ಡು ಆರ್ ಡೈ ಕದನಕ್ಕೂ ಮುನ್ನ ಆರ್ಸಿಬಿಗೆ ಹಿನ್ನಡೆ
ಆರ್ಸಿಬಿ ಕ್ಯಾಂಪ್ನಲ್ಲಿ ಟೆನ್ಶನ್.. ಟೆನ್ಶನ್.. ಟೆನ್ಶನ್
ಹಿಂದಿನ ತಪ್ಪನ್ನ ತಿದ್ದಿಕೊಂಡಿದ್ರೆ ಇಂತಹ ಪರಿಸ್ಥಿತಿ ಬರ್ತಿತ್ತಾ.?
ಡು ಆರ್ ಡೈ ಕದನಕ್ಕೂ ಮುನ್ನ ಹಿನ್ನಡೆಯ ಮೇಲೆ ಹಿನ್ನಡೆ ಆರ್ಸಿಬಿಗೆ ಎದುರಾಗಿತ್ತು. ಆ ದೇವರೇ ಆರ್ಸಿಬಿಯನ್ನ ಕಾಪಾಡಬೇಕು ಅನ್ನೋ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಅಭಿಮಾನಿಗಳ ವಲಯದಲ್ಲೂಂತೂ ಪ್ರಾರ್ಥನೆ ಜೋರಾಗಿದೆ. ಆರ್ಸಿಬಿ ಇಷ್ಟೆಲ್ಲಾ ಸಂಕಷ್ಟಕ್ಕೆ ಸಿಲುಕಿರೋದಕ್ಕೆ ಕಾರಣ ಏನ್ ಗೊತ್ತಾ? ಆ ಒಂದು ರನ್ ಮತ್ತು ಆ ಒಂದು ಸೋಲು.
ಕ್ರಿಕೆಟ್ ಲೋಕದಲ್ಲೀಗ ಒಂದೇ ಸುದ್ದಿ.. ಚೆನ್ನೈ vs ಬೆಂಗಳೂರು ಮಹಾಸಮರವೇ ಟಾಕ್ ಆಫ್ ದ ಟೌನ್..! ಸೋಷಿಯಲ್ ಮೀಡಿಯಾದಲ್ಲಂತೂ ಕ್ವಾಲಿಫೈಯರ್ ಲೆಕ್ಕಾಚಾರ ಜೋರಾಗಿದೆ. ಆರ್ಸಿಬಿ-ಸಿಎಸ್ಕೆ ಯಾವ ತಂಡ ಪ್ಲೇ ಆಫ್ಗೆ ಎಂಟ್ರಿ ಕೊಡುತ್ತೆ ಅನ್ನೋ ಕುತೂಹಲದ ಪ್ರಶ್ನೆ ಎಲ್ಲರ ಮನದಲ್ಲಿ ಕಾಡ್ತಿದೆ. ಸತತ 5 ಪಂದ್ಯಗಳನ್ನ ಗೆದ್ದಿರುವ ಆರ್ಸಿಬಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಪ್ಲೇ ಆಫ್ ರೇಸ್ಗೆ ಎಂಟ್ರಿ ಕೊಟ್ಟಿದೆ. ಸತತ ಸೋಲುಗಳಿಂದ ಕೆಂಗೆಟ್ಟಿದ್ದ ಆರ್ಸಿಬಿಯ ರಣರೋಚಕ ಕಮ್ಬ್ಯಾಕ್ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಇದೀಗ ಚೆನ್ನೈ ವಿರುದ್ಧದ ಪಂದ್ಯದಲ್ಲೂ ಭರ್ಜರಿಯಾಗಿ ಗೆದ್ದು ಪ್ಲೇ ಆಫ್ಗೆ ಎಂಟ್ರಿ ಕೊಡೋ ಸವಾಲು ತಂಡದ ಮುಂದಿದೆ.
ಇದನ್ನೂ ಓದಿ:ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಪ್ರಾಣಬಿಟ್ಟ ಜಿಮ್ ಟ್ರೈನರ್.. ಹೆದರಿಸಲು ಹೋಗಿ ಜೀವ ಹೋಯ್ತು..
ಆರ್ಸಿಬಿ ಕ್ಯಾಂಪ್ನಲ್ಲಿ ಟೆನ್ಶನ್.. ಟೆನ್ಶನ್.. ಟೆನ್ಶನ್..!
ಡು ಆರ್ ಡೈ ಫೈಟ್ಗೆ ಇನ್ನೂ 3 ದಿನ ಬಾಕಿಯಿದೆ. ಅದಕ್ಕೂ ಮುನ್ನವೇ ಆರ್ಸಿಬಿ ಕ್ಯಾಂಪ್ನಲ್ಲಿ ಆತಂಕ ಶುರುವಾಗಿದೆ. ಡು ಆರ್ ಡೈ ಕದನದಲ್ಲಿ ಬಿಗ್ ಮಾರ್ಜಿನ್ನಲ್ಲಿ ಗೆಲ್ಲಲೇಬೇಕಾಗಿರೋದು ಮೊದಲೇ ಒತ್ತಡ ಹೆಚ್ಚಿಸಿದೆ. ಜೊತೆಗೆ ಸ್ಫೋಟಕ ಬ್ಯಾಟ್ಸ್ಮನ್ ವಿಲ್ ಜಾಕ್ಸ್ ತವರಿಗೆ ಹಾರಿರೋದು ಹಿನ್ನಡೆಯಾಗಿದೆ. ಇದ್ರ ನಡುವೆ ಈ ಪಂದ್ಯಕ್ಕೆ ಮಳೆ ಭೀತಿ ಕೂಡ ಶುರುವಾಗಿದೆ. ಮಳೆ ಬಂದು ಪಂದ್ಯ ರದ್ದಾದ್ರೆ, ಆರ್ಸಿಬಿ ಪ್ಲೇ ಆಫ್ ಕನಸು ಕೊಚ್ಚಿ ಹೋಗಲಿದೆ.
ಆ 1 ರನ್, ಆ ಒಂದು ಸೋಲು.. ಸಂಕಷ್ಟದಲ್ಲಿ ಆರ್ಸಿಬಿ
ಎಪ್ರಿಲ್ 21.. ಈ ದಿನಾಂಕ ಸದ್ಯ ಆರ್ಸಿಬಿ ಅಭಿಮಾನಿಗಳನ್ನ ಬಿಡದೇ ಕಾಡ್ತಿದೆ. ಅಂದು ಭಾರತದ ಕ್ರಿಕೆಟ್ ಕಾಶಿ ಈಡನ್ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಕೊದಲೆಳೆ ಅಂತರದಲ್ಲಿ ಎಡವಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 222 ರನ್ಗಳಿಸಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ 221 ರನ್ಗಳಿಸಲಷ್ಟೇ ಶಕ್ತವಾಯ್ತು. ರಣ ರೋಚಕ ಪಂದ್ಯದಲ್ಲಿ 1 ರನ್ ಅಂತರದಲ್ಲಿ ಆರ್ಸಿಬಿ ಸೋಲಿಗೆ ಶರಣಾಯ್ತು. ಆ ಒಂದು ಪಂದ್ಯದಲ್ಲಿ ಆರ್ಸಿಬಿ ಬ್ಯಾಟರ್ಸ್ ಒಂದು ರನ್ಗಳಿಸಿದ್ರೆ, ಆರ್ಸಿಬಿ ಬೌಲರ್ಸ್ ಒಂದೇ ಒಂದು ಎಕ್ಸ್ಟ್ರಾ ರನ್ ನೀಡದಿದ್ರೆ, ಆರ್ಸಿಬಿ ಇಂದು ಇಂತಹ ಸಂಕಷ್ಟಕ್ಕೆ ಸಿಲುಕುತ್ತಿರಲಿಲ್ಲ. ಪ್ಲೇ ಆಫ್ ಎಂಟ್ರಿಗಾಗಿ ಪರದಾಡಬೇಕಾಗಿರಲಿಲ್ಲ.. ದೇವರ ಮೇಲೆ ಭಾರವನ್ನೂ ಹಾಕೋ ಪರಿಸ್ಥಿತಿ ಬರ್ತಾ ಇರಲಿಲ್ಲ..
ಇದನ್ನೂ ಓದಿ:SRH vs GT ನಡುವೆ ಇವತ್ತು ಮೆಗಾ ಫೈಟ್.. ಹೈದರಾಬಾದ್ ಸೋತರೆ ಆರ್ಸಿಬಿಗೆ ಭಾರೀ ಲಾಭ.. ಅದು ಹೇಗೆ..?
ತಪ್ಪನ್ನು ತಿದ್ದಿಕೊಂಡಿದ್ರೆ ಇಂತಹ ಪರಿಸ್ಥಿತಿ ಬರ್ತಿತ್ತಾ?
ಮೊದಲ 8 ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿದ್ದು ಕೇವಲ 1 ಪಂದ್ಯದಲ್ಲಿ ಮಾತ್ರ. ಈ ಸೋಲಿಗೆ ಕಾರಣ ಇಡೀ ತಂಡ. ಪರ್ಫೆಕ್ಟ್ ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲೇ ಆರ್ಸಿಬಿ ಎಡವಿತ್ತು. ಡುಪ್ಲೆಸಿ, ಮ್ಯಾಕ್ಸ್ವೆಲ್ ಕಳಪೆಯಾಟ, ದುರ್ಬಲ ನಾಯಕತ್ವ, ಮಿಡಲ್ ಆರ್ಡರ್ ಬ್ಯಾಟಿಂಗ್ ವೈಫಲ್ಯ, ಎಲ್ಲಕ್ಕಿಂತ ಹೆಚ್ಚಾಗಿ ದುಬಾರಿ ಬೌಲಿಂಗ್ ತಂಡಕ್ಕೆ ಮಾರಕವಾಗಿತ್ತು. ಈ ತಪ್ಪುಗಳನ್ನ ಆಗಲೇ ತಿದ್ದಿಕೊಂಡು ಒಂದೇ ಒಂದು ಪಂದ್ಯ ಆಗಲೇ ಗೆದ್ದಿದ್ರೆ, ಈಗ ಕಥೆ ಬೇರೆನೆ ಇರ್ತಿತ್ತು.
ಆಗಿದ್ದೆಲ್ಲಾ ಆಯ್ತು.. ಇದೀಗ ಡು ಆರ್ ಡೈ ರಣಕಣ ಸಜ್ಜಾಗಿದೆ. ಮಸ್ಟ್ ವಿನ್ ಗೇಮ್ಗೆ ಮಳೆಯ ಭೀತಿ ಕೂಡ ಶುರುವಾಗಿದೆ. ಬಲಿಷ್ಟ ಸಿಎಸ್ಕೆ ತಂಡದ ಎದುರು ಬಿಗ್ ಮಾರ್ಜಿನ್ ವಿಕ್ಟರಿ ಬೇಕಾಗಿದೆ. ಸಾಲಿಡ್ ಪರ್ಫಾಮೆನ್ಸ್ ನೀಡ್ತಿರೋದ್ರಿಂದ, ಆರ್ಸಿಬಿ ಟೀಮ್ಗೆ ಗೆಲ್ಲೋದು ದೊಡ್ಡ ವಿಚಾರವೇನಿಲ್ಲ. ಜೊತೆಗೆ ಅದೃಷ್ಟ ಕೈ ಹಿಡಿದ್ರೆ, ಪ್ಲೇ ಆಫ್ಗೆ ಆರ್ಸಿಬಿ ಎಂಟ್ರಿ ಪಕ್ಕಾ.
