ಸಿಲಿಕಾನ್ ಸಿಟಿ ಮೆಟ್ರೋ ಕೇವಲ ವಿಐಪಿಗಳಿಗೆ ಮಾತ್ರ ಸೀಮಿತನಾ?
ನಮ್ಮ ಮೆಟ್ರೋದಲ್ಲಿ ಪ್ರಯಾಣಿಸದೇ ಹಾಗೇ ಹೊರ ನಡೆದ ರೈತ
ಇಬ್ಬರು ವ್ಯಕ್ತಿಗಳು ಬಿಡಿ ಎಂದು ಎಷ್ಟೇ ಹೇಳಿದರೂ ಕೇಳದ ಸಿಬ್ಬಂದಿ
ಬೆಂಗಳೂರು: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಯಾವಗಲೂ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತದೆ. ಮೂಟೆ ಹೊತ್ತುಕೊಂಡಿದ್ದ ರೈತನೋರ್ವ ಹಳೆಯ ಬಟ್ಟೆ ಹಾಕಿದ್ದಾನೆ ಎಂಬ ಕಾರಣಕ್ಕೆ ಮೆಟ್ರೋ ಸಿಬ್ಬಂದಿ ಒಳಗೆ ಬಿಟ್ಟಿಲ್ಲ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು VIPಗಳಿಗೆ ಮಾತ್ರಾ ಮೇಟ್ರೋನಾ. ಬಸವಣ್ಣ ಹುಟ್ಟಿದ ನಾಡಲ್ಲಿ ಸಮಾನತೆ ಎಲ್ಲಿ ಹೋಯಿತು ಎಂದು ಪ್ರಶ್ನಿಸುತ್ತಿದ್ದಾರೆ.
ಹಿಂದಿ ಭಾಷೆಯನ್ನಾಡುವ ರೈತನೊಬ್ಬ ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ. ಈ ವೇಳೆ ಲಗೇಜ್ ಪರಿಶೀಲನೆ ಮಾಡುವ ಸಿಬ್ಬಂದಿ ರೈತನನ್ನು ತಡೆದಿದ್ದಾರೆ. ಗಲೀಜು ಬಟ್ಟೆ ಹಾಕಿದ್ದೀರಾ, ತಲೆ ಮೇಲೆ ಮೂಟೆ ಇದೆ ಎಂದು ಹೇಳಿ ರೈತನನ್ನ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಟ್ಟಿಲ್ಲ ಎನ್ನವ ವಿಡಿಯೋ ವೈರಲ್ ಆಗಿದೆ.
ಇದೇ ವೇಳೆ ಆ ಬಡ ರೈತನನ್ನು ಯಾಕೆ ಒಳಕ್ಕೆ ಬಿಡಲ್ಲವೆಂದು ಕಾರ್ತಿಕ್ ಸಿ ಐರನಿ ಎನ್ನುವ ಪ್ರಯಾಣಿಕ ಪ್ರಶ್ನೆ ಮಾಡಿದ್ದಾರೆ. ಕೇವಲ ವಿಐಪಿಗಳಿಗೆ ಮಾತ್ರ ಮೆಟ್ರೋನಾ. ಅವರಿಗೆ ಏನಾಗಿದೆ ಹೇಳಿ. ಅವರ ಮೂಟೆಯಲ್ಲಿ ಬಟ್ಟೆ ಇದೆ, ಅಂತದ್ದೇನಿದ್ರೂ ವಾಪಸ್ ಕಳಿಸಿ. ಟಿಕೆಟ್ ತಗೊಂಡಿದ್ದಾರೆ ತಾನೇ ಬಿಡಿ. ಬೇರೆಯವರಿಗೆ ಅಸಹ್ಯವಾಗುತ್ತಂತೆ. ಇದೇನು ವಿಐಪಿ ಟ್ರಾನ್ಸ್ಪೋರ್ಟ್ ಆ.. ಎಂದು ಮೆಟ್ರೋ ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದಾರೆ.
UNBELIEVABLE..! Is metro only for VIPs? Is there a dress code to use Metro?
I appreciate actions of Karthik C Airani, who fought for the right of a farmer at Rajajinagar metro station. We need more such heroes everywhere. @OfficialBMRCL train your officials properly. #metro pic.twitter.com/7SAZdlgAEH— Deepak N (@DeepakN172) February 24, 2024
ಇನ್ನೊಬ್ಬ ವ್ಯಕ್ತಿ ಕೂಡ ಅವರೆಲ್ಲ ಹಳ್ಳಿಯ ರೈತರು ಹಾಗೇ ಇರುತ್ತಾರೆ. ಏನು ಆಗಲ್ಲ ಅವರಿಗೆ ಮೆಟ್ರೋದಲ್ಲಿ ಹೋಗಲು ಬಿಡಿ. ನೋಡಿ ಸರ್.. ಆ ರೈತನ ಬಳಿ ಅಂತಹದ್ದು ಏನಿದ್ದರೂ ಬಿಡಬೇಡಿ. ಪಾಪ ಅವರಿಗೆ ಏನು ಗೊತ್ತಾಗುತ್ತೆ ಹೇಳಿ. ಗಲೀಜು ಇದ್ದಾರೆ ಎಂದು ಒಳಗೆ ಬಿಡದಿರುವುದು ತಪ್ಪಾಗುತ್ತೆ ಎಂದಿದ್ದಾರೆ. ಆದರೆ ಇದು ಯಾವುದನ್ನು ಲೆಕ್ಕಿಸದ ಸಿಬ್ಬಂದಿ ಮಾತ್ರ ಆ ರೈತನಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಡಲಿಲ್ಲ. ಹೀಗಾಗಿ ರೈತ ನಗುತ್ತಲೇ ಮೆಟ್ರೋ ನಿಲ್ದಾಣದಿಂದ ಹಾಗೇ ಹೊರ ನಡೆದಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದು ಮೆಟ್ರೋ ಕೇವಲ ವಿಐಪಿಗಳಿಗಾ ಎನ್ನುವ ಪ್ರಶ್ನೆ ಕೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿಲಿಕಾನ್ ಸಿಟಿ ಮೆಟ್ರೋ ಕೇವಲ ವಿಐಪಿಗಳಿಗೆ ಮಾತ್ರ ಸೀಮಿತನಾ?
ನಮ್ಮ ಮೆಟ್ರೋದಲ್ಲಿ ಪ್ರಯಾಣಿಸದೇ ಹಾಗೇ ಹೊರ ನಡೆದ ರೈತ
ಇಬ್ಬರು ವ್ಯಕ್ತಿಗಳು ಬಿಡಿ ಎಂದು ಎಷ್ಟೇ ಹೇಳಿದರೂ ಕೇಳದ ಸಿಬ್ಬಂದಿ
ಬೆಂಗಳೂರು: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಯಾವಗಲೂ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತದೆ. ಮೂಟೆ ಹೊತ್ತುಕೊಂಡಿದ್ದ ರೈತನೋರ್ವ ಹಳೆಯ ಬಟ್ಟೆ ಹಾಕಿದ್ದಾನೆ ಎಂಬ ಕಾರಣಕ್ಕೆ ಮೆಟ್ರೋ ಸಿಬ್ಬಂದಿ ಒಳಗೆ ಬಿಟ್ಟಿಲ್ಲ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು VIPಗಳಿಗೆ ಮಾತ್ರಾ ಮೇಟ್ರೋನಾ. ಬಸವಣ್ಣ ಹುಟ್ಟಿದ ನಾಡಲ್ಲಿ ಸಮಾನತೆ ಎಲ್ಲಿ ಹೋಯಿತು ಎಂದು ಪ್ರಶ್ನಿಸುತ್ತಿದ್ದಾರೆ.
