾವಾಹಿಗೆ ಮರಳಿದ್ದಾರೆ. ಮೀರಾ ಬಂದ ಮೇಲೆ ಮುಗಿತು ತಾಂಡವ್ನ ಆಟ ಅಂಥಾ ಈಗಾಗಲೇ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಮೀರಾಳ ಆಗಮನ ಭಾಗ್ಯಲಕ್ಷ್ಮೀ ಧಾರಾವಾಹಿಗೆ ಕಳೆ ತುಂಬೋದು ಮಾತ್ರ ಸುಳ್ಳಲ್ಲ. ಈ ಟ್ವಿಸ್ಟ್ನಿಂದ ಮತ್ತೆ ಸ್ಲಾಟ್ ಧಾರಾವಾಹಿ ಲೀಡರ್ ಆಗುವುದರಲ್ಲಿ ಸಂಶಯವೇ ಇಲ್ಲಾ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಮುಂದಾದ ಭಾಗ್ಯಲಕ್ಷ್ಮೀ ತಂಡ
ಹೊಸ ಟ್ವಿಸ್ಟ್ ಆ್ಯಂಡ್ ಟರ್ನ್ ಮೂಲಕ ಬರಲು ಫುಲ್ ತಯಾರಿ
ಭಾಗ್ಯಲಕ್ಷ್ಮೀ ಹಾಗೂ ತಾಂಡವ್ ಮನೆಗೆ ಹೊಸ ಅತಿಥಿ ಆಗಮನ
ಕಿರುತೆರೆ ಲೋಕ ಈಗ ಕಾಂಪಿಟೇಷನ್ ಲೋಕವಾಗಿ ಬದಲಾಗುತ್ತಿದೆ. ಸೀರಿಯಲ್ ಕತೆಗಳು ಟಿಆರ್ಪಿ ಹಿಂದೆ ಮುಗಿ ಬಿದ್ದಿವೆ. ಒಂದು ವಾರ ನಾ ಮುಂದೆ ಅಂದ್ರೆ, ಮತ್ತೊಂದು ವಾರ ತಾ ಮುಂದು ಅನ್ನೋ ಹಾಗೇ ಎಲ್ಲರು ವೀಕ್ಷಕರ ಮುಂದೆ ಹೈ ಕ್ಲಾಸ್ ಕ್ವಾಲಿಟಿ ಕಥೆಗಳನ್ನ ಕೊಡಲು ಮಸ್ತ್ ಟ್ವಿಸ್ಟ್ ಆ್ಯಂಡ್ ಟರ್ನ್ಗಳ ಜೊತೆ ಮುಂದೆ ಬರುತ್ತಿದ್ದಾರೆ.
ಸದ್ಯ ತನ್ನ ಲಾಚಿಂಗ್ ಟೈಮ್ನಿಂದಲೂ 7 ಗಂಟೆಯ ಸ್ಲಾಟ್ ಅನ್ನ ಯಾರ ಜೊತೆನೂ ಹಂಚಿಕೊಳ್ಳದೆ ಟಾಪ್ನಲ್ಲೇ ಉಳಿದುಕೊಂಡು ಬಂದಿರುವ ಧಾರಾವಾಹಿ ಅಂದರೆ ಅದು ಭಾಗ್ಯಲಕ್ಷ್ಮೀ. ಆದರೆ ಈಗ ಭಾಗ್ಯಲಕ್ಷ್ಮೀಯನ್ನು ಹಿಂದಿಕ್ಕಿದೆ ಅಮೃತಧಾರೆ ಧಾರಾವಾಹಿ. ಕಾಲ ಕ್ರಮೇಣ ಈಗ ಭಾಗ್ಯಲಕ್ಷ್ಮೀಗೆ ಆತಂಕ ಹೆಚ್ಚಾಗಿರೋದಂತು ಸುಳ್ಳಲ್ಲ. ಇದೇ ಕಾರಣವೇ ಭಾಗ್ಯಲಕ್ಷ್ಮೀ ತಂಡ ಹೊಸ ಟ್ವಿಸ್ಟ್ ಆ್ಯಂಡ್ ಟರ್ನ್ ತರಲು ಫುಲ್ ಸಜ್ಜಾಗಿ ನಿಂತಿದೆ.
ಸದ್ಯ, ತಾಂಡವ್ನ ಮೋಸದ ಒಳ್ಳೆ ಮುಖವಾಡಕ್ಕೆ ಭಾಗ್ಯ ಗುಂಡಿಗೆ ಬಿದ್ದಿದ್ದಾಳೆ. ಇನ್ನೂ ಭಾಗ್ಯಳ ವರ್ತನೆಗೆ ಅತ್ತೆ ಕುಸುಮ ಸಿಡಿಮಿಡಿ ಅಂತಿದ್ದಾಳೆ. ಒಟ್ಟಿನಲ್ಲಿ ತಾಂಡವ್ನ ಹುಚ್ಚಾಟಕ್ಕೆ ಮನೆಯ ನೆಮ್ಮದಿ ಹಾಳಾಗಿದೆ. ಇತ್ತ ಶ್ರೇಷ್ಠ ತಾಂಡವ್ನ ಹುಚ್ಚಾಟಕ್ಕೆ ಬೆನ್ನುಲುಬಾಗಿ ನಿಂತಿದ್ದಾಳೆ. ಈ ಎಲ್ಲ ಹುಚ್ಚಾಟಕ್ಕೆ ಪುಲ್ ಸ್ಟಾಪ್ ಇಡಲು ಹಾಗೂ ಭಾಗ್ಯಳ ಕಣ್ತೆರಸಲು ಯುವರಾಣಿಯ ಆಗಮನವಾಗಿದೆ.
ಹೌದು ನಮ್ಮನೆ ಯುವರಾಣಿ ಧಾರಾವಾಹಿಯಿಂದ ಪ್ರಖ್ಯಾತಿ ಪಡೆದುಕೊಂಡ ಅಂಕಿತಾ ಅಮರ್ ಧಾರಾವಾಹಿಗೆ ಮರಳಿದ್ದಾರೆ. ಮೀರಾ ಬಂದ ಮೇಲೆ ಮುಗಿತು ತಾಂಡವ್ನ ಆಟ ಅಂಥಾ ಈಗಾಗಲೇ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಮೀರಾಳ ಆಗಮನ ಭಾಗ್ಯಲಕ್ಷ್ಮೀ ಧಾರಾವಾಹಿಗೆ ಕಳೆ ತುಂಬೋದು ಮಾತ್ರ ಸುಳ್ಳಲ್ಲ. ಈ ಟ್ವಿಸ್ಟ್ನಿಂದ ಮತ್ತೆ ಸ್ಲಾಟ್ ಧಾರಾವಾಹಿ ಲೀಡರ್ ಆಗುವುದರಲ್ಲಿ ಸಂಶಯವೇ ಇಲ್ಲಾ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