Advertisment

ಕಾಲಿಗೆ ಚಪ್ಪಲಿ, ಶೂ ಧರಿಸಲ್ಲ.. ತಮಿಳುನಾಡಿನಲ್ಲಿ ಕೆ. ಅಣ್ಣಾಮಲೈ ಶಪಥ; DMK ವಿರುದ್ಧ ಮುರುಗನ್ ಬ್ರಹ್ಮಾಸ್ತ್ರ!

author-image
Bheemappa
Updated On
ಕಾಲಿಗೆ ಚಪ್ಪಲಿ, ಶೂ ಧರಿಸಲ್ಲ.. ತಮಿಳುನಾಡಿನಲ್ಲಿ ಕೆ. ಅಣ್ಣಾಮಲೈ ಶಪಥ; DMK ವಿರುದ್ಧ ಮುರುಗನ್ ಬ್ರಹ್ಮಾಸ್ತ್ರ!
Advertisment
  • ಡಿಎಂಕೆ ಸರ್ಕಾರ ಕಿತ್ತು ಹಾಕುವವರೆಗೂ ಕಾಲಿಗೆ ಚಪ್ಪಲಿ, ಶೂ ಧರಿಸಲ್ಲ
  • ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿರುವ ಶಪಥಗಳು ಏನೇನು.?
  • ಡಿಎಂಕೆಯ ಪಾಪ ಕೃತ್ಯದ ನಿವಾರಣೆಗೆ ತನಗೆ ತಾನೇ ಹೊಡೆದುಕೊಳ್ತಾರಾ?

ಚೆನ್ನೈ: ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಕಾಲಿಗೆ ಚಪ್ಪಲಿ ಅಥವಾ ಶೂ ಧರಿಸಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಶಪಥ ಮಾಡಿದ್ದಾರೆ.

Advertisment

ಕೊಯಮತ್ತೂರುನಲ್ಲಿ ಮಾತನಾಡಿದ ಕೆ.ಅಣ್ಣಾಮಲೈ ಅವರು, ವಿದ್ಯಾರ್ಥಿನಿ ಒಬ್ಬರ ಮೇಲೆ ದೌರ್ಜನ್ಯ ಎಸಗಲಾಗಿತ್ತು. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಆದರೆ ಎಫ್​ಐಆರ್​ನಲ್ಲಿ ವಿದ್ಯಾರ್ಥಿನಿಯ ಹೆಸರು, ಫೋನ್ ನಂಬರ್, ಇತರೆ ವೈಯಕ್ತಿ ವಿವರ ಸೋರಿಕೆ ಮಾಡಿದ್ದಕ್ಕೆ ಡಿಎಂಕೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಎಸಗಿದ ಶಂಕಿತ ಜ್ಞಾನಶೇಖರನ್, ಡಿಎಂಕೆ ಪಕ್ಷದ ಕಾರ್ಯಕರ್ತ ಎಂದ ಅಣ್ಣಾಮಲೈ ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: RCBಗೆ ಬಿಗ್ ಶಾಕ್​ ಕೊಡ್ತಾರಾ ಇಂಗ್ಲೆಂಡ್​ನ ಯುವ ಪ್ಲೇಯರ್​.. ಜೇಕಬ್ ಬೆಥೆಲ್ ಈ ಮ್ಯಾಚ್ ಆಡಲ್ವಾ?

publive-image

ಇದೇ ವೇಳೆ ಶಪಥ ಮಾಡಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು, ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಕಾಲಿಗೆ ಚಪ್ಪಲಿ ಅಥವಾ ಶೂ ಧರಿಸಲ್ಲ. ಅಲ್ಲದೇ 48 ದಿನಗಳ ಕಾಲ ಉಪವಾಸ ಮಾಡುವುದಾಗಿ ಘೋಷಣೆ ಮಾಡಿದ್ದು ಪ್ರಮುಖವಾದ 6 ಮುರುಗನ್ ದೇವಾಲಯಗಳಿಗೆ ಭೇಟಿ ನೀಡುವುದಾಗಿ ಅಣ್ಣಾಮಲೈ ಹೇಳಿದ್ದಾರೆ.

Advertisment

ಜೊತೆಗೆ ಡಿಎಂಕೆ ಸರ್ಕಾರದ ಪಾಪ ಕೃತ್ಯದ ನಿವಾರಣೆಗೆ ತನಗೆ ತಾನೇ 6 ಬಾರಿ ಹೊಡೆದುಕೊಳ್ಳುವುದಾಗಿ ಹೇಳಿದ್ದಾರೆ. ಬರಿಗಾಲಿನಲ್ಲಿ ಇರುವುದಾಗಿ ಹೇಳಿದ್ದಾರೆ. ಇದೇ ರೀತಿ ಈ ಹಿಂದಿನ ಬಿಜೆಪಿ ಅಧ್ಯಕ್ಷರಾಗಿದ್ದ ಮುರುಗನ್ ಕೂಡ ಕಾಲಿಗೆ ಚಪ್ಪಲಿ ಧರಿಸುತ್ತಿರಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment