newsfirstkannada.com

ಅರ್ಜುನ ಸಾವಿನ ಸುತ್ತ ಹಲವು ಅನುಮಾನ; ನಡೆದ ಘಟನೆ ಬಗ್ಗೆ ವಿವರ ನೀಡಿದ ಅರಣ್ಯ ಇಲಾಖೆ

Share :

Published December 5, 2023 at 1:08pm

Update December 5, 2023 at 1:09pm

    ಸಿಬ್ಬಂದಿ ಗಾಳಿಯಲ್ಲಿ ಹಲವಾರು ಬಾರಿ ಗುಂಡು ಹಾರಿಸಿದ್ದಾರೆ

    ಕಾಡಾನೆ ನಮ್ಮ ಆನೆಗಳ ಮೇಲೆ ಏಕಾಏಕಿ ದಾಳಿಗೆ ನಿಂತಿತ್ತು

    ಹೊಟ್ಟೆಯ ಭಾಗಕ್ಕೆ ಗಾಯ, ತೀವ್ರ ರಕ್ತಸ್ರಾವದಿಂದ ಸಾವು

ಕಾರ್ಯಾಚರಣೆಯಲ್ಲಿ ಕಾಡಾನೆಯನ್ನು ಸೆರೆ ಹಿಡಿಯುವಾಗ 8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಆನೆ ಕ್ಯಾಪ್ಟನ್ ಅರ್ಜುನ ಸಾವನ್ನಪ್ಪಿದ್ದಾನೆ. ಇದರ ಸಾವಿನ ಬಗ್ಗೆ ಹಲವು ಅನುಮಾನಗಳು ಶುರುವಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಆರೋಪ ಏನು..?
ಅರ್ಜುನ ಆನೆಯು ಕಾಡಾನೆ ದಾಳಿಯಿಂದ ಮೃತಪಟ್ಟಿಲ್ಲ. ಅಧಿಕಾರಿಗಳು ಸಿಡಿಸಿದ ಗುಂಡೇಟು ಅರ್ಜುನನ ಕಾಲಿಗೆ ಬಿದ್ದಿದೆ. ಪರಿಣಾಮ ಬಲ ಕಳೆದುಕೊಂಡು ಆನೆ ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಕ್ಯಾಪ್ಟನ್ ಅರ್ಜುನ ಸಾವಿನ ಬಗ್ಗೆ ತನಿಖೆ ಆಗಬೇಕು ಎಂಬ ಆಗ್ರಹ ಹೆಚ್ಚಾಗಿದೆ. ಇತ್ತ ಅರಣ್ಯಾಧಿಕಾರಿಗಳು ಅರ್ಜುನನ ಸಾವಿಗೆ ಕಾರಣ ಬೇರೆಯದ್ದೇ ಹೇಳುತ್ತಿದ್ದಾರೆ.

ಅರಣ್ಯ ಇಲಾಖೆ ಹೇಳಿದ್ದೇನು..?

ಹಾಸನ ಅರಣ್ಯ ವಿಭಾಗದ ಆಲೂರು, ಬೇಲೂರು, ಸಕಲೇಶಪುರ ಮತ್ತು ಯಸಳೂರು ವಲಯಗಳ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವುದು ಮತ್ತು ಸೆರೆಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆ 11ನೇ ದಿನವಾದ 04 ಡಿಸೆಂಬರ್ ರಂದು ನಡೆಯಿತು.

ಆನೆ ಕಾರ್ಯಪಡೆ ತಂಡದ ಸದಸ್ಯರು ಮತ್ತು ವಿಶೇಷ ಕಾವಾಡಿಗರು ಇದರಲ್ಲಿ ಭಾಗಿಯಾಗಿದ್ದರು. ಉಪಟಳ ನೀಡುತ್ತಿದ್ದ ಕಾಡಾನೆಗಳ ಗುಂಪೊಂದು ಯಸಳೂರು ವಲಯದ ದಬ್ಬಳ್ಳಿಕಟ್ಟೆ ಸಮೀಪದ ಕೆ.ಎಫ್.ಡಿ.ಸಿ ನೆಡುತೋಪಿನಲ್ಲಿ ಇರೋದು ಗೊತ್ತಾಯಿತು. ಈ ಮಾಹಿತಿ ಆಧಾರದ ಮೇಲೆ ಬೇಲೂರಿನ ಚಿಕ್ಕೋಡು ಕ್ಯಾಂಪ್‌ನಿಂದ ಬೆಳಗ್ಗೆ 11: 30ಕ್ಕೆ ಅರ್ಜುನ್, ಸುಗ್ರೀವ, ಅಶ್ವಥಾಮ, ಧನಂಜಯ, ಕರ್ನಾಟಕ ಭೀಮ, ಪ್ರಶಾಂತ ಎಂಬ ಆನೆಗಳನ್ನು ತರಾಲಾಗಿತ್ತು.

