ಈಗಾಗಲೇ ಐದು ಸಮನ್ಸ್ಗಳನ್ನ ಕಡೆಗಣಿಸಿರುವ ದೆಹಲಿ ಸಿಎಂ
ರಾಜಕೀಯ ಪ್ರೇರಿತವಾಗಿ ಈ ನೋಟಿಸ್ ನೀಡಲಾಗುತ್ತಿದೆಯಾ?
ಕೇಜ್ರಿವಾಲ್ಗೆ ಒಂದಲ್ಲ, ಎರಡಲ್ಲ 6 ಬಾರಿ ಸಮನ್ಸ್ ನೀಡಿದ ಇ.ಡಿ
ನವದೆಹಲಿ: ಅಕ್ರಮ ಮದ್ಯ ನೀತಿ ಹಗರಣದ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ)ವು 6ನೇ ಸಮನ್ಸ್ ಅನ್ನು ಜಾರಿ ಮಾಡಿದೆ.
ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಫೆ.17ರಂದು ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಮತ್ತೆ ಸಮನ್ಸ್ ನೀಡಲಾಗಿದೆ. ಈಗಾಗಲೇ ಇಡಿಯ 5 ಸಮನ್ಸ್ಗಳನ್ನು ಕಡೆಗಣಿಸಿ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಈ 5 ಸಮನ್ಸ್ಗಳನ್ನ ಕೇಜ್ರಿವಾಲ್ರನ್ನ ಅರೆಸ್ಟ್ ಮಾಡಲು ಕಾನೂನುಬಾಹಿರ ಪ್ರಯತ್ನಗಳು ಎಂದು ಇಡಿ ಕರೆದಿದೆ. ಇನ್ನು ಈ ಕುರಿತು ಎಲೆಕ್ಷನ್ ಕ್ಯಾಂಪೇನ್ ಮಾಡದಂತೆ ತಡೆಯುವ ಉದ್ದೇಶದಿಂದ ಈ ಸಮನ್ಸ್ಗಳನ್ನ ಇಡಿ ನೀಡುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಈ ಹಿಂದೆ ಸಿಎಂ ಕೇಜ್ರಿವಾಲ್ ಅವರಿಗೆ ನವೆಂಬರ್ 02, ಡಿಸೆಂಬರ್ 21, ಜನವರಿ 3, 18 ಹಾಗೂ ಫೆ.02 ರಂದು ಸಮನ್ಸ್ ನೀಡಿತ್ತು. ಇವೆಲ್ಲ ಸುಳ್ಳು ಆರೋಪ ಎಂದು ಇಡಿ ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ. ಇದರಿಂದ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಆರೋಪಿಸಿ ಇಡಿ ಕೋರ್ಟ್ಗೆ ದೂರು ನೀಡಿತ್ತು. ಇದನ್ನು ವಿಚಾರಣೆ ಮಾಡಿದ್ದ ಕೋರ್ಟ್ ಫೆಬ್ರವರಿ 17ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಈ ಎಲ್ಲ ಆದರೂ ಈಗ ಫೆ.17ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದ್ರೂ ಹಾಜರಾಗ್ತಾರೋ, ಇಲ್ವೋ ಎನ್ನುವುದು ಕಾದು ನೋಡಬೇಕಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಈಗಾಗಲೇ ಐದು ಸಮನ್ಸ್ಗಳನ್ನ ಕಡೆಗಣಿಸಿರುವ ದೆಹಲಿ ಸಿಎಂ
ರಾಜಕೀಯ ಪ್ರೇರಿತವಾಗಿ ಈ ನೋಟಿಸ್ ನೀಡಲಾಗುತ್ತಿದೆಯಾ?
ಕೇಜ್ರಿವಾಲ್ಗೆ ಒಂದಲ್ಲ, ಎರಡಲ್ಲ 6 ಬಾರಿ ಸಮನ್ಸ್ ನೀಡಿದ ಇ.ಡಿ
ನವದೆಹಲಿ: ಅಕ್ರಮ ಮದ್ಯ ನೀತಿ ಹಗರಣದ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ)ವು 6ನೇ ಸಮನ್ಸ್ ಅನ್ನು ಜಾರಿ ಮಾಡಿದೆ.
ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಫೆ.17ರಂದು ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಮತ್ತೆ ಸಮನ್ಸ್ ನೀಡಲಾಗಿದೆ. ಈಗಾಗಲೇ ಇಡಿಯ 5 ಸಮನ್ಸ್ಗಳನ್ನು ಕಡೆಗಣಿಸಿ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಈ 5 ಸಮನ್ಸ್ಗಳನ್ನ ಕೇಜ್ರಿವಾಲ್ರನ್ನ ಅರೆಸ್ಟ್ ಮಾಡಲು ಕಾನೂನುಬಾಹಿರ ಪ್ರಯತ್ನಗಳು ಎಂದು ಇಡಿ ಕರೆದಿದೆ. ಇನ್ನು ಈ ಕುರಿತು ಎಲೆಕ್ಷನ್ ಕ್ಯಾಂಪೇನ್ ಮಾಡದಂತೆ ತಡೆಯುವ ಉದ್ದೇಶದಿಂದ ಈ ಸಮನ್ಸ್ಗಳನ್ನ ಇಡಿ ನೀಡುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಈ ಹಿಂದೆ ಸಿಎಂ ಕೇಜ್ರಿವಾಲ್ ಅವರಿಗೆ ನವೆಂಬರ್ 02, ಡಿಸೆಂಬರ್ 21, ಜನವರಿ 3, 18 ಹಾಗೂ ಫೆ.02 ರಂದು ಸಮನ್ಸ್ ನೀಡಿತ್ತು. ಇವೆಲ್ಲ ಸುಳ್ಳು ಆರೋಪ ಎಂದು ಇಡಿ ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ. ಇದರಿಂದ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಆರೋಪಿಸಿ ಇಡಿ ಕೋರ್ಟ್ಗೆ ದೂರು ನೀಡಿತ್ತು. ಇದನ್ನು ವಿಚಾರಣೆ ಮಾಡಿದ್ದ ಕೋರ್ಟ್ ಫೆಬ್ರವರಿ 17ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಈ ಎಲ್ಲ ಆದರೂ ಈಗ ಫೆ.17ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದ್ರೂ ಹಾಜರಾಗ್ತಾರೋ, ಇಲ್ವೋ ಎನ್ನುವುದು ಕಾದು ನೋಡಬೇಕಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