newsfirstkannada.com

ಗನ್​ ತೋರಿಸಿ ಬೆದರಿಸುತ್ತಿದ್ದ ಡಕಾಯಿತರು ಸಾರ್ವಜನಿಕರ ಕೈಯಲ್ಲಿ ಲಾಕ್​.. ಸರಿಯಾಗಿ ಬಿತ್ತು ನೋಡಿ ಗೂಸಾ

Share :

Published January 28, 2024 at 8:47am

    ಗನ್ ಹಿಡಿದು ಡಕಾಯಿತರ ಅಟ್ಟಹಾಸ

    ಕಂಟ್ರಿಮೇಡ್ ಗನ್ ಮತ್ತು ಪಿಸ್ತೂಲ್ ತೋರಿಸಿ ಬೆದರಿಕೆ

    ಡಕಾಯಿತರನ್ನು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ತುಮಕೂರು ಜಿಲ್ಲೆಯ ತಿಪಟೂರಿನ ಕೋಟೆ ಬಡಾವಣೆಯಲ್ಲಿ ಗನ್ ಹಿಡಿದು ಬಂದ ಡಕಾಯಿತರ ಅಟ್ಟಹಾಸಕ್ಕೆ ಜನರು ಪದರುಗುಟ್ಟಿ ಹೋಗಿದ್ದಾರೆ. ಬಡಾವಣೆ ನಿವಾಸಿಗಳಿಗೆ ಕಂಟ್ರಿಮೇಡ್ ಗನ್ ಮತ್ತು ಪಿಸ್ತೂಲ್ ತೋರಿಸಿ ಬೆದರಿಸಿದ ಡಕಾಯಿತರ ಗುಂಪನ್ನ ಸಾರ್ವಜನಿಕರೇ ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಕಂಟ್ರಿಮೇಡ್ ಗನ್ ತೋರಿಸಿ ಉತ್ತರ ಪ್ರದೇಶದ ರಾಮ್ ಪಾಲ್ ಹಾಗೂ ಜಗದೀಶ್ ಸಿಂಗ್ ಎಂಬ ಇಬ್ಬರನ್ನು ಹಿಡಿದು ಥಳಿಸಿದ್ದಾರೆ. ಸಿಕ್ಕಿಬಿದ್ದ ಡಕಾಯಿತರ ತಂಡದಲ್ಲಿ 9 ಮಂದಿ ಇದ್ದು, ಈ ಪೈಕಿ ಇಬ್ಬರು ಲಾಕ್ ಆಗಿದ್ದು, ಉಳಿದ 7 ಮಂದಿ ಪರಾರಿಯಾಗಿದ್ದಾರೆ.

ಸಾರ್ವಜನಿಕರ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನ ಬಂಧಿಸಿದ್ದು, ಸಿಕ್ಕಿ ಬಿದ್ದ ಆರೋಪಿಗಳಿಂದ ಲೋಕಲ್ ಪಿಸ್ತೂಲು ಹಾಗೂ 9 ಸಜೀವ ಗುಂಡುಗಳನ್ನ ವಶಕ್ಕೆ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗನ್​ ತೋರಿಸಿ ಬೆದರಿಸುತ್ತಿದ್ದ ಡಕಾಯಿತರು ಸಾರ್ವಜನಿಕರ ಕೈಯಲ್ಲಿ ಲಾಕ್​.. ಸರಿಯಾಗಿ ಬಿತ್ತು ನೋಡಿ ಗೂಸಾ

https://newsfirstlive.com/wp-content/uploads/2024/01/Tumkur-1.jpg

    ಗನ್ ಹಿಡಿದು ಡಕಾಯಿತರ ಅಟ್ಟಹಾಸ

    ಕಂಟ್ರಿಮೇಡ್ ಗನ್ ಮತ್ತು ಪಿಸ್ತೂಲ್ ತೋರಿಸಿ ಬೆದರಿಕೆ

    ಡಕಾಯಿತರನ್ನು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ತುಮಕೂರು ಜಿಲ್ಲೆಯ ತಿಪಟೂರಿನ ಕೋಟೆ ಬಡಾವಣೆಯಲ್ಲಿ ಗನ್ ಹಿಡಿದು ಬಂದ ಡಕಾಯಿತರ ಅಟ್ಟಹಾಸಕ್ಕೆ ಜನರು ಪದರುಗುಟ್ಟಿ ಹೋಗಿದ್ದಾರೆ. ಬಡಾವಣೆ ನಿವಾಸಿಗಳಿಗೆ ಕಂಟ್ರಿಮೇಡ್ ಗನ್ ಮತ್ತು ಪಿಸ್ತೂಲ್ ತೋರಿಸಿ ಬೆದರಿಸಿದ ಡಕಾಯಿತರ ಗುಂಪನ್ನ ಸಾರ್ವಜನಿಕರೇ ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಕಂಟ್ರಿಮೇಡ್ ಗನ್ ತೋರಿಸಿ ಉತ್ತರ ಪ್ರದೇಶದ ರಾಮ್ ಪಾಲ್ ಹಾಗೂ ಜಗದೀಶ್ ಸಿಂಗ್ ಎಂಬ ಇಬ್ಬರನ್ನು ಹಿಡಿದು ಥಳಿಸಿದ್ದಾರೆ. ಸಿಕ್ಕಿಬಿದ್ದ ಡಕಾಯಿತರ ತಂಡದಲ್ಲಿ 9 ಮಂದಿ ಇದ್ದು, ಈ ಪೈಕಿ ಇಬ್ಬರು ಲಾಕ್ ಆಗಿದ್ದು, ಉಳಿದ 7 ಮಂದಿ ಪರಾರಿಯಾಗಿದ್ದಾರೆ.

ಸಾರ್ವಜನಿಕರ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನ ಬಂಧಿಸಿದ್ದು, ಸಿಕ್ಕಿ ಬಿದ್ದ ಆರೋಪಿಗಳಿಂದ ಲೋಕಲ್ ಪಿಸ್ತೂಲು ಹಾಗೂ 9 ಸಜೀವ ಗುಂಡುಗಳನ್ನ ವಶಕ್ಕೆ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More