ಸ್ಯಾಂಡಲ್‌ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿಗೆ ಇದೇನಾ ಕಾರಣ..?

author-image
Bheemappa
Updated On
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್; ಅಸಲಿ ಕಾರಣವೇನು?
Advertisment
  • ಪೊಲೀಸರಿಗೆ ಸೌಂದರ್ಯ ಜಗದೀಶ್ ಕುಟುಂಬ ಕೊಟ್ಟ ಮಾಹಿತಿ ಏನು?
  • ಅಪ್ಪು ಪಪ್ಪು, ರಾಮ್ ಲೀಲಾ, ಸ್ನೇಹಿತರು ಸೇರಿ ಕೆಲ ಸಿನಿಮಾ ನಿರ್ಮಿಸಿದ್ರು
  • ಸೌಂದರ್ಯ ಜಗದೀಶ್ ನಿರ್ಮಾಪಕ ಹಾಗೂ ಬಾಡಿ ಬಿಲ್ಡರ್ ಕೂಡ ಆಗಿದ್ರು

ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಸೌಂದರ್ಯ ಜಗದೀಶ್ ಅವರ ವ್ಯವಹಾರ ಲಾಸ್ ಆಗಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದರು. ಇದೇ ವೇಳೆ ಬೆಂಗಳೂರಿನ ರಾಜಾಜಿನಗರದ 5ನೇ ಹಂತ ಹಾಗೂ 6ನೇ ಹಂತದಲ್ಲಿರುವ ಮನೆಗಳ ಮೇಲೆ ಬ್ಯಾಂಕ್​ನವರು​ ಮುತ್ತಿಗೆ ಹಾಕಿದ್ದರು. ಇದರಿಂದ ಸೌಂದರ್ಯ ಜಗದೀಶ್​ಗೆ ಬಹಳಷ್ಟು ನೊಂದಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: BREAKING: ಸ್ಯಾಂಡಲ್‌ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್‌ ಇನ್ನಿಲ್ಲ

ವ್ಯವಹಾರ ಲಾಸ್ ಆಗಿರುವುದದ ಜೊತೆಗೆ ಅವರು ಮಾನಿಸಿಕ ಕಿನ್ನತೆಗೂ ಒಳಗಾಗಿದ್ದರು. ಅಲ್ಲದೇ ಸ್ವಂತ ಬಾರ್​ ಮೇಲೆ ಪೊಲೀಸ್​ ರೈಡ್​ ಆದ ಮೇಲೆ ಅಂತೂ ಇನ್ನಷ್ಟು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಈ ಕಾರಣಗಳಿಂದಲೇ ಸೌಂದರ್ಯ ಜಗದೀಶ್ ಅವರು ಸಾವಿನ ದಾರಿ ಹಿಡಿದರು ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment