newsfirstkannada.com

ಶ್ರೇಯಸ್​​​​, ಇಶಾನ್​ ಕ್ರಿಕೆಟ್​ ಕರಿಯರ್​ ಮುಗೀತಾ..? ಇಬ್ಬರಿಗೂ ಮತ್ತೆ ಬಿಗ್​​​​ ಶಾಕ್​ ಕೊಟ್ಟ ಬಿಸಿಸಿಐ!

Share :

Published February 29, 2024 at 4:14pm

    ಟೀಮ್​ ಇಂಡಿಯಾದಿಂದ ಕೈ ಬಿಟ್ಟ ಬೆನ್ನಲ್ಲೇ ಮತ್ತೊಂದು ಶಾಕ್​​​!

    ಐಸಿಸಿ ಮಹತ್ವದ ಟೂರ್ನಿಯಿಂದಲೂ ಅಯ್ಯರ್​, ಇಶಾನ್​ ಔಟ್​​

    ಶ್ರೇಯಸ್​​​, ಇಶಾನ್​ ಕಿಶನ್​ಗೆ ಮತ್ತೊಂದು ಶಾಕ್​ ಕೊಟ್ಟ ಬಿಸಿಸಿಐ

ಟೀಮ್​ ಇಂಡಿಯಾದ ಸ್ಟಾರ್​ ಆಟಗಾರರಾದ ಇಶಾನ್​​ ಕಿಶನ್​ ಮತ್ತು ಶ್ರೇಯಸ್​ ಅಯ್ಯರ್​ಗೆ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೊಕ್​ ನೀಡಿ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ. ಈ ಬೆನ್ನಲ್ಲೇ ಎಚ್ಚೆತ್ತ ಅಯ್ಯರ್​ ಮಾತ್ರ ಮಾರ್ಚ್​​ 2ನೇ ತಾರೀಕಿನಿಂದ ತಮಿಳುನಾಡು ವಿರುದ್ಧ ನಡೆಯೋ ರಣಜಿ ಸೆಮಿ ಫೈನಲ್​​ನಲ್ಲಿ ಮುಂಬೈ ತಂಡದ ಪರ ಆಡಲು ಮುಂದಾಗಿದ್ದಾರೆ. ಇನ್ನೊಂದೆಡೆ ಇಶಾನ್​ ಕಿಶನ್​​ ಐಪಿಎಲ್​​ ತಯಾರಿಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಇಬ್ಬರ ಬಗ್ಗೆ ಮಹತ್ವದ ಸುದ್ದಿ ಹೊರಬಿದ್ದಿದೆ.

2024 ಟಿ20 ವಿಶ್ವಕಪ್​ ತಂಡದಿಂದಲೂ ಇಬ್ಬರಿಗೆ ಕೊಕ್​​..?

ಹೌದು, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಕುರಿತು ದೊಡ್ಡ ಸುದ್ದಿ ಹೊರಬಿದ್ದಿದೆ. ಐಪಿಎಲ್​ ಬಳಿಕ ನಡೆಯೋ 2024ರ ಟಿ20 ವಿಶ್ವಕಪ್​ನಲ್ಲೂ ಇಶಾನ್ ಮತ್ತು ಅಯ್ಯರ್ ಭಾಗವಹಿಸುವುದು ಬಹುತೇಕ ಡೌಟ್​​​​. ಇಬ್ಬರನ್ನು ಐಸಿಸಿ ಮಹತ್ವದ ಟೂರ್ನಿಯಿಂದಲೇ ಕೈ ಬಿಡೋ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಬಿಸಿಸಿಐ ಮಾತಿಗೆ ಕ್ಯಾರೇ ಎನ್ನದ ಸ್ಟಾರ್​ ಆಟಗಾರರು!

ಬಿಸಿಸಿಐ ತಮ್ಮ ಒಪ್ಪಂದದ ಆಟಗಾರರು ರಣಜಿ ಟ್ರೋಫಿ ಆಡಬೇಕೆಂದು ಖಡಕ್ ಆಗಿ ಹೇಳಿತ್ತು. ಈ ಬಗ್ಗೆ ಪ್ರತಿ ಆಟಗಾರರಿಗೆ ಪತ್ರ ಬರೆದು ಬಿಸಿಸಿಐ ಜನರಲ್​ ಸೆಕ್ರೆಟರಿ ಜಯ್​ ಶಾ ಅವರೇ ಸೂಚನೆ ನೀಡಿದ್ದರು. ಭಾರತ ತಂಡದಿಂದ ಹೊರಗುಳಿದ ಎಲ್ಲರೂ ರಣಜಿ ಆಡಲೇಬೇಕು ಎಂದು ವಾರ್ನಿಂಗ್​ ಕೊಟ್ಟಿದ್ದರು. ಅಷ್ಟೇ ಅಲ್ಲ, ಹೆಡ್​​ ಕೋಚ್​​ ರಾಹುಲ್​ ದ್ರಾವಿಡ್​ ಕೂಡ ಅದೇ ಸಲಹೆ ನೀಡಿದ್ದರು. ಆದರೆ, ಇಶಾನ್ ಕಿಶನ್ ಮತ್ತು ಶ್ರೇಯಸ್ ಇದಕ್ಕೆ ಗಮನ ಕೊಡದೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಹೀಗಾಗಿ ಇವರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೇಯಸ್​​​​, ಇಶಾನ್​ ಕ್ರಿಕೆಟ್​ ಕರಿಯರ್​ ಮುಗೀತಾ..? ಇಬ್ಬರಿಗೂ ಮತ್ತೆ ಬಿಗ್​​​​ ಶಾಕ್​ ಕೊಟ್ಟ ಬಿಸಿಸಿಐ!

https://newsfirstlive.com/wp-content/uploads/2024/02/Shreyas_Ishan-Kishan.jpg

    ಟೀಮ್​ ಇಂಡಿಯಾದಿಂದ ಕೈ ಬಿಟ್ಟ ಬೆನ್ನಲ್ಲೇ ಮತ್ತೊಂದು ಶಾಕ್​​​!

