newsfirstkannada.com

ಗಲೀಜು ಬಟ್ಟೆ ಹಾಕಿದ್ದಾನೆ ಎಂದು ರೈತನ ‘ನಮ್ಮ ಮೆಟ್ರೋ’ಗೆ ಬಿಡದ ಸಿಬ್ಬಂದಿ -ಭಾರೀ ಆಕ್ರೋಶ

Share :

Published February 26, 2024 at 8:59am

Update February 26, 2024 at 11:54am

    ಸಿಲಿಕಾನ್ ಸಿಟಿ ಮೆಟ್ರೋ ಕೇವಲ ವಿಐಪಿಗಳಿಗೆ ಮಾತ್ರ ಸೀಮಿತನಾ?

    ನಮ್ಮ ಮೆಟ್ರೋದಲ್ಲಿ ಪ್ರಯಾಣಿಸದೇ ಹಾಗೇ ಹೊರ ನಡೆದ ರೈತ

    ಇಬ್ಬರು ವ್ಯಕ್ತಿಗಳು ಬಿಡಿ ಎಂದು ಎಷ್ಟೇ ಹೇಳಿದರೂ ಕೇಳದ ಸಿಬ್ಬಂದಿ

ಬೆಂಗಳೂರು: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಯಾವಗಲೂ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತದೆ. ಮೂಟೆ ಹೊತ್ತುಕೊಂಡಿದ್ದ ರೈತನೋರ್ವ ಹಳೆಯ ಬಟ್ಟೆ ಹಾಕಿದ್ದಾನೆ ಎಂಬ ಕಾರಣಕ್ಕೆ ಮೆಟ್ರೋ ಸಿಬ್ಬಂದಿ ಒಳಗೆ ಬಿಟ್ಟಿಲ್ಲ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು VIPಗಳಿಗೆ ಮಾತ್ರಾ ಮೇಟ್ರೋನಾ. ಬಸವಣ್ಣ ಹುಟ್ಟಿದ ನಾಡಲ್ಲಿ ಸಮಾನತೆ ಎಲ್ಲಿ ಹೋಯಿತು ಎಂದು ಪ್ರಶ್ನಿಸುತ್ತಿದ್ದಾರೆ.

ಹಿಂದಿ ಭಾಷೆಯನ್ನಾಡುವ ರೈತನೊಬ್ಬ ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ. ಈ ವೇಳೆ ಲಗೇಜ್ ಪರಿಶೀಲನೆ ಮಾಡುವ ಸಿಬ್ಬಂದಿ ರೈತನನ್ನು ತಡೆದಿದ್ದಾರೆ. ಗಲೀಜು ಬಟ್ಟೆ ಹಾಕಿದ್ದೀರಾ, ತಲೆ ಮೇಲೆ ಮೂಟೆ ಇದೆ ಎಂದು ಹೇಳಿ ರೈತನನ್ನ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಟ್ಟಿಲ್ಲ ಎನ್ನವ ವಿಡಿಯೋ ವೈರಲ್ ಆಗಿದೆ.

ಇದೇ ವೇಳೆ ಆ ಬಡ ರೈತನನ್ನು ಯಾಕೆ ಒಳಕ್ಕೆ ಬಿಡಲ್ಲವೆಂದು ಕಾರ್ತಿಕ್​ ಸಿ ಐರನಿ ಎನ್ನುವ ಪ್ರಯಾಣಿಕ ಪ್ರಶ್ನೆ ಮಾಡಿದ್ದಾರೆ. ಕೇವಲ ವಿಐಪಿಗಳಿಗೆ ಮಾತ್ರ ಮೆಟ್ರೋನಾ. ಅವರಿಗೆ ಏನಾಗಿದೆ ಹೇಳಿ. ಅವರ ಮೂಟೆಯಲ್ಲಿ ಬಟ್ಟೆ ಇದೆ, ಅಂತದ್ದೇನಿದ್ರೂ ವಾಪಸ್ ಕಳಿಸಿ. ಟಿಕೆಟ್​ ತಗೊಂಡಿದ್ದಾರೆ ತಾನೇ ಬಿಡಿ. ಬೇರೆಯವರಿಗೆ ಅಸಹ್ಯವಾಗುತ್ತಂತೆ. ಇದೇನು ವಿಐಪಿ ಟ್ರಾನ್ಸ್​ಪೋರ್ಟ್​ ಆ.. ಎಂದು ಮೆಟ್ರೋ ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದಾರೆ.

ಇನ್ನೊಬ್ಬ ವ್ಯಕ್ತಿ ಕೂಡ ಅವರೆಲ್ಲ ಹಳ್ಳಿಯ ರೈತರು ಹಾಗೇ ಇರುತ್ತಾರೆ. ಏನು ಆಗಲ್ಲ ಅವರಿಗೆ ಮೆಟ್ರೋದಲ್ಲಿ ಹೋಗಲು ಬಿಡಿ. ನೋಡಿ ಸರ್.. ಆ ರೈತನ ಬಳಿ ಅಂತಹದ್ದು ಏನಿದ್ದರೂ ಬಿಡಬೇಡಿ. ಪಾಪ ಅವರಿಗೆ ಏನು ಗೊತ್ತಾಗುತ್ತೆ ಹೇಳಿ. ಗಲೀಜು ಇದ್ದಾರೆ ಎಂದು ಒಳಗೆ ಬಿಡದಿರುವುದು ತಪ್ಪಾಗುತ್ತೆ ಎಂದಿದ್ದಾರೆ. ಆದರೆ ಇದು ಯಾವುದನ್ನು ಲೆಕ್ಕಿಸದ ಸಿಬ್ಬಂದಿ ಮಾತ್ರ ಆ ರೈತನಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಡಲಿಲ್ಲ. ಹೀಗಾಗಿ ರೈತ ನಗುತ್ತಲೇ ಮೆಟ್ರೋ ನಿಲ್ದಾಣದಿಂದ ಹಾಗೇ ಹೊರ ನಡೆದಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದು ಮೆಟ್ರೋ ಕೇವಲ ವಿಐಪಿಗಳಿಗಾ ಎನ್ನುವ ಪ್ರಶ್ನೆ ಕೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಲೀಜು ಬಟ್ಟೆ ಹಾಕಿದ್ದಾನೆ ಎಂದು ರೈತನ ‘ನಮ್ಮ ಮೆಟ್ರೋ’ಗೆ ಬಿಡದ ಸಿಬ್ಬಂದಿ -ಭಾರೀ ಆಕ್ರೋಶ

https://newsfirstlive.com/wp-content/uploads/2024/02/NAMMA_METRO.jpg

    ಸಿಲಿಕಾನ್ ಸಿಟಿ ಮೆಟ್ರೋ ಕೇವಲ ವಿಐಪಿಗಳಿಗೆ ಮಾತ್ರ ಸೀಮಿತನಾ?

    ನಮ್ಮ ಮೆಟ್ರೋದಲ್ಲಿ ಪ್ರಯಾಣಿಸದೇ ಹಾಗೇ ಹೊರ ನಡೆದ ರೈತ

    ಇಬ್ಬರು ವ್ಯಕ್ತಿಗಳು ಬಿಡಿ ಎಂದು ಎಷ್ಟೇ ಹೇಳಿದರೂ ಕೇಳದ ಸಿಬ್ಬಂದಿ

ಬೆಂಗಳೂರು: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಯಾವಗಲೂ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತದೆ. ಮೂಟೆ ಹೊತ್ತುಕೊಂಡಿದ್ದ ರೈತನೋರ್ವ ಹಳೆಯ ಬಟ್ಟೆ ಹಾಕಿದ್ದಾನೆ ಎಂಬ ಕಾರಣಕ್ಕೆ ಮೆಟ್ರೋ ಸಿಬ್ಬಂದಿ ಒಳಗೆ ಬಿಟ್ಟಿಲ್ಲ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು VIPಗಳಿಗೆ ಮಾತ್ರಾ ಮೇಟ್ರೋನಾ. ಬಸವಣ್ಣ ಹುಟ್ಟಿದ ನಾಡಲ್ಲಿ ಸಮಾನತೆ ಎಲ್ಲಿ ಹೋಯಿತು ಎಂದು ಪ್ರಶ್ನಿಸುತ್ತಿದ್ದಾರೆ.

