ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್​​ಗೆ ಸಚಿವ ಸ್ಥಾನ..?

author-image
Ganesh
Updated On
ಡಾ.ಕೆ. ಸುಧಾಕರ್ ಅಯೋಗ್ಯ, ಡಬಲ್ ಗೇಮ್ ಆಡ್ತಿದ್ದಾನೆ.. ಏಕವಚನದಲ್ಲೇ ಪ್ರದೀಪ್ ಈಶ್ವರ್ ಮತ್ತೆ ವಾಗ್ದಾಳಿ
Advertisment
  • ಬಲಿಜ ಸಮುದಾಯದಿಂದ ಸಚಿವ ಸ್ಥಾನಕ್ಕಾಗಿ ಒತ್ತಾಯ
  • ಸಿದ್ದರಾಮಯ್ಯ ಸರ್ಕಾರಕ್ಕೆ ಹೊಸ ಡಿಮ್ಯಾಂಡ್
  • ಸಂಪುಟ ವಿಸ್ತರಿಸಿ ಅವಕಾಶ ನೀಡುವಂತೆ ಆಗ್ರಹ

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್​ಗೆ ಸಚಿವ ಸ್ಥಾನ ನೀಡುವಂತೆ ಚಿಕ್ಕಬಳ್ಳಾಪುರದಲ್ಲಿ ಬಲಿಜ ಸಮುದಾಯ ಒತ್ತಾಯಿಸಿದೆ. ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಲಿಜ ಸಮುದಾಯ ಹಾಗೂ ಬೆಂಬಲಿಗರು ಭಾಗಿಯಾಗಿದ್ದರು.

ಈ ವೇಳೆ ರಾಜ್ಯದಲ್ಲಿ ಬಲಿಜ ಸಮುದಾಯದಲ್ಲಿ ಏಕೈಕ ಶಾಸಕ ಪ್ರದೀಪ್ ಈಶ್ವರ್. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಬೇಕು ಅಂತ ಮುಖಂಡರು ಮಾಡಿದರು. ಸಚಿವ ಸಂಪುಟ ವಿಸ್ತರಣೆ ಮಾಡಿ ಪ್ರದೀಪ್ ಈಶ್ವರ್​ಗೆ ಅವಕಾಶ ನೀಡುವಂತೆ ಆಗ್ರಹಿಸಿದರು.

ಇದನ್ನೂ ಓದಿ:ಒಂದಲ್ಲ.. ಆಸ್ಟ್ರೇಲಿಯಾ ವಿರುದ್ಧ ಒಟ್ಟು 3 ಲೆಕ್ಕ ಚುಕ್ತಾ ಬಾಕಿ ಇದೆ.. ಇಂದು ಪ್ರತೀಕಾರದ ಮ್ಯಾಚ್..!

ಪ್ರದೀಪ್ ಈಶ್ವರ್​ ಬಲಿಜ ಜನಾಂಗದ ಯುವಕ. ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಬಲಿಜ ಜನಾಂಗ ಬಿಜೆಪಿ ಹಿಂದೆ ಇತ್ತು. ವಿಧಾನಸಭೆ ಚುನಾವಣೆ ವೇಳೆ ಪ್ರದೀಪ್​ ಈಶ್ವರ್​​ಗೆ ಕಾಂಗ್ರೆಸ್​ನಿಂದ ಟಿಕೆಟ್ ಸಿಕ್ಕ ನಂತರ.. ಬಲಿಜ ಜನಾಂಗದ ಶೇಕಡಾ 80 ರಷ್ಟು ಜನ ಕಾಂಗ್ರೆಸ್​ ಕಡೆ ಬಂದರು. ಕಾಂಗ್ರೆಸ್​ ತನ್ನ ಮತದಾರರನ್ನು ಉಳಿಸಿಕೊಳ್ಳಬೇಕು ಅಂದರೆ ಪ್ರದೀಪ್ ಈಶ್ವರ್​​ಗೆ ಸಚಿವ ಸ್ಥಾನ ನೀಡಬೇಕು. ಹಾಗಾದರೆ ಬಿಜೆಪಿಯಲ್ಲಿರುವ ಮತಗಳು ಕೂಡ ಕಾಂಗ್ರೆಸ್​​ ಕಡೆ ವಾಲುತ್ತವೆ ಎಂದು ಸಮುದಾಯ ಒತ್ತಾಯಿಸಿದೆ.

ಇದನ್ನೂ ಓದಿ:Rain Alert ಜೂನ್ 29ವರೆಗೆ ಭಾರೀ ಮಳೆ.. ರಾಜ್ಯದ ಎರಡು ಭಾಗಗಳಿಗೆ ಪ್ರತ್ಯೇಕ ಎಚ್ಚರಿಕೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment