/newsfirstlive-kannada/media/post_attachments/wp-content/uploads/2025/01/Darshan_Attack.jpg)
ಬೆಂಗಳೂರು: ಸಹೋದ್ಯೋಗಿ ಬೆಳವಣಿಗೆ ಸಹಿಸದೆ ಪಾರ್ಟಿಯಲ್ಲೇ ಬಿಯರ್​ ಬಾಟಲ್​​ನಿಂದ ಹಲ್ಲೆ ಮಾಡಿರೋ ಘಟನೆ ರಾಜರಾಜೇಶ್ವರಿ ನಗರದ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದರ್ಶನ್​ ಹಲ್ಲೆಗೆ ಒಳಗಾದ ಯುವಕ.
ರಾಜರಾಜೇಶ್ವರಿ ನಗರದ ಗ್ರೀನ್​​ ಟ್ರೆಂಡ್ಸ್​​​ ಸೆಲ್ಯೂನ್​​ನಲ್ಲಿ ದರ್ಶನ್​​ ಅನ್ನೋ ಯುವಕ ಕೆಲಸ ಮಾಡುತ್ತಿದ್ದ. ದರ್ಶನ್​​ ಕೇವಲ 10 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ. ಅಂಗಡಿಯಲ್ಲಿ ವ್ಯಾಪಾರ ಕೂಡ ಚೆನ್ನಾಗಿ ಆಗುತ್ತಿತ್ತು.
ಇನ್ನು, ವ್ಯಾಪಾರ ಚೆನ್ನಾಗಿ ಆಗುತ್ತಿರೋ ಕಾರಣ 11 ದಿನಕ್ಕೆ ಮಾಲೀಕ ಪಾರ್ಟಿ ಆಯೋಜನೆ ಮಾಡಿದ್ದ. ಪಾರ್ಟಿಯಲ್ಲಿ ದರ್ಶನ್​​ ಬಂದ ಮೇಲೆ ವ್ಯಾಪಾರ ಚೆನ್ನಾಗಿ ಆಗುತ್ತಿದೆ ಎಂದು ಮಾಲೀಕ ಹೊಗಳಿದ್ದ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಮತ್ತೋರ್ವ ಉದ್ಯೋಗಿ ರಾಹುಲ್​​, ಏನೋ ಜಾಸ್ತಿ ಮೆರಿತಿದ್ಯಾ ಎಂದು ದರ್ಶನ್​​ ಮೇಲೆ ಬಿಯರ್​ ಬಾಟಲ್​​ನಿಂದ ಹಲ್ಲೆ ಮಾಡಿದ್ದಾನೆ.
ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ದರ್ಶನ್​ಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜರಾಜೇಶ್ವರಿ ನಗರ ಪೊಲೀಸ್ರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:ಹಣಕ್ಕೆ ಅಡಚಣೆ ಆಗಬಹುದು, ಔಷಧಿಗಾಗಿ ಹೆಚ್ಚು ಖರ್ಚು; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us