ಇಂಡೋ-ಆಸಿಸ್ ಮೆಗಾ ಫೈಟ್ಗೆ ವೇದಿಕೆ ಸಜ್ಜು
ಕ್ಯಾಪ್ಟನ್ ರೋಹಿತ್ ಬಲ ಹೆಚ್ಚಿಸಿದ ಆ 3 ಅಸ್ತ್ರಗಳು
ಆಸಿಸ್ ಮಂತ್ರಕ್ಕೆ ಟೀಮ್ ಇಂಡಿಯಾದ ತಿರುಮಂತ್ರ ರೆಡಿ
ಇಂಡೋ-ಆಸಿಸ್ ಮೆಗಾ ಫೈಟ್ಗೆ ವಿಶ್ವಕಪ್ ರಣಕಣದಲ್ಲಿ ವೇದಿಕೆ ಸಜ್ಜಾಗಿದೆ. ಅಟ್ಯಾಕಿಂಗ್ ಮಂತ್ರದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರೋ ಆಸ್ಟ್ರೇಲಿಯಾಗೆ, ಟೀಮ್ ಇಂಡಿಯಾ ಸಖತ್ ಕೌಂಟರ್ ಅಟ್ಯಾಕ್ ಪ್ಲಾನ್ನೊಂದಿಗೆ ರೆಡಿಯಾಗಿದೆ. ಅಖಾಡಕ್ಕೆ ಇಳಿಯೋಕೆ ಮೊದಲೇ ಕ್ಯಾಪ್ಟನ್ ರೋಹಿತ್ ಶರ್ಮಾ, ಕಾಂಗರೂಗಳಿಗೆ ಖೆಡ್ಡಾ ತೋಡಿದ್ದಾರೆ.
ವಿಶ್ವಕಪ್ ಮೆಗಾ ಟೂರ್ನಿಯ ಸೋಲಿಲ್ಲದ ಸರದಾರ ಟೀಮ್ ಇಂಡಿಯಾ ಮುಂದಿರೋದು ಬಿಗ್ ಚಾಲೆಂಜ್. ಟೂರ್ನಿ ಆರಂಭದಿಂದ ಅಬ್ಬರದ ಆಟದೊಂದಿಗೆ ಸೆಮಿಫೈನಲ್ನತ್ತ ದಾಪುಗಾಲಿಟ್ಟಿರುವ ರೋಹಿತ್ ಪಡೆ ಇಂದು ಬಲಿಷ್ಠ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ. ಸೂಪರ್ 8 ಹಂತದ ಹೈವೋಲ್ಟೆಜ್ ಹಣಾಹಣಿಯಲ್ಲಿ ಗೆದ್ದು ಸೆಮಿಸ್ಗೆ ರಾಯಲ್ ಎಂಟ್ರಿ ಕೊಡಲು ಬ್ಲೂ ಬಾಯ್ಸ್ ತುದಿಗಾಲಲ್ಲಿ ನಿಂತಿದ್ದಾರೆ.
ಇದನ್ನೂ ಓದಿ:ಭಾರತದ ವಿರುದ್ಧ ಸೋತರೂ ಆಸ್ಟ್ರೇಲಿಯಾಗೆ ಸೆಮಿ ಫೈನಲ್ಗೆ ಹೋಗಲು ಇದೆ ಅವಕಾಶ..!
ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಶಾಕಿಂಗ್ ರೀತಿಯಲ್ಲಿ ಆಸ್ಟ್ರೇಲಿಯಾ ಸೋಲುಂಡಿದೆ. ಹೀಗಾಗಿ ಇಂದು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇಂದಿನ ಪಂದ್ಯದಲ್ಲಿ ಸೋತರೆ, ಕಾಂಗರೂಗಳ ಪಾಲಿಗೆ ಸೆಮಿಫೈನಲ್ ಎಂಟ್ರಿ ಕಲ್ಲು ಮುಳ್ಳಿನ ಹಾದಿಯಾಗಲಿದೆ. ಹೀಗಾಗಿ ಶತಾಯಗತಾಯ ಗೆದ್ದೇ ತೀರಲು ಆಸಿಸ್ ಪಡೆ ಪಣತೊಟ್ಟಿದೆ. ಟೀಮ್ ಇಂಡಿಯಾ ಕ್ಯಾಪ್ಟನ್ ಕಾಂಗರೂಗಳ ಬೇಟೆಗೆ ಅದಾಗಲೇ ಖೆಡ್ಡಾ ತೋಡಿದ್ದಾರೆ.
ಕಾಂಗರೂಗಳ ಬೇಟೆಗೆ ಸ್ಪಿನ್ ಖೆಡ್ಡಾ
ಬಲಿಷ್ಠ ಆಸ್ಟ್ರೇಲಿಯಾಗೆ ಸೋಲಿನ ರುಚಿ ತೋರಿಸಲು ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಪ್ಲಾನ್ ರೆಡಿಯಾಗಿದೆ. ಕಾಂಗರೂಗಳನ್ನು ಬೇಟೆಯಾಡಲು ಕ್ಯಾಪ್ಟನ್ ರೋಹಿತ್ ಸ್ಪಿನ್ ಖೆಡ್ಡಾ ತೋಡಿದ್ದಾರೆ. ಬತ್ತಳಿಕೆಯಲ್ಲಿರೋ 3 ಪ್ರಮುಖ ಅಸ್ತ್ರಗಳನ್ನು ಸೆಂಟ್ ಲೂಸಿಯಾದಲ್ಲಿ ಪ್ರಯೋಗಿಸಲು ರೋಹಿತ್ ರೆಡಿಯಾಗಿದ್ದಾರೆ.
ಇದನ್ನೂ ಓದಿ:Rain Alert ಜೂನ್ 29ವರೆಗೆ ಭಾರೀ ಮಳೆ.. ರಾಜ್ಯದ ಎರಡು ಭಾಗಗಳಿಗೆ ಪ್ರತ್ಯೇಕ ಎಚ್ಚರಿಕೆ..!
ಕುಲ್ದೀಪ್ ಕೈಚಳಕ, ಆಸಿಸ್ಗೆ ನಡುಕ..!
ಸೂಪರ್ 8 ಸ್ಟೇಜ್ನ ಕದನಗಳು ಆರಂಭವಾದ ಮೇಲೆ ಪ್ಲೇಯಿಂಗ್ ಇಲೆವೆನ್ಗೆ ಎಂಟ್ರಿ ಕೊಟ್ಟ ಕುಲ್ದೀಪ್ ಯಾದವ್, ಕೈಚಳಕ್ಕೆ ಬ್ಯಾಟ್ಸ್ಮನ್ಗಳು ಶಾಕ್ ಆಗಿದ್ದಾರೆ. ಹಾಕಿದ 8 ಓವರ್ಗಳಲ್ಲೇ 5 ವಿಕೆಟ್ ಬೇಟೆಯಾಡಿ ವಿಂಡೀಸ್ ನಾಡಲ್ಲಿ ದರ್ಬಾರ್ ನಡೆಸ್ತಿದ್ದಾರೆ. ರೆಡ್ ಹಾಟ್ ಫಾರ್ಮ್ನಲ್ಲಿರೋ ಕುಲ್ದೀಪ್ರನ್ನ, ಆಸ್ಟ್ರೇಲಿಯನ್ನರಿಗೆ, ಅದರಲ್ಲೂ ಪ್ರಮುಖವಾಗಿ ಲೆಫ್ಟ್ ಹ್ಯಾಂಡೆಡ್ ಬ್ಯಾಟರ್ಸ್ ಪಾಲಿಗೆ ಸಿಂಹಸ್ವಪ್ನವಾಗಿ ಕಾಡ್ತಿದ್ದಾರೆ. ಸ್ಪಿನ್ ಜಾದೂವಿನಿಂದ ಬ್ಯಾಟ್ಸ್ಮನ್ಗಳನ್ನು ಕಕ್ಕಾಬಿಕ್ಕಿಯಾಗಿಸಿರೋ ಚೈನಾಮನ್ ಸ್ಪಿನ್ನರ್, ಆಸಿಸ್ ಕ್ಯಾಂಪ್ನಲ್ಲಿ ನಡುಕ ಹುಟ್ಟಿಸಿದ್ರೆ ಟೀಮ್ ಇಂಡಿಯಾದ ಆತ್ಮವಿಶ್ವಾಸಕ್ಕೆ ಕಾರಣರಾಗಿದ್ದಾರೆ.
ಆಸಿಸ್ಗೆ ಅಕ್ಷರ್ ಪಟೇಲ್ ಆತಂಕ..!
