/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ
ಮೇಷ ರಾಶಿ
- ಕಾನೂನಿನ ವಿಷಯದಲ್ಲಿ ಜಯ ಸಿಗುವ ಸೂಚನೆಯಿದೆ
- ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆ ಅನುಭವಿಸುತ್ತೀರಿ
- ನಿಮ್ಮನ್ನು ನೀವು ಸಂಪೂರ್ಣವಾಗಿ ಕೆಲಸಕ್ಕೆ ತೊಡಗಿಸಿಕೊಳ್ಳುತ್ತೀರಿ
- ಯಾರಿಗೆ ಬುದ್ಧಿವಂತಿಕೆ ಚೆನ್ನಾಗಿದ್ಯೊ ಅಂತವರು ನಿಮ್ಮ ಕೆಲಸ ಮಾಡಿ ಜಯಿಸಬಹುದು
- ರಾಜಕೀಯ ವಿಚಾರದಲ್ಲಿ ಆಸಕ್ತಿಯಿರುವವರಿಗೆ ಸಂತೋಷದ ಸುದ್ದಿ ಸಿಗಬಹುದು
- ಚಿಕ್ಕ ಮಕ್ಕಳಿಗೆ ಕಣ್ಣಿನ ತೊಂದರೆಯಾಗಬಹುದು ಎಚ್ಚರಿಕೆ ವಹಿಸಿ
- ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ
ವೃಷಭ
- ನೌಕರಿಯಲ್ಲಿ ಅಥವಾ ವೃತ್ತಿಯಲ್ಲಿ ಎಲ್ಲರಿಂದಲೂ ಸಹಕಾರ ಅಥವಾ ಬೆಂಬಲ ಸಿಗಲಿದೆ
- ಹಣದ ಲಾಭ ಮತ್ತು ಗೌರವ ಎರಡೂ ನಿಮಗೆ ಏಕಕಾಲದಲ್ಲಿ ಸಿಗಲಿದೆ
- ಭಾವನಾತ್ಮಕವಾದಂತಹ ಬಲಶಾಲಿಗಳು ಮತ್ತು ನಿಮ್ಮ ಮನೆಯಲ್ಲಿರುವ ಕೆಲವರು ಇದನ್ನು ಒಪ್ಪುವುದಿಲ್ಲ
- ಸ್ನೇಹಿತರು ಮತ್ತು ಸಂಬಂಧಿಕರು ನಿಮ್ಮನ್ನು ಅಭಿನಂದಿಸುವ ದಿನ
- ಆಲಸ್ಯ ಬೇಡ, ಇದರಿಂದ ಹಿನ್ನಡೆಯಾಗುವ ಸಾಧ್ಯತೆಯಿದೆ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ವಲ್ಪ ಅನುಕೂಲವಾಗುವ ದಿನ
- ಲಕ್ಷ್ಮೀನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಧಾರ್ಮಿಕ ಕಾರ್ಮಾಚರಣೆಗೆ ಮನಸ್ಸು ಮಾಡುತ್ತೀರಿ
- ಹಲವು ದಿನಗಳಿಂದ ಇತ್ಯರ್ಥ ಆಗದೆ ಇರುವ ವಿವಾದಗಳು ಈ ದಿನ ಇತ್ಯರ್ಥವಾಗಿ ಶುಭಫಲ ಕೊಡುತ್ತದೆ
- ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನವಾಗುವ ವಾತಾವರಣ
- ಇಂದು ಸ್ವಾಭಾವಿಕವಾಗಿರಿ ಶುಭವಿದೆ
- ಸಾಯಂಕಾಲದ ಹೊತ್ತಿಗೆ ಅಶುಭ ಸೂಚನೆಯಿದೆ ಗಮನಿಸಿ
- ಮಾನಸಿಕವಾಗಿ ಧೈರ್ಯ ತಂದುಕೊಳ್ಳಿ
- ದೂರದ ಬಂಧುಗಳು ಕಿರಿಕಿರಿ ಮಾಡಬಹುದು
- ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥನೆ ಮಾಡಿ
ಕಟಕ
- ಬಿಡುವಿಲ್ಲದ ಕೆಲಸ ಆದರೆ ಪ್ರಯೋಜನ ಮಾತ್ರ ಇಲ್ಲ
- ಕೆಲಸದಲ್ಲಿ ಮತ್ತು ವಿದ್ಯಾಭ್ಯಾಸದ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳುವ ದಿನ
- ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ತೊಂದರೆಯಿದೆ ಜಾಗ್ರತೆ
- ವಾಹನ ಖರೀದಿಗೆ ಈ ದಿನ ಚೆನ್ನಾಗಿಲ್ಲ
- ನೀಲಿ ಬಣ್ಣದ ಬಟ್ಟೆ ಧರಿಸಿ
- ವೃದ್ಧರಿಗೆ, ಕಾಲು ಊನ ಇರುವವರಿಗೆ ಸಹಾಯ ಮಾಡಿ
- ಶನೇಶ್ವರನನ್ನು ಪ್ರಾರ್ಥನೆ ಮಾಡಿ
ಸಿಂಹ
- ಆತ್ಮವಿಶ್ವಾಸವೇ ನಿಮ್ಮ ಪ್ರಗತಿಗೆ ದಾರಿ ದೀಪವಾಗಿರುತ್ತದೆ
- ಅಧಿಕಾರಿ ವರ್ಗದವರಿಗೆ ಯಾವುದೇ ರೀತಿ ಸಹಕಾರ ದೊರೆಯದೆ ತೊಂದರೆಯಾಗುತ್ತದೆ
- ಸಮೂಹದಿಂದ ಮಾಡುವ ಕೆಲಸಗಳಿಗೆ ಜಯವಿರುತ್ತದೆ
- ಕುಟುಂಬದಲ್ಲಿ ನಿತ್ಯದ ಸಮಸ್ಯೆಗಳಿಂದ ಬೇಸರವಾಗುತ್ತದೆ
- ಹೊಸ ವ್ಯವಹಾರಕ್ಕೆ ಶುಭ ದಿನವಲ್ಲ
- ಕಬ್ಬಿಣ ವ್ಯಾಪಾರಿಗಳಿಗೆ ಲಾಭವಿದೆ ಆದರೆ ಕಬ್ಬಿಣದಿಂದಲೇ ತೊಂದರೆನೂ ಇದೆ ಜಾಗ್ರತೆ
- ಧನ್ವಂತರಿ ದೇವತೆಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಶೀತ ಸಂಬಂಧವಾದ ತೊಂದರೆಯಿಂದ ಅಡಚಣೆಯಾಗುತ್ತದೆ
- ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತೀರೆಂಬ ಅಪವಾದ ನಿಮ್ಮ ಮೇಲೆ ಬರಲಿದೆ
- ಯಾವುದೇ ವಿಷಯಕ್ಕೆ ಆಸಕ್ತಿ ಇರುವುದಿಲ್ಲ
- ನಿಮಗಿದು ಹೊಸತೇನಲ್ಲಾ ಆದರೂ ಕೂಡ
- ಯಾರಿಗೂ ಆಶ್ವಾಸನೆ ಆಗಲಿ, ಭರವಸೆ ಆಗಲಿ ಕೊಡಬೇಡಿ
- ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆ ಕಾಡಬಹುದು ಜಾಗ್ರತೆವಹಿಸಿ
- ಮನೆಯಲ್ಲಿ ಅತಿಥಿಗಳಿಗೆ ಕಾಯ್ದು ಕಾಯ್ದು ಬೇಸರವಾಗಬಹುದು
- ಕುಲದೇವತೆಯನ್ನು ಪ್ರಾರ್ಥನೆ ಮಾಡಿ
ತುಲಾ
- ಇಂದು ತುಂಬಾ ಉನ್ನತವಾದ, ಉಪಯುಕ್ತವಾದ ದಿನ
