/newsfirstlive-kannada/media/post_attachments/wp-content/uploads/2025/02/BNG_BILDING.jpg)
ಬಾಬುಸಾಬ್ಪಾಳ್ಯ ದುರಂತ. 8 ಮಂದಿ ಕಾರ್ಮಿಕರ ಸಜೀವ ದಹನ.. ಈ ಘಟನೆ ಇನ್ನು ಸಿಲಿಕಾನ್ ಸಿಟಿ ಮಂದಿಯ ಕಣ್ಣಿಗೆ ಕಟ್ಟಿದಾಗಿದೆ. ಅವರ ಆರ್ತನಾದ ಇನ್ನೂ ಕಿವಿಯಲ್ಲಿ ಗುಯ್ಗುಡ್ತಿದೆ. ಅದಾಗಲೇ, ಮತ್ತೊಂದು ದುರಂತ ನಡೆದೋಗಿದೆ. ಏಕಾಏಕಿ ಬಿಲ್ಡಿಂಗ್ನ ಬೇಸ್ಮೆಂಟ್ ವಾಲಿ, ಸ್ಥಳದಲ್ಲಿ ಆತಂಕದ ಕಾರ್ಮೋಡ ಆವರಿಸಿತ್ತು. ಇದೀಗ ಎರಡಂತಸ್ತಿನ ಕಟ್ಟಡವನ್ನ ಡೆಮಾಲಿಷನ್ ಮಾಡಲಾಗಿದೆ.
ಬೆಂಗಳೂರಿನ ಜೀವನ್ ಭೀಮಾ ನಗರದ ತಿಪ್ಪಸಂದ್ರದ ಆಂಜನೇಯ ದೇವಸ್ಥಾನದ ಬಳಿ ನಿನ್ನೆ ಸಂಜೆ 4.15ರ ಸುಮಾರಿಗೆ ನೋಡ ನೋಡ್ತಿದ್ದಂತೆಯೇ ಬಿಲ್ಡಿಂಗ್ ಒಂದರ ಬೇಸ್ಮೆಂಟ್ ದಿಢೀರ್ ಅಂತ ಕುಸಿದುಬಿಟ್ಟಿದೆ. ಪರಿಣಾಮ ಈ 2 ಅಂತಿಸ್ತಿನ ಕಟ್ಟಡ ಸಂಪೂರ್ಣ ಒಂದು ಬದಿಗೆ ವಾಲಿ ನೆಲಕ್ಕೆ ಕುಸಿದು ಬಿಟ್ಟಿದೆ. ತಕ್ಷಣ ಮನೆಯಲ್ಲಿದ್ದವರೆಲ್ಲಾ ಹೆದರಿ ಓಡೋಡಿ ಆಚೆ ಬಂದಿದ್ದಾರೆ. ಇನ್ನು, ಕಟ್ಟಡ ಕುಸಿದ ರಭಸಕ್ಕೆ ಬೇಸ್ಮೆಂಟ್ನಲ್ಲಿದ್ದ ಐದಕ್ಕೂ ಹೆಚ್ಚು ಬೈಕ್ಗಳು ಸಂಪೂರ್ಣ ಜಖಂ ಆಗಿವೆ.
ಗುಂಡಿ ತೋಡಿದ್ದೆ ದುರಂತಕ್ಕೆ ಕಾರಣ
ಸದ್ಯ ಈ ಘಟನೆಯಾಗ್ತಿದ್ದಂತೆ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಕೈಗೊಂಡರು. ನೀವು ಈ ದೃಶ್ಯಗಳನ್ನ ನೋಡಿದ್ರೆ, ಈ ಬಿಲ್ಡಿಂಗ್ನ ಬೇಸ್ಮೆಂಟ್ ಹೆಚ್ಚು ಹಾನಿಯಾಗಿರೋದು ಸ್ಪಷ್ಟವಾಗಿ ಕಾಣಿಸುತ್ತೆ. ಅಲ್ಲಿ ಹಿತ್ತಾಳೆ ವಸ್ತುಗಳನ್ನ ಮಾರಾಟ ಮಾಡಲಾಗುತ್ತಿತ್ತು. ಇನ್ನು, ಕಟ್ಟಡದ ಪಕ್ಕದಲ್ಲಿ ಅವೈಜ್ಞಾನಿಕವಾಗಿ ಗುಂಡಿ ತೋಡಿದ್ದೆ ದುರಂತಕ್ಕೆ ಕಾರಣ ಅನ್ನೋದು ಮನೆ ಮಾಲೀಕರ ಮಾತು.
ಇದನ್ನೂ ಓದಿ:ಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಲಾಭಗಳಿವೆ: ನಿಮಗೆ ಗೊತ್ತಿರದ ವಿಷಯ ಇಲ್ಲಿವೆ!
ಸದ್ಯ ಎರಡೂ ಹಿಟಾಚಿ ಮೂಲಕ 3 ಅಂತಸ್ತಿನ ಕಟ್ಟಡ ತೆರವು ಮಾಡಲಾಗಿದೆ. ಅಕ್ಕಪಕ್ಕದ ಕಟ್ಟಡಗಳ ಜನರನ್ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಇಡೀ ಬಿಲ್ಡಿಂಗ್ನ ಡೆಮಾಲಿಷನ್ ಮಾಡಲಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಾಗ ಈ ಬಿಲ್ಡಿಂಗ್ನಲ್ಲಿ ಒಟ್ಟು 6 ಮಂದಿ ಇದ್ದರು ಎನ್ನಲಾಗಿದೆ. ಅದೃಷ್ಟವಶಾತ್, ಎಲ್ಲರೂ ಆಪಾಯದಿಂದ ಪಾರಾಗಿದ್ದಾರೆ ಅನ್ನೋದೇ ಸಮಾಧಾನ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