/newsfirstlive-kannada/media/post_attachments/wp-content/uploads/2025/05/BNG_RAIN-1.jpg)
ಬೆಂಗಳೂರು: ಉದ್ಯಾನನಗರಿಯ ಹಲವೆಡೆ ಗುಡುಗು ಸಹಿತ ಜೋರು ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ವೈಟ್​​ಫೀಲ್ಡ್​ನ ಗುಂಜೂರು ರಸ್ತೆಯಲ್ಲಿ ಮರ ಬಿದ್ದಿದ್ದರಿಂದ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಬಿಬಿಎಂಪಿ ಸಿಬ್ಬಂದಿ ಆಗಮಿಸಿ ಮರವನ್ನು ತೆರವು ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2025/05/Bangalore-heavy-Rain-1.jpg)
ಸಿಲಿಕಾನ್​ ಸಿಟಿಯಲ್ಲಿ ಸಂಜೆ ಮಳೆ ಜೋರಾಗಿಯೇ ಸುರಿದಿದೆ. ವೈಟ್ ಫೀಲ್ಡ್​​ನ ಗುಂಜೂರು ರಸ್ತೆ ಮಳೆ ನೀರಿನಿಂದ ತುಂಬಿದೆ. ಅಲ್ಲದೇ ರಸ್ತೆಗೆ ಮರ ಬಿದ್ದು ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ ಮರವನ್ನು ತೆರವುಗೊಳಸಿದ್ದಾರೆ. ಇನ್ನೊಂದೆಡೆ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದರಿಂದ ಬೈಕ್​​ ಸವಾರರು, ವಾಹನ ಚಾಲಕರು ಸಮಸ್ಯೆ ಎದುರಿಸಿದರು.
/newsfirstlive-kannada/media/post_attachments/wp-content/uploads/2025/05/Bangalore-rain-auto.jpg)
ಮಳೆಯಿಂದಾಗಿ ನಗರದ ಮೂರು ಕಡೆಗಳಲ್ಲಿ ಮರ ಬಿದ್ದಿವೆ. ಕತ್ರಿಗುಪ್ಪೆ ಬಳಿ ಭಾರೀ ಮಳೆಯಿಂದ ಆಟೋ ಮೇಲೆ ಮರ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಮಹೇಶ್ (45) ಪ್ರಾಣ ಬಿಟ್ಟಿದ್ದಾರೆ. ಕೋರಮಂಗಲದ ತಾವರೆಕೆರೆ ಬಳಿ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಸುಬ್ರಮಣ್ಯ ನಗರದಲ್ಲೂ ಮರ ಧರೆಗುರುಳಿದೆ. ಸದ್ಯ ಬಿಬಿಎಂಪಿ ಸಿಬ್ಬಂದಿಯಿಂದ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
…
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us