newsfirstkannada.com

ಮದುವೆ ನಿರಾಕರಿಸಿದ ಯುವಕನಿಗೆ ಬಿಸಿನೀರು ಚೆಲ್ಲಿದ ಮಹಿಳೆ; ಬರ್ತ್​​ ಡೇ ಪಾರ್ಟಿಗೆಂದು ರೂಂಗೆ ಕರೆಸಿ ಮುಹೂರ್ತ ಇಟ್ಟಳು

Share :

Published May 30, 2023 at 4:16am

Update May 30, 2023 at 6:18am

    ಮದುವೆ ನಿರಾಕರಿಸಿದ ಯುವಕನಿಗೆ ಬಿಸಿ ನೀರು ಚೆಲ್ಲಿದ ಮಹಿಳೆ

    ಬರ್ತ್​​ ಡೇ ಪಾರ್ಟಿಗೆಂದು ರೂಂಗೆ ಕರೆಸಿ ಮುಹೂರ್ತ ಇಟ್ಟ ನರ್ಸ್​

    ಡ್ರಿಪ್ಸ್​ ಹಾಕು ಎಂದವನಿಗೆ ಬಿಸಿ ನೀರು ಎರಚಿದ ಲೇಡಿ ನರ್ಸ್​

ಬೆಂಗಳೂರು: ಮದುವೆಗೆ ನಿರಾಕರಿಸಿದ ಯುವಕನಿಗೆ ಮಹಿಳೆಯೊಬ್ಬಳು ಬಿಸಿ ನೀರು ಎರಚಿದ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಕಲಬುರಗಿ ಮೂಲದ ವಿಜಯ್ ಶಂಕರ್ ಭೀಮಾ ಎಂಬಾತನಿಗೆ ಜ್ಯೋತಿ ಎಂಬ ವಿವಾಹಿತ ಮಹಿಳೆ ಬಿಸಿ ನೀರು ಎರಚಿದ್ದಾಳೆ. ಬಿಸಿ ನೀರು ತಾಗಿ ಯುವಕನ ದೇಹದ ಶೇ50ರಷ್ಟು ಭಾಗ ಸುಟ್ಟುಹೋಗಿದ್ದು, ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಹಿಳೆ ಜೊತೆಗೆ ಪ್ರೀತಿಯಲ್ಲಿ ಬಿದ್ದ ಯುವಕ

ಯುವಕ ವಿಜಯ್ ಶಂಕರ್ ಭೀಮಾ (30)  ಕಲಬುರಗಿ ಮೂಲದವನಾಗಿದ್ದು, ಕಲಬುರಗಿ ಜಿಲ್ಲೆ ಅಫಜಲಪುರ ಮೂಲದ ಮಹಿಳೆ ಜ್ಯೋತಿಯನ್ನು ಪ್ರೀತಿಸುತ್ತಿದ್ದ. ಆದರೆ ದಿನ ಕಳೆದಂತೆ ಮಹಿಳೆಗೆ ಮೊದಲೇ ಮದುವೆಯಾಗಿದೆ ಎಂದು ವಿಜಯ್ ಶಂಕರ್ ಭೀಮಾ ತಿಳಿಯಿತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಮಹಿಳೆಯಿಂದ ಅಂತರ ಕಾಯ್ದುಕೊಳ್ಳಲು ಮುಂದಾದ. ಅಲ್ಲದೇ ತಾನು ವಾಸವಿದ್ದ ಚಾಮರಾಜಪೇಟೆ ಬಾಡಿಗೆ ರೂಂ ಅನ್ನು ಮಹಿಳೆಗೆ ಬಿಟ್ಟು ಕೊಟ್ಟಿದ್ದ. ಕೊನೆಗೆ ಮಹಿಳೆಯಿಂದ ದೂರವಾಗಿ ಬೇರೆ ಮೇ  5ರಂದು ರೇಖಾ ಯುವತಿಯೊಂದಿಗೆ ಭೀಮಾಶಂಕರ ಮದುವೆ ಮಾಡಿಕೊಂಡಿದ್ದ. ಈ ವಿಚಾರವನ್ನು ಜ್ಯೋತಿ ಬಳಿ ಹೇಳಿಕೊಂಡಿದ್ದ.

ರೂಂಗೆ ಬಾ ಎಂದು ಕರೆದಳು

ವಿಜಯ್ ಶಂಕರ್ ಭೀಮಾ ಮದುವೆಯಾಗಿ ಪುನಃ ಬೆಂಗಳೂರಿಗೆ ಬಂದಿದ್ದ. ಈ ಸಮಯದಲ್ಲಿ ಮೇ 25 ರಂದು ಮಾತನಾಡಬೇಕು ಎಂದು ಜ್ಯೋತಿ ವಿಜಯ್ ಶಂಕರ್ ಭೀಮಾನನ್ನು ರೂಮಿಗೆ ಕರೆದಿದ್ದಾಳೆ. ಆಕೆಯ ಕರೆದಂತೆ ವಿಜಯ್ ಸಂಜೆ ಏಳು ಗಂಟೆ ಸುಮಾರಿಗೆ ರೂಮಿಗೆ ಬಂದಿದ್ದಾನೆ. ಈ ವೇಳೆ ಮಹಿಳೆ ಜ್ಯೋತಿ ಬಳಿ ತನಗೆ ಮದುವೆಯಾದ ವಿಚಾರ ಪ್ರಸ್ತಾಪಿಸಿದ್ದಾನೆ. ಇದರಿಂದ ಕೋಪಗೊಂಡ ಆಕೆ ಸೈಲೆಂಟಾಗಿ ಬಿಸಿ ನೀರು ಕಾಯಿಸಿ ತಂದು ಭೀಮಾಶಂಕರನ ಮುಖಕ್ಕೆ ಎರಚಿದ್ದಾಳೆ. ಸಾಲದಕ್ಕೆ ಬಿಯರ್ ಬಾಟಲ್ ನಿಂದ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಕಾಲ್ಕಿತ್ತಿದ್ದಾಳೆ.

ಬಿಸಿನೀರು ಎರಚಿ ಪರಾರಿ

ಮಹಿಳೆ ಜ್ಯೋತಿ ಬಿಸಿನೀರು ಎರಚಿದ ಪರಿಣಾಮ ತೀವ್ರ ಗಾಯಗೊಂಡು ವಿಜಯ್ ಶಂಕರ್ ಭೀಮಾ ಕಿರುಚಾಡ ತೊಡಗಿದ್ದಾನೆ. ಈ ವೇಳೆ ಮನೆ ಮಾಲೀಕ ಸೈಯದ್ ಮನೆಗೆ ಆಗಮಿಸಿ ಗಾಯಾಳುವನ್ನ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಬಿಸಿನೀರು ತಾಕಿ ಯುವಕನ ದೇಹ ಶೇಕಡಾ 40-50 ರಷ್ಟು ಸುಟ್ಟುಹೋಗಿದೆ. ಈ ಬಗ್ಗೆ ವಿಜಯ್ ಶಂಕರ್ ಭೀಮಾ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ದೂರು ಪಡೆದ ಪೊಲೀಸರು ಮಹಿಳೆ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

ವೃತ್ತಿಯಲ್ಲಿ ನರ್ಸ್​ ಆಗಿದ್ದ ಜ್ಯೋತಿ

ವಿಜಯ್ ಶಂಕರ್ ಭೀಮಾ ಚಾಮರಾಜಪೇಟೆಯ ಬೋರೋ ಕ್ಲಾತಿಂಗ್ ಎಂಬಲ್ಲಿ ಫೋಟೋ ಎಡಿಟಿಂಗ್ ಕೆಲಸ ಮಾಡಿಕೊಂಡಿದ್ದನು. ಸುಮಾರು 4 ವರ್ಷದ ಹಿಂದೆ ಆತನಿಗೆ ಜ್ಯೋತಿ ದೊಡ್ಡಮನಿ ಎಂಬಾಕೆಯ ಪರಿಚಯಾಗಿತು. ಆದರೆ ಜ್ಯೋತಿ ವೃತ್ತಿಯಲ್ಲಿ ನರ್ಸ್​ ಆಗಿದ್ದು, ಬೃಂದಾವನ ಆಸ್ಪತ್ರೆಯಲ್ಲಿ ವೃತ್ತಿ ಮಾಡುತ್ತಿದ್ದಳು. ಹೀಗಿದ್ದರು ಜ್ಯೋತಿ ತನಗೆ ಈ ಮೊದಲು ಮದುವೆ ಆಗಿರುವ ವಿಚಾರವನ್ನು ವಿಜಯ್ ಶಂಕರ್ ಭೀಮಾ ಜೊತೆಗೆ ಮುಚ್ಚಿಟ್ಟುಕೊಂಡಿದ್ದಳು. ಮಾತ್ರವಲ್ಲದೆ ಆತನನನ್ನು ಪ್ರೀತಿಗೆ ಬೀಳಿಸಿದ್ದಳು.

ರೂಂ ಬಿಟ್ಟು ಸ್ನೇಹಿತನ ಜೊತೆಗಿದ್ದ ವಿಜಯ್​

ವಿಜಯ್​ಗೆ 2 ವರ್ಷಗಳ ಹಿಂದೆ ಜ್ಯೋತಿಗೆ ಮದುವೆಯಾಗಿರೊ ವಿಚಾರ ಗೊತ್ತಾಗಿದೆ. ಹೀಗಾಗಿ ಆಕೆಯಿಂದ ದೂರ ಉಳಿಯಲು ಮುಂದಾಗುತ್ತಾನೆ. ಮಾತ್ರವಲ್ಲದೆ 7 ತಿಂಗಳ ಹಿಂದೆ ತನ್ನ ಹಳೆಯ ರೂಂ ಅನ್ನು ಆಕೆಗೆ ಬಿಟ್ಟುಕೊಟ್ಟು ಚಾಮರಾಜಪೇಟೆ ಎಂ.ಡಿ ಬ್ಲಾಕ್​ನಲ್ಲಿ ಸ್ನೇಹಿತನ ಜೊತೆಗೆ ರೂಂ ಮಾಡಿಕೊಂಡಿದ್ದನು.

ಕೋಪಗೊಂಡ ಜ್ಯೋತಿ
ವಿಜಯ್​ ಮೇ.05 ರಂದು ಮದುವೆಯಾಗಿ ಮೇ 23 ರಂದು ವಾಪಸ್ ಬೆಂಗಳೂರಿಗೆ ಬಂದಿದ್ದ. ಮೇ 25 ರಂದು ಸಂಜೆ 4 ಗಂಟೆಗೆ ಜ್ಯೋತಿ ವಿಜಯ್ ಗೆ ಕರೆ ಮಾಡಿ ರೂಮ್ ಗೆ ಕರೆಸಿಕೊಂಡಿದ್ದಾಳೆ.
ತನ್ನ ಬರ್ತ್ ಡೇ ಪ್ರಿಪರೇಷನ್ ಗಾಗಿ ರೂಮಿಗೆ ಬರುವಂತೆ ತಿಳಿಸಿದ್ದಾಳೆ. ರಾತ್ರಿ 7 ಗಂಟೆಗೆ ಗಾಯಾಳು ರೂಮಿಗೆ ಬಂದಿದ್ದಾನೆ. ಈ ಸಮಯದಲ್ಲಿ ವಿಜಯ್ ತನ್ನ ತಂದೆ-ತಾಯಿ, ಹೆಂಡತಿ ಫೋನ್ ಮಾಡಿ ಸುಮಾರು 1 ಗಂಟೆ ಮಾತನಾಡಿದ್ದಾನೆ. ಇದನ್ನು ಕೇಳಿಸಿಕೊಂಡ ಜ್ಯೋತಿ ಕೋಪಗೊಂಡಿದ್ದಳು. ರೂಮಿನ ಹೊರಗೆ ಹೋಗಿ ಕುಳಿತಿದ್ದಳು.

