Advertisment

ಮೆಗಾ ಆಕ್ಷನ್​​ಗೆ ಮುನ್ನವೇ ಬಿಗ್​ ಡೀಲ್​​; ಆರ್​​​ಸಿಬಿ ತಂಡಕ್ಕೆ ಸಚಿನ್​​ ಪುತ್ರನ ಎಂಟ್ರಿ!

author-image
Ganesh Nachikethu
Updated On
ಮೆಗಾ ಆಕ್ಷನ್​​ಗೆ ಮುನ್ನವೇ ಬಿಗ್​ ಡೀಲ್​​; ಆರ್​​​ಸಿಬಿ ತಂಡಕ್ಕೆ ಸಚಿನ್​​ ಪುತ್ರನ ಎಂಟ್ರಿ!
Advertisment
  • 2025ರ ಇಂಡಿಯನ್ ಪ್ರೀಮಿಯರ್ ಲೀಗ್‌ ಮೆಗಾ ಹರಾಜು!
  • 3 ವರ್ಷಗಳ ನಂತರ ನಡೆಯುತ್ತಿರೋ ಐಪಿಎಲ್ ಮೆಗಾ ಆಕ್ಷನ್​​​
  • ಆರ್​​ಸಿಬಿ ತಂಡಕ್ಕೆ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಎಂಟ್ರಿ

2025ರ ಇಂಡಿಯನ್ ಪ್ರೀಮಿಯರ್ ಲೀಗ್‌ ಮೆಗಾ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. 3 ವರ್ಷಗಳ ನಂತರ ಐಪಿಎಲ್ ಮೆಗಾ ಹರಾಜು ನಡೆಯುತ್ತಿದ್ದು, ಇದು ಕ್ರಿಕೆಟ್‌ ಅಭಿಮಾನಿಗಳಿಗೆ ಭಾರೀ ಕುತೂಹಲ ಮೂಡಿಸಿದೆ.
ಮೆಗಾ ಆಕ್ಷನ್​​ನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿ ಮಾಡಿ ಬಲಿಷ್ಠ ತಂಡಗಳನ್ನು ಕಟ್ಟಲು ಎಲ್ಲಾ ಫ್ರಾಂಚೈಸಿಗಳು ಮುಂದಾಗಿವೆ.

Advertisment

ಹರಾಜಿಗೂ ಮುನ್ನವೇ ಟೀಮ್ ಇಂಡಿಯಾದ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಸದ್ಯ ನಡೆಯುತ್ತಿರೋ ಡಾ. ಕೆ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯಲ್ಲಿ ಗೋವಾ ಪರ ಆಡುತ್ತಿರೋ ಅರ್ಜುನ್​​ ಬೆಂಕಿ ಬೌಲಿಂಗ್​ ಮಾಡಿದ್ದಾರೆ.

publive-image

ಬೆಂಕಿ ಬೌಲಿಂಗ್

ಕ್ಯಾಪ್ಟನ್ ಕೆ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿ ಪಂದ್ಯವೊಂದರಲ್ಲಿ ಕರ್ನಾಟಕ ಮತ್ತು ಗೋವಾ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಕರ್ನಾಟಕದ ಗೆಲುವಿನ ಓಟಕ್ಕೆ ಅರ್ಜುನ್ ಕಡಿವಾಣ ಹಾಕಿದರು. ಕರ್ನಾಟಕದ ವಿರುದ್ಧ ಬರೋಬ್ಬರಿ 9 ವಿಕೆಟ್‌ ತೆಗೆದರು. ಅರ್ಜುನ್ ಪ್ರದರ್ಶನದ ನೆರವಿನಿಂದ ಗೋವಾ 189 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ಐಪಿಎಲ್ 2025ರ ಮೇಲೆ ಕಣ್ಣು

2023ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಡೆಬ್ಯೂ ಮಾಡಿದ ಅರ್ಜುನ್​ಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಆದರೆ, ಈ ಬಾರಿ ಪ್ರತಿ ತಂಡ 4 ಆಟಗಾರರನ್ನು ಉಳಿಸಿಕೊಳ್ಳಬೇಕಾದ ಕಾರಣ ಮುಂಬೈ ಇಂಡಿಯನ್ಸ್​ ತಂಡವು ಅರ್ಜುನ್​ ಅವರನ್ನು ಕೈ ಬಿಡಬಹುದು. ಒಂದು ವೇಳೆ ಅರ್ಜುನ್​​ ಹರಾಜಿಗೆ ಬಂದರೆ ಆರ್​​ಸಿಬಿ ಖರೀದಿ ಮಾಡುವುದಂತೂ ಪಕ್ಕಾ. ಇದಕ್ಕೆ ಕಾರಣ ಆರ್​​ಸಿಬಿ ಯುವ ಆಲ್​ರೌಂಡರ್​ಗಾಗಿ ಎದುರು ನೋಡುತ್ತಿದೆ.

Advertisment

ಇದನ್ನೂ ಓದಿ:ನಿವೃತ್ತಿ ಘೋಷಿಸಿದ ಕೆಲವೇ ದಿನಗಳಲ್ಲಿ ಗುಡ್​ನ್ಯೂಸ್​ ಕೊಟ್ಟ ಸ್ಟಾರ್​​ ಪ್ಲೇಯರ್​​.. ಏನದು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment