newsfirstkannada.com

VIDEO: ಡಿಕೆ ಬ್ರದರ್ಸ್​​ಗೆ ಬಿಜೆಪಿ ಆಫರ್​ ಕೊಟ್ಟಿತ್ತಾ? ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಡಿ.ಕೆ ಸುರೇಶ್ ಹೇಳಿದ್ದೇನು?

Share :

Published February 21, 2024 at 1:09pm

Update February 21, 2024 at 1:21pm

    ಡಿಕೆ ಬ್ರದರ್ಸ್​​ಗೆ BJP ಆಫರ್​ ಕೊಟ್ಟಿತ್ತಾ ಅನ್ನೋದಕ್ಕೆ ಸುರೇಶ್ ಹೇಳಿದ್ದೇನು?

    ಕಳೆದ 65 ವರ್ಷದಲ್ಲಿ ದೇಶ ಹೆಚ್ಚು ಅಭಿವೃದ್ಧಿ ಕಂಡಿದೆ- ಡಿ.ಕೆ ಸುರೇಶ್

    ಆಗ ಒಂದು ಗುಂಡು ಸೂಜಿಯನ್ನು ತಯಾರು ಮಾಡಲಾಗುತ್ತಿರಲಿಲ್ಲ

ಬೆಂಗಳೂರು: ನ್ಯೂಸ್ ​ಫಸ್ಟ್​ ಚಾನೆಲ್‌ಗೆ ನೀಡಿರುವ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರು ಮಹತ್ವದ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಡಿಕೆ ಬ್ರದರ್ಸ್​​ಗೆ ಬಿಜೆಪಿ ಆಫರ್​ ಕೊಟ್ಟಿತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಅವರು, ಬಿಜೆಪಿಯವರು ಬೆದರಿಕೆ ಹಾಕುವುದು, ಆಮಿಷ ಕೊಡೋದು ಎಲ್ಲ ನಿರಂತರವಾಗಿ ನಡೆಯುತ್ತಿರುತ್ತದೆ ಎಂದರು.

ದೇಶದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ಪುನರ್ ಸ್ಥಾಪನೆ ಹಾಗೂ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್​ ಬತ್ತಳಿಕೆಯಲ್ಲಿ ಏಕತೆಯ ಮಂತ್ರ, ಭಾರತದ ಅಭಿವೃದ್ಧಿ ಮಂತ್ರವಿದೆ. ಸರ್ವ ಜನಾಂಗವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಂತ ಶಾಂತಿಯ ತೋಟವಿದ್ದು ಇದು ಭಾರತದಲ್ಲಿ ಆಗಬೇಕು ಎನ್ನುವ ನಂಬಿಕೆ ನಮ್ಮಲ್ಲಿದೆ. ತತ್ವ ಸಿದ್ಧಾತಂಗಳನ್ನು ಇಟ್ಟುಕೊಂಡು ಕಾಂಗ್ರೆಸ್​ ಹೋರಾಟ ಮಾಡುತ್ತಿದೆ ಎಂದು ಹೇಳಿದರು.

ಇವತ್ತು ಭಾರತ ಅಭಿವೃದ್ಧಿಯಾಗಿದೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್​​. ಈ 10 ವರ್ಷದಲ್ಲಿ ಆದಂತಹ ಬೆಳವಣಿಗೆಯಲ್ಲ. ಕಳೆದ 65 ವರ್ಷದಲ್ಲಿ ಆದಂತಹ ಸುದೀರ್ಘ ಆಡಳಿತದಲ್ಲಿ ದೇಶ ಹೆಚ್ಚು ಅಭಿವೃದ್ಧಿ ಕಂಡಿದೆ. ಒಂದು ಗುಂಡು ಸೂಜಿಯನ್ನು ತಯಾರು ಮಾಡಲು ಸಾಧ್ಯ ಇರುತ್ತಿರಲಿಲ್ಲ. ಇವತ್ತು ವಿಶ್ವದ ಅಗ್ರ ಸ್ಥಾನದಲ್ಲಿ ಇದ್ದೇವೆ ಅಂತ ಹೇಳಿದರೆ, ಅದಕ್ಕೆ ಕಾಂಗ್ರೆಸ್​ ಪಕ್ಷ ಕಾರಣ ಎಂದು ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.