ಇದನ್ನೂ ಓದಿ:‘ಬೇಕಂತ ಕೊಲೆ ಮಾಡ್ಲಿಲ್ಲ ಸರ್..’ ಪೊಲೀಸರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮೋನಿಕಾ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಡು ಆರ್ ಡೈ ಕದನಕ್ಕೂ ಮುನ್ನ ಆರ್ಸಿಬಿಗೆ ಹಿನ್ನಡೆ
ಆರ್ಸಿಬಿ ಕ್ಯಾಂಪ್ನಲ್ಲಿ ಟೆನ್ಶನ್.. ಟೆನ್ಶನ್.. ಟೆನ್ಶನ್
ಹಿಂದಿನ ತಪ್ಪನ್ನ ತಿದ್ದಿಕೊಂಡಿದ್ರೆ ಇಂತಹ ಪರಿಸ್ಥಿತಿ ಬರ್ತಿತ್ತಾ.?
ಡು ಆರ್ ಡೈ ಕದನಕ್ಕೂ ಮುನ್ನ ಹಿನ್ನಡೆಯ ಮೇಲೆ ಹಿನ್ನಡೆ ಆರ್ಸಿಬಿಗೆ ಎದುರಾಗಿತ್ತು. ಆ ದೇವರೇ ಆರ್ಸಿಬಿಯನ್ನ ಕಾಪಾಡಬೇಕು ಅನ್ನೋ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಅಭಿಮಾನಿಗಳ ವಲಯದಲ್ಲೂಂತೂ ಪ್ರಾರ್ಥನೆ ಜೋರಾಗಿದೆ. ಆರ್ಸಿಬಿ ಇಷ್ಟೆಲ್ಲಾ ಸಂಕಷ್ಟಕ್ಕೆ ಸಿಲುಕಿರೋದಕ್ಕೆ ಕಾರಣ ಏನ್ ಗೊತ್ತಾ? ಆ ಒಂದು ರನ್ ಮತ್ತು ಆ ಒಂದು ಸೋಲು.
ಕ್ರಿಕೆಟ್ ಲೋಕದಲ್ಲೀಗ ಒಂದೇ ಸುದ್ದಿ.. ಚೆನ್ನೈ vs ಬೆಂಗಳೂರು ಮಹಾಸಮರವೇ ಟಾಕ್ ಆಫ್ ದ ಟೌನ್..! ಸೋಷಿಯಲ್ ಮೀಡಿಯಾದಲ್ಲಂತೂ ಕ್ವಾಲಿಫೈಯರ್ ಲೆಕ್ಕಾಚಾರ ಜೋರಾಗಿದೆ. ಆರ್ಸಿಬಿ-ಸಿಎಸ್ಕೆ ಯಾವ ತಂಡ ಪ್ಲೇ ಆಫ್ಗೆ ಎಂಟ್ರಿ ಕೊಡುತ್ತೆ ಅನ್ನೋ ಕುತೂಹಲದ ಪ್ರಶ್ನೆ ಎಲ್ಲರ ಮನದಲ್ಲಿ ಕಾಡ್ತಿದೆ. ಸತತ 5 ಪಂದ್ಯಗಳನ್ನ ಗೆದ್ದಿರುವ ಆರ್ಸಿಬಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಪ್ಲೇ ಆಫ್ ರೇಸ್ಗೆ ಎಂಟ್ರಿ ಕೊಟ್ಟಿದೆ. ಸತತ ಸೋಲುಗಳಿಂದ ಕೆಂಗೆಟ್ಟಿದ್ದ ಆರ್ಸಿಬಿಯ ರಣರೋಚಕ ಕಮ್ಬ್ಯಾಕ್ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಇದೀಗ ಚೆನ್ನೈ ವಿರುದ್ಧದ ಪಂದ್ಯದಲ್ಲೂ ಭರ್ಜರಿಯಾಗಿ ಗೆದ್ದು ಪ್ಲೇ ಆಫ್ಗೆ ಎಂಟ್ರಿ ಕೊಡೋ ಸವಾಲು ತಂಡದ ಮುಂದಿದೆ.
ಇದನ್ನೂ ಓದಿ:ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಪ್ರಾಣಬಿಟ್ಟ ಜಿಮ್ ಟ್ರೈನರ್.. ಹೆದರಿಸಲು ಹೋಗಿ ಜೀವ ಹೋಯ್ತು..
