newsfirstkannada.com

ಸ್ಯಾಂಡಲ್‌ವುಡ್‌ಗೆ ಮತ್ತೊಂದು ಶಾಕ್‌.. ನೀನಾಸಂ ಸತೀಶ್ ಚಿತ್ರದ ನಿರ್ದೇಶಕ ಆತ್ಮಹತ್ಯೆ; ಕಾರಣವೇನು?

Share :

Published July 20, 2024 at 4:33pm

    ನೀನಾಸಂ ಸತೀಶ್ ಅಭಿನಯದ ಅಶೋಕ ಬ್ಲೇಡ್‌ ನಿರ್ದೇಶಕ

    ನಾಗರಭಾವಿಯ ತಮ್ಮ ನಿವಾಸದಲ್ಲೇ ಸಾವಿಗೆ ಶರಣಾದ ವಿನೋದ್

    ಅಶೋಕ್ ಬ್ಲೇಡ್ ಸಿನಿಮಾ ಕೊನೆಯ ಹಂತದ ಚಿತ್ರೀಕರಣದಲ್ಲಿತ್ತು

ಸ್ಯಾಂಡಲ್‌ವುಡ್‌ಗೆ ಇಂದು ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ನಟ ನೀನಾಸಂ ಸತೀಶ್ ಅಭಿನಯದ ಅಶೋಕ ಬ್ಲೇಡ್‌ ಸಿನಿಮಾ ನಿರ್ದೇಶಕ ವಿನೋದ್ ದೋಂಡಳೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಿರ್ದೇಶಕ ವಿ‌ನೋದ್ ದೋಂಡಳೆ ಅವರು ಇಂದು ನಾಗರಭಾವಿಯ ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾರೆ. ಸದ್ಯ ನಿರ್ದೇಶಕರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: BREAKING: ಕರಿಮಣಿ ಸೀರಿಯಲ್‌ ನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಶರಣು 

ವಿನೋದ್ ದೋಂಡಳೆ ಅವರು ನೀನಾಸಂ ಸತೀಶ್ ನಟನೆಯ ಅಶೋಕ್ ಬ್ಲೇಡ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ನಿನ್ನೆಯಷ್ಟೇ ನಟ ನೀನಾಸಂ ಸತೀಶ್ ಹಾಗೂ ನಿರ್ಮಾಪಕರ ಜೊತೆ ನಿರ್ದೇಶಕ ವಿನೋದ್ ದೋಂಡಳೆ ಅವರು ಸಿನಿಮಾದ ಶೂಟಿಂಗ್ ಬಗ್ಗೆ ಚರ್ಚಿಸಿದ್ದರು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌.. ಮಗ ತಾಯಿಯ ಮುಖ ನೋಡುವ ಮುನ್ನವೇ ಅಂತ್ಯಕ್ರಿಯೆ 

ವಿನೋದ್ ಸಾವಿಗೆ ಕಾರಣವೇನು?
ನಿರ್ದೇಶಕ ವಿನೋದ್ ದೋಂಡಳೆ ಅವರು ಅಶೋಕ ಬ್ಲೇಡ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ನಂತರ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಈ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ವಿನೋದ್ ದೋಂಡಳೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಯಾಂಡಲ್‌ವುಡ್‌ಗೆ ಮತ್ತೊಂದು ಶಾಕ್‌.. ನೀನಾಸಂ ಸತೀಶ್ ಚಿತ್ರದ ನಿರ್ದೇಶಕ ಆತ್ಮಹತ್ಯೆ; ಕಾರಣವೇನು?

https://newsfirstlive.com/wp-content/uploads/2024/07/SATHISH_NINASAM.jpg

    ನೀನಾಸಂ ಸತೀಶ್ ಅಭಿನಯದ ಅಶೋಕ ಬ್ಲೇಡ್‌ ನಿರ್ದೇಶಕ

    ನಾಗರಭಾವಿಯ ತಮ್ಮ ನಿವಾಸದಲ್ಲೇ ಸಾವಿಗೆ ಶರಣಾದ ವಿನೋದ್

    ಅಶೋಕ್ ಬ್ಲೇಡ್ ಸಿನಿಮಾ ಕೊನೆಯ ಹಂತದ ಚಿತ್ರೀಕರಣದಲ್ಲಿತ್ತು

ಸ್ಯಾಂಡಲ್‌ವುಡ್‌ಗೆ ಇಂದು ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ನಟ ನೀನಾಸಂ ಸತೀಶ್ ಅಭಿನಯದ ಅಶೋಕ ಬ್ಲೇಡ್‌ ಸಿನಿಮಾ ನಿರ್ದೇಶಕ ವಿನೋದ್ ದೋಂಡಳೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಿರ್ದೇಶಕ ವಿ‌ನೋದ್ ದೋಂಡಳೆ ಅವರು ಇಂದು ನಾಗರಭಾವಿಯ ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾರೆ. ಸದ್ಯ ನಿರ್ದೇಶಕರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: BREAKING: ಕರಿಮಣಿ ಸೀರಿಯಲ್‌ ನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಶರಣು 

ವಿನೋದ್ ದೋಂಡಳೆ ಅವರು ನೀನಾಸಂ ಸತೀಶ್ ನಟನೆಯ ಅಶೋಕ್ ಬ್ಲೇಡ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ನಿನ್ನೆಯಷ್ಟೇ ನಟ ನೀನಾಸಂ ಸತೀಶ್ ಹಾಗೂ ನಿರ್ಮಾಪಕರ ಜೊತೆ ನಿರ್ದೇಶಕ ವಿನೋದ್ ದೋಂಡಳೆ ಅವರು ಸಿನಿಮಾದ ಶೂಟಿಂಗ್ ಬಗ್ಗೆ ಚರ್ಚಿಸಿದ್ದರು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌.. ಮಗ ತಾಯಿಯ ಮುಖ ನೋಡುವ ಮುನ್ನವೇ ಅಂತ್ಯಕ್ರಿಯೆ 

ವಿನೋದ್ ಸಾವಿಗೆ ಕಾರಣವೇನು?
ನಿರ್ದೇಶಕ ವಿನೋದ್ ದೋಂಡಳೆ ಅವರು ಅಶೋಕ ಬ್ಲೇಡ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ನಂತರ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಈ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ವಿನೋದ್ ದೋಂಡಳೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More