ವಿಜಯ್​ ತನಗೆ ಮದುವೆಯಾಗಿದೆ ಹಾಗಾಗಿ ಇನ್ನು ಮುಂದೆ ಇದೆಲ್ಲಾ ಬೇಡ, ಇಲ್ಲಿಗೆ ಸ್ಟಾಪ್ ಮಾಡೋಣ ಎಂದು ಜ್ಯೋತಿಗೆ ಬುದ್ಧಿವಾದ ಹೇಳಿದ್ದಾನೆ. ನಂತರ ವಿಜಯ್ ಯಾಕೋ ಮೈಗೆ ಹುಷಾರಿಲ್ಲ ಡ್ರಿಪ್ಸ್ ಹಾಕು ಎಂದು ಹೇಳಿ ರೂಮಿನಲ್ಲಿ ಹೋಗಿ ಮಲಗಿಕೊಂಡಿದ್ದಾನೆ. ಅಷ್ಟು ಹೊತ್ತಿಗೆ ಸರಿಯಾಗೆ ಇದ್ದ ಜ್ಯೋತಿ ಆತನಿಗೆ ಡ್ರಿಪ್ಸ್ ಹಾಕಿದ್ದಾಳೆ. ರಾತ್ರಿ ಪೂರ್ತಿ ಪ್ಲಾನ್​ ಮಾಡಿದ್ದ ಜ್ಯೋತಿ ಮೇ 26 ರ ಬೆಳಗಿನ ಜಾವ 4 ರಿಂದ 5 ಗಂಟೆಯದಲ್ಲಿ ಬಿಸಿ ನೀರು ಕಾಯಿಸಿದ್ದಾಳೆ. ವಿಜಯ್ ಮಲಗಿದ್ದ ಸಮಯದಲ್ಲಿ ಬಿಸಿ ನೀರನ್ನು ಆತನ ಮೈ ಮೇಲೆ ಸುರಿದಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ನಿರಾಕರಿಸಿದ ಯುವಕನಿಗೆ ಬಿಸಿನೀರು ಚೆಲ್ಲಿದ ಮಹಿಳೆ; ಬರ್ತ್​​ ಡೇ ಪಾರ್ಟಿಗೆಂದು ರೂಂಗೆ ಕರೆಸಿ ಮುಹೂರ್ತ ಇಟ್ಟಳು

https://newsfirstlive.com/wp-content/uploads/2023/05/Hot-Water-Case.jpg

    ಮದುವೆ ನಿರಾಕರಿಸಿದ ಯುವಕನಿಗೆ ಬಿಸಿ ನೀರು ಚೆಲ್ಲಿದ ಮಹಿಳೆ

    ಬರ್ತ್​​ ಡೇ ಪಾರ್ಟಿಗೆಂದು ರೂಂಗೆ ಕರೆಸಿ ಮುಹೂರ್ತ ಇಟ್ಟ ನರ್ಸ್​

    ಡ್ರಿಪ್ಸ್​ ಹಾಕು ಎಂದವನಿಗೆ ಬಿಸಿ ನೀರು ಎರಚಿದ ಲೇಡಿ ನರ್ಸ್​

ಬೆಂಗಳೂರು: ಮದುವೆಗೆ ನಿರಾಕರಿಸಿದ ಯುವಕನಿಗೆ ಮಹಿಳೆಯೊಬ್ಬಳು ಬಿಸಿ ನೀರು ಎರಚಿದ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಕಲಬುರಗಿ ಮೂಲದ ವಿಜಯ್ ಶಂಕರ್ ಭೀಮಾ ಎಂಬಾತನಿಗೆ ಜ್ಯೋತಿ ಎಂಬ ವಿವಾಹಿತ ಮಹಿಳೆ ಬಿಸಿ ನೀರು ಎರಚಿದ್ದಾಳೆ. ಬಿಸಿ ನೀರು ತಾಗಿ ಯುವಕನ ದೇಹದ ಶೇ50ರಷ್ಟು ಭಾಗ ಸುಟ್ಟುಹೋಗಿದ್ದು, ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಹಿಳೆ ಜೊತೆಗೆ ಪ್ರೀತಿಯಲ್ಲಿ ಬಿದ್ದ ಯುವಕ