ಹಿಂದಿ ಭಾಷೆಯನ್ನಾಡುವ ರೈತನೊಬ್ಬ ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ. ಈ ವೇಳೆ ಲಗೇಜ್ ಪರಿಶೀಲನೆ ಮಾಡುವ ಸಿಬ್ಬಂದಿ ರೈತನನ್ನು ತಡೆದಿದ್ದಾರೆ. ಗಲೀಜು ಬಟ್ಟೆ ಹಾಕಿದ್ದೀರಾ, ತಲೆ ಮೇಲೆ ಮೂಟೆ ಇದೆ ಎಂದು ಹೇಳಿ ರೈತನನ್ನ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಟ್ಟಿಲ್ಲ ಎನ್ನವ ವಿಡಿಯೋ ವೈರಲ್ ಆಗಿದೆ.

ಇದೇ ವೇಳೆ ಆ ಬಡ ರೈತನನ್ನು ಯಾಕೆ ಒಳಕ್ಕೆ ಬಿಡಲ್ಲವೆಂದು ಕಾರ್ತಿಕ್​ ಸಿ ಐರನಿ ಎನ್ನುವ ಪ್ರಯಾಣಿಕ ಪ್ರಶ್ನೆ ಮಾಡಿದ್ದಾರೆ. ಕೇವಲ ವಿಐಪಿಗಳಿಗೆ ಮಾತ್ರ ಮೆಟ್ರೋನಾ. ಅವರಿಗೆ ಏನಾಗಿದೆ ಹೇಳಿ. ಅವರ ಮೂಟೆಯಲ್ಲಿ ಬಟ್ಟೆ ಇದೆ, ಅಂತದ್ದೇನಿದ್ರೂ ವಾಪಸ್ ಕಳಿಸಿ. ಟಿಕೆಟ್​ ತಗೊಂಡಿದ್ದಾರೆ ತಾನೇ ಬಿಡಿ. ಬೇರೆಯವರಿಗೆ ಅಸಹ್ಯವಾಗುತ್ತಂತೆ. ಇದೇನು ವಿಐಪಿ ಟ್ರಾನ್ಸ್​ಪೋರ್ಟ್​ ಆ.. ಎಂದು ಮೆಟ್ರೋ ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದಾರೆ.

ಇನ್ನೊಬ್ಬ ವ್ಯಕ್ತಿ ಕೂಡ ಅವರೆಲ್ಲ ಹಳ್ಳಿಯ ರೈತರು ಹಾಗೇ ಇರುತ್ತಾರೆ. ಏನು ಆಗಲ್ಲ ಅವರಿಗೆ ಮೆಟ್ರೋದಲ್ಲಿ ಹೋಗಲು ಬಿಡಿ. ನೋಡಿ ಸರ್.. ಆ ರೈತನ ಬಳಿ ಅಂತಹದ್ದು ಏನಿದ್ದರೂ ಬಿಡಬೇಡಿ. ಪಾಪ ಅವರಿಗೆ ಏನು ಗೊತ್ತಾಗುತ್ತೆ ಹೇಳಿ. ಗಲೀಜು ಇದ್ದಾರೆ ಎಂದು ಒಳಗೆ ಬಿಡದಿರುವುದು ತಪ್ಪಾಗುತ್ತೆ ಎಂದಿದ್ದಾರೆ. ಆದರೆ ಇದು ಯಾವುದನ್ನು ಲೆಕ್ಕಿಸದ ಸಿಬ್ಬಂದಿ ಮಾತ್ರ ಆ ರೈತನಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಡಲಿಲ್ಲ. ಹೀಗಾಗಿ ರೈತ ನಗುತ್ತಲೇ ಮೆಟ್ರೋ ನಿಲ್ದಾಣದಿಂದ ಹಾಗೇ ಹೊರ ನಡೆದಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದು ಮೆಟ್ರೋ ಕೇವಲ ವಿಐಪಿಗಳಿಗಾ ಎನ್ನುವ ಪ್ರಶ್ನೆ ಕೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More