/newsfirstlive-kannada/media/post_attachments/wp-content/uploads/2024/06/guruji.jpg)
ಆರ್ಯವರ್ಧನ್ ಗುರೂಜಿ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಒಟಿಟಿ ಸೀಸನ್​ 1ಕ್ಕೆ ಎಂಟ್ರಿ ಕೊಟ್ಟಿದ್ದ ಆರ್ಯವರ್ಧನ್ ಗುರೂಜಿ ಅಂದಿನಿಂದ ಇಂದಿನವರೆಗೂ ಸುದ್ದಿಯಲ್ಲಿ ಇದ್ದಾರೆ. ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಅಂತಾ ಹೇಳಿಕೊಳ್ಳುವ ಆರ್ಯವರ್ಧನ್ ಗುರೂಜಿ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ.
ಇದನ್ನೂ ಓದಿ:ಆರ್ಯವರ್ಧನ್ ಗುರೂಜಿಗೆ ತರಾಟೆ ತೆಗೆದುಕೊಂಡ ಕಿಚ್ಚ ಸುದೀಪ್ ಅಭಿಮಾನಿಗಳು; ಏನಾಯ್ತು?
ಇದನ್ನೂ ಓದಿ:ದರ್ಶನ್ ಹುಚ್ಚು ಅಭಿಮಾನಿ.. ಕೊಲೆ ಕೇಸ್ನಲ್ಲಿ ಸಿಕ್ಕಿಬಿದ್ದ A5 ನಂದೀಶ್ ಹಿನ್ನೆಲೆ ಏನು? ಯಾರಿವರು?
ಮೊನ್ನೆ ಮೊನ್ನೆಯಷ್ಟೇ ನಟ ಕಿಚ್ಚ ಸುದೀಪ್ ಬಗ್ಗೆ ಮಾತಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಚಾಲೆಂಜಿಗ್​ ಸ್ಟಾರ್ ದರ್ಶನ್ ವಿಚಾರಕ್ಕೂ ಸುದ್ದಿಯಲ್ಲಿ ಇದ್ದಾರೆ. ಹೌದು, ಆರ್ಯವರ್ಧನ್ ಗುರೂಜಿ ಅವರು ಸಂಖ್ಯಾಶಾಸ್ತ್ರ ತಜ್ಞರು. ಆಗಾಗ ಅವರ ಲೆಕ್ಕಾಚಾರ ತಪ್ಪಾಗಿ ಟ್ರೋಲ್ಗೆ ಒಳಗಾಗುತ್ತಿದ್ದರು.
This time Murder case on RR Nagara resident... pic.twitter.com/cCZEe8zv8K
— ನಗಲಾರದೆ... ಅಳಲಾರದೆ... (@UppinaKai) June 12, 2024
ಅಂದು ಆರ್ಯವರ್ಧನ್ ಗುರೂಜಿ ಅವರು ಹೇಳಿದ ಮಾತು ಇಂದು ಸತ್ಯವಾಗಿಬಿಟ್ಟಿದೆ. ಈ ಹಿಂದೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತಾಡಿದ ಅವರು, ಆರ್​ಆರ್​ ನಗರದ ವಾಸ್ತು ಸರಿಯಿಲ್ಲ. ಆರ್.ಆರ್​ ನಗರಕ್ಕೆ ಹೋಗುವವರು ಒಂದಲ್ಲಾ ಒಂದು ಕೇಸ್​​ನಲ್ಲಿ ಸಿಕ್ಕಿ ಬೀಳುತ್ತಾರೆ ಎಂದು ಹೇಳಿದ್ದರು. ಆದರೆ ಅವರ ಜ್ಯೋತಿಷ್ಯದಂತೆಯೇ ಆರ್​.ಆರ್​ ನಗರದಲ್ಲಿ ವಾಸಾಗಿದ್ದ ನಟ ದರ್ಶನ್​ ಹಾಗೂ ಪವಿತ್ರ ಗೌಡ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದಾರೆ. ಜೊತೆಗೆ ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ನಡೆದಿದ್ದು ಆರ್ಆರ್ನಗರದ ಸುತ್ತಮುತ್ತ. ಇದೀಗ ಆರ್ಯವರ್ಧನ್ ಗುರೂಜಿ ಈ ಹಿಂದೆ ಭವಿಷ್ಯ ನುಡಿದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​​ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಗುರೂಜಿಯ ಭವಿಷ್ಯ ಸತ್ಯ ಇರಬಹುದು ಅಂತ ಕಾಮೆಂಟ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