ಯುವಕ ವಿಜಯ್ ಶಂಕರ್ ಭೀಮಾ (30)  ಕಲಬುರಗಿ ಮೂಲದವನಾಗಿದ್ದು, ಕಲಬುರಗಿ ಜಿಲ್ಲೆ ಅಫಜಲಪುರ ಮೂಲದ ಮಹಿಳೆ ಜ್ಯೋತಿಯನ್ನು ಪ್ರೀತಿಸುತ್ತಿದ್ದ. ಆದರೆ ದಿನ ಕಳೆದಂತೆ ಮಹಿಳೆಗೆ ಮೊದಲೇ ಮದುವೆಯಾಗಿದೆ ಎಂದು ವಿಜಯ್ ಶಂಕರ್ ಭೀಮಾ ತಿಳಿಯಿತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಮಹಿಳೆಯಿಂದ ಅಂತರ ಕಾಯ್ದುಕೊಳ್ಳಲು ಮುಂದಾದ. ಅಲ್ಲದೇ ತಾನು ವಾಸವಿದ್ದ ಚಾಮರಾಜಪೇಟೆ ಬಾಡಿಗೆ ರೂಂ ಅನ್ನು ಮಹಿಳೆಗೆ ಬಿಟ್ಟು ಕೊಟ್ಟಿದ್ದ. ಕೊನೆಗೆ ಮಹಿಳೆಯಿಂದ ದೂರವಾಗಿ ಬೇರೆ ಮೇ  5ರಂದು ರೇಖಾ ಯುವತಿಯೊಂದಿಗೆ ಭೀಮಾಶಂಕರ ಮದುವೆ ಮಾಡಿಕೊಂಡಿದ್ದ. ಈ ವಿಚಾರವನ್ನು ಜ್ಯೋತಿ ಬಳಿ ಹೇಳಿಕೊಂಡಿದ್ದ.

ರೂಂಗೆ ಬಾ ಎಂದು ಕರೆದಳು

ವಿಜಯ್ ಶಂಕರ್ ಭೀಮಾ ಮದುವೆಯಾಗಿ ಪುನಃ ಬೆಂಗಳೂರಿಗೆ ಬಂದಿದ್ದ. ಈ ಸಮಯದಲ್ಲಿ ಮೇ 25 ರಂದು ಮಾತನಾಡಬೇಕು ಎಂದು ಜ್ಯೋತಿ ವಿಜಯ್ ಶಂಕರ್ ಭೀಮಾನನ್ನು ರೂಮಿಗೆ ಕರೆದಿದ್ದಾಳೆ. ಆಕೆಯ ಕರೆದಂತೆ ವಿಜಯ್ ಸಂಜೆ ಏಳು ಗಂಟೆ ಸುಮಾರಿಗೆ ರೂಮಿಗೆ ಬಂದಿದ್ದಾನೆ. ಈ ವೇಳೆ ಮಹಿಳೆ ಜ್ಯೋತಿ ಬಳಿ ತನಗೆ ಮದುವೆಯಾದ ವಿಚಾರ ಪ್ರಸ್ತಾಪಿಸಿದ್ದಾನೆ. ಇದರಿಂದ ಕೋಪಗೊಂಡ ಆಕೆ ಸೈಲೆಂಟಾಗಿ ಬಿಸಿ ನೀರು ಕಾಯಿಸಿ ತಂದು ಭೀಮಾಶಂಕರನ ಮುಖಕ್ಕೆ ಎರಚಿದ್ದಾಳೆ. ಸಾಲದಕ್ಕೆ ಬಿಯರ್ ಬಾಟಲ್ ನಿಂದ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಕಾಲ್ಕಿತ್ತಿದ್ದಾಳೆ.