ಕುಮ್ಮಿ ಆನೆಗಳೊಂದಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶು ವೈದ್ಯಾಧಿಕಾರಿಗಳಾದ ಡಾ. ರಮೇಶ್ ಹೆಚ್, ದುಬಾರೆ ಆನೆ ಶಿಬಿರದ ಉಪ ವಲಯ ಅರಣ್ಯ ಅಧಿಕಾರಿ ರಂಜನ್ ಮತ್ತು ಇಲಾಖಾ ಅಧಿಕಾರಿ/ ಸಿಬ್ಬಂದಿಯೊಂದಿಗೆ ತಂಡವು ಅಲ್ಲಿಗೆ ತೆರಳಿತ್ತು. ಪರಿಶೀಲನೆ ವೇಳೆ ಉಪಟಳ ನೀಡುತ್ತಿದ್ದ ಒಂದು ಕಾಡಾನೆಯು ಇತರೆ ಕಾಡಾನೆಯ ಗುಂಪಿನಲ್ಲಿರೋದು ಗೊತ್ತಾಗಿದೆ.

ಆ ಕಾಡಾನೆಯನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಆಗ ಗುಂಪಿನಲ್ಲಿದ್ದ ಇತರೆ 12 ಕಾಡಾನೆಗಳನ್ನು ಸದರಿ ಕಾಡಾನೆ ರಕ್ಷಣೆ ಮಾಡ್ತಿರೋದು ಕಂಡುಬಂದಿದೆ. ಅದೇ ಕಾಡಾನೆಯನ್ನು ಸೆರೆ ಹಿಡಿಯಬೇಕಾಗಿದ್ದರಿಂದ ಚುಚ್ಚುಮದ್ದು ನೀಡಲು ನಿರ್ಧರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಟಾರ್ಗೆಟ್ ಮಾಡಿದ್ದ ಕಾಡಾನೆಯು ಬಲಿಷ್ಟವಾಗಿತ್ತು. ಇದು ಮಸ್ತಿನಲ್ಲಿದ್ದಿದ್ದರಿಂದ ನಮ್ಮ ಆನೆಗಳ ಮೇಲೆ ಏಕಾಏಕಿ ದಾಳಿ ಮಾಡಲು ಪ್ರಾರಂಭಿಸಿರುತ್ತದೆ. ಆ ಸಂದರ್ಭದಲ್ಲಿ ಇಲಾಖಾ ಸಿಬ್ಬಂದಿ ಗಾಳಿಯಲ್ಲಿ ಹಲವಾರು ಬಾರಿ ಗುಂಡು ಹಾರಿಸಿರುತ್ತಾರೆ.

ಕಾಡಾನೆಯು ನಮ್ಮ ಆನೆಗಳ ಮೇಲೆ ದಾಳಿಯನ್ನು ಮುಂದುವರೆಸಿರುತ್ತದೆ. ಈ ಸಮಯದಲ್ಲಿ ಕುಮ್ಮಿ ಆನೆಗಳು ಹಿಂದಿರುಗುವಾಗ ಕಾಡಾನೆಯು ಅರ್ಜುನನ ಮೇಲೆ ನಿರಂತರವಾಗಿ ದಾಳಿ ಮಾಡಿದೆ. ಅರ್ಜುನ ಆನೆಯ ಎಡಕಿವಿಯ ಪಕ್ಕದ ಹೊಟ್ಟೆಯ ಭಾಗಕ್ಕೆ ಕೋರೆಯಿಂದ ಬಲವಾಗಿ ತಿವಿದ ಕಾರಣ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದೆ.