ಲೆಫ್ಟ್ ಆರ್ಮ್ ಸ್ಪಿನ್ನರ್ ಅಕ್ಷರ್ ಪಟೇಲ್ ಈ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಬಲ ಹೆಚ್ಚಿಸಿದ್ದಾರೆ. ಪವರ್ಪ್ಲೇನಲ್ಲೇ ಪವರ್ಫುಲ್ ದಾಳಿಯನ್ನ ಸಂಘಟಿಸ್ತಾ ಬ್ಯಾಟರ್ಗಳಿಗೆ ಶಾಕ್ ನೀಡ್ತಿದ್ದಾರೆ. ಹಾಕಿದ 11 ಓವರ್ಗಳಲ್ಲಿ 4 ವಿಕೆಟ್ ಬೇಟೆಯಾಡಿರೋದಲ್ಲದೇ, ಕೇವಲ 7ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಫಾರ್ಮ್ನಲ್ಲಿರೋ ಅಕ್ಷರ್, ಆಸ್ಟ್ರೇಲಿಯಾ ಎದುರು ಟಿ20ಯಲ್ಲಿ ಸಾಲಿಡ್ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಅಕ್ಷರ್ ಪಟೇಲ್ರ ಈ ಅದ್ಭುತ ಪರ್ಫಾಮೆನ್ಸ್ ರೋಹಿತ್ ಪಡೆಯ ಬಲ ಹೆಚ್ಚಿಸಿದೆ.
ಇದನ್ನೂ ಓದಿ:ಒಂದಲ್ಲ.. ಆಸ್ಟ್ರೇಲಿಯಾ ವಿರುದ್ಧ ಒಟ್ಟು 3 ಲೆಕ್ಕ ಚುಕ್ತಾ ಬಾಕಿ ಇದೆ.. ಇಂದು ಪ್ರತೀಕಾರದ ಮ್ಯಾಚ್..!
ರೈಟ್ ಹ್ಯಾಂಡ್ ಬ್ಯಾಟರ್ಸ್ಗೆ ಜಡೇಜಾ ಕಂಟಕ
ಆಸ್ಟ್ರೇಲಿಯಾ ರೈಟ್ ಹ್ಯಾಂಡ್ ಬ್ಯಾಟರ್ಸ್ಗೆ ರವಿಂದ್ರ ಜಡೇಜಾ ಟೆನ್ಶನ್ ತಂದಿಟ್ಟಿದ್ದಾರೆ. ವಿಶ್ವಕಪ್ನಲ್ಲಿ ಫಾರ್ಮ್ಗಾಗಿ ಪರದಾಡಿದ್ದ ಜಡೇಜಾ ಕಳೆದ ಪಂದ್ಯದಲ್ಲಿ ರಿಧಮ್ ಕಂಡುಕೊಳ್ಳುವಲ್ಲಿ ಯಶಸ್ಸಿಯಾಗಿದ್ದಾರೆ. ಕರಿಯರ್ನಲ್ಲಿ ರೈಟ್ ಹ್ಯಾಂಡ್ ಬ್ಯಾಟರ್ಸ್ಗೆ ಹೆಚ್ಚು ಟ್ರಬಲ್ ಮಾಡಿರೋ ಜಡೇಜಾ, ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳ ಎದುರೂ ಮೇಲುಗೈ ಸಾಧಿಸಿದ್ದಾರೆ. ಬಾಂಗ್ಲಾ ವಿರುದ್ಧ ವಿಕೆಟ್ ಬೇಟೆಯಾಡಿ ಅಕೌಂಟ್ ಓಪನ್ ಮಾಡಿರೋ ಜಡ್ಡು ಆಸಿಸ್ಗೆ ಬ್ಯಾಟರ್ಸ್ನ ಕಾಡಲು ಸಜ್ಜಾಗಿದ್ದಾರೆ.
ಆಸಿಸ್ನ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಕಟ್ಟಿ ಹಾಕಲು ಕ್ಯಾಪ್ಟನ್ ರೋಹಿತ್ ಶರ್ಮಾ, ಸಮರ್ಥ ಪ್ಲಾನ್ನೊಂದಿಗೆ ರೆಡಿಯಾಗಿದ್ದಾರೆ. ಈ ಪ್ಲಾನ್ ಆನ್ಫೀಲ್ಡ್ನಲ್ಲಿ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನು ಓದಿ:ಚಾರ್ಜ್ಶೀಟ್ ಆದ್ಮೆಲೆ ದರ್ಶನ್ಗೆ ಮತ್ತೊಂದು ಸಂಕಷ್ಟ.. ಸಿನಿಮಾ ಮಾಡೋರಿಗೂ ಆಘಾತಕಾರಿ ವಿಚಾರ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಇಂಡೋ-ಆಸಿಸ್ ಮೆಗಾ ಫೈಟ್ಗೆ ವೇದಿಕೆ ಸಜ್ಜು
ಕ್ಯಾಪ್ಟನ್ ರೋಹಿತ್ ಬಲ ಹೆಚ್ಚಿಸಿದ ಆ 3 ಅಸ್ತ್ರಗಳು
ಆಸಿಸ್ ಮಂತ್ರಕ್ಕೆ ಟೀಮ್ ಇಂಡಿಯಾದ ತಿರುಮಂತ್ರ ರೆಡಿ
ಇಂಡೋ-ಆಸಿಸ್ ಮೆಗಾ ಫೈಟ್ಗೆ ವಿಶ್ವಕಪ್ ರಣಕಣದಲ್ಲಿ ವೇದಿಕೆ ಸಜ್ಜಾಗಿದೆ. ಅಟ್ಯಾಕಿಂಗ್ ಮಂತ್ರದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರೋ ಆಸ್ಟ್ರೇಲಿಯಾಗೆ, ಟೀಮ್ ಇಂಡಿಯಾ ಸಖತ್ ಕೌಂಟರ್ ಅಟ್ಯಾಕ್ ಪ್ಲಾನ್ನೊಂದಿಗೆ ರೆಡಿಯಾಗಿದೆ. ಅಖಾಡಕ್ಕೆ ಇಳಿಯೋಕೆ ಮೊದಲೇ ಕ್ಯಾಪ್ಟನ್ ರೋಹಿತ್ ಶರ್ಮಾ, ಕಾಂಗರೂಗಳಿಗೆ ಖೆಡ್ಡಾ ತೋಡಿದ್ದಾರೆ.
ವಿಶ್ವಕಪ್ ಮೆಗಾ ಟೂರ್ನಿಯ ಸೋಲಿಲ್ಲದ ಸರದಾರ ಟೀಮ್ ಇಂಡಿಯಾ ಮುಂದಿರೋದು ಬಿಗ್ ಚಾಲೆಂಜ್. ಟೂರ್ನಿ ಆರಂಭದಿಂದ ಅಬ್ಬರದ ಆಟದೊಂದಿಗೆ ಸೆಮಿಫೈನಲ್ನತ್ತ ದಾಪುಗಾಲಿಟ್ಟಿರುವ ರೋಹಿತ್ ಪಡೆ ಇಂದು ಬಲಿಷ್ಠ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ. ಸೂಪರ್ 8 ಹಂತದ ಹೈವೋಲ್ಟೆಜ್ ಹಣಾಹಣಿಯಲ್ಲಿ ಗೆದ್ದು ಸೆಮಿಸ್ಗೆ ರಾಯಲ್ ಎಂಟ್ರಿ ಕೊಡಲು ಬ್ಲೂ ಬಾಯ್ಸ್ ತುದಿಗಾಲಲ್ಲಿ ನಿಂತಿದ್ದಾರೆ.
ಇದನ್ನೂ ಓದಿ:ಭಾರತದ ವಿರುದ್ಧ ಸೋತರೂ ಆಸ್ಟ್ರೇಲಿಯಾಗೆ ಸೆಮಿ ಫೈನಲ್ಗೆ ಹೋಗಲು ಇದೆ ಅವಕಾಶ..!
ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಶಾಕಿಂಗ್ ರೀತಿಯಲ್ಲಿ ಆಸ್ಟ್ರೇಲಿಯಾ ಸೋಲುಂಡಿದೆ. ಹೀಗಾಗಿ ಇಂದು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇಂದಿನ ಪಂದ್ಯದಲ್ಲಿ ಸೋತರೆ, ಕಾಂಗರೂಗಳ ಪಾಲಿಗೆ ಸೆಮಿಫೈನಲ್ ಎಂಟ್ರಿ ಕಲ್ಲು ಮುಳ್ಳಿನ ಹಾದಿಯಾಗಲಿದೆ. ಹೀಗಾಗಿ ಶತಾಯಗತಾಯ ಗೆದ್ದೇ ತೀರಲು ಆಸಿಸ್ ಪಡೆ ಪಣತೊಟ್ಟಿದೆ. ಟೀಮ್ ಇಂಡಿಯಾ ಕ್ಯಾಪ್ಟನ್ ಕಾಂಗರೂಗಳ ಬೇಟೆಗೆ ಅದಾಗಲೇ ಖೆಡ್ಡಾ ತೋಡಿದ್ದಾರೆ.
