newsfirstkannada.com

ಮಹಿಳೆ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ, ಆಕೆ ವಿರುದ್ಧವೇ ಕೇಸ್ ದಾಖಲಿಸಿದ BMTC ಕಂಡಕ್ಟರ್..!

Share :

Published April 10, 2024 at 8:28am

    ಮಹಿಳೆ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಹೊಸ ತಿರುವು

    ಮಾರ್ಚ್​ 26 ರಂದು ಮಹಿಳೆ ಮೇಲೆ ಕಂಡಕ್ಟರ್ ಅಟ್ಯಾಕ್

    ಇದೇ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಕಂಡಕ್ಟರ್

ಬೆಂಗಳೂರು: ಮಹಿಳೆ ಮೇಲೆ ಬಿಎಂಟಿಸಿ ಕಂಡಕ್ಟರ್ ಹಲ್ಲೆ ಮಾಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಹಲ್ಲೆ ಮಾಡಿದ್ದ ಕಂಡಕ್ಟರ್​ ಮಹಿಳೆಯ ವಿರುದ್ಧವೇ ಪ್ರತಿದೂರು ದಾಖಲಿಸಿದ್ದಾನೆ.

ಹಲ್ಲೆಗೊಳಗಾದ ಮಹಿಳೆ ತನ್ಜಿಲಾ ಇಸ್ಮಾಯಿಲ್ ಮೇಲೆ ಕಂಡಕ್ಟರ್ ಹೊನ್ನಪ್ಪ ಕೇಸ್ ದಾಖಲಿಸಿದ್ದಾನೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 353 ಅಡಿಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾನೆ. ಕೇಸ್ ದಾಖಲಿಸಿದ ಮಹಿಳೆಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ:  ಯುಗಾದಿ ಹೊಸ ತೊಡಕು! ಬೆಳಗಿನ ಜಾವ 3 ಗಂಟೆಯಿಂದಲೇ ಕ್ಯೂ, 1 ಕೆಜಿ ಕುರಿ ಮಾಂಸಕ್ಕೆ ಎಷ್ಟು ರೂಪಾಯಿ?

ಮಾರ್ಚ್ 26 ರಂದು ಬಿಳೇಕಳ್ಳಿಯಿಂದ ಶಿವಾಜಿನಗರಕ್ಕೆ ಬರ್ತಿದ್ದ ಬಸ್​ನಲ್ಲಿ ಕಂಡಕ್ಟರ್ ಹೊನ್ನಪ್ಪ ಹಲ್ಲೆ ನಡೆಸಿದ್ದರು. ಟಿಕೆಟ್ ನೀಡುವ ವಿಚಾರಕ್ಕೆ ಮಹಿಳೆ ಹಾಗೂ ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಕಂಡಕ್ಟರ್ ಮೇಲೆ ತನ್ಜಿಲಾ ಇಸ್ಮಾಯಿಲ್ ಕೈ ಮಾಡಿದ್ದರು. ನಂತರ ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ ಮಾಡಿದ್ದ. ನಂತರ ಪೊಲೀಸರು ಹೊನ್ನಪ್ಪನನ್ನು ಬಂಧಿಸಿ ಜೈಲಿಗಟ್ಟಿದ್ದರು. ಸದ್ಯ ಜಾಮೀನು ಪಡೆದು ಬಿಡುಗಡೆಯಾಗಿರೋ ಕಂಡಕ್ಟರ್ ಹೊನ್ನಪ್ಪ ಮಹಿಳೆ ವಿರುದ್ಧ ಕೇಸ್​ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ, ಆಕೆ ವಿರುದ್ಧವೇ ಕೇಸ್ ದಾಖಲಿಸಿದ BMTC ಕಂಡಕ್ಟರ್..!

https://newsfirstlive.com/wp-content/uploads/2024/04/BMTC.jpg

    ಮಹಿಳೆ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಹೊಸ ತಿರುವು

    ಮಾರ್ಚ್​ 26 ರಂದು ಮಹಿಳೆ ಮೇಲೆ ಕಂಡಕ್ಟರ್ ಅಟ್ಯಾಕ್

    ಇದೇ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಕಂಡಕ್ಟರ್

ಬೆಂಗಳೂರು: ಮಹಿಳೆ ಮೇಲೆ ಬಿಎಂಟಿಸಿ ಕಂಡಕ್ಟರ್ ಹಲ್ಲೆ ಮಾಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಹಲ್ಲೆ ಮಾಡಿದ್ದ ಕಂಡಕ್ಟರ್​ ಮಹಿಳೆಯ ವಿರುದ್ಧವೇ ಪ್ರತಿದೂರು ದಾಖಲಿಸಿದ್ದಾನೆ.

ಹಲ್ಲೆಗೊಳಗಾದ ಮಹಿಳೆ ತನ್ಜಿಲಾ ಇಸ್ಮಾಯಿಲ್ ಮೇಲೆ ಕಂಡಕ್ಟರ್ ಹೊನ್ನಪ್ಪ ಕೇಸ್ ದಾಖಲಿಸಿದ್ದಾನೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 353 ಅಡಿಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾನೆ. ಕೇಸ್ ದಾಖಲಿಸಿದ ಮಹಿಳೆಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ:  ಯುಗಾದಿ ಹೊಸ ತೊಡಕು! ಬೆಳಗಿನ ಜಾವ 3 ಗಂಟೆಯಿಂದಲೇ ಕ್ಯೂ, 1 ಕೆಜಿ ಕುರಿ ಮಾಂಸಕ್ಕೆ ಎಷ್ಟು ರೂಪಾಯಿ?

ಮಾರ್ಚ್ 26 ರಂದು ಬಿಳೇಕಳ್ಳಿಯಿಂದ ಶಿವಾಜಿನಗರಕ್ಕೆ ಬರ್ತಿದ್ದ ಬಸ್​ನಲ್ಲಿ ಕಂಡಕ್ಟರ್ ಹೊನ್ನಪ್ಪ ಹಲ್ಲೆ ನಡೆಸಿದ್ದರು. ಟಿಕೆಟ್ ನೀಡುವ ವಿಚಾರಕ್ಕೆ ಮಹಿಳೆ ಹಾಗೂ ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಕಂಡಕ್ಟರ್ ಮೇಲೆ ತನ್ಜಿಲಾ ಇಸ್ಮಾಯಿಲ್ ಕೈ ಮಾಡಿದ್ದರು. ನಂತರ ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ ಮಾಡಿದ್ದ. ನಂತರ ಪೊಲೀಸರು ಹೊನ್ನಪ್ಪನನ್ನು ಬಂಧಿಸಿ ಜೈಲಿಗಟ್ಟಿದ್ದರು. ಸದ್ಯ ಜಾಮೀನು ಪಡೆದು ಬಿಡುಗಡೆಯಾಗಿರೋ ಕಂಡಕ್ಟರ್ ಹೊನ್ನಪ್ಪ ಮಹಿಳೆ ವಿರುದ್ಧ ಕೇಸ್​ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More