ಮೃತಪಟ್ಟ ಅರ್ಜುನ ಆನೆಯು 2012 ರಿಂದ 2019ರವರೆಗಿನ ಮೈಸೂರು ದಸರಾ ಉತ್ಸವದಲ್ಲಿ ಒಟ್ಟು 08 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದು, ಕಳೆದ ಬಾರಿಯೂ ಸಹ ದಸರಾ ಕಾರ್ಯಕ್ರಮದಲ್ಲೂ ತಂಡವನ್ನು ಮುನ್ನೆಡೆಸಿರುತ್ತದೆ. ಆದುದರಿಂದ ಅರ್ಜುನನ ಅಂತ್ಯ ಸಂಸ್ಕಾರ ನಡೆಸುವ ಕುರಿತು ಮೈಸೂರು ರಾಜಮನೆತನದ ಪುರೋಹಿತರಾದ ಪ್ರಹ್ಲಾದ್ ರವರನ್ನು ಸಂಪರ್ಕಿಸಲಾಗಿದೆ. ದಿನಾಂಕ : 05.12.2023ರಂದು ಸಮಯ 12 :00 ಗಂಟೆಗೆ ಅರ್ಜುನ ಆನೆಯು ಮೃತಪಟ್ಟಿರುವ ಯಸಳೂರು ವಲಯದ ದಬ್ಬಳ್ಳಿಕಟ್ಟೆ ಸಮೀಪದ ಕೆ.ಎಫ್.ಡಿ.ಸಿ. ನೆಡುತೋಪಿನಲ್ಲಿ ಸದರಿಯವರ ಉಪಸ್ಥಿತಿಯಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಹಾಗೂ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರವನ್ನು ನೆರವೇರಿಸಲು ತೀರ್ಮಾನಿಸಲಾಗಿದೆ-ಡಿ. ಮೋಹನ್‌ಕುಮಾರ್. ಭಾ.ಅ.ಸೇ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾಸನ ವಿಭಾಗ, ಹಾಸನ

Image

 

ಇದನ್ನೂ ಓದಿ: ಕ್ಯಾಪ್ಟನ್ ಅರ್ಜುನ ಸಾವಿನ ಬಗ್ಗೆ ಹಲವು ಅನುಮಾನ; ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅರ್ಜುನ ಸಾವಿನ ಸುತ್ತ ಹಲವು ಅನುಮಾನ; ನಡೆದ ಘಟನೆ ಬಗ್ಗೆ ವಿವರ ನೀಡಿದ ಅರಣ್ಯ ಇಲಾಖೆ

https://newsfirstlive.com/wp-content/uploads/2023/12/ARJUN.jpg

    ಸಿಬ್ಬಂದಿ ಗಾಳಿಯಲ್ಲಿ ಹಲವಾರು ಬಾರಿ ಗುಂಡು ಹಾರಿಸಿದ್ದಾರೆ

    ಕಾಡಾನೆ ನಮ್ಮ ಆನೆಗಳ ಮೇಲೆ ಏಕಾಏಕಿ ದಾಳಿಗೆ ನಿಂತಿತ್ತು

    ಹೊಟ್ಟೆಯ ಭಾಗಕ್ಕೆ ಗಾಯ, ತೀವ್ರ ರಕ್ತಸ್ರಾವದಿಂದ ಸಾವು

ಕಾರ್ಯಾಚರಣೆಯಲ್ಲಿ ಕಾಡಾನೆಯನ್ನು ಸೆರೆ ಹಿಡಿಯುವಾಗ 8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಆನೆ ಕ್ಯಾಪ್ಟನ್ ಅರ್ಜುನ ಸಾವನ್ನಪ್ಪಿದ್ದಾನೆ. ಇದರ ಸಾವಿನ ಬಗ್ಗೆ ಹಲವು ಅನುಮಾನಗಳು ಶುರುವಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಆರೋಪ ಏನು..?
ಅರ್ಜುನ ಆನೆಯು ಕಾಡಾನೆ ದಾಳಿಯಿಂದ ಮೃತಪಟ್ಟಿಲ್ಲ. ಅಧಿಕಾರಿಗಳು ಸಿಡಿಸಿದ ಗುಂಡೇಟು ಅರ್ಜುನನ ಕಾಲಿಗೆ ಬಿದ್ದಿದೆ. ಪರಿಣಾಮ ಬಲ ಕಳೆದುಕೊಂಡು ಆನೆ ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಕ್ಯಾಪ್ಟನ್ ಅರ್ಜುನ ಸಾವಿನ ಬಗ್ಗೆ ತನಿಖೆ ಆಗಬೇಕು ಎಂಬ ಆಗ್ರಹ ಹೆಚ್ಚಾಗಿದೆ. ಇತ್ತ ಅರಣ್ಯಾಧಿಕಾರಿಗಳು ಅರ್ಜುನನ ಸಾವಿಗೆ ಕಾರಣ ಬೇರೆಯದ್ದೇ ಹೇಳುತ್ತಿದ್ದಾರೆ.

