ಟೀಮ್ ಇಂಡಿಯಾದಿಂದ ಕೈ ಬಿಟ್ಟ ಬೆನ್ನಲ್ಲೇ ಮತ್ತೊಂದು ಶಾಕ್!
ಐಸಿಸಿ ಮಹತ್ವದ ಟೂರ್ನಿಯಿಂದಲೂ ಅಯ್ಯರ್, ಇಶಾನ್ ಔಟ್
ಶ್ರೇಯಸ್, ಇಶಾನ್ ಕಿಶನ್ಗೆ ಮತ್ತೊಂದು ಶಾಕ್ ಕೊಟ್ಟ ಬಿಸಿಸಿಐ
ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ಗೆ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೊಕ್ ನೀಡಿ ಬಿಸಿಸಿಐ ಬಿಗ್ ಶಾಕ್ ಕೊಟ್ಟಿದೆ. ಈ ಬೆನ್ನಲ್ಲೇ ಎಚ್ಚೆತ್ತ ಅಯ್ಯರ್ ಮಾತ್ರ ಮಾರ್ಚ್ 2ನೇ ತಾರೀಕಿನಿಂದ ತಮಿಳುನಾಡು ವಿರುದ್ಧ ನಡೆಯೋ ರಣಜಿ ಸೆಮಿ ಫೈನಲ್ನಲ್ಲಿ ಮುಂಬೈ ತಂಡದ ಪರ ಆಡಲು ಮುಂದಾಗಿದ್ದಾರೆ. ಇನ್ನೊಂದೆಡೆ ಇಶಾನ್ ಕಿಶನ್ ಐಪಿಎಲ್ ತಯಾರಿಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಇಬ್ಬರ ಬಗ್ಗೆ ಮಹತ್ವದ ಸುದ್ದಿ ಹೊರಬಿದ್ದಿದೆ.
2024 ಟಿ20 ವಿಶ್ವಕಪ್ ತಂಡದಿಂದಲೂ ಇಬ್ಬರಿಗೆ ಕೊಕ್..?
ಹೌದು, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಕುರಿತು ದೊಡ್ಡ ಸುದ್ದಿ ಹೊರಬಿದ್ದಿದೆ. ಐಪಿಎಲ್ ಬಳಿಕ ನಡೆಯೋ 2024ರ ಟಿ20 ವಿಶ್ವಕಪ್ನಲ್ಲೂ ಇಶಾನ್ ಮತ್ತು ಅಯ್ಯರ್ ಭಾಗವಹಿಸುವುದು ಬಹುತೇಕ ಡೌಟ್. ಇಬ್ಬರನ್ನು ಐಸಿಸಿ ಮಹತ್ವದ ಟೂರ್ನಿಯಿಂದಲೇ ಕೈ ಬಿಡೋ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಬಿಸಿಸಿಐ ಮಾತಿಗೆ ಕ್ಯಾರೇ ಎನ್ನದ ಸ್ಟಾರ್ ಆಟಗಾರರು!
ಬಿಸಿಸಿಐ ತಮ್ಮ ಒಪ್ಪಂದದ ಆಟಗಾರರು ರಣಜಿ ಟ್ರೋಫಿ ಆಡಬೇಕೆಂದು ಖಡಕ್ ಆಗಿ ಹೇಳಿತ್ತು. ಈ ಬಗ್ಗೆ ಪ್ರತಿ ಆಟಗಾರರಿಗೆ ಪತ್ರ ಬರೆದು ಬಿಸಿಸಿಐ ಜನರಲ್ ಸೆಕ್ರೆಟರಿ ಜಯ್ ಶಾ ಅವರೇ ಸೂಚನೆ ನೀಡಿದ್ದರು. ಭಾರತ ತಂಡದಿಂದ ಹೊರಗುಳಿದ ಎಲ್ಲರೂ ರಣಜಿ ಆಡಲೇಬೇಕು ಎಂದು ವಾರ್ನಿಂಗ್ ಕೊಟ್ಟಿದ್ದರು. ಅಷ್ಟೇ ಅಲ್ಲ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೂಡ ಅದೇ ಸಲಹೆ ನೀಡಿದ್ದರು. ಆದರೆ, ಇಶಾನ್ ಕಿಶನ್ ಮತ್ತು ಶ್ರೇಯಸ್ ಇದಕ್ಕೆ ಗಮನ ಕೊಡದೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಹೀಗಾಗಿ ಇವರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಟೀಮ್ ಇಂಡಿಯಾದಿಂದ ಕೈ ಬಿಟ್ಟ ಬೆನ್ನಲ್ಲೇ ಮತ್ತೊಂದು ಶಾಕ್!
ಐಸಿಸಿ ಮಹತ್ವದ ಟೂರ್ನಿಯಿಂದಲೂ ಅಯ್ಯರ್, ಇಶಾನ್ ಔಟ್
ಶ್ರೇಯಸ್, ಇಶಾನ್ ಕಿಶನ್ಗೆ ಮತ್ತೊಂದು ಶಾಕ್ ಕೊಟ್ಟ ಬಿಸಿಸಿಐ
ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ಗೆ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೊಕ್ ನೀಡಿ ಬಿಸಿಸಿಐ ಬಿಗ್ ಶಾಕ್ ಕೊಟ್ಟಿದೆ. ಈ ಬೆನ್ನಲ್ಲೇ ಎಚ್ಚೆತ್ತ ಅಯ್ಯರ್ ಮಾತ್ರ ಮಾರ್ಚ್ 2ನೇ ತಾರೀಕಿನಿಂದ ತಮಿಳುನಾಡು ವಿರುದ್ಧ ನಡೆಯೋ ರಣಜಿ ಸೆಮಿ ಫೈನಲ್ನಲ್ಲಿ ಮುಂಬೈ ತಂಡದ ಪರ ಆಡಲು ಮುಂದಾಗಿದ್ದಾರೆ. ಇನ್ನೊಂದೆಡೆ ಇಶಾನ್ ಕಿಶನ್ ಐಪಿಎಲ್ ತಯಾರಿಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಇಬ್ಬರ ಬಗ್ಗೆ ಮಹತ್ವದ ಸುದ್ದಿ ಹೊರಬಿದ್ದಿದೆ.
2024 ಟಿ20 ವಿಶ್ವಕಪ್ ತಂಡದಿಂದಲೂ ಇಬ್ಬರಿಗೆ ಕೊಕ್..?
ಹೌದು, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಕುರಿತು ದೊಡ್ಡ ಸುದ್ದಿ ಹೊರಬಿದ್ದಿದೆ. ಐಪಿಎಲ್ ಬಳಿಕ ನಡೆಯೋ 2024ರ ಟಿ20 ವಿಶ್ವಕಪ್ನಲ್ಲೂ ಇಶಾನ್ ಮತ್ತು ಅಯ್ಯರ್ ಭಾಗವಹಿಸುವುದು ಬಹುತೇಕ ಡೌಟ್. ಇಬ್ಬರನ್ನು ಐಸಿಸಿ ಮಹತ್ವದ ಟೂರ್ನಿಯಿಂದಲೇ ಕೈ ಬಿಡೋ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಬಿಸಿಸಿಐ ಮಾತಿಗೆ ಕ್ಯಾರೇ ಎನ್ನದ ಸ್ಟಾರ್ ಆಟಗಾರರು!
ಬಿಸಿಸಿಐ ತಮ್ಮ ಒಪ್ಪಂದದ ಆಟಗಾರರು ರಣಜಿ ಟ್ರೋಫಿ ಆಡಬೇಕೆಂದು ಖಡಕ್ ಆಗಿ ಹೇಳಿತ್ತು. ಈ ಬಗ್ಗೆ ಪ್ರತಿ ಆಟಗಾರರಿಗೆ ಪತ್ರ ಬರೆದು ಬಿಸಿಸಿಐ ಜನರಲ್ ಸೆಕ್ರೆಟರಿ ಜಯ್ ಶಾ ಅವರೇ ಸೂಚನೆ ನೀಡಿದ್ದರು. ಭಾರತ ತಂಡದಿಂದ ಹೊರಗುಳಿದ ಎಲ್ಲರೂ ರಣಜಿ ಆಡಲೇಬೇಕು ಎಂದು ವಾರ್ನಿಂಗ್ ಕೊಟ್ಟಿದ್ದರು. ಅಷ್ಟೇ ಅಲ್ಲ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೂಡ ಅದೇ ಸಲಹೆ ನೀಡಿದ್ದರು. ಆದರೆ, ಇಶಾನ್ ಕಿಶನ್ ಮತ್ತು ಶ್ರೇಯಸ್ ಇದಕ್ಕೆ ಗಮನ ಕೊಡದೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಹೀಗಾಗಿ ಇವರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