ಹಿಂದಿ ಭಾಷೆಯನ್ನಾಡುವ ರೈತನೊಬ್ಬ ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ. ಈ ವೇಳೆ ಲಗೇಜ್ ಪರಿಶೀಲನೆ ಮಾಡುವ ಸಿಬ್ಬಂದಿ ರೈತನನ್ನು ತಡೆದಿದ್ದಾರೆ. ಗಲೀಜು ಬಟ್ಟೆ ಹಾಕಿದ್ದೀರಾ, ತಲೆ ಮೇಲೆ ಮೂಟೆ ಇದೆ ಎಂದು ಹೇಳಿ ರೈತನನ್ನ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಟ್ಟಿಲ್ಲ ಎನ್ನವ ವಿಡಿಯೋ ವೈರಲ್ ಆಗಿದೆ.
ಇದೇ ವೇಳೆ ಆ ಬಡ ರೈತನನ್ನು ಯಾಕೆ ಒಳಕ್ಕೆ ಬಿಡಲ್ಲವೆಂದು ಕಾರ್ತಿಕ್ ಸಿ ಐರನಿ ಎನ್ನುವ ಪ್ರಯಾಣಿಕ ಪ್ರಶ್ನೆ ಮಾಡಿದ್ದಾರೆ. ಕೇವಲ ವಿಐಪಿಗಳಿಗೆ ಮಾತ್ರ ಮೆಟ್ರೋನಾ. ಅವರಿಗೆ ಏನಾಗಿದೆ ಹೇಳಿ. ಅವರ ಮೂಟೆಯಲ್ಲಿ ಬಟ್ಟೆ ಇದೆ, ಅಂತದ್ದೇನಿದ್ರೂ ವಾಪಸ್ ಕಳಿಸಿ. ಟಿಕೆಟ್ ತಗೊಂಡಿದ್ದಾರೆ ತಾನೇ ಬಿಡಿ. ಬೇರೆಯವರಿಗೆ ಅಸಹ್ಯವಾಗುತ್ತಂತೆ. ಇದೇನು ವಿಐಪಿ ಟ್ರಾನ್ಸ್ಪೋರ್ಟ್ ಆ.. ಎಂದು ಮೆಟ್ರೋ ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದಾರೆ.
UNBELIEVABLE..! Is metro only for VIPs? Is there a dress code to use Metro?
I appreciate actions of Karthik C Airani, who fought for the right of a farmer at Rajajinagar metro station. We need more such heroes everywhere. @OfficialBMRCL train your officials properly. #metro pic.twitter.com/7SAZdlgAEH— Deepak N (@DeepakN172) February 24, 2024
ಇನ್ನೊಬ್ಬ ವ್ಯಕ್ತಿ ಕೂಡ ಅವರೆಲ್ಲ ಹಳ್ಳಿಯ ರೈತರು ಹಾಗೇ ಇರುತ್ತಾರೆ. ಏನು ಆಗಲ್ಲ ಅವರಿಗೆ ಮೆಟ್ರೋದಲ್ಲಿ ಹೋಗಲು ಬಿಡಿ. ನೋಡಿ ಸರ್.. ಆ ರೈತನ ಬಳಿ ಅಂತಹದ್ದು ಏನಿದ್ದರೂ ಬಿಡಬೇಡಿ. ಪಾಪ ಅವರಿಗೆ ಏನು ಗೊತ್ತಾಗುತ್ತೆ ಹೇಳಿ. ಗಲೀಜು ಇದ್ದಾರೆ ಎಂದು ಒಳಗೆ ಬಿಡದಿರುವುದು ತಪ್ಪಾಗುತ್ತೆ ಎಂದಿದ್ದಾರೆ. ಆದರೆ ಇದು ಯಾವುದನ್ನು ಲೆಕ್ಕಿಸದ ಸಿಬ್ಬಂದಿ ಮಾತ್ರ ಆ ರೈತನಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಡಲಿಲ್ಲ. ಹೀಗಾಗಿ ರೈತ ನಗುತ್ತಲೇ ಮೆಟ್ರೋ ನಿಲ್ದಾಣದಿಂದ ಹಾಗೇ ಹೊರ ನಡೆದಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದು ಮೆಟ್ರೋ ಕೇವಲ ವಿಐಪಿಗಳಿಗಾ ಎನ್ನುವ ಪ್ರಶ್ನೆ ಕೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