- ಸ್ವಾತಿ ನಕ್ಷತ್ರ, ಶನಿವಾರ ಹುಟ್ಟಿದವರಿಗೆ ತೊಂದರೆಯಿದೆ ಜಾಗ್ರತೆ
- ಸರ್ಕಾರಿ ಉದ್ಯೋಗದಲ್ಲಿ ಲಾಭವಾಗುವ ದಿನ
- ಹೊಸ ವಸ್ತು,ವಸ್ತ್ರವನ್ನು ಖರೀದಿಯನ್ನು ಮಾಡುತ್ತೀರಿ ಆದರೆ ಮಂಗಳ ಕಾರ್ಯಕ್ಕೆ ಖರೀದಿಸೋದು ಬೇಡ
- ಬೇರೆಯವರಿಗೆ ಹಿಂಸೆ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಡಿ
- ಸ್ತ್ರೀ ಶಾಪ ನಿಮ್ಮನ್ನು ಕಾಡಬಹುದು
- ಸಂತಾನಾಪೇಕ್ಷಿಗಳಿಗೆ ಅಶುಭವಾದ ದಿನ
- ಸಂತಾನ ಗೋಪಾಲಕೃಷ್ಣನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಸಂಘ, ಸಂಸ್ಥೆಗಳು, ರಾಜಕೀಯ ವಿಚಾರವಾಗಿ ಏನೇನೊ ಹೇಳಿಕೆ ನೀಡಿ ಸಂಕಷ್ಟಕ್ಕೆ ಒಳಗಾಗುತ್ತೀರಿ ಎಚ್ಚರವಿರಲಿ
- ನಿಮಗೆ ಸಂಬಂಧ ಇಲ್ಲದ ಕೆಲಸಗಳಲ್ಲಿ ಭಾಗಿಗಳಾಗಿ ಅವಮಾನ ಎದುರಿಸುತ್ತೀರಿ
- ಹಿರಿಯರ ಸಲಹೆ ನಿಮಗೆ ಪ್ರಯೋಜನಕಾರಿ ಆದರೆ ನೀವು ಸ್ವೀಕರಿಸುವುದಿಲ್ಲ
- ತುಂಬಾ ಶ್ರಮದಾಯಕವಾದ ದಿನ
- ಆಹಾರ ಮಿತವಾಗಿರಲಿ ಇಲ್ಲದಿದ್ದರೆ ಸ್ವಲ್ಪ ಕಷ್ಟವಿದೆ
- ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ಸ್ವಲ್ಪ ನಷ್ಟವಾಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಉದ್ಯೋಗದ ಬದಲಾವಣೆಯ ಸೂಚನೆ ಇದೆ
- ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯಾಗಬಹುದು ಆದರೆ ಇದು ಪ್ರಯೋಜನವಾಗುವುದಿಲ್ಲ
- ಮನಸ್ಸಿನಲ್ಲಿ ಅತೃಪ್ತಿಯ ಭಾವನೆ ಕಾಡಬಹುದು
- ಎಲ್ಲಾ ಇದ್ದರೂ ಕೂಡ ನಿಮ್ಮ ಆಲೋಚನೆ ಬೇರೆ ಬೇರೆ ಇರುತ್ತದೆ
- ನಿಮಗೆ ತೊಂದರೆ ಮಾಡಿದವರಿಗೆ ನೀವು ಸಹಾಯ ಮಾಡಲು ಮುಂದಾಗುತ್ತೀರಿ
- ಯಾವುದನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಇರುವುದಿಲ್ಲ
- ಮಾರುತಿಯನ್ನು ಪ್ರಾರ್ಥನೆ ಮಾಡಿ
ಮಕರ
- ಅನುಚಿತವಾದ ಕೆಲಸವನ್ನು ಪ್ರಾರಂಭಿಸಲು ನಿಮ್ಮ ಮನಸ್ಸು ಮುಂದಾಗುತ್ತದೆ