ಅರಣ್ಯ ಇಲಾಖೆ ಹೇಳಿದ್ದೇನು..?

ಹಾಸನ ಅರಣ್ಯ ವಿಭಾಗದ ಆಲೂರು, ಬೇಲೂರು, ಸಕಲೇಶಪುರ ಮತ್ತು ಯಸಳೂರು ವಲಯಗಳ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವುದು ಮತ್ತು ಸೆರೆಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆ 11ನೇ ದಿನವಾದ 04 ಡಿಸೆಂಬರ್ ರಂದು ನಡೆಯಿತು.

ಆನೆ ಕಾರ್ಯಪಡೆ ತಂಡದ ಸದಸ್ಯರು ಮತ್ತು ವಿಶೇಷ ಕಾವಾಡಿಗರು ಇದರಲ್ಲಿ ಭಾಗಿಯಾಗಿದ್ದರು. ಉಪಟಳ ನೀಡುತ್ತಿದ್ದ ಕಾಡಾನೆಗಳ ಗುಂಪೊಂದು ಯಸಳೂರು ವಲಯದ ದಬ್ಬಳ್ಳಿಕಟ್ಟೆ ಸಮೀಪದ ಕೆ.ಎಫ್.ಡಿ.ಸಿ ನೆಡುತೋಪಿನಲ್ಲಿ ಇರೋದು ಗೊತ್ತಾಯಿತು. ಈ ಮಾಹಿತಿ ಆಧಾರದ ಮೇಲೆ ಬೇಲೂರಿನ ಚಿಕ್ಕೋಡು ಕ್ಯಾಂಪ್‌ನಿಂದ ಬೆಳಗ್ಗೆ 11: 30ಕ್ಕೆ ಅರ್ಜುನ್, ಸುಗ್ರೀವ, ಅಶ್ವಥಾಮ, ಧನಂಜಯ, ಕರ್ನಾಟಕ ಭೀಮ, ಪ್ರಶಾಂತ ಎಂಬ ಆನೆಗಳನ್ನು ತರಾಲಾಗಿತ್ತು.

ಕುಮ್ಮಿ ಆನೆಗಳೊಂದಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶು ವೈದ್ಯಾಧಿಕಾರಿಗಳಾದ ಡಾ. ರಮೇಶ್ ಹೆಚ್, ದುಬಾರೆ ಆನೆ ಶಿಬಿರದ ಉಪ ವಲಯ ಅರಣ್ಯ ಅಧಿಕಾರಿ ರಂಜನ್ ಮತ್ತು ಇಲಾಖಾ ಅಧಿಕಾರಿ/ ಸಿಬ್ಬಂದಿಯೊಂದಿಗೆ ತಂಡವು ಅಲ್ಲಿಗೆ ತೆರಳಿತ್ತು. ಪರಿಶೀಲನೆ ವೇಳೆ ಉಪಟಳ ನೀಡುತ್ತಿದ್ದ ಒಂದು ಕಾಡಾನೆಯು ಇತರೆ ಕಾಡಾನೆಯ ಗುಂಪಿನಲ್ಲಿರೋದು ಗೊತ್ತಾಗಿದೆ.

ಆ ಕಾಡಾನೆಯನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಆಗ ಗುಂಪಿನಲ್ಲಿದ್ದ ಇತರೆ 12 ಕಾಡಾನೆಗಳನ್ನು ಸದರಿ ಕಾಡಾನೆ ರಕ್ಷಣೆ ಮಾಡ್ತಿರೋದು ಕಂಡುಬಂದಿದೆ. ಅದೇ ಕಾಡಾನೆಯನ್ನು ಸೆರೆ ಹಿಡಿಯಬೇಕಾಗಿದ್ದರಿಂದ ಚುಚ್ಚುಮದ್ದು ನೀಡಲು ನಿರ್ಧರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಟಾರ್ಗೆಟ್ ಮಾಡಿದ್ದ ಕಾಡಾನೆಯು ಬಲಿಷ್ಟವಾಗಿತ್ತು. ಇದು ಮಸ್ತಿನಲ್ಲಿದ್ದಿದ್ದರಿಂದ ನಮ್ಮ ಆನೆಗಳ ಮೇಲೆ ಏಕಾಏಕಿ ದಾಳಿ ಮಾಡಲು ಪ್ರಾರಂಭಿಸಿರುತ್ತದೆ. ಆ ಸಂದರ್ಭದಲ್ಲಿ ಇಲಾಖಾ ಸಿಬ್ಬಂದಿ ಗಾಳಿಯಲ್ಲಿ ಹಲವಾರು ಬಾರಿ ಗುಂಡು ಹಾರಿಸಿರುತ್ತಾರೆ.

ಕಾಡಾನೆಯು ನಮ್ಮ ಆನೆಗಳ ಮೇಲೆ ದಾಳಿಯನ್ನು ಮುಂದುವರೆಸಿರುತ್ತದೆ. ಈ ಸಮಯದಲ್ಲಿ ಕುಮ್ಮಿ ಆನೆಗಳು ಹಿಂದಿರುಗುವಾಗ ಕಾಡಾನೆಯು ಅರ್ಜುನನ ಮೇಲೆ ನಿರಂತರವಾಗಿ ದಾಳಿ ಮಾಡಿದೆ. ಅರ್ಜುನ ಆನೆಯ ಎಡಕಿವಿಯ ಪಕ್ಕದ ಹೊಟ್ಟೆಯ ಭಾಗಕ್ಕೆ ಕೋರೆಯಿಂದ ಬಲವಾಗಿ ತಿವಿದ ಕಾರಣ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದೆ.

ಮೃತಪಟ್ಟ ಅರ್ಜುನ ಆನೆಯು 2012 ರಿಂದ 2019ರವರೆಗಿನ ಮೈಸೂರು ದಸರಾ ಉತ್ಸವದಲ್ಲಿ ಒಟ್ಟು 08 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದು, ಕಳೆದ ಬಾರಿಯೂ ಸಹ ದಸರಾ ಕಾರ್ಯಕ್ರಮದಲ್ಲೂ ತಂಡವನ್ನು ಮುನ್ನೆಡೆಸಿರುತ್ತದೆ. ಆದುದರಿಂದ ಅರ್ಜುನನ ಅಂತ್ಯ ಸಂಸ್ಕಾರ ನಡೆಸುವ ಕುರಿತು ಮೈಸೂರು ರಾಜಮನೆತನದ ಪುರೋಹಿತರಾದ ಪ್ರಹ್ಲಾದ್ ರವರನ್ನು ಸಂಪರ್ಕಿಸಲಾಗಿದೆ. ದಿನಾಂಕ : 05.12.2023ರಂದು ಸಮಯ 12 :00 ಗಂಟೆಗೆ ಅರ್ಜುನ ಆನೆಯು ಮೃತಪಟ್ಟಿರುವ ಯಸಳೂರು ವಲಯದ ದಬ್ಬಳ್ಳಿಕಟ್ಟೆ ಸಮೀಪದ ಕೆ.ಎಫ್.ಡಿ.ಸಿ. ನೆಡುತೋಪಿನಲ್ಲಿ ಸದರಿಯವರ ಉಪಸ್ಥಿತಿಯಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಹಾಗೂ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರವನ್ನು ನೆರವೇರಿಸಲು ತೀರ್ಮಾನಿಸಲಾಗಿದೆ-ಡಿ. ಮೋಹನ್‌ಕುಮಾರ್. ಭಾ.ಅ.ಸೇ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾಸನ ವಿಭಾಗ, ಹಾಸನ

Image

 

ಇದನ್ನೂ ಓದಿ: ಕ್ಯಾಪ್ಟನ್ ಅರ್ಜುನ ಸಾವಿನ ಬಗ್ಗೆ ಹಲವು ಅನುಮಾನ; ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More