/newsfirstlive-kannada/media/post_attachments/wp-content/uploads/2024/10/IND-vs-AUS.jpg)
ನಿರೀಕ್ಷೆಯಂತೆ ಗಬ್ಬಾ ಟೆಸ್ಟ್ಗೆ ಮಳೆರಾಯನ ಕಾಟ ಶುರುವಾಗಿದೆ. ಮಳೆಯಿಂದಾಗಿ ಪಂದ್ಯ ನಿಲ್ಲಿಸಿದ್ದು, ಅಭಿಮಾನಿಗಳಿಗೆ ನಿರಾಸೆ ಆಗಿದೆ. ಹವಾಮಾನ ಇಲಾಖೆ ಮೊದಲೇ ಮಳೆ ಬರುವ ಸೂಚನೆಯನ್ನು ನೀಡಿತ್ತು. ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಟೀಂ ಇಂಡಿಯಾ ಆಟಗಾರರು ನಿರಾಸೆಯಿಂದ ಪೆವಿಲಿಯನ್ಗೆ ವಾಪಸ್ ಆಗಿದ್ದಾರೆ.
ಇಂದು ಬೆಳಗ್ಗೆ ಆಸ್ಟ್ರೇಲಿಯಾದ ಬ್ರಿಸ್ಬೆನ್ನಲ್ಲಿ ಬಾರ್ಡರ್ ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಆರಂಭವಾಗಿದೆ. ಟಾಸ್ ಗೆದ್ದಿರುವ ಭಾರತ ತಂಡ ಎದುರಾಳಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿದೆ. ಅಂತೆಯೇ ಬ್ಯಾಟಿಂಗ್ ಕೂಡ ಶುರುವಾಗಿತ್ತು. 13.2 ಓವರ್ ಎದುರಿಸಿರುವ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೇ 28 ರನ್ಗಳಿಸಿದೆ.
ಇದನ್ನೂ ಓದಿ:ಟಾಸ್ ಗೆದ್ದ ರೋಹಿತ್ ಶರ್ಮಾ; ಟೀಂ ಇಂಡಿಯಾ ಪ್ಲೇಯಿಂಗ್11ನಿಂದ ಇಬ್ಬರಿಗೆ ಗೇಟ್ಪಾಸ್..!
ಆಸ್ಟ್ರೇಲಿಯಾ ಪರ ಖವಾಜ 19, ನಥನ್ 4 ರನ್ಗಳಿಸಿ ಆಡ್ತಿದ್ದಾರೆ. ಟೀಂ ಇಂಡಿಯಾ ಪರ ಬುಮ್ರಾ 6, ಸಿರಾಜ್ 4, ಆಕಾಶ್ ದೀಪ್ 3.2 ಓವರ್ ಮಾಡಿದ್ದಾರೆ. ಭಾರತ ವಿಕೆಟ್ ಬೇಟೆಯಲ್ಲಿದ್ದರೆ, ಆಸ್ಟ್ರೇಲಿಯಾ ಬಿಗ್ಸ್ಕೋರ್ ಟಾರ್ಗೆಟ್ ಇಟ್ಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯ.
ಭಾರತ ಮೊದಲ ಟೆಸ್ಟ್ ಗೆದ್ದುಕೊಂಡರೆ, ಎರಡನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದಿದೆ. ಇನ್ನುಳಿದ ಮೂರು ಟೆಸ್ಟ್ಗಳಲ್ಲೂ ಭಾರತ ಗೆದ್ದರೆಷ್ಟೇ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಪ್ರವೇಶ ಮಾಡಬಹುದು.
ಇದನ್ನೂ ಓದಿ:ಒಂದು ರಾತ್ರಿ ಜೈಲಿನಲ್ಲಿ ಕಳೆದ ಅಲ್ಲು ಅರ್ಜುನ್; ಬೆಳ್ಳಂಬೆಳಗ್ಗೆ ಅಭಿಮಾನಿಗಳಿಗೆ ಗುಡ್ನ್ಯೂಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