- ರಾಜಕೀಯ ಭಯ, ರಾಜಕಾರಣಿಗಳ ಭಯ ನಿಮ್ಮನ್ನು ಕಾಡಬಹುದು ಜಾಗೂರಕರಾಗಿರಿ
- ಹಣ ಮುಖ್ಯ ಎಂಬ ತೀರ್ಮಾನಕ್ಕೆ ಬಂದು ಬೇರೆ ಯಾವುದನ್ನೂ ಗಮನಿಸುವುದಿಲ್ಲ
- ನೀವು ಗೌರವಯುತವಾಗಿ ಕೊಟ್ಟಿದ್ದ ಹಣ ನಿಮಗೆ ಹಿಂದಿರುಗಿ ಬರುವ ಸಾಧ್ಯತೆ ಇದೆ
- ಆದರೆ ಅನುಮಾನ ಬೇಡ , ಅವಮಾನ ಆಗುವ ಸಾಧ್ಯತೆ ಇದೆ
- ಸ್ವಂತಿಕೆಯಿಂದ ಇರಬೇಕು, ಪೂರ್ಣವಾಗಿ ಬೇರೆಯವರನ್ನು ಅವಲಂಬಿಸಬೇಡಿ
- ಭಗವತಿ ದೇವಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ಹಿಂದೆ ನೀವು ಸಂಪಾದನೆ ಮಾಡಿರುವ ಆಸ್ತಿ, ಪಿತ್ರಾರ್ಜಿತ ಆಸ್ತಿ ಎಲ್ಲವೂ ನಿಮ್ಮ ಮುಂದೆ ಬರುತ್ತದೆ
ಆದರೆ ಅದನ್ನ ಅನುಭವಿಸುವ ಯೋಗ ನಿಮಗಿರುವುದಿಲ್ಲ - ಮನಸ್ಸಿನಲ್ಲಿ ಒಂದು ರೀತಿಯ ಭಯ ಕಾಡುಬಹುದು
- ನೀವು ಯಾವುದೇ ತಪ್ಪು ಮಾಡದಿದ್ದರೂ ಒಂಟಿತನ, ಭವಿಷ್ಯದ ಭಯ ನಿಮ್ಮನ್ನು ಕಾಡಬಹುದು
- ನಿಮ್ಮ ಕೆಲವು ದಿಟ್ಟ ನಿರ್ಧಾರಗಳು, ರಾಜಕೀಯ ಹೇಳಿಕೆಗಳು ನಿಮಗೆ ಹಿನ್ನಡೆ ಉಂಟು ಮಾಡುತ್ತದೆ
- ಅತಿಯಾದ ಕೋಪ ಸಹೋದರರೊಂದಿಗೆ ಕಲಹವಾಗಬಹುದು
- ತುಂಬಾ ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದರೆ ಸ್ವಲ್ಪ ಎಚ್ಚರಿಕೆವಹಿಸಿ
- ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಮೀನ
- ನಿಮ್ಮ ಬುದ್ಧಿವಂತಿಕೆಯಿಂದಲೇ ಹಿನ್ನಡೆಯಾಗುವ ದಿನ
- ವಿಷಯ ಅರ್ಥವಾಗದಿದ್ದವರ ಮುಂದೆ ತತ್ವ ಬೋಧನೆ ವ್ಯರ್ಥವಾಗುತ್ತದೆ
- ಬೇರೆಯವರ ಹಿತಕ್ಕೆ ಸಮಾಜದ ಅಭಿವೃದ್ದಿಗೆ ಅನುಗುಣವಾಗಿ ನಡೆದುಕೊಳ್ಳಬೇಕು
- ಸಂಬಂಧ ಪಡದವರ ವಿಷಯಕ್ಕೆ, ಸಂಬಂಧ ಪಡದ ವಿಚಾರಕ್ಕೆ ಹೋಗಲೇ ಬಾರದು
- ಸರ್ಕಾರದ ಹಣ ನಿಮಗೆ ಸಂದಾಯವಾಗುವ ಯೋಗವಿದೆ
- ಸಾಯಂಕಾಲದ ಹೊತ್ತಿಗೆ ಯಾವುದೋ ಆತಂಕ, ಒಂಟಿಯಾಗಿ ಎದುರಿಸಬೇಕಾಗುತ್ತದೆ
- ಮೂಲ ದೇವರನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