ಕಾಂಗರೂಗಳ ಬೇಟೆಗೆ ಸ್ಪಿನ್ ಖೆಡ್ಡಾ
ಬಲಿಷ್ಠ ಆಸ್ಟ್ರೇಲಿಯಾಗೆ ಸೋಲಿನ ರುಚಿ ತೋರಿಸಲು ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಪ್ಲಾನ್ ರೆಡಿಯಾಗಿದೆ. ಕಾಂಗರೂಗಳನ್ನು ಬೇಟೆಯಾಡಲು ಕ್ಯಾಪ್ಟನ್ ರೋಹಿತ್ ಸ್ಪಿನ್ ಖೆಡ್ಡಾ ತೋಡಿದ್ದಾರೆ. ಬತ್ತಳಿಕೆಯಲ್ಲಿರೋ 3 ಪ್ರಮುಖ ಅಸ್ತ್ರಗಳನ್ನು ಸೆಂಟ್ ಲೂಸಿಯಾದಲ್ಲಿ ಪ್ರಯೋಗಿಸಲು ರೋಹಿತ್ ರೆಡಿಯಾಗಿದ್ದಾರೆ.
ಇದನ್ನೂ ಓದಿ:Rain Alert ಜೂನ್ 29ವರೆಗೆ ಭಾರೀ ಮಳೆ.. ರಾಜ್ಯದ ಎರಡು ಭಾಗಗಳಿಗೆ ಪ್ರತ್ಯೇಕ ಎಚ್ಚರಿಕೆ..!
ಕುಲ್ದೀಪ್ ಕೈಚಳಕ, ಆಸಿಸ್ಗೆ ನಡುಕ..!
ಸೂಪರ್ 8 ಸ್ಟೇಜ್ನ ಕದನಗಳು ಆರಂಭವಾದ ಮೇಲೆ ಪ್ಲೇಯಿಂಗ್ ಇಲೆವೆನ್ಗೆ ಎಂಟ್ರಿ ಕೊಟ್ಟ ಕುಲ್ದೀಪ್ ಯಾದವ್, ಕೈಚಳಕ್ಕೆ ಬ್ಯಾಟ್ಸ್ಮನ್ಗಳು ಶಾಕ್ ಆಗಿದ್ದಾರೆ. ಹಾಕಿದ 8 ಓವರ್ಗಳಲ್ಲೇ 5 ವಿಕೆಟ್ ಬೇಟೆಯಾಡಿ ವಿಂಡೀಸ್ ನಾಡಲ್ಲಿ ದರ್ಬಾರ್ ನಡೆಸ್ತಿದ್ದಾರೆ. ರೆಡ್ ಹಾಟ್ ಫಾರ್ಮ್ನಲ್ಲಿರೋ ಕುಲ್ದೀಪ್ರನ್ನ, ಆಸ್ಟ್ರೇಲಿಯನ್ನರಿಗೆ, ಅದರಲ್ಲೂ ಪ್ರಮುಖವಾಗಿ ಲೆಫ್ಟ್ ಹ್ಯಾಂಡೆಡ್ ಬ್ಯಾಟರ್ಸ್ ಪಾಲಿಗೆ ಸಿಂಹಸ್ವಪ್ನವಾಗಿ ಕಾಡ್ತಿದ್ದಾರೆ. ಸ್ಪಿನ್ ಜಾದೂವಿನಿಂದ ಬ್ಯಾಟ್ಸ್ಮನ್ಗಳನ್ನು ಕಕ್ಕಾಬಿಕ್ಕಿಯಾಗಿಸಿರೋ ಚೈನಾಮನ್ ಸ್ಪಿನ್ನರ್, ಆಸಿಸ್ ಕ್ಯಾಂಪ್ನಲ್ಲಿ ನಡುಕ ಹುಟ್ಟಿಸಿದ್ರೆ ಟೀಮ್ ಇಂಡಿಯಾದ ಆತ್ಮವಿಶ್ವಾಸಕ್ಕೆ ಕಾರಣರಾಗಿದ್ದಾರೆ.
ಆಸಿಸ್ಗೆ ಅಕ್ಷರ್ ಪಟೇಲ್ ಆತಂಕ..!
