ಬಟ್ಟೆ ಕಳ್ಳತನದ ಪ್ರಕರಣ ಸಂಬಂಧ ವರದಿ ಕೇಳಿದ್ದ ಡಿಸಿಪಿ ಗಿರೀಶ್
ವಿಚಾರಣೆ ವೇಳೆ ತಪ್ಪು ಕಂಡು ಬಂದ ಹಿನ್ನೆಲೆಯಲ್ಲಿ ಪಿಎಸ್ಐ ಸಸ್ಪೆಂಡ್
ವ್ಯಾಪಾರಸ್ಥರ ಗೋದಾಮಿನಲ್ಲಿ 8 ಲಕ್ಷ ರೂ. ಮೌಲ್ಯದ ಬಟ್ಟೆ ಕಳ್ಳತನ
ಬೆಂಗಳೂರು: 8 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ಕಳ್ಳತನವಾಗಿದ್ದರೂ FIR ದಾಖಲಿಸದೇ ನಿರ್ಲಕ್ಷ್ಯ ತೋರಿಸಿದ ಆಧಾರದ ಮೇಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಸೋಮಶೇಖರ್ರನ್ನ ಅಮಾನತು ಮಾಡಲಾಗಿದೆ.
ಈ ಸಂಬಂಧ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಅವರು ಪಿಎಸ್ಐ ಸೋಮಶೇಖರ್ರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಮುನಿರೆಡ್ಡಿ ಎಂಬುವರ ಗೋದಾಮಿನಲ್ಲಿ 8 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ಕಳ್ಳತನವಾಗಿತ್ತು. ಕಳ್ಳತನವಾಗಿದ್ರೂ ಎಫ್ಐಆರ್ ದಾಖಲು ಮಾಡದೇ ಕೇವಲ ಎನ್ಸಿಆರ್ ಮಾತ್ರ ಪಿಎಸ್ಐ ಸೋಮಶೇಕರ್ ಅವರು ದಾಖಲು ಮಾಡಿದ್ದರು.
ಇದರಿಂದ ಎಫ್ಐಆರ್ ದಾಖಲು ಮಾಡದೇ ನಿರ್ಲಕ್ಷ್ಯ ತೋರಿದ್ದರು. ಈ ಸಂಬಂಧ ವರದಿ ನೀಡುವಂತೆ ಡಿಸಿಪಿ ಗಿರೀಶ್ ಕೇಳಿದ್ದರು. ಬಳಿಕ ಸೋಮಶೇಖರ್ರನ್ನ ವಿಚಾರಣೆ ಮಾಡಲಾಗಿತ್ತು. ನೀಡಿದ ವರದಿಯಲ್ಲಿ ತಪ್ಪು ಕಂಡು ಬಂದಿದೆ. ಈ ವರದಿ ಆಧರಿಸಿಯೇ ಸೋಮಶೇಖರ್ರನ್ನ ಹುದ್ದೆಯಿಂದ ಅಮಾನತು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಟ್ಟೆ ಕಳ್ಳತನದ ಪ್ರಕರಣ ಸಂಬಂಧ ವರದಿ ಕೇಳಿದ್ದ ಡಿಸಿಪಿ ಗಿರೀಶ್
ವಿಚಾರಣೆ ವೇಳೆ ತಪ್ಪು ಕಂಡು ಬಂದ ಹಿನ್ನೆಲೆಯಲ್ಲಿ ಪಿಎಸ್ಐ ಸಸ್ಪೆಂಡ್
ವ್ಯಾಪಾರಸ್ಥರ ಗೋದಾಮಿನಲ್ಲಿ 8 ಲಕ್ಷ ರೂ. ಮೌಲ್ಯದ ಬಟ್ಟೆ ಕಳ್ಳತನ
ಬೆಂಗಳೂರು: 8 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ಕಳ್ಳತನವಾಗಿದ್ದರೂ FIR ದಾಖಲಿಸದೇ ನಿರ್ಲಕ್ಷ್ಯ ತೋರಿಸಿದ ಆಧಾರದ ಮೇಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಸೋಮಶೇಖರ್ರನ್ನ ಅಮಾನತು ಮಾಡಲಾಗಿದೆ.
ಈ ಸಂಬಂಧ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಅವರು ಪಿಎಸ್ಐ ಸೋಮಶೇಖರ್ರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಮುನಿರೆಡ್ಡಿ ಎಂಬುವರ ಗೋದಾಮಿನಲ್ಲಿ 8 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ಕಳ್ಳತನವಾಗಿತ್ತು. ಕಳ್ಳತನವಾಗಿದ್ರೂ ಎಫ್ಐಆರ್ ದಾಖಲು ಮಾಡದೇ ಕೇವಲ ಎನ್ಸಿಆರ್ ಮಾತ್ರ ಪಿಎಸ್ಐ ಸೋಮಶೇಕರ್ ಅವರು ದಾಖಲು ಮಾಡಿದ್ದರು.
ಇದರಿಂದ ಎಫ್ಐಆರ್ ದಾಖಲು ಮಾಡದೇ ನಿರ್ಲಕ್ಷ್ಯ ತೋರಿದ್ದರು. ಈ ಸಂಬಂಧ ವರದಿ ನೀಡುವಂತೆ ಡಿಸಿಪಿ ಗಿರೀಶ್ ಕೇಳಿದ್ದರು. ಬಳಿಕ ಸೋಮಶೇಖರ್ರನ್ನ ವಿಚಾರಣೆ ಮಾಡಲಾಗಿತ್ತು. ನೀಡಿದ ವರದಿಯಲ್ಲಿ ತಪ್ಪು ಕಂಡು ಬಂದಿದೆ. ಈ ವರದಿ ಆಧರಿಸಿಯೇ ಸೋಮಶೇಖರ್ರನ್ನ ಹುದ್ದೆಯಿಂದ ಅಮಾನತು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