ಬಿಸಿನೀರು ಎರಚಿ ಪರಾರಿ

ಮಹಿಳೆ ಜ್ಯೋತಿ ಬಿಸಿನೀರು ಎರಚಿದ ಪರಿಣಾಮ ತೀವ್ರ ಗಾಯಗೊಂಡು ವಿಜಯ್ ಶಂಕರ್ ಭೀಮಾ ಕಿರುಚಾಡ ತೊಡಗಿದ್ದಾನೆ. ಈ ವೇಳೆ ಮನೆ ಮಾಲೀಕ ಸೈಯದ್ ಮನೆಗೆ ಆಗಮಿಸಿ ಗಾಯಾಳುವನ್ನ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಬಿಸಿನೀರು ತಾಕಿ ಯುವಕನ ದೇಹ ಶೇಕಡಾ 40-50 ರಷ್ಟು ಸುಟ್ಟುಹೋಗಿದೆ. ಈ ಬಗ್ಗೆ ವಿಜಯ್ ಶಂಕರ್ ಭೀಮಾ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ದೂರು ಪಡೆದ ಪೊಲೀಸರು ಮಹಿಳೆ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

ವೃತ್ತಿಯಲ್ಲಿ ನರ್ಸ್​ ಆಗಿದ್ದ ಜ್ಯೋತಿ

ವಿಜಯ್ ಶಂಕರ್ ಭೀಮಾ ಚಾಮರಾಜಪೇಟೆಯ ಬೋರೋ ಕ್ಲಾತಿಂಗ್ ಎಂಬಲ್ಲಿ ಫೋಟೋ ಎಡಿಟಿಂಗ್ ಕೆಲಸ ಮಾಡಿಕೊಂಡಿದ್ದನು. ಸುಮಾರು 4 ವರ್ಷದ ಹಿಂದೆ ಆತನಿಗೆ ಜ್ಯೋತಿ ದೊಡ್ಡಮನಿ ಎಂಬಾಕೆಯ ಪರಿಚಯಾಗಿತು. ಆದರೆ ಜ್ಯೋತಿ ವೃತ್ತಿಯಲ್ಲಿ ನರ್ಸ್​ ಆಗಿದ್ದು, ಬೃಂದಾವನ ಆಸ್ಪತ್ರೆಯಲ್ಲಿ ವೃತ್ತಿ ಮಾಡುತ್ತಿದ್ದಳು. ಹೀಗಿದ್ದರು ಜ್ಯೋತಿ ತನಗೆ ಈ ಮೊದಲು ಮದುವೆ ಆಗಿರುವ ವಿಚಾರವನ್ನು ವಿಜಯ್ ಶಂಕರ್ ಭೀಮಾ ಜೊತೆಗೆ ಮುಚ್ಚಿಟ್ಟುಕೊಂಡಿದ್ದಳು. ಮಾತ್ರವಲ್ಲದೆ ಆತನನನ್ನು ಪ್ರೀತಿಗೆ ಬೀಳಿಸಿದ್ದಳು.

ರೂಂ ಬಿಟ್ಟು ಸ್ನೇಹಿತನ ಜೊತೆಗಿದ್ದ ವಿಜಯ್​

ವಿಜಯ್​ಗೆ 2 ವರ್ಷಗಳ ಹಿಂದೆ ಜ್ಯೋತಿಗೆ ಮದುವೆಯಾಗಿರೊ ವಿಚಾರ ಗೊತ್ತಾಗಿದೆ. ಹೀಗಾಗಿ ಆಕೆಯಿಂದ ದೂರ ಉಳಿಯಲು ಮುಂದಾಗುತ್ತಾನೆ. ಮಾತ್ರವಲ್ಲದೆ 7 ತಿಂಗಳ ಹಿಂದೆ ತನ್ನ ಹಳೆಯ ರೂಂ ಅನ್ನು ಆಕೆಗೆ ಬಿಟ್ಟುಕೊಟ್ಟು ಚಾಮರಾಜಪೇಟೆ ಎಂ.ಡಿ ಬ್ಲಾಕ್​ನಲ್ಲಿ ಸ್ನೇಹಿತನ ಜೊತೆಗೆ ರೂಂ ಮಾಡಿಕೊಂಡಿದ್ದನು.

ಕೋಪಗೊಂಡ ಜ್ಯೋತಿ
ವಿಜಯ್​ ಮೇ.05 ರಂದು ಮದುವೆಯಾಗಿ ಮೇ 23 ರಂದು ವಾಪಸ್ ಬೆಂಗಳೂರಿಗೆ ಬಂದಿದ್ದ. ಮೇ 25 ರಂದು ಸಂಜೆ 4 ಗಂಟೆಗೆ ಜ್ಯೋತಿ ವಿಜಯ್ ಗೆ ಕರೆ ಮಾಡಿ ರೂಮ್ ಗೆ ಕರೆಸಿಕೊಂಡಿದ್ದಾಳೆ.
ತನ್ನ ಬರ್ತ್ ಡೇ ಪ್ರಿಪರೇಷನ್ ಗಾಗಿ ರೂಮಿಗೆ ಬರುವಂತೆ ತಿಳಿಸಿದ್ದಾಳೆ. ರಾತ್ರಿ 7 ಗಂಟೆಗೆ ಗಾಯಾಳು ರೂಮಿಗೆ ಬಂದಿದ್ದಾನೆ. ಈ ಸಮಯದಲ್ಲಿ ವಿಜಯ್ ತನ್ನ ತಂದೆ-ತಾಯಿ, ಹೆಂಡತಿ ಫೋನ್ ಮಾಡಿ ಸುಮಾರು 1 ಗಂಟೆ ಮಾತನಾಡಿದ್ದಾನೆ. ಇದನ್ನು ಕೇಳಿಸಿಕೊಂಡ ಜ್ಯೋತಿ ಕೋಪಗೊಂಡಿದ್ದಳು. ರೂಮಿನ ಹೊರಗೆ ಹೋಗಿ ಕುಳಿತಿದ್ದಳು.

ವಿಜಯ್​ ತನಗೆ ಮದುವೆಯಾಗಿದೆ ಹಾಗಾಗಿ ಇನ್ನು ಮುಂದೆ ಇದೆಲ್ಲಾ ಬೇಡ, ಇಲ್ಲಿಗೆ ಸ್ಟಾಪ್ ಮಾಡೋಣ ಎಂದು ಜ್ಯೋತಿಗೆ ಬುದ್ಧಿವಾದ ಹೇಳಿದ್ದಾನೆ. ನಂತರ ವಿಜಯ್ ಯಾಕೋ ಮೈಗೆ ಹುಷಾರಿಲ್ಲ ಡ್ರಿಪ್ಸ್ ಹಾಕು ಎಂದು ಹೇಳಿ ರೂಮಿನಲ್ಲಿ ಹೋಗಿ ಮಲಗಿಕೊಂಡಿದ್ದಾನೆ. ಅಷ್ಟು ಹೊತ್ತಿಗೆ ಸರಿಯಾಗೆ ಇದ್ದ ಜ್ಯೋತಿ ಆತನಿಗೆ ಡ್ರಿಪ್ಸ್ ಹಾಕಿದ್ದಾಳೆ. ರಾತ್ರಿ ಪೂರ್ತಿ ಪ್ಲಾನ್​ ಮಾಡಿದ್ದ ಜ್ಯೋತಿ ಮೇ 26 ರ ಬೆಳಗಿನ ಜಾವ 4 ರಿಂದ 5 ಗಂಟೆಯದಲ್ಲಿ ಬಿಸಿ ನೀರು ಕಾಯಿಸಿದ್ದಾಳೆ. ವಿಜಯ್ ಮಲಗಿದ್ದ ಸಮಯದಲ್ಲಿ ಬಿಸಿ ನೀರನ್ನು ಆತನ ಮೈ ಮೇಲೆ ಸುರಿದಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More