ಸರ್ಕಾರದ ಹಣ ನಿಮಗೆ ಸಂದಾಯವಾಗುವ ಯೋಗವಿದೆ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!

author-image
admin
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಬೇರೆಯವರ ಹಿತಕ್ಕೆ ಸಮಾಜದ ಅಭಿವೃದ್ದಿಗೆ ಅನುಗುಣವಾಗಿ ನಡೆದುಕೊಳ್ಳಬೇಕು
  • ಸ್ನೇಹಿತರು ಮತ್ತು ಸಂಬಂಧಿಕರು ನಿಮ್ಮನ್ನು ಅಭಿನಂದಿಸುವ ದಿನ
  • ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆ ಕಾಡಬಹುದು ಜಾಗ್ರತೆವಹಿಸಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ

ಮೇಷ ರಾಶಿ

publive-image

  • ಕಾನೂನಿನ ವಿಷಯದಲ್ಲಿ ಜಯ ಸಿಗುವ ಸೂಚನೆಯಿದೆ
  • ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆ ಅನುಭವಿಸುತ್ತೀರಿ
  • ನಿಮ್ಮನ್ನು ನೀವು ಸಂಪೂರ್ಣವಾಗಿ ಕೆಲಸಕ್ಕೆ ತೊಡಗಿಸಿಕೊಳ್ಳುತ್ತೀರಿ
  • ಯಾರಿಗೆ ಬುದ್ಧಿವಂತಿಕೆ ಚೆನ್ನಾಗಿದ್ಯೊ ಅಂತವರು ನಿಮ್ಮ ಕೆಲಸ ಮಾಡಿ ಜಯಿಸಬಹುದು
  • ರಾಜಕೀಯ ವಿಚಾರದಲ್ಲಿ ಆಸಕ್ತಿಯಿರುವವರಿಗೆ ಸಂತೋಷದ ಸುದ್ದಿ ಸಿಗಬಹುದು
  • ಚಿಕ್ಕ ಮಕ್ಕಳಿಗೆ ಕಣ್ಣಿನ ತೊಂದರೆಯಾಗಬಹುದು ಎಚ್ಚರಿಕೆ ವಹಿಸಿ
  • ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ನೌಕರಿಯಲ್ಲಿ ಅಥವಾ ವೃತ್ತಿಯಲ್ಲಿ ಎಲ್ಲರಿಂದಲೂ ಸಹಕಾರ ಅಥವಾ ಬೆಂಬಲ ಸಿಗಲಿದೆ
  • ಹಣದ ಲಾಭ ಮತ್ತು ಗೌರವ ಎರಡೂ ನಿಮಗೆ ಏಕಕಾಲದಲ್ಲಿ ಸಿಗಲಿದೆ
  • ಭಾವನಾತ್ಮಕವಾದಂತಹ ಬಲಶಾಲಿಗಳು ಮತ್ತು ನಿಮ್ಮ ಮನೆಯಲ್ಲಿರುವ ಕೆಲವರು ಇದನ್ನು ಒಪ್ಪುವುದಿಲ್ಲ
  • ಸ್ನೇಹಿತರು ಮತ್ತು ಸಂಬಂಧಿಕರು ನಿಮ್ಮನ್ನು ಅಭಿನಂದಿಸುವ ದಿನ
  • ಆಲಸ್ಯ ಬೇಡ, ಇದರಿಂದ ಹಿನ್ನಡೆಯಾಗುವ ಸಾಧ್ಯತೆಯಿದೆ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ವಲ್ಪ ಅನುಕೂಲವಾಗುವ ದಿನ
  • ಲಕ್ಷ್ಮೀನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಧಾರ್ಮಿಕ ಕಾರ್ಮಾಚರಣೆಗೆ ಮನಸ್ಸು ಮಾಡುತ್ತೀರಿ
  • ಹಲವು ದಿನಗಳಿಂದ ಇತ್ಯರ್ಥ ಆಗದೆ ಇರುವ ವಿವಾದಗಳು ಈ ದಿನ ಇತ್ಯರ್ಥವಾಗಿ ಶುಭಫಲ ಕೊಡುತ್ತದೆ
  • ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನವಾಗುವ ವಾತಾವರಣ
  • ಇಂದು ಸ್ವಾಭಾವಿಕವಾಗಿರಿ ಶುಭವಿದೆ
  • ಸಾಯಂಕಾಲದ ಹೊತ್ತಿಗೆ ಅಶುಭ ಸೂಚನೆಯಿದೆ ಗಮನಿಸಿ
  • ಮಾನಸಿಕವಾಗಿ ಧೈರ್ಯ ತಂದುಕೊಳ್ಳಿ
  • ದೂರದ ಬಂಧುಗಳು ಕಿರಿಕಿರಿ ಮಾಡಬಹುದು
  • ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಬಿಡುವಿಲ್ಲದ ಕೆಲಸ ಆದರೆ ಪ್ರಯೋಜನ ಮಾತ್ರ ಇಲ್ಲ
  • ಕೆಲಸದಲ್ಲಿ ಮತ್ತು ವಿದ್ಯಾಭ್ಯಾಸದ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳುವ ದಿನ
  • ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ತೊಂದರೆಯಿದೆ ಜಾಗ್ರತೆ
  • ವಾಹನ ಖರೀದಿಗೆ ಈ ದಿನ ಚೆನ್ನಾಗಿಲ್ಲ
  • ನೀಲಿ ಬಣ್ಣದ ಬಟ್ಟೆ ಧರಿಸಿ
  • ವೃದ್ಧರಿಗೆ, ಕಾಲು ಊನ ಇರುವವರಿಗೆ ಸಹಾಯ ಮಾಡಿ
  • ಶನೇಶ್ವರನನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಆತ್ಮವಿಶ್ವಾಸವೇ ನಿಮ್ಮ ಪ್ರಗತಿಗೆ ದಾರಿ ದೀಪವಾಗಿರುತ್ತದೆ
  • ಅಧಿಕಾರಿ ವರ್ಗದವರಿಗೆ ಯಾವುದೇ ರೀತಿ ಸಹಕಾರ ದೊರೆಯದೆ ತೊಂದರೆಯಾಗುತ್ತದೆ
  • ಸಮೂಹದಿಂದ ಮಾಡುವ ಕೆಲಸಗಳಿಗೆ ಜಯವಿರುತ್ತದೆ
  • ಕುಟುಂಬದಲ್ಲಿ ನಿತ್ಯದ ಸಮಸ್ಯೆಗಳಿಂದ ಬೇಸರವಾಗುತ್ತದೆ
  • ಹೊಸ ವ್ಯವಹಾರಕ್ಕೆ ಶುಭ ದಿನವಲ್ಲ
  • ಕಬ್ಬಿಣ ವ್ಯಾಪಾರಿಗಳಿಗೆ ಲಾಭವಿದೆ ಆದರೆ ಕಬ್ಬಿಣದಿಂದಲೇ ತೊಂದರೆನೂ ಇದೆ ಜಾಗ್ರತೆ
  • ಧನ್ವಂತರಿ ದೇವತೆಯನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಶೀತ ಸಂಬಂಧವಾದ ತೊಂದರೆಯಿಂದ ಅಡಚಣೆಯಾಗುತ್ತದೆ
  • ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತೀರೆಂಬ ಅಪವಾದ ನಿಮ್ಮ ಮೇಲೆ ಬರಲಿದೆ
  • ಯಾವುದೇ ವಿಷಯಕ್ಕೆ ಆಸಕ್ತಿ ಇರುವುದಿಲ್ಲ
  • ನಿಮಗಿದು ಹೊಸತೇನಲ್ಲಾ ಆದರೂ ಕೂಡ
  • ಯಾರಿಗೂ ಆಶ್ವಾಸನೆ ಆಗಲಿ, ಭರವಸೆ ಆಗಲಿ ಕೊಡಬೇಡಿ
  • ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆ ಕಾಡಬಹುದು ಜಾಗ್ರತೆವಹಿಸಿ
  • ಮನೆಯಲ್ಲಿ ಅತಿಥಿಗಳಿಗೆ ಕಾಯ್ದು ಕಾಯ್ದು ಬೇಸರವಾಗಬಹುದು
  • ಕುಲದೇವತೆಯನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಇಂದು ತುಂಬಾ ಉನ್ನತವಾದ, ಉಪಯುಕ್ತವಾದ ದಿನ
  • ಸ್ವಾತಿ ನಕ್ಷತ್ರ, ಶನಿವಾರ ಹುಟ್ಟಿದವರಿಗೆ ತೊಂದರೆಯಿದೆ ಜಾಗ್ರತೆ
  • ಸರ್ಕಾರಿ ಉದ್ಯೋಗದಲ್ಲಿ ಲಾಭವಾಗುವ ದಿನ
  • ಹೊಸ ವಸ್ತು,ವಸ್ತ್ರವನ್ನು ಖರೀದಿಯನ್ನು ಮಾಡುತ್ತೀರಿ ಆದರೆ ಮಂಗಳ ಕಾರ್ಯಕ್ಕೆ ಖರೀದಿಸೋದು ಬೇಡ
  • ಬೇರೆಯವರಿಗೆ ಹಿಂಸೆ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಡಿ
  • ಸ್ತ್ರೀ ಶಾಪ ನಿಮ್ಮನ್ನು ಕಾಡಬಹುದು
  • ಸಂತಾನಾಪೇಕ್ಷಿಗಳಿಗೆ ಅಶುಭವಾದ ದಿನ
  • ಸಂತಾನ ಗೋಪಾಲಕೃಷ್ಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಸಂಘ, ಸಂಸ್ಥೆಗಳು, ರಾಜಕೀಯ ವಿಚಾರವಾಗಿ ಏನೇನೊ ಹೇಳಿಕೆ ನೀಡಿ ಸಂಕಷ್ಟಕ್ಕೆ ಒಳಗಾಗುತ್ತೀರಿ ಎಚ್ಚರವಿರಲಿ
  • ನಿಮಗೆ ಸಂಬಂಧ ಇಲ್ಲದ ಕೆಲಸಗಳಲ್ಲಿ ಭಾಗಿಗಳಾಗಿ ಅವಮಾನ ಎದುರಿಸುತ್ತೀರಿ
  • ಹಿರಿಯರ ಸಲಹೆ ನಿಮಗೆ ಪ್ರಯೋಜನಕಾರಿ ಆದರೆ ನೀವು ಸ್ವೀಕರಿಸುವುದಿಲ್ಲ
  • ತುಂಬಾ ಶ್ರಮದಾಯಕವಾದ ದಿನ
  • ಆಹಾರ ಮಿತವಾಗಿರಲಿ ಇಲ್ಲದಿದ್ದರೆ ಸ್ವಲ್ಪ ಕಷ್ಟವಿದೆ
  • ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ಸ್ವಲ್ಪ ನಷ್ಟವಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ಉದ್ಯೋಗದ ಬದಲಾವಣೆಯ ಸೂಚನೆ ಇದೆ
  • ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯಾಗಬಹುದು ಆದರೆ ಇದು ಪ್ರಯೋಜನವಾಗುವುದಿಲ್ಲ
  • ಮನಸ್ಸಿನಲ್ಲಿ ಅತೃಪ್ತಿಯ ಭಾವನೆ ಕಾಡಬಹುದು
  • ಎಲ್ಲಾ ಇದ್ದರೂ ಕೂಡ ನಿಮ್ಮ ಆಲೋಚನೆ ಬೇರೆ ಬೇರೆ ಇರುತ್ತದೆ
  • ನಿಮಗೆ ತೊಂದರೆ ಮಾಡಿದವರಿಗೆ ನೀವು ಸಹಾಯ ಮಾಡಲು ಮುಂದಾಗುತ್ತೀರಿ
  • ಯಾವುದನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಇರುವುದಿಲ್ಲ
  • ಮಾರುತಿಯನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಅನುಚಿತವಾದ ಕೆಲಸವನ್ನು ಪ್ರಾರಂಭಿಸಲು ನಿಮ್ಮ ಮನಸ್ಸು ಮುಂದಾಗುತ್ತದೆ
  • ರಾಜಕೀಯ ಭಯ, ರಾಜಕಾರಣಿಗಳ ಭಯ ನಿಮ್ಮನ್ನು ಕಾಡಬಹುದು ಜಾಗೂರಕರಾಗಿರಿ
  • ಹಣ ಮುಖ್ಯ ಎಂಬ ತೀರ್ಮಾನಕ್ಕೆ ಬಂದು ಬೇರೆ ಯಾವುದನ್ನೂ ಗಮನಿಸುವುದಿಲ್ಲ
  • ನೀವು ಗೌರವಯುತವಾಗಿ ಕೊಟ್ಟಿದ್ದ ಹಣ ನಿಮಗೆ ಹಿಂದಿರುಗಿ ಬರುವ ಸಾಧ್ಯತೆ ಇದೆ
  • ಆದರೆ ಅನುಮಾನ ಬೇಡ , ಅವಮಾನ ಆಗುವ ಸಾಧ್ಯತೆ ಇದೆ
  • ಸ್ವಂತಿಕೆಯಿಂದ ಇರಬೇಕು, ಪೂರ್ಣವಾಗಿ ಬೇರೆಯವರನ್ನು ಅವಲಂಬಿಸಬೇಡಿ
  • ಭಗವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ಹಿಂದೆ ನೀವು ಸಂಪಾದನೆ ಮಾಡಿರುವ ಆಸ್ತಿ, ಪಿತ್ರಾರ್ಜಿತ ಆಸ್ತಿ ಎಲ್ಲವೂ ನಿಮ್ಮ ಮುಂದೆ ಬರುತ್ತದೆ
    ಆದರೆ ಅದನ್ನ ಅನುಭವಿಸುವ ಯೋಗ ನಿಮಗಿರುವುದಿಲ್ಲ
  • ಮನಸ್ಸಿನಲ್ಲಿ ಒಂದು ರೀತಿಯ ಭಯ ಕಾಡುಬಹುದು
  • ನೀವು ಯಾವುದೇ ತಪ್ಪು ಮಾಡದಿದ್ದರೂ ಒಂಟಿತನ, ಭವಿಷ್ಯದ ಭಯ ನಿಮ್ಮನ್ನು ಕಾಡಬಹುದು
  • ನಿಮ್ಮ ಕೆಲವು ದಿಟ್ಟ ನಿರ್ಧಾರಗಳು, ರಾಜಕೀಯ ಹೇಳಿಕೆಗಳು ನಿಮಗೆ ಹಿನ್ನಡೆ ಉಂಟು ಮಾಡುತ್ತದೆ
  • ಅತಿಯಾದ ಕೋಪ ಸಹೋದರರೊಂದಿಗೆ ಕಲಹವಾಗಬಹುದು
  • ತುಂಬಾ ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದರೆ ಸ್ವಲ್ಪ ಎಚ್ಚರಿಕೆವಹಿಸಿ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮೀನ 

publive-image

  • ನಿಮ್ಮ ಬುದ್ಧಿವಂತಿಕೆಯಿಂದಲೇ ಹಿನ್ನಡೆಯಾಗುವ ದಿನ
  • ವಿಷಯ ಅರ್ಥವಾಗದಿದ್ದವರ ಮುಂದೆ ತತ್ವ ಬೋಧನೆ ವ್ಯರ್ಥವಾಗುತ್ತದೆ
  • ಬೇರೆಯವರ ಹಿತಕ್ಕೆ ಸಮಾಜದ ಅಭಿವೃದ್ದಿಗೆ ಅನುಗುಣವಾಗಿ ನಡೆದುಕೊಳ್ಳಬೇಕು
  • ಸಂಬಂಧ ಪಡದವರ ವಿಷಯಕ್ಕೆ, ಸಂಬಂಧ ಪಡದ ವಿಚಾರಕ್ಕೆ ಹೋಗಲೇ ಬಾರದು
  • ಸರ್ಕಾರದ ಹಣ ನಿಮಗೆ ಸಂದಾಯವಾಗುವ ಯೋಗವಿದೆ
  • ಸಾಯಂಕಾಲದ ಹೊತ್ತಿಗೆ ಯಾವುದೋ ಆತಂಕ, ಒಂಟಿಯಾಗಿ ಎದುರಿಸಬೇಕಾಗುತ್ತದೆ
  • ಮೂಲ ದೇವರನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ                    

Advertisment