/newsfirstlive-kannada/media/post_attachments/wp-content/uploads/2024/12/manmohan_singh.jpg)
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಮಂಡಿಸಿದ ‘ಕರ್ನಾಟಕ ಬಜೆಟ್ 2025’ ರಲ್ಲಿ ಬೆಂಗಳೂರು ವಿವಿಗೆ ಮಾಜಿ ಪ್ರಧಾನಿ ದಿವಂಗತ ಡಾ.ಮನಮೋಹನ್ ಸಿಂಗ್ ಹೆಸರಿಡುವುದಾಗಿ ಘೋಷಣೆ ಮಾಡಿದ್ದಾರೆ. ಬೆನ್ನಲ್ಲೇ ಅನೇಕರು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.
ಅಲ್ಲದೇ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೂಡ ವಿರೋಧ ವ್ಯಕ್ತಪಡಿಸಿರೋದ್ರಿಂದ ಈ ವಿಚಾರ ರಾಜಕೀಯಕ್ಕೆ ತಿರುಗಿದೆ. ವಿರೋಧ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ.. ದೇಶಕ್ಕೆ ಮನಮೋಹನ್ ಸಿಂಗ್ ಕೊಡುಗೆ ಇಲ್ವಾ? ಮೊದಲು ಅದು ಸೆಂಟ್ರಲ್ ಯೂನಿರ್ವಸಿಟಿ ಆಗಿತ್ತು. ಬಿಜೆಪಿಯವರು ಬೌರಿಂಗ್ಗೆ ವಾಜಪೇಯಿ ಹೆಸರು ಇಡಲಿಲ್ವಾ? ಎಂದು ಕಿಡಿಕಾರಿದ್ದಾರೆ.
ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ.. ಅವರು ದೀನ್ ದಯಾಳ್ ಹೆಸರು ಇಟ್ಟಿದ್ದಾರೆ. ನಾವು ಮನಮೋಹನ್ ಸಿಂಗ್ ಹೆಸರು ಇಡಬಾರದ್ದಾ? ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಫ್ಲೈ ಓವರ್ ಮಾಡಿದ್ದು ಯಾರು? ಎಲೆಕ್ಟ್ರಾನಿಕ್ ಸಿಟಿಗೆ ಫ್ಲೈ ಓವರ್ ಮಾಡಿದ್ದು ಯಾರು? ನೆಲಮಂಗಲ ಫ್ಲೈಓವರ್ ಮಾಡಿದ್ದು ಯಾರು? ನೆರೇಗಾ ಯೋಜನೆ ತಂದಿದ್ದು ಯಾರು? ರೈಟ್ ಟು ಎಜುಕೇಷನ್ ತಂದಿದ್ದು ಯಾರು? ಪುಡ್ ಸೆಕ್ಯೂರಿಟಿ ಆಕ್ಟ್ ತಂದಿದ್ದು ಯಾರು? ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತಂದಿದ್ದು ಯಾರು? ಆಶಾ ಕಾರ್ಯಕರ್ತೆ ಮಾಡಿದ್ದು ಯಾರು? ಇಷ್ಟೆಲ್ಲ ಕೊಡುಗೆ ನೀಡಿದರೂ ಅವರ ಹೆಸರು ಇಡಬಾರದ ಅನ್ನೋ ಮೂಲಕ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಛಾವಾ ಸಿನಿಮಾ ನೋಡಿ ರಾತ್ರೋರಾತ್ರಿ ಭೂಮಿ ಅಗೆದ ಜನ.. ಸಿಕ್ಕೇ ಬಿಡ್ತಾ ರಾಶಿ ರಾಶಿ ಚಿನ್ನ..?
ದೇಶದ ಆರ್ಥಿಕ ಪರಿಸ್ಥಿತಿಯ ಚಿತ್ರಣವನ್ನೇ ಬದಲಿಸಿದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಹಾಗೂ ಬೆಂಗಳೂರಿಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಬೆಂಗಳೂರು ವಿವಿಯನ್ನು ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುತ್ತಿದೆ.… pic.twitter.com/1SrqXSxzjm
— DK Shivakumar (@DKShivakumar) March 7, 2025
ಜೆಡಿಎಸ್ ವಿರೋಧ
ಜೆಡಿಎಸ್ ಟ್ವೀಟ್ ಮಾಡಿ.. ಕನ್ನಡದ್ರೋಹಿ ಸಿದ್ದರಾಮಯ್ಯ. ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿವಿ ಎಂದು ಮರು ನಾಮಕರಣ ಮಾಡುವ ಅವಶ್ಯಕತೆ ಏನಿತ್ತು ಸಿದ್ದರಾಮಯ್ಯ ಅವರೇ? ಬೆಂಗಳೂರು ನಗರ ವಿವಿಗೂ ಮನಮೋಹನ್ ಸಿಂಗ್ ಅವರಿಗೂ ಏನು ಸಂಬಂಧ ? ಇದು "ಕಾಂಗ್ರೆಸ್ ಗುಲಾಮಗಿರಿ"! ಕರ್ನಾಟಕದಲ್ಲಿ ಹುಟ್ಟಿದ ಸಾವಿರಾರು ಕನ್ನಡಿಗ ಮಹಾನ್ ಸಾಧಕರು ಇದ್ದರೂ ಅವರು ಯಾರು ಕಾಂಗ್ರೆಸ್ ಸರ್ಕಾರದ ಕಣ್ಣಿಗೆ ಬೀಳಲಿಲ್ಲವೇ ಕನ್ನಡ ದ್ರೋಹಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನೆ ಮಾಡಿದೆ.
ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ಮಹತ್ವದ ನಿಯಮ ಬದಲಾವಣೆ.. ಪ್ರಯಾಣಿಕರಿಗೆ ಇದು ತಿಳಿದಿರಲೇಬೇಕು..!
ಕನ್ನಡದ್ರೋಹಿ ಸಿದ್ದರಾಮಯ್ಯ
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿವಿ ಎಂದು ಮರು ನಾಮಕರಣ ಮಾಡುವ ಅವಶ್ಯಕತೆ ಏನಿತ್ತು ಸಿದ್ದರಾಮಯ್ಯ ಅವರೇ ?
ಬೆಂಗಳೂರು ನಗರ ವಿವಿಗೂ ಮನಮೋಹನ್ ಸಿಂಗ್ ಅವರಿಗೂ ಏನು ಸಂಬಂಧ ? ಇದು "ಕಾಂಗ್ರೆಸ್ ಗುಲಾಮಗಿರಿ" !
ಕರ್ನಾಟಕದಲ್ಲಿ ಹುಟ್ಟಿದ ಸಾವಿರಾರು ಕನ್ನಡಿಗ ಮಹಾನ್… pic.twitter.com/2TSc6Ngijr— Janata Dal Secular (@JanataDal_S) March 7, 2025
ಡಾ.ಸುಧಾಕರ್ ವಿರೋಧ
ಬಿಜೆಪಿ ನಾಯಕ ಡಾ ಸುಧಾಕರ್ ಟ್ವೀಟ್ ಮಾಡಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಬಗ್ಗೆ ಎಲ್ಲರಿಗೂ ಗೌರವ ಇದೆ. ಬೆಂಗಳೂರಿನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ಉತ್ತರ ಕರ್ನಾಟಕದಲ್ಲಿಯೋ ಅಥವಾ ರಾಜ್ಯದ ಇನ್ಯಾವ ಭಾಗದಲ್ಲಿಯಾದರೂ ಮತ್ತೊಂದು ಅರ್ಥಶಾಸ್ತ್ರದ ಕಾಲೇಜು/ವಿವಿ ತೆರೆದು ಅದಕ್ಕೆ ಮನಮೋಹನ್ ಸಿಂಗ್ ಅವರ ಹೆಸರಿಟ್ಟಿದ್ದರೆ ಅದು ಅರ್ಥಪೂರ್ಣವಾಗುತ್ತಿತ್ತು.
ಆರು ದಶಕಗಳಿಗೂ ಹೆಚ್ಚು ಇತಿಹಾಸ, ಪರಂಪರೆ ಇರುವ, ರಾಜ್ಯದ ರಾಜಧಾನಿಯ ಹೆಸರಿನಲ್ಲಿರುವ ಪ್ರತಿಷ್ಠಿತ ವಿವಿಗೆ ಒಬ್ಬ ವ್ಯಕ್ತಿಯ ಹೆಸರಿಡುವುದು ಸೂಕ್ತವಲ್ಲ. ವಾಷಿಂಗ್ಟನ್, ಲಂಡನ್, ದೆಹಲಿ ಹೀಗೆ ವಿಶ್ವದ ಅನೇಕ ಪ್ರತಿಷ್ಠಿತ ವಿವಿಗಳು ಆಯಾ ನಗರಗಳ ಹೆಸರಿನಲ್ಲೇ ಇವೆ ಎನ್ನುವುದನ್ನ ಗಮನಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಪ್ರಶ್ನಿಸಿದ್ದಕ್ಕೆ ಶಿಕ್ಷೆ; ಮಠದಿಂದಲೇ ಸ್ವಾಮೀಜಿಯನ್ನ ಹೊರ ಹಾಕಿದ ಕೆಲ ಭಕ್ತರು!