ಆರ್ಸಿಬಿ ಕ್ಯಾಂಪ್ನಲ್ಲಿ ಟೆನ್ಶನ್.. ಟೆನ್ಶನ್.. ಟೆನ್ಶನ್..!
ಡು ಆರ್ ಡೈ ಫೈಟ್ಗೆ ಇನ್ನೂ 3 ದಿನ ಬಾಕಿಯಿದೆ. ಅದಕ್ಕೂ ಮುನ್ನವೇ ಆರ್ಸಿಬಿ ಕ್ಯಾಂಪ್ನಲ್ಲಿ ಆತಂಕ ಶುರುವಾಗಿದೆ. ಡು ಆರ್ ಡೈ ಕದನದಲ್ಲಿ ಬಿಗ್ ಮಾರ್ಜಿನ್ನಲ್ಲಿ ಗೆಲ್ಲಲೇಬೇಕಾಗಿರೋದು ಮೊದಲೇ ಒತ್ತಡ ಹೆಚ್ಚಿಸಿದೆ. ಜೊತೆಗೆ ಸ್ಫೋಟಕ ಬ್ಯಾಟ್ಸ್ಮನ್ ವಿಲ್ ಜಾಕ್ಸ್ ತವರಿಗೆ ಹಾರಿರೋದು ಹಿನ್ನಡೆಯಾಗಿದೆ. ಇದ್ರ ನಡುವೆ ಈ ಪಂದ್ಯಕ್ಕೆ ಮಳೆ ಭೀತಿ ಕೂಡ ಶುರುವಾಗಿದೆ. ಮಳೆ ಬಂದು ಪಂದ್ಯ ರದ್ದಾದ್ರೆ, ಆರ್ಸಿಬಿ ಪ್ಲೇ ಆಫ್ ಕನಸು ಕೊಚ್ಚಿ ಹೋಗಲಿದೆ.
ಆ 1 ರನ್, ಆ ಒಂದು ಸೋಲು.. ಸಂಕಷ್ಟದಲ್ಲಿ ಆರ್ಸಿಬಿ
ಎಪ್ರಿಲ್ 21.. ಈ ದಿನಾಂಕ ಸದ್ಯ ಆರ್ಸಿಬಿ ಅಭಿಮಾನಿಗಳನ್ನ ಬಿಡದೇ ಕಾಡ್ತಿದೆ. ಅಂದು ಭಾರತದ ಕ್ರಿಕೆಟ್ ಕಾಶಿ ಈಡನ್ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಕೊದಲೆಳೆ ಅಂತರದಲ್ಲಿ ಎಡವಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 222 ರನ್ಗಳಿಸಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ 221 ರನ್ಗಳಿಸಲಷ್ಟೇ ಶಕ್ತವಾಯ್ತು. ರಣ ರೋಚಕ ಪಂದ್ಯದಲ್ಲಿ 1 ರನ್ ಅಂತರದಲ್ಲಿ ಆರ್ಸಿಬಿ ಸೋಲಿಗೆ ಶರಣಾಯ್ತು. ಆ ಒಂದು ಪಂದ್ಯದಲ್ಲಿ ಆರ್ಸಿಬಿ ಬ್ಯಾಟರ್ಸ್ ಒಂದು ರನ್ಗಳಿಸಿದ್ರೆ, ಆರ್ಸಿಬಿ ಬೌಲರ್ಸ್ ಒಂದೇ ಒಂದು ಎಕ್ಸ್ಟ್ರಾ ರನ್ ನೀಡದಿದ್ರೆ, ಆರ್ಸಿಬಿ ಇಂದು ಇಂತಹ ಸಂಕಷ್ಟಕ್ಕೆ ಸಿಲುಕುತ್ತಿರಲಿಲ್ಲ. ಪ್ಲೇ ಆಫ್ ಎಂಟ್ರಿಗಾಗಿ ಪರದಾಡಬೇಕಾಗಿರಲಿಲ್ಲ.. ದೇವರ ಮೇಲೆ ಭಾರವನ್ನೂ ಹಾಕೋ ಪರಿಸ್ಥಿತಿ ಬರ್ತಾ ಇರಲಿಲ್ಲ..
ಇದನ್ನೂ ಓದಿ:SRH vs GT ನಡುವೆ ಇವತ್ತು ಮೆಗಾ ಫೈಟ್.. ಹೈದರಾಬಾದ್ ಸೋತರೆ ಆರ್ಸಿಬಿಗೆ ಭಾರೀ ಲಾಭ.. ಅದು ಹೇಗೆ..?
ತಪ್ಪನ್ನು ತಿದ್ದಿಕೊಂಡಿದ್ರೆ ಇಂತಹ ಪರಿಸ್ಥಿತಿ ಬರ್ತಿತ್ತಾ?
ಮೊದಲ 8 ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿದ್ದು ಕೇವಲ 1 ಪಂದ್ಯದಲ್ಲಿ ಮಾತ್ರ. ಈ ಸೋಲಿಗೆ ಕಾರಣ ಇಡೀ ತಂಡ. ಪರ್ಫೆಕ್ಟ್ ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲೇ ಆರ್ಸಿಬಿ ಎಡವಿತ್ತು. ಡುಪ್ಲೆಸಿ, ಮ್ಯಾಕ್ಸ್ವೆಲ್ ಕಳಪೆಯಾಟ, ದುರ್ಬಲ ನಾಯಕತ್ವ, ಮಿಡಲ್ ಆರ್ಡರ್ ಬ್ಯಾಟಿಂಗ್ ವೈಫಲ್ಯ, ಎಲ್ಲಕ್ಕಿಂತ ಹೆಚ್ಚಾಗಿ ದುಬಾರಿ ಬೌಲಿಂಗ್ ತಂಡಕ್ಕೆ ಮಾರಕವಾಗಿತ್ತು. ಈ ತಪ್ಪುಗಳನ್ನ ಆಗಲೇ ತಿದ್ದಿಕೊಂಡು ಒಂದೇ ಒಂದು ಪಂದ್ಯ ಆಗಲೇ ಗೆದ್ದಿದ್ರೆ, ಈಗ ಕಥೆ ಬೇರೆನೆ ಇರ್ತಿತ್ತು.
ಆಗಿದ್ದೆಲ್ಲಾ ಆಯ್ತು.. ಇದೀಗ ಡು ಆರ್ ಡೈ ರಣಕಣ ಸಜ್ಜಾಗಿದೆ. ಮಸ್ಟ್ ವಿನ್ ಗೇಮ್ಗೆ ಮಳೆಯ ಭೀತಿ ಕೂಡ ಶುರುವಾಗಿದೆ. ಬಲಿಷ್ಟ ಸಿಎಸ್ಕೆ ತಂಡದ ಎದುರು ಬಿಗ್ ಮಾರ್ಜಿನ್ ವಿಕ್ಟರಿ ಬೇಕಾಗಿದೆ. ಸಾಲಿಡ್ ಪರ್ಫಾಮೆನ್ಸ್ ನೀಡ್ತಿರೋದ್ರಿಂದ, ಆರ್ಸಿಬಿ ಟೀಮ್ಗೆ ಗೆಲ್ಲೋದು ದೊಡ್ಡ ವಿಚಾರವೇನಿಲ್ಲ. ಜೊತೆಗೆ ಅದೃಷ್ಟ ಕೈ ಹಿಡಿದ್ರೆ, ಪ್ಲೇ ಆಫ್ಗೆ ಆರ್ಸಿಬಿ ಎಂಟ್ರಿ ಪಕ್ಕಾ.
ಇದನ್ನೂ ಓದಿ:‘ಬೇಕಂತ ಕೊಲೆ ಮಾಡ್ಲಿಲ್ಲ ಸರ್..’ ಪೊಲೀಸರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮೋನಿಕಾ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್