    ಐಸಿಸಿ ಮಹತ್ವದ ಟೂರ್ನಿಯಿಂದಲೂ ಅಯ್ಯರ್​, ಇಶಾನ್​ ಔಟ್​​

    ಶ್ರೇಯಸ್​​​, ಇಶಾನ್​ ಕಿಶನ್​ಗೆ ಮತ್ತೊಂದು ಶಾಕ್​ ಕೊಟ್ಟ ಬಿಸಿಸಿಐ

ಟೀಮ್​ ಇಂಡಿಯಾದ ಸ್ಟಾರ್​ ಆಟಗಾರರಾದ ಇಶಾನ್​​ ಕಿಶನ್​ ಮತ್ತು ಶ್ರೇಯಸ್​ ಅಯ್ಯರ್​ಗೆ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೊಕ್​ ನೀಡಿ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ. ಈ ಬೆನ್ನಲ್ಲೇ ಎಚ್ಚೆತ್ತ ಅಯ್ಯರ್​ ಮಾತ್ರ ಮಾರ್ಚ್​​ 2ನೇ ತಾರೀಕಿನಿಂದ ತಮಿಳುನಾಡು ವಿರುದ್ಧ ನಡೆಯೋ ರಣಜಿ ಸೆಮಿ ಫೈನಲ್​​ನಲ್ಲಿ ಮುಂಬೈ ತಂಡದ ಪರ ಆಡಲು ಮುಂದಾಗಿದ್ದಾರೆ. ಇನ್ನೊಂದೆಡೆ ಇಶಾನ್​ ಕಿಶನ್​​ ಐಪಿಎಲ್​​ ತಯಾರಿಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಇಬ್ಬರ ಬಗ್ಗೆ ಮಹತ್ವದ ಸುದ್ದಿ ಹೊರಬಿದ್ದಿದೆ.

2024 ಟಿ20 ವಿಶ್ವಕಪ್​ ತಂಡದಿಂದಲೂ ಇಬ್ಬರಿಗೆ ಕೊಕ್​​..?

ಹೌದು, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಕುರಿತು ದೊಡ್ಡ ಸುದ್ದಿ ಹೊರಬಿದ್ದಿದೆ. ಐಪಿಎಲ್​ ಬಳಿಕ ನಡೆಯೋ 2024ರ ಟಿ20 ವಿಶ್ವಕಪ್​ನಲ್ಲೂ ಇಶಾನ್ ಮತ್ತು ಅಯ್ಯರ್ ಭಾಗವಹಿಸುವುದು ಬಹುತೇಕ ಡೌಟ್​​​​. ಇಬ್ಬರನ್ನು ಐಸಿಸಿ ಮಹತ್ವದ ಟೂರ್ನಿಯಿಂದಲೇ ಕೈ ಬಿಡೋ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಬಿಸಿಸಿಐ ಮಾತಿಗೆ ಕ್ಯಾರೇ ಎನ್ನದ ಸ್ಟಾರ್​ ಆಟಗಾರರು!

ಬಿಸಿಸಿಐ ತಮ್ಮ ಒಪ್ಪಂದದ ಆಟಗಾರರು ರಣಜಿ ಟ್ರೋಫಿ ಆಡಬೇಕೆಂದು ಖಡಕ್ ಆಗಿ ಹೇಳಿತ್ತು. ಈ ಬಗ್ಗೆ ಪ್ರತಿ ಆಟಗಾರರಿಗೆ ಪತ್ರ ಬರೆದು ಬಿಸಿಸಿಐ ಜನರಲ್​ ಸೆಕ್ರೆಟರಿ ಜಯ್​ ಶಾ ಅವರೇ ಸೂಚನೆ ನೀಡಿದ್ದರು. ಭಾರತ ತಂಡದಿಂದ ಹೊರಗುಳಿದ ಎಲ್ಲರೂ ರಣಜಿ ಆಡಲೇಬೇಕು ಎಂದು ವಾರ್ನಿಂಗ್​ ಕೊಟ್ಟಿದ್ದರು. ಅಷ್ಟೇ ಅಲ್ಲ, ಹೆಡ್​​ ಕೋಚ್​​ ರಾಹುಲ್​ ದ್ರಾವಿಡ್​ ಕೂಡ ಅದೇ ಸಲಹೆ ನೀಡಿದ್ದರು. ಆದರೆ, ಇಶಾನ್ ಕಿಶನ್ ಮತ್ತು ಶ್ರೇಯಸ್ ಇದಕ್ಕೆ ಗಮನ ಕೊಡದೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಹೀಗಾಗಿ ಇವರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More