newsfirstkannada.com

ಅನ್ನಭಾಗ್ಯ ಅಕ್ಕಿ ವಾಹನ ತಪಾಸಣೆ.. ಪೊಲೀಸ್​ ಮೇಲೆ ಅಕ್ಕಿ ಕಳ್ಳರಿಂದ ಹಲ್ಲೆ

Share :

Published March 4, 2024 at 7:32am

Update March 4, 2024 at 7:37am

    ಅನ್ನಭಾಗ್ಯ ಅಕ್ಕಿ ವಾಹನ ತಪಾಸಣೆ ಮಾಡಿದ ಪೊಲೀಸ್​

    ಪೇದೆಯ ಸಮವಸ್ತ್ರ ಹರಿದು ಹಲ್ಲೆ ಮಾಡಿದ ಕಳ್ಳರು

    ವಾಹನ ಸಮೇತವಾಗಿ ಪರಾರಿಯಾದ ಖದೀಮರು

ಗದಗ: ಪೊಲೀಸ್​ ಮೇಲೆ ಹಲ್ಲೆ ಮಾಡಿ ಅಕ್ಕಿ ಕಳ್ಳರು ಪರಾರಿಯಾಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಚೆಕ್ ಪೋಸ್ಟ್ ಬಳಿ ನಡೆದಿದೆ. ಅನ್ನಭಾಗ್ಯ ಅಕ್ಕಿ ವಾಹನ ತಪಾಸಣೆ ಮಾಡುವ ವೇಳೆ ಖದೀಮರು ಪೊಲೀಸ್ ಪೇದೆ ಎಚ್.ಎನ್.ಗೊರವರ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ.

ಪೊಲೀಸ್​ ಪೇದೆಯ ಸಮವಸ್ತ್ರ ಹರಿದು, ಮೈ-ಕೈ ಮೇಲೆ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದಾರೆ. ಬಳಿಕ ಕೂಡಲೇ ವಾಹನ ಸಮೇತವಾಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದೀಗ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನ್ನಭಾಗ್ಯ ಅಕ್ಕಿ ವಾಹನ ತಪಾಸಣೆ.. ಪೊಲೀಸ್​ ಮೇಲೆ ಅಕ್ಕಿ ಕಳ್ಳರಿಂದ ಹಲ್ಲೆ

https://newsfirstlive.com/wp-content/uploads/2024/03/gadag-2.jpg

    ಅನ್ನಭಾಗ್ಯ ಅಕ್ಕಿ ವಾಹನ ತಪಾಸಣೆ ಮಾಡಿದ ಪೊಲೀಸ್​

    ಪೇದೆಯ ಸಮವಸ್ತ್ರ ಹರಿದು ಹಲ್ಲೆ ಮಾಡಿದ ಕಳ್ಳರು

    ವಾಹನ ಸಮೇತವಾಗಿ ಪರಾರಿಯಾದ ಖದೀಮರು

ಗದಗ: ಪೊಲೀಸ್​ ಮೇಲೆ ಹಲ್ಲೆ ಮಾಡಿ ಅಕ್ಕಿ ಕಳ್ಳರು ಪರಾರಿಯಾಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಚೆಕ್ ಪೋಸ್ಟ್ ಬಳಿ ನಡೆದಿದೆ. ಅನ್ನಭಾಗ್ಯ ಅಕ್ಕಿ ವಾಹನ ತಪಾಸಣೆ ಮಾಡುವ ವೇಳೆ ಖದೀಮರು ಪೊಲೀಸ್ ಪೇದೆ ಎಚ್.ಎನ್.ಗೊರವರ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ.

ಪೊಲೀಸ್​ ಪೇದೆಯ ಸಮವಸ್ತ್ರ ಹರಿದು, ಮೈ-ಕೈ ಮೇಲೆ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದಾರೆ. ಬಳಿಕ ಕೂಡಲೇ ವಾಹನ ಸಮೇತವಾಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದೀಗ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More