ಲೆಫ್ಟ್ ಆರ್ಮ್ ಸ್ಪಿನ್ನರ್ ಅಕ್ಷರ್ ಪಟೇಲ್ ಈ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಬಲ ಹೆಚ್ಚಿಸಿದ್ದಾರೆ. ಪವರ್ಪ್ಲೇನಲ್ಲೇ ಪವರ್ಫುಲ್ ದಾಳಿಯನ್ನ ಸಂಘಟಿಸ್ತಾ ಬ್ಯಾಟರ್ಗಳಿಗೆ ಶಾಕ್ ನೀಡ್ತಿದ್ದಾರೆ. ಹಾಕಿದ 11 ಓವರ್ಗಳಲ್ಲಿ 4 ವಿಕೆಟ್ ಬೇಟೆಯಾಡಿರೋದಲ್ಲದೇ, ಕೇವಲ 7ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಫಾರ್ಮ್ನಲ್ಲಿರೋ ಅಕ್ಷರ್, ಆಸ್ಟ್ರೇಲಿಯಾ ಎದುರು ಟಿ20ಯಲ್ಲಿ ಸಾಲಿಡ್ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಅಕ್ಷರ್ ಪಟೇಲ್ರ ಈ ಅದ್ಭುತ ಪರ್ಫಾಮೆನ್ಸ್ ರೋಹಿತ್ ಪಡೆಯ ಬಲ ಹೆಚ್ಚಿಸಿದೆ.
ಇದನ್ನೂ ಓದಿ:ಒಂದಲ್ಲ.. ಆಸ್ಟ್ರೇಲಿಯಾ ವಿರುದ್ಧ ಒಟ್ಟು 3 ಲೆಕ್ಕ ಚುಕ್ತಾ ಬಾಕಿ ಇದೆ.. ಇಂದು ಪ್ರತೀಕಾರದ ಮ್ಯಾಚ್..!
ರೈಟ್ ಹ್ಯಾಂಡ್ ಬ್ಯಾಟರ್ಸ್ಗೆ ಜಡೇಜಾ ಕಂಟಕ
ಆಸ್ಟ್ರೇಲಿಯಾ ರೈಟ್ ಹ್ಯಾಂಡ್ ಬ್ಯಾಟರ್ಸ್ಗೆ ರವಿಂದ್ರ ಜಡೇಜಾ ಟೆನ್ಶನ್ ತಂದಿಟ್ಟಿದ್ದಾರೆ. ವಿಶ್ವಕಪ್ನಲ್ಲಿ ಫಾರ್ಮ್ಗಾಗಿ ಪರದಾಡಿದ್ದ ಜಡೇಜಾ ಕಳೆದ ಪಂದ್ಯದಲ್ಲಿ ರಿಧಮ್ ಕಂಡುಕೊಳ್ಳುವಲ್ಲಿ ಯಶಸ್ಸಿಯಾಗಿದ್ದಾರೆ. ಕರಿಯರ್ನಲ್ಲಿ ರೈಟ್ ಹ್ಯಾಂಡ್ ಬ್ಯಾಟರ್ಸ್ಗೆ ಹೆಚ್ಚು ಟ್ರಬಲ್ ಮಾಡಿರೋ ಜಡೇಜಾ, ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳ ಎದುರೂ ಮೇಲುಗೈ ಸಾಧಿಸಿದ್ದಾರೆ. ಬಾಂಗ್ಲಾ ವಿರುದ್ಧ ವಿಕೆಟ್ ಬೇಟೆಯಾಡಿ ಅಕೌಂಟ್ ಓಪನ್ ಮಾಡಿರೋ ಜಡ್ಡು ಆಸಿಸ್ಗೆ ಬ್ಯಾಟರ್ಸ್ನ ಕಾಡಲು ಸಜ್ಜಾಗಿದ್ದಾರೆ.
ಆಸಿಸ್ನ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಕಟ್ಟಿ ಹಾಕಲು ಕ್ಯಾಪ್ಟನ್ ರೋಹಿತ್ ಶರ್ಮಾ, ಸಮರ್ಥ ಪ್ಲಾನ್ನೊಂದಿಗೆ ರೆಡಿಯಾಗಿದ್ದಾರೆ. ಈ ಪ್ಲಾನ್ ಆನ್ಫೀಲ್ಡ್ನಲ್ಲಿ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನು ಓದಿ:ಚಾರ್ಜ್ಶೀಟ್ ಆದ್ಮೆಲೆ ದರ್ಶನ್ಗೆ ಮತ್ತೊಂದು ಸಂಕಷ್ಟ.. ಸಿನಿಮಾ ಮಾಡೋರಿಗೂ ಆಘಾತಕಾರಿ ವಿಚಾರ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್