 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಡಿಕೆ ಬ್ರದರ್ಸ್​​ಗೆ ಬಿಜೆಪಿ ಆಫರ್​ ಕೊಟ್ಟಿತ್ತಾ? ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಡಿ.ಕೆ ಸುರೇಶ್ ಹೇಳಿದ್ದೇನು?

https://newsfirstlive.com/wp-content/uploads/2024/02/DK_SURESH_NEW.jpg

    ಡಿಕೆ ಬ್ರದರ್ಸ್​​ಗೆ BJP ಆಫರ್​ ಕೊಟ್ಟಿತ್ತಾ ಅನ್ನೋದಕ್ಕೆ ಸುರೇಶ್ ಹೇಳಿದ್ದೇನು?

    ಕಳೆದ 65 ವರ್ಷದಲ್ಲಿ ದೇಶ ಹೆಚ್ಚು ಅಭಿವೃದ್ಧಿ ಕಂಡಿದೆ- ಡಿ.ಕೆ ಸುರೇಶ್

    ಆಗ ಒಂದು ಗುಂಡು ಸೂಜಿಯನ್ನು ತಯಾರು ಮಾಡಲಾಗುತ್ತಿರಲಿಲ್ಲ

ಬೆಂಗಳೂರು: ನ್ಯೂಸ್ ​ಫಸ್ಟ್​ ಚಾನೆಲ್‌ಗೆ ನೀಡಿರುವ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರು ಮಹತ್ವದ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಡಿಕೆ ಬ್ರದರ್ಸ್​​ಗೆ ಬಿಜೆಪಿ ಆಫರ್​ ಕೊಟ್ಟಿತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಅವರು, ಬಿಜೆಪಿಯವರು ಬೆದರಿಕೆ ಹಾಕುವುದು, ಆಮಿಷ ಕೊಡೋದು ಎಲ್ಲ ನಿರಂತರವಾಗಿ ನಡೆಯುತ್ತಿರುತ್ತದೆ ಎಂದರು.

ದೇಶದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ಪುನರ್ ಸ್ಥಾಪನೆ ಹಾಗೂ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್​ ಬತ್ತಳಿಕೆಯಲ್ಲಿ ಏಕತೆಯ ಮಂತ್ರ, ಭಾರತದ ಅಭಿವೃದ್ಧಿ ಮಂತ್ರವಿದೆ. ಸರ್ವ ಜನಾಂಗವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಂತ ಶಾಂತಿಯ ತೋಟವಿದ್ದು ಇದು ಭಾರತದಲ್ಲಿ ಆಗಬೇಕು ಎನ್ನುವ ನಂಬಿಕೆ ನಮ್ಮಲ್ಲಿದೆ. ತತ್ವ ಸಿದ್ಧಾತಂಗಳನ್ನು ಇಟ್ಟುಕೊಂಡು ಕಾಂಗ್ರೆಸ್​ ಹೋರಾಟ ಮಾಡುತ್ತಿದೆ ಎಂದು ಹೇಳಿದರು.

ಇವತ್ತು ಭಾರತ ಅಭಿವೃದ್ಧಿಯಾಗಿದೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್​​. ಈ 10 ವರ್ಷದಲ್ಲಿ ಆದಂತಹ ಬೆಳವಣಿಗೆಯಲ್ಲ. ಕಳೆದ 65 ವರ್ಷದಲ್ಲಿ ಆದಂತಹ ಸುದೀರ್ಘ ಆಡಳಿತದಲ್ಲಿ ದೇಶ ಹೆಚ್ಚು ಅಭಿವೃದ್ಧಿ ಕಂಡಿದೆ. ಒಂದು ಗುಂಡು ಸೂಜಿಯನ್ನು ತಯಾರು ಮಾಡಲು ಸಾಧ್ಯ ಇರುತ್ತಿರಲಿಲ್ಲ. ಇವತ್ತು ವಿಶ್ವದ ಅಗ್ರ ಸ್ಥಾನದಲ್ಲಿ ಇದ್ದೇವೆ ಅಂತ ಹೇಳಿದರೆ, ಅದಕ್ಕೆ ಕಾಂಗ್ರೆಸ್​ ಪಕ್ಷ ಕಾರಣ ಎಂದು ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.

 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More