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಬಗ್ಗೆ ಎಲ್ಲರಿಗೂ ಗೌರವ ಇದೆ. ಬೆಂಗಳೂರಿನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ಉತ್ತರ ಕರ್ನಾಟಕದಲ್ಲಿಯೋ ಅಥವಾ ರಾಜ್ಯದ ಇನ್ಯಾವ ಭಾಗದಲ್ಲಿಯಾದರೂ ಮತ್ತೊಂದು ಅರ್ಥಶಾಸ್ತ್ರದ ಕಾಲೇಜು/ವಿವಿ ತೆರೆದು ಅದಕ್ಕೆ ಮನಮೋಹನ್ ಸಿಂಗ್ ಅವರ ಹೆಸರಿಟ್ಟಿದ್ದರೆ ಅದು… pic.twitter.com/XLifmSXnNB
— Dr Sudhakar K (@DrSudhakar_) March 8, 2025
ಸೋಶಿಯಲ್ ಮೀಡಿಯಾದಲ್ಲಿ ಆಗ್ತಿರುವ ಕೆಲವು ಚರ್ಚೆಗಳು ಇಲ್ಲಿದೆ
ಇದನ್ನೂ ಓದಿ: ಸ್ಟಾರ್ ಕ್ರಿಕೆಟರ್ಗೆ ಗುಡ್ನ್ಯೂಸ್ ಸಿಗುತ್ತಾ.. ಶ್ರೇಯಸ್ ಅಯ್ಯರ್ಗೆ ಒಲಿಯುತ್ತಾ ಮಹತ್ವದ ಕಾಂಟ್ರ್ಯಾಕ್ಟ್?
ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ವ್ಯಕ್ತಿಗಳ ಹೆಸರು ಬೇಕೆಂದರೆ ಅವರು ಕರ್ನಾಟಕದವರೇ ಆಗಿರಬೇಕು. ಮನಮೋಹನ್ ಸಿಂಗ್ ಹೆಸರು ನಮಗೆ ಬೇಡ. #ನಮ್ಮನಾಡು_ನಮ್ಮಆಳ್ವಿಕೆpic.twitter.com/5k4JvMPoyo
— Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | (@ShyamSPrasad) March 7, 2025
ಮಾನ್ಯ ಸಿದ್ಧರಾಮಯ್ಯನವರೇ - ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಅವರ ಹೆಸರನ್ನಿಡಲು ನೀವು ಮುಂದಾಗಿದ್ದೀರಾ.
ಅವರು ಎಕಾನಾಮಿಕ್ಸ್ ಓದಿದ್ದು ಪ್ರಪಂಚದ ಅತ್ಯದ್ಭುತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ.
ಕಡೆ ಪಕ್ಷ ಬೆಂಗಳೂರು ವಿವಿ ಯನ್ನು ಕೇಂಬ್ರಿಡ್ಜ್ ನಲ್ಲಿ 10% ಗೆ ಆದರೂ ಕೊಂಡೊಯ್ದು ಅವರಿಗೆ ಗೌರವ ತನ್ನಿ.— Amarnath Shivashankar (@Amara_Bengaluru) March 7, 2025
2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಸುಧಾರಣೆಗಳ ಹರಿಕಾರ ಡಾ.ಮನಮೋಹನ್ ಸಿಂಗ್ ಅವರಿಗೆ ವಿಶೇಷ ಗೌರವ ನೀಡಲಾಗಿದೆ.
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಡಾ. ಮನಮೋಹನ್ ಸಿಂಗ್ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ. #ನಮ್ಮಬಜೆಟ್2025#NammaBudget2025#KarnatakaBudget2025pic.twitter.com/5G0kvDjW5B— CM of Karnataka (@CMofKarnataka) March 7, 2025
ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನ 'ಡಾ ಮನಮೋಹನ್ ಸಿಂಗ್ ವಿ ವಿ ಎಂದು ಮರುನಾಮಕರಣ
ಮರುನಾಮಕರಣ ಮಾಡುವ ಅಗತ್ಯವೇ ಇರಲಿಲ್ಲ,ಯಾಕ್ರಪ್ಪ ಕರ್ನಾಟಕದವರು ಯಾರು ಸಿಗ್ಲಿಲ್ವ? ಓಲಾಟಗಳು ನಿಮ್ಮ ಅಭಿಪ್ರಾಯ ತಿಳಿಸಿ. ರಾಹುಲ್ ಗಾಂಧಿ ವಿ ವಿ ಒಂದು ಬಾಕಿ ಇದೆ pic.twitter.com/rKqj5c72Kk— DSH MAX (@team_dsh_1) March 7, 2025
ಮನಮೋಹನ್ ಸಿಂಗ್ ಅವರ ಮೇಲೆ ಸಾಕಷ್ಟು ಗೌರವ ಇದೆ. ಆದರೆ ಬೆಂಗಳೂರು ವಿವಿಗೆ ಅವರ ಅಗತ್ಯವಿಲ್ಲ. ಬೆಂಗಳೂರು ವಿವಿಗೆ ಹೆಸರಿಡುವಾಗ ಬೆಂಗಳೂರು ಪರಂಪರೆ ಅಥವಾ ಕರ್ನಾಟದಲ್ಲಿ ಸಾಕಷ್ಟು ಕೆಲಸ ಮಾಡಿರುವ ಸಾಧಕರಿದ್ದಾರೆ, ಅವರಲ್ಲಿ ಯಾರಾದರು ಒಬ್ಬರ ಹೆಸರನ್ನು ಹಿಡಬಹುದು. ಆದರೆ ಮನಮೋಹನ್ ಸಿಂಗ್ ಹೆಸರಿಡುವುದು ಕರ್ನಾಟಕದ ಪರಂಪರೆಗೆ ಅವಮಾನ. pic.twitter.com/HsMcHdTydd
— Harohalli Ravindra (@harohalliravin1) March 7, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