Advertisment

B.C ಪಾಟೀಲ್​ ಅಳಿಯ ಆತ್ಮಹತ್ಯೆ.. ಇಂದು ಮಧ್ಯಾಹ್ನ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ

author-image
AS Harshith
Updated On
ಅಳಿಯನ ಆತ್ಮಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟ ಮಾಜಿ ಸಚಿವ ಬಿ.ಸಿ ಪಾಟೀಲ್​​.. ಈ ಬಗ್ಗೆ ಏನಂದ್ರು?
Advertisment
  • ತಂದೆಯ ಸಮಾಧಿ ಪಕ್ಕದಲ್ಲೇ ಪ್ರತಾಪ್​ ಅಂತ್ಯಕ್ರಿಯೆ
  • ಪ್ರತಾಪ್​ನನ್ನು ಕಂಡು ಕಣ್ಣೀರು ಹಾಕಿದ ಪತ್ನಿ ಸೌಮ್ಯ
  • ಅಂತಿಮ ದರ್ಶನ ಪಡೆದ ಹಿರೇಕೆರೂರು ಶಾಸಕ ಯು.ಬಿ ಬಣಕಾರ್

ದಾವಣಗೆರೆ: ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯ ಪ್ರತಾಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬವಂತೂ ಅಳಿಯನ ಸಾವಿನಿಂದ ನೊಂದು ಕಣ್ಣಿರು ಹಾಕುತ್ತಿದ್ದಾರೆ. ಸದ್ಯ ಕತ್ತಲಗೆರೆ ಗ್ರಾಮಕ್ಕೆ ಮೃತ ಪ್ರತಾಪ್ ಪತ್ನಿ ಸೌಮ್ಯ, ತಂಗಿ ಸೃಷ್ಟಿ ಆಗಮಿಸಿದ್ದಾರೆ.

Advertisment

ಪತ್ನಿ ಸೌಮ್ಯ ಪತಿ ಪ್ರತಾಪ್​​​ಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾವ ಬಿ ಸಿ ಪಾಟೀಲ್ ಆಗಮಿಸಿ ಅಳಿಯನ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪತಿಯ ಪಾರ್ಥಿವ ಶರೀರ ಮುಂದೆ ಪತ್ನಿ ಕಣ್ಣೀರು ಹಾಕಿದ್ದಾರೆ.

ಬಿ .ಸಿ ಪಾಟೀಲ್ ಜೊತೆ ಹಿರೇಕೆರೂರು ಶಾಸಕ ಯು.ಬಿ ಬಣಕಾರ್ ಆಗಮಿಸಿದ್ದಾರೆ. ಮೃತ ಪ್ರತಾಪ್ ಗೆ ಶಾಸಕ ಬಣಕಾರ್ ಅಂತಿಮ ನಮನ ಸಲ್ಲಿಸಿದ್ದಾರೆ.

ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರತಾಪ್​ ಅಂತ್ಯಕ್ರಿಯೆ ನೆರವೇರಲಿದೆ. ವೀರಶೈವ ಸಂಪ್ರದಾಯದಂತೆ, ಅವರ ತೋಟದಲ್ಲಿರುವ ತಂದೆಯ